ಹಣಕಾಸು ಸಚಿವಾಲಯ
ಆರ್ಥಿಕ ಸಮೀಕ್ಷೆ 2025-26 ಪ್ರಕಾರ, ಭಾರತವು ಅಭಿವೃದ್ಧಿ-ಕೇಂದ್ರಿತ, ಸಂಪೂರ್ಣ ಆರ್ಥಿಕತೆಯನ್ನು ಒಳಗೊಂಡ ಹವಾಮಾನ ಕಾರ್ಯತಂತ್ರವನ್ನು ಅಳವಡಿಸಿಕೊಂಡಿದ್ದು, ಹೊಂದಾಣಿಕೆ (ಅಡಾಪ್ಟೇಶನ್), ಸಹಿಷ್ಣುತೆ (ಮಿಟಿಗೇಶನ್) ಮತ್ತು ತನ್ನ ಅಭಿವೃದ್ಧಿ ಮಾದರಿಯೊಳಗೆ ವರ್ತನೆ ಬದಲಾವಣೆಯನ್ನು ಸಮನ್ವಯಗೊಳಿಸಿದೆ
ಭಾರತದ ಹೊಂದಾಣಿಕೆ ಮತ್ತು ಸಹನಶೀಲತೆ ಸಂಬಂಧಿತ ದೇಶೀಯ ವೆಚ್ಚವು ಆರ್ಥಿಕ ವರ್ಷ 2016ರಲ್ಲಿ ಜಿಡಿಪಿಯ 3.7 ಶೇಕಡಾದಿಂದ ಆರ್ಥಿಕ ವರ್ಷ 2022ರಲ್ಲಿ ಜಿಡಿಪಿಯ 5.6 ಶೇಕಡಾಕ್ಕೆ ಏರಿಕೆಯಾಗಿದೆ
ಆರ್ಥಿಕ ವರ್ಷ 2026ರಲ್ಲಿ ವೇಗವಾದ ನವೀಕರಿಸಬಹುದಾದ ಇಂಧನ ಸಾಮರ್ಥ್ಯ ವೃದ್ಧಿ, ಹಸಿರು ಹೈಡ್ರೋಜನ್ ಹಾಗೂ ಅಣುಶಕ್ತಿ ಕ್ಷೇತ್ರಗಳತ್ತ ವೈವಿಧ್ಯೀಕರಣದ ಮೂಲಕ ಸ್ವಚ್ಛ ಇಂಧನ ಮತ್ತು ತಂತ್ರಾತ್ಮಕ ಪರಿವರ್ತನೆಗಳು ವೇಗಗೊಂಡಿವೆ
ಡಿಸೆಂಬರ್ 2025 ಅಂತ್ಯದ ವೇಳೆಗೆ, ಪಳೆಯುಳಿಕೆ ರಹಿತ ಇಂಧನ ಮೂಲಗಳಿಂದ ಸ್ಥಾಪಿತ ವಿದ್ಯುತ್ ಸಾಮರ್ಥ್ಯದ ಪಾಲು ಶೇ. 51.93ರಷ್ಟು ಆಗಿದೆ
ಜಾಗತಿಕ ಇಂಧನ ಪರಿವರ್ತನೆಯಲ್ಲಿ ಪ್ರಮುಖ ಖನಿಜಗಳು ಹಾಗೂ ತಂತ್ರಜ್ಞಾನವು ನಿರ್ಣಾಯಕ ಅಂಶಗಳಾಗಿವೆ: ಆರ್ಥಿಕ ಸಮೀಕ್ಷೆ 2025-26
ಪ್ರಮುಖ ಖನಿಜಗಳಿಗೆ ಭಾರತದ ಕಾರ್ಯತಂತ್ರವು ದೇಶೀಯ ಸಾಮರ್ಥ್ಯಗಳ ಜೊತೆಗೆ ಅಂತಾರಾಷ್ಟ್ರೀಯ ಸಹಭಾಗಿತ್ವಗಳ ಮೇಲೂ ಸಮತೋಲನದ ಗಮನವನ್ನು ಪ್ರತಿಬಿಂಬಿಸುತ್ತದೆ
ಹವಾಮಾನ ಹಣಕಾಸು ಬೆಂಬಲವು ಮಹಾ ಆರ್ಥಿಕ ಸ್ಥಿರತೆಯನ್ನು ಹಾನಿಗೊಳಿಸದೆ ಬೆಳವಣಿಗೆಯನ್ನು ಉತ್ತೇಜಿಸುವಂತೆ ಮಾಡಲು ಬಲವಾದ ಆಡಳಿತ ಚೌಕಟ್ಟು ಅಗತ್ಯ
ಪ್ರಕಟಣಾ ದಿನಾಂಕ:
29 JAN 2026 1:34PM by PIB Bengaluru
ಜಾಗತಿಕ ಹವಾಮಾನ ಬದಲಾವಣೆಯ ಕಾರ್ಯಸೂಚಿ ಈಗ ಒಂದು ಮಹತ್ವದ ತಿರುವಿನ ಹಂತವನ್ನು ತಲುಪಿದೆ. ಒಂದು ಕಾಲದಲ್ಲಿ ನಿವ್ವಳ-ಶೂನ್ಯ ಭವಿಷ್ಯ(ನೆಟ್-ಝೀರೋ)ದತ್ತ ಸಾಗುವ ಸರಳ ನೈತಿಕ ಹಾಗೂ ತಾಂತ್ರಿಕ ಪರಿವರ್ತನೆಯಾಗಿ ಕಂಡುಬಂದಿದ್ದ ಈ ಪ್ರಕ್ರಿಯೆ, ಇಂದು ಸಂಕೀರ್ಣ ತ್ಯಾಗ-ವಿನಿಮಯಗಳು, ಸಾಮರ್ಥ್ಯ ಮಿತಿಗಳು ಮತ್ತು ಆಶಯ ಹಾಗೂ ಕಾರ್ಯಗತ ವಾಸ್ತವ್ಯದ ನಡುವೆ ಹೆಚ್ಚುತ್ತಿರುವ ಅಂತರದಿಂದ ಗುರುತಿಸಲಾಗಿದೆ ಎಂದು ಇಂದು ಸಂಸತ್ತಿನಲ್ಲಿ ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್ ಮಂಡಿಸಿದ ಆರ್ಥಿಕ ಸಮೀಕ್ಷೆ 2025-26 ಹೇಳುತ್ತದೆ.
ಆರ್ಥಿಕ ಸಮೀಕ್ಷೆಯಲ್ಲಿ ಹೇಳುವಂತೆ, ಅಗತ್ಯ ಬಫರ್ಗಳು, ಪರ್ಯಾಯ ವ್ಯವಸ್ಥೆಗಳು (ರೆಡಂಡೆನ್ಸಿ) ಹಾಗೂ ಸಂಸ್ಥಾತ್ಮಕ ಸಾಮರ್ಥ್ಯವಿಲ್ಲದೆ ಸಂಕೀರ್ಣ ವ್ಯವಸ್ಥೆಗಳನ್ನು ಅತಿವೇಗವಾಗಿ ಪರಿಚಯಿಸಿದರೆ, ವ್ಯವಸ್ಥೆ ಬಲಿಷ್ಠವಾಗಿ ಬೆಳೆಯುವ ಬದಲು ದುರ್ಬಲವಾಗುವ ಸಾಧ್ಯತೆ ಹೆಚ್ಚಿರುತ್ತದೆ. ಹವಾಮಾನ ನೀತಿಗಳು ಮಾನವ ಕಲ್ಯಾಣಕ್ಕೆ, ವಿಶೇಷವಾಗಿ ಬಡ ಹಾಗೂ ಹವಾಮಾನಕ್ಕೆ ಅತಿಸಂವೇದನಾಶೀಲ ಸಮಾಜಗಳಿಗೆ ಆದ್ಯತೆ ನೀಡಬೇಕು ಎಂದು ಹೇಳುತ್ತದೆ. ಆದ್ದರಿಂದ, ಆರ್ಥಿಕ ಸಮೀಕ್ಷೆ ಭಾರತದ ಹವಾಮಾನ ತಂತ್ರದಲ್ಲಿ ಹೊಂದಾಣಿಕೆಯನ್ನು ಕೇಂದ್ರ ಸ್ಥಾನದಲ್ಲಿರಿಸುತ್ತದೆ.
ಭಾರತಕ್ಕೆ, ನಿರಂತರ ಆರ್ಥಿಕ ಬೆಳವಣಿಗೆ ಮತ್ತು ಏರಿಕೆಯಾಗುತ್ತಿರುವ ಜೀವನಮಟ್ಟವನ್ನು ಸಾಧಿಸಲು, ಕೈಗೆಟುಕುವ ಹಾಗೂ ವಿಶ್ವಾಸಾರ್ಹ ವಿದ್ಯುತ್ ಪೂರೈಕೆಯನ್ನು ಬಹಳ ಮಟ್ಟಿಗೆ ವಿಸ್ತರಿಸುವ ಅಗತ್ಯವಿದೆ. ಈ ವಿಸ್ತರಣೆಯಲ್ಲಿ ನವೀಕರಿಸಬಹುದಾದ ಇಂಧನ ಪ್ರಮುಖ ಹಾಗೂ ಹೆಚ್ಚುತ್ತಿರುವ ಪಾತ್ರ ವಹಿಸಲಿದೆ; ಆದರೆ ಸಾಮರ್ಥ್ಯ ವೃದ್ಧಿಯೇ ಸ್ವಯಂಚಾಲಿತವಾಗಿ ವಿಶ್ವಾಸಾರ್ಹ ಪೂರೈಕೆಯಾಗಿ ಪರಿವರ್ತನೆಯಾಗುವುದಿಲ್ಲ ಎಂದು ಸಮೀಕ್ಷೆ ಹೇಳುತ್ತದೆ. ಹೀಗಾಗಿ, ಮುಂದಿನ ದಶಕವನ್ನು ಭಾರತವು ಕೇವಲ ಪ್ರತ್ಯೇಕ ಹವಾಮಾನ ನೀತಿ ಸಮಸ್ಯೆಯಾಗಿ ಮಾತ್ರವಲ್ಲ, ವಿಶಾಲ ಇಂಧನ ವ್ಯವಸ್ಥೆಯ ತಂತ್ರವಾಗಿ ನೋಡಬೇಕಾಗಿದೆ.
ಹೊಂದಾಣಿಕೆ: ಹವಾಮಾನ ಸ್ಥಿತಿಸ್ಥಾಪಕತ್ವ ಬಲಪಡಿಸುವುದು
ಸತತ ಸ್ಥಿರ ಬೆಳವಣಿಗೆಗೆ ಹವಾಮಾನ ಹೊಂದಾಣಿಕೆ ಮತ್ತು ಸಹನಶೀಲತೆಯನ್ನು ಅಭಿವೃದ್ಧಿ ಯೋಜನೆಗಳಲ್ಲಿ ಸಮನ್ವಯಗೊಳಿಸುವುದು ಅತ್ಯಂತ ಅಗತ್ಯವಾಗಿದೆ. ಆರ್ಥಿಕ ಸಮೀಕ್ಷೆಯ ಪ್ರಕಾರ, ಭಾರತದ ಹವಾಮಾನ ಹೊಂದಾಣಿಕೆ ತಂತ್ರವು ಮುಖ್ಯವಾಗಿ ಅಭಿವೃದ್ಧಿ-ಆಧಾರಿತ ದೃಷ್ಟಿಕೋನದ ಮೂಲಕ ಮುನ್ನಡೆಯುತ್ತಿದೆ. ಇದರಲ್ಲಿ ಪ್ರಮುಖ ಅಭಿವೃದ್ಧಿ ಕ್ಷೇತ್ರಗಳಲ್ಲಿ ದೇಶೀಯ ಸಾರ್ವಜನಿಕ ಹೂಡಿಕೆಯನ್ನು ಬಳಸಿಕೊಳ್ಳಲಾಗುತ್ತಿದೆ ಎಂದು ಆರ್ಥಿಕ ಸಮೀಕ್ಷೆ ಹೇಳುತ್ತದೆ. ಭಾರತದಲ್ಲಿ ಹೊಂದಾಣಿಕೆ ಮತ್ತು ಸ್ಥಿತಿಸ್ಥಾಪಕತ್ವಕ್ಕೆ ಸಂಬಂಧಿತ ದೇಶೀಯ ವೆಚ್ಚವು ಆರ್ಥಿಕ ವರ್ಷ 2016ರಲ್ಲಿ ಜಿಡಿಪಿಯ 3.7 ಶೇಕಡಾದಿಂದ ಆರ್ಥಿಕ ವರ್ಷ 2022ರಲ್ಲಿ ಜಿಡಿಪಿಯ 5.6 ಶೇಕಡಾವರೆಗೆ ಏರಿಕೆಯಾಗಿದೆ.
ಹವಾಮಾನ ಬದಲಾವಣೆಯ ಕುರಿತ ರಾಷ್ಟ್ರೀಯ ಕಾರ್ಯಯೋಜನೆ (NAPCC) ಒಂಬತ್ತು ಮಿಷನ್ಗಳ ಮೂಲಕ ಹವಾಮಾನ ಕ್ರಮಗಳನ್ನು ಮುನ್ನಡೆಸುತ್ತದೆ. ಇವುಗಳಲ್ಲಿ ಅನೇಕವು ಹೊಂದಾಣಿಕೆಗೆ ಕೇಂದ್ರಿತವಾಗಿವೆ. ರಾಷ್ಟ್ರೀಯ ಸತತ ಕೃಷಿ ಮಿಷನ್ ಹವಾಮಾನ ಸಹನಶೀಲ ಕೃಷಿಯನ್ನು ಉತ್ತೇಜಿಸುವಾಗ, ರಾಷ್ಟ್ರೀಯ ಜಲ ಮಿಷನ್ ಸಂಯೋಜಿತ ಸಂಪನ್ಮೂಲ ನಿರ್ವಹಣೆಯ ಮೂಲಕ ಸಂರಕ್ಷಣೆ ಮತ್ತು ಸಮಾನ ಪ್ರವೇಶಕ್ಕೆ ಒತ್ತು ನೀಡುತ್ತದೆ. ಇತರ ಮಿಷನ್ಗಳ ಉದಾಹರಣೆಗಳನ್ನು ಸಹ ಸಮೀಕ್ಷೆ ನೀಡಿದ್ದು, ಅವು ಹೊಂದಾಣಿಕೆ ಪ್ರಯತ್ನಗಳ ಭಾಗವಾಗಿರುವುದನ್ನು ತೋರಿಸುತ್ತದೆ.
ರಾಷ್ಟ್ರೀಯ ಚೌಕಟ್ಟುಗಳು ಮತ್ತು ಕಾರ್ಯಕ್ರಮಗಳು ನೀತಿ ಸಮ್ಮಿಲನ, ಹಣಕಾಸು ಬೆಂಬಲ ಮತ್ತು ಸಂಸ್ಥಾತ್ಮಕ ವ್ಯವಸ್ಥೆಗಳನ್ನು ಒದಗಿಸುತ್ತವೆ. ರಾಜ್ಯಗಳು ಕ್ಷೇತ್ರಾಧಾರಿತ ನೀತಿಗಳು, ಸಾರ್ವಜನಿಕ ಕಾರ್ಯಕ್ರಮಗಳು ಮತ್ತು ಸ್ಥಳೀಯ ಸಂಸ್ಥೆಗಳ ಮೂಲಕ ಈ ಹಸ್ತಕ್ಷೇಪಗಳನ್ನು ಸಂದರ್ಭಾನುಸಾರ ರೂಪಿಸಿ ಕಾರ್ಯಗತಗೊಳಿಸುತ್ತವೆ ಎಂದು ಸಮೀಕ್ಷೆ ಹೇಳುತ್ತದೆ. ಹವಾಮಾನ ಬದಲಾವಣೆಯ ಕುರಿತ ರಾಜ್ಯ ಕಾರ್ಯಯೋಜನೆಗಳು (SAPCCs) ಹವಾಮಾನ ಬದಲಾವಣೆ ಕುರಿತ ರಾಷ್ಟ್ರೀಯ ಕ್ರಿಯಾ ಯೋಜನೆ (NAPCC) ವಿಶಾಲ ಗುರಿಗಳನ್ನು ಕಾರ್ಯಗತಗೊಳ್ಳಬಹುದಾದ ಕ್ರಮಗಳಾಗಿ ಪರಿವರ್ತಿಸಲು ಅತ್ಯಂತ ಪ್ರಮುಖ ಸಾಧನಗಳಾಗಿವೆ. ಸಮೀಕ್ಷೆ ಹೇಳುವಂತೆ, ಭಾರತೀಯ ನಗರಗಳು ವೇಗವಾಗಿ ಬೆಳೆಯುತ್ತಿರುವ ಸಂದರ್ಭದಲ್ಲಿ, ನಗರ ಯೋಜನೆಯ ಮೂಲಸಂರಚನೆಯೊಳಗೆ ಹವಾಮಾನ ಅಪಾಯವನ್ನು ಅಳವಡಿಸಿಕೊಳ್ಳುವುದು ಎಂದರೆ ಹವಾಮಾನ ಬದಲಾವಣೆ ಭೂಬಳಕೆ, ಮೂಲಸೌಕರ್ಯ ಹಾಗೂ ನಿವಾಸಿಗಳಿಗೆ ಒದಗಿಸುವ ಸೇವೆಗಳ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ಪರಿಗಣಿಸುವುದಾಗಿದೆ.

ಕಡಿಮೆ ಕಾರ್ಬನ್ ತಂತ್ರಜ್ಞಾನ: ಹಸಿರುಮನೆ ಅನಿಲಗಳ ಉತ್ಸರ್ಜನೆಯನ್ನು ಕಡಿಮೆ ಮಾಡುವ ಕ್ರಮಗಳು
ಜಾಗತಿಕ ತಾಪಮಾನ ಏರಿಕೆಯನ್ನು ತಗ್ಗಿಸಲು ಭಾರತವು ಬಹುಮುಖ ದೃಷ್ಟಿಕೋನವನ್ನು ಅಳವಡಿಸಿಕೊಂಡಿದೆ. ಇದರಲ್ಲಿ ಇಂಧನ ಮೂಲಗಳನ್ನು ವೈವಿಧ್ಯಗೊಳಿಸುವುದು, ಇಂಧನ ಪ್ರವೇಶವನ್ನು ವಿಸ್ತರಿಸುವುದು, ಜೈವ ಇಂಧನರಹಿತ ಮೂಲಗಳ ಪಾಲನ್ನು ಹೆಚ್ಚಿಸುವುದು, ಶಕ್ತಿ ಕಾರ್ಯಕ್ಷಮತೆಯನ್ನು ಸುಧಾರಿಸುವುದು ಹಾಗೂ ತನ್ನ ಇಂಧನ ವ್ಯವಸ್ಥೆಗಳಲ್ಲಿ ಸ್ಥಿರತೆಯನ್ನು ಉತ್ತೇಜಿಸುವುದು ಒಳಗೊಂಡಿವೆ. ಆರ್ಥಿಕ ಸಮೀಕ್ಷೆ ನೆದರ್ಲ್ಯಾಂಡ್, ಜರ್ಮನಿ, ಸ್ಪೇನ್ ಮೊದಲಾದ ಯುರೋಪಿನ ದೇಶಗಳ ಕೆಲವು ಉದಾಹರಣೆಗಳನ್ನು ಉಲ್ಲೇಖಿಸಿ, ಮೂಲಭೂತ ವಿದ್ಯುತ್ ಉತ್ಪಾದನೆ, ಪ್ರಸರಣ ವ್ಯವಸ್ಥೆ ಹಾಗೂ ವ್ಯವಸ್ಥೆಯ ಸೌಲಭ್ಯತೆಯಲ್ಲಿ ಹೂಡಿಕೆಯನ್ನು ಮೀರಿ ವೇಗವಾಗಿ ನಡೆಯುವ ಪರಿವರ್ತನೆಗಳೊಂದಿಗೆ ಸಂಬಂಧಿಸಿದ ಅಪಾಯಗಳನ್ನು ತೋರಿಸುತ್ತದೆ. ಭಾರತದ ಶಕ್ತಿ ಪರಿವರ್ತನೆಯನ್ನು ಅಣುಶಕ್ತಿ, ಸೌರ ಮತ್ತು ಗಾಳಿ ಶಕ್ತಿ, ಹಸಿರು ಹೈಡ್ರೋಜನ್, ಬ್ಯಾಟರಿ ಸಂಗ್ರಹಣೆ ಹಾಗೂ ಪ್ರಮುಖ ಖನಿಜಗಳು ಸೇರಿದಂತೆ ವಿವಿಧ ಕ್ಷೇತ್ರಗಳ ಹಲವಾರು ಉಪಕ್ರಮಗಳ ಸಂಯೋಜನೆಯ ಮೂಲಕ ಮುನ್ನಡೆಸಲಾಗುತ್ತಿದೆ. ಇವು ಶಕ್ತಿ ಭದ್ರತೆ ಮತ್ತು ಪರಿವರ್ತನೆ ಅಗತ್ಯಗಳನ್ನು ಒಂದೇ ಸಮಯದಲ್ಲಿ ಸಮಾಧಾನಪಡಿಸಲು ಸಹಾಯ ಮಾಡುತ್ತವೆ. ಈ ರೀತಿಯ ಕ್ರಮಗಳ ಇತ್ತೀಚಿನ ಕೆಲವು ಉದಾಹರಣೆಗಳನ್ನು ಸಹ ಸಮೀಕ್ಷೆ ನೀಡಿದೆ. ಈ ರೀತಿಯ ಕ್ರಮಗಳ ಇತ್ತೀಚಿನ ಕೆಲವು ಉದಾಹರಣೆಗಳನ್ನು ಸಹ ಸಮೀಕ್ಷೆ ನೀಡಿದೆ.
ಭಾರತವು ಜೈವಿಕ ಇಂಧನರಹಿತ ಮೂಲಗಳಿಂದ ಸ್ಥಾಪಿತ ವಿದ್ಯುತ್ ಸಾಮರ್ಥ್ಯದ ಶೇಕಡಾ 50ರಷ್ಟು ಗುರಿಯನ್ನು ಈಗಾಗಲೇ ಮೀರಿಸಿದ್ದು, ಡಿಸೆಂಬರ್ 2025 ಅಂತ್ಯದ ವೇಳೆಗೆ ಇದು ಶೇಕಡಾ 51.93 ಆಗಿದೆ. ನವೀಕರಿಸಬಹುದಾದ ಶಕ್ತಿ ಸಾಮರ್ಥ್ಯದಲ್ಲಿ ದಾಖಲೆಯ ವಾರ್ಷಿಕ ಹೆಚ್ಚಳಗಳು ಈ ಸಾಧನೆಗೆ ಬೆಂಬಲ ನೀಡಿವೆ. ಜೈವ ಇಂಧನರಹಿತ ವಿದ್ಯುತ್ ಸಾಮರ್ಥ್ಯ ವಿಸ್ತರಣೆಯ ಪ್ರಗತಿಗೆ ನವೀಕರಿಸಬಹುದಾದ ಇಂಧನ ವ್ಯವಸ್ಥೆಗಳನ್ನು ಉತ್ತೇಜಿಸಲು ಕೈಗೊಳ್ಳಲಾದ ವಿವಿಧ ಉಪಕ್ರಮಗಳು ಸಹಕಾರಿಯಾಗಿವೆ.
ಇದಲ್ಲದೆ, ರಾಷ್ಟ್ರೀಯ ಅಣುಶಕ್ತಿ ಮಿಷನ್, ಹಸಿರು ಹೈಡ್ರೋಜನ್ ಮಿಷನ್ ಮತ್ತು ಜೈವಿಕ ಇಂಧನ ಕಾರ್ಯಕ್ರಮದಂತಹ ಇತರ ಸ್ವಚ್ಛ ಶಕ್ತಿ ಮೂಲಗಳನ್ನು ಬೆಂಬಲಿಸಲು ಹೊಸ ಕ್ರಮಗಳನ್ನು ಸಹ ಕೈಗೊಳ್ಳಲಾಗುತ್ತಿದೆ. ಜೈವಿಕ ಇಂಧನರಹಿತ ಶಕ್ತಿಯ ವಿಸ್ತರಣೆಯಲ್ಲಿ ಪ್ರಗತಿ ಕಂಡಿದ್ದರೂ, ಇನ್ನೂ ಕೆಲವು ಸವಾಲುಗಳು ಉಳಿದಿವೆ. ಈ ಶಕ್ತಿ ಮೂಲಗಳ ಹೆಚ್ಚಿನ ಬಳಕೆಗೆ ವಸ್ತುಗಳ ಲಭ್ಯತೆ ಹಾಗೂ ಸಂಗ್ರಹಣೆಯ ಅಗತ್ಯತೆಗಳು ಎರಡು ಪ್ರಮುಖ ಅಡೆತಡೆಗಳಾಗಿವೆ ಎಂದು ಸಮೀಕ್ಷೆ ಗುರುತಿಸಿದೆ.
ಶಕ್ತಿ ಪರಿವರ್ತನೆಯ ನಿರ್ಣಾಯಕ ಅಂಶವಾಗಿ ಪ್ರಮುಖ ಖನಿಜಗಳು
ಆರ್ಥಿಕ ಸಮೀಕ್ಷೆಯ ಪ್ರಕಾರ, ಜಾಗತಿಕ ಇಂಧನ ಪರಿವರ್ತನೆ ಇನ್ನು ಮುಂದೆ ಕೇವಲ ತಂತ್ರಜ್ಞಾನದಿಂದ ಮಾತ್ರ ನಿರ್ಧಾರವಾಗುವುದಿಲ್ಲ; ಅದನ್ನು ಹೆಚ್ಚಾಗಿ ಪ್ರಮುಖ ಖನಿಜಗಳ ನಿಯಂತ್ರಣ ಯಾರ ಕೈಯಲ್ಲಿದೆ ಎಂಬುದು ನಿರ್ಬಂಧಿಸುತ್ತಿದೆ. ಲಿಥಿಯಂ, ಕೋಬಾಲ್ಟ್, ನಿಕಲ್, ತಾಮ್ರ ಹಾಗೂ ಅಪರೂಪದ ಭೂತತ್ವ ಅಂಶಗಳು ಮುಂತಾದ ಲೋಹಗಳು ಕಡಿಮೆ-ಕಾರ್ಬನ್ ಆರ್ಥಿಕತೆಯ ರೂಪುರೇಷೆಗಳನ್ನು ನಿರ್ಧರಿಸುವ ಹೊಸ ತಂತ್ರಾತ್ಮಕ ಅಡೆತಡೆ ಕೇಂದ್ರಗಳಾಗಿ ಪರಿವರ್ತಗೊಂಡಿವೆ.
ಬೇಡಿಕೆ ವೇಗವಾಗಿ ಹೆಚ್ಚುತ್ತಿರುವಂತೆ, ಅಭಿವೃದ್ಧಿಶೀಲ ಆರ್ಥಿಕತೆಗಳು ಮಾನದಂಡ ಆಧಾರಿತ ಪ್ರಮುಖ ಖನಿಜ ಮಾರುಕಟ್ಟೆಗಳನ್ನು ಉತ್ತೇಜಿಸುವ ಮೂಲಕ ಪ್ರತಿಕ್ರಿಯಿಸುತ್ತಿವೆ. ಇವು ಸ್ಥಿರತೆ, ಪತ್ತೆಹಚ್ಚುವಿಕೆ ಹಾಗೂ ಆಡಳಿತಕ್ಕೆ ಹೆಚ್ಚಿನ ಒತ್ತು ನೀಡುತ್ತಿವೆ. ಭಾರತದ ತಂತ್ರವು ರಾಷ್ಟ್ರೀಯ ಪ್ರಮುಖ ಖನಿಜ ಮಿಷನ್ ಮೂಲಕ ದೇಶೀಯ ಸಾಮರ್ಥ್ಯಗಳ ಮೇಲೆ ಗಮನಹರಿಸುವುದರ ಜೊತೆಗೆ ಸೂಕ್ತ ಪ್ರೋತ್ಸಾಹಕ ವ್ಯವಸ್ಥೆಯನ್ನು ಅಳವಡಿಸಿಕೊಂಡಿದೆ. ಅದೇ ಸಮಯದಲ್ಲಿ, ಖನಿಜ ಭದ್ರತಾ ಸಹಭಾಗಿತ್ವ ಮತ್ತು ಇಂಡೋ-ಪೆಸಿಫಿಕ್ ಆರ್ಥಿಕ ಚೌಕಟ್ಟು ಮುಂತಾದ ಅಂತಾರಾಷ್ಟ್ರೀಯ ಸಹಭಾಗಿತ್ವಗಳಲ್ಲಿ ಭಾರತ ತೊಡಗಿಸಿಕೊಂಡಿದೆ. ಭಾರತ ಸರ್ಕಾರವು ನವೀಕರಿಸಬಹುದಾದ ಇಂಧನ ಹಾಗೂ ಸಂಗ್ರಹಣಾ ತಂತ್ರಜ್ಞಾನಗಳಿಗೆ ಅಗತ್ಯವಿರುವ ಖನಿಜಗಳ ಸರಬರಾಜು ಸರಣಿಯನ್ನು ಭದ್ರಗೊಳಿಸಲು ತಂತ್ರಾತ್ಮಕ ಉಪಕ್ರಮವಾಗಿ ರಾಷ್ಟ್ರೀಯ ಪ್ರಮುಖ ಖನಿಜ ಮಿಷನ್ ನ್ನು ಪ್ರಾರಂಭಿಸಿದೆ. ಇದರ ನಡುವೆ, ಸರ್ಕಾರದ ಸಂಯುಕ್ತ ಸಂಸ್ಥೆಯಾದ ಖನಿಜ್ ಬಿದೇಶ ಇಂಡಿಯಾ ಲಿಮಿಟೆಡ್ (KABIL) ಅರ್ಜೆಂಟೀನಾದಲ್ಲಿ ಲಿಥಿಯಂ ಗಣಿಗಾರಿಕೆಗೆ 15,703 ಹೆಕ್ಟೇರ್ ಭೂಮಿಯನ್ನು ಪಡೆದುಕೊಂಡಿದ್ದು, ಆಸ್ಟ್ರೇಲಿಯಾ ಮತ್ತು ಚಿಲಿಯೊಂದಿಗೆ ಸಹಭಾಗಿತ್ವಗಳನ್ನು ಕೂಡ ಹೊಂದಿದೆ.
ಭಾರತವು ಡಿಸೆಂಬರ್ 2025ರಲ್ಲಿ ಭಾರತವನ್ನು ಪರಿವರ್ತಿಸಲು ಪರಮಾಣು ಶಕ್ತಿಯ ಸುಸ್ಥಿರ ಬಳಕೆ ಮತ್ತು ಪ್ರಗತಿ (ಶಾಂತಿ) ಕಾಯ್ದೆಯನ್ನು ಅಳವಡಿಸಿಕೊಂಡಿದೆ. ಈ ಹೊಸ ಚೌಕಟ್ಟು ಪ್ರಮುಖ ಕ್ರಿಯೆಗಳಲ್ಲಿ ಖಾಸಗಿ ಕ್ಷೇತ್ರದ ಪಾಲ್ಗೊಳ್ಳುವಿಕೆಗೆ ಅವಕಾಶ ನೀಡುತ್ತದೆ. ಇದರಲ್ಲಿ ಘಟಕಗಳ ಕಾರ್ಯಾಚರಣೆ, ವಿದ್ಯುತ್ ಉತ್ಪಾದನೆ, ಉಪಕರಣ ತಯಾರಿಕೆ, ಮತ್ತು ಪರಮಾಣು ಶಕ್ತಿಯ ಬಳಕೆಯ ಕ್ಷೇತ್ರದಲ್ಲಿ ಸಂಶೋಧನೆ ಮತ್ತು ನವೋದ್ಯಮಗಳನ್ನು ಒಳಗೊಂಡಿದೆ.
ಕಾರ್ಬನ್ ಕ್ರೆಡಿಟ್ ವಹಿವಾಟು ಯೋಜನೆ: ಚೌಕಟ್ಟಿನಿಂದ ಜಾರಿಯಲ್ಲಿಯವರೆಗೆ
ಸರ್ಕಾರವು ಜೂನ್ 2023ರಲ್ಲಿ ಕಾರ್ಬನ್ ಕ್ರೆಡಿಟ್ ವಹಿವಾಟು ಯೋಜನೆಯನ್ನು ಅಳವಡಿಸಿಕೊಂಡಿತು. ಇದು ಅನುಸರಿಸಬೇಕಾದ ನಿಯಮಿತ ಕ್ರಮ ಮತ್ತು ಸ್ವಯಂಪ್ರೇರಿತ ತೀರ್ಮಾನಾತ್ಮಕ ಕ್ರಮ ಎಂಬ ಎರಡು ಮಾರ್ಗಗಳನ್ನು ಒಳಗೊಂಡಿದ್ದು, ಎರಡು ವ್ಯವಸ್ಥೆಗಳ ಮೂಲಕ ಕಾರ್ಯನಿರ್ವಹಿಸುತ್ತದೆ. ಈ ಚೌಕಟ್ಟು ಈಗಿರುವ ನಿರ್ವಹಿಸಿ, ಸಾಧಿಸಿ ಮತ್ತು ವ್ಯಾಪಾರ ಮಾಡಿ (PAT) ಯೋಜನೆಯ ಮೂಲಸೌಕರ್ಯ, ಕ್ರಮೇಣ ಅದನ್ನು ಸಂಪೂರ್ಣ ಕಾರ್ಯಾಚರಣೆಯ ಅನುಸರಣೆ ಕಾರ್ಬನ್ ಮಾರುಕಟ್ಟೆಯಾಗಿ ಪರಿವರ್ತಿಸಲಾಗುತ್ತದೆ. ತೀರ್ಮಾನಾತ್ಮಕ ಹಸ್ತಕ್ಷೇಪ ವ್ಯವಸ್ಥೆ ಕಾರ್ಯವಿಧಾನದ ಅಡಿಯಲ್ಲಿ, ನಿರ್ಬಂಧಿತವಲ್ಲದ ಘಟಕಗಳು ಕಾರ್ಬನ್ ಕ್ರೆಡಿಟ್ ಸರ್ಟಿಫಿಕೇಟ್ಸ್ ಗಳನ್ನು ಗಳಿಸಲು ಹಸಿರುಮನೆ ಅನಿಲ ಹೊರಸೂಸುವಿಕೆಯನ್ನು ಕಡಿಮೆ ಮಾಡುವ, ತೆಗೆದುಹಾಕುವ ಅಥವಾ ತಡೆಯುವ ಯೋಜನೆಗಳನ್ನು ಸ್ವಯಂಪ್ರೇರಣೆಯಿಂದ ನೋಂದಾಯಿಸಿಕೊಳ್ಳಬಹುದು.
ತೀರ್ಮಾನಾತ್ಮಕ ಹಸ್ತಕ್ಷೇಪ ವ್ಯವಸ್ಥೆ ಅಡಿಯಲ್ಲಿ, ನಿಯಮಾನುಸಾರವಲ್ಲದ ಸಂಸ್ಥೆಗಳು ಹಸಿರುಮನೆ ಅನಿಲ ಉತ್ಸರ್ಜನೆಯನ್ನು ಕಡಿಮೆ ಮಾಡುವ, ತೆಗೆದುಹಾಕುವ ಅಥವಾ ತಡೆಯುವ ಯೋಜನೆಗಳನ್ನು ಸ್ವಯಂಪ್ರೇರಿತವಾಗಿ ನೋಂದಣಿ ಮಾಡಬಹುದು ಮತ್ತು ಕಾರ್ಬನ್ ಕ್ರೆಡಿಟ್ ವಹಿವಾಟು ಯೋಜನೆ(Carbon Credit Certificates) ಗಳಿಸಬಹುದು. ಈ ವ್ಯವಸ್ಥೆ ಅನುಸರಣೆ ಚೌಕಟ್ಟಿನ ಹೊರಗಿನ ಸಂಸ್ಥೆಗಳಿಂದ ನಿರ್ವಹಣೆ ಫಲಿತಾಂಶಗಳನ್ನು ಪಡೆಯಲು ಹಾಗೂ ಆ ಪ್ರದೇಶಗಳಲ್ಲಿ ಹವಾಮಾನ ಕ್ರಮಗಳನ್ನು ಪ್ರೋತ್ಸಾಹಿಸಲು ಸಹಾಯ ಮಾಡುತ್ತದೆ.
ಮಿಷನ್ LiFE
Mission LiFE – Lifestyle for Environment (ಪರಿಸರಕ್ಕಾಗಿ ಜೀವನಶೈಲಿ) ಎಂಬ 2021 ರಲ್ಲಿ ಗ್ಲಾಸ್ಗೋದಲ್ಲಿ ನಡೆದ ಸಿಒಪಿ26 ನಲ್ಲಿ ಪರಿಚಯಿಸಲಾದ ಉಪಕ್ರಮವು ವೈಯಕ್ತಿಕ ಮತ್ತು ಸಮುದಾಯ ಆಚಾರ-ವ್ಯವಹಾರ ಬದಲಾವಣೆಗಳನ್ನು ಹವಾಮಾನ ಬದಲಾವಣೆಯನ್ನು ಎದುರಿಸುವ ಪ್ರಯತ್ನಗಳೊಂದಿಗೆ ಸಂಪರ್ಕಿಸುತ್ತದೆ. ಆರ್ಥಿಕ ಸಮೀಕ್ಷೆ ಮಿಷನ್ ಲೈಫ್ ನ್ನು ಭಾರತದ ರಾಷ್ಟ್ರೀಯವಾಗಿ ನಿರ್ಧರಿತ ಕೊಡುಗೆಗಳ ಅವಿಭಾಜ್ಯ ಭಾಗ ಎಂದು ಪರಿಗಣಿಸುತ್ತದೆ. ಭಾರತದಲ್ಲಿ ಹವಾಮಾನ-ಮುಖಿ ಯೋಜನೆಗಳ ಬಹುತೇಕವು ಮಿಷನ್ ಲೈಫ್ ಉದ್ದೇಶಕ್ಕೆ ಸೂಕ್ತವಾಗಿದ್ದು, ಸರ್ಕಾರದ ಹಸ್ತಕ್ಷೇಪವನ್ನು ಕುಟುಂಬ, ಸಮುದಾಯ ಮತ್ತು ಉದ್ಯಮ ಮಟ್ಟದಲ್ಲಿ ನಡೆಯುವ ವರ್ತನೆ ಮತ್ತು ಜೀವನಶೈಲಿ ಬದಲಾವಣೆಯೊಂದಿಗೆ ಸಂಯೋಜಿಸುತ್ತವೆ. ಆರ್ಥಿಕ ಸಮೀಕ್ಷೆಯ ಪ್ರಕಾರ, ಭಾರತದ ಹವಾಮಾನ ತಂತ್ರವು ಕೇವಲ ಉತ್ಸರ್ಜನೆ ಗುರಿಗಳು ಅಥವಾ ತಂತ್ರಜ್ಞಾನಗಳಿಗೆ ಸೀಮಿತವಿಲ್ಲ; ಬದಲಾಗಿ ಬಳಕೆ ಮಾದರಿಗಳನ್ನು, ಸಾಮಾಜಿಕ ಮಾನದಂಡಗಳನ್ನು ಮತ್ತು ದೈನಂದಿನ ಆಯ್ಕೆಯನ್ನು ಪುನರ್ರೂಪಗೊಳಿಸಲು ಉದ್ದೇಶಿತವಾಗಿದೆ. ಈ ಕಾರಣದಿಂದ, ಮಿಷನ್ ಲೈಫ್ ದೇಶದಲ್ಲಿ ಸಮಾನಾಂತರ ಉಪಕ್ರಮವಲ್ಲ, ಬಹುತೇಕ ಹವಾಮಾನ ನೀತಿಗಳ ಆಧಾರವಾಗಿರುವ ವರ್ತನಾತ್ಮಕ ಮೌಲ್ಯಗಳ ಮೂಲವಾಗಿದೆ.
ಹವಾಮಾನ ಹಣಕಾಸು
ಪ್ರಸ್ತುತ ಹವಾಮಾನ ಹಣಕಾಸಿನ ಮಟ್ಟವು ಅಭಿವೃದ್ಧಿಪಡಿಸುತ್ತಿರುವ ದೇಶಗಳಿಗೆ ತಮ್ಮ ಹವಾಮಾನ ಗುರಿಗಳನ್ನು ಸಾಧಿಸಲು ಅಗತ್ಯವಿರುವ ಪ್ರಮಾಣಕ್ಕಿಂತ ಕಡಿಮೆಯಾಗಿದೆ. ಆರ್ಥಿಕ ಸಮೀಕ್ಷೆಯ ಪ್ರಕಾರ, ಜಾಗತಿಕ ಮಟ್ಟದ ಸ್ಥಿರ ಪ್ರಯತ್ನಗಳಿದ್ದರೂ, ಸ್ಥಿರ ಬೆಳವಣಿಗೆ ಗುರಿಗಳ ಮತ್ತು ಲಭ್ಯವಿರುವ ಹಣಕಾಸು ನಡುವಿನ ಅಂತರವು ಹೆಚ್ಚುತ್ತಲೇ ಬಂದಿದೆ, ವಿಶೇಷವಾಗಿ ಅಭಿವೃದ್ಧಿ ಹೊಂದುತ್ತಿರುವ ದೇಶಗಳಿಗೆ ಇದನ್ನು ಸಿದ್ಧಾಂತವಾಗಿ ಸುಮಾರು 4 ಟ್ರಿಲಿಯನ್ ಡಾಲರ್ ಎಂದು ಅಂದಾಜಿಸಲಾಗಿದೆ.
ಅಂತಾರಾಷ್ಟ್ರೀಯ ಸಾರ್ವಜನಿಕ ಹಣಕಾಸು ಅಭಿವೃದ್ಧಿ ಹೊಂದಿರುವ ಆರ್ಥಿಕತೆಗಳಿಗೆ ಸೀಮಿತವಾಗಿದೆ, ದೇಶೀಯ ಅಂಶಗಳು ಜಾಗತಿಕ ಹವಾಮಾನ ಹಣಕಾಸಿನಲ್ಲಿ ಪ್ರಭುತ್ವ ಹೊಂದಿವೆ, ಒಟ್ಟು ಹೂಡಿಕೆಗಳ ಸುಮಾರು 80 ಶೇಕಡಾ ಹೊಂದಿರುವಂತೆ. ಈ ವಿಧಾನಗಳು, ಅಂತಾರಾಷ್ಟ್ರೀಯ ಹಣಕಾಸು ವ್ಯವಸ್ಥೆಯೊಳಗೆ ಅಳವಡಿಸಿಕೊಂಡು, ಅಭಿವೃದ್ಧಿ ಹೊಂದಿರುವ ದೇಶಗಳ ಪರವಾಗಿ ನಿರಂತರ ಮತ್ತು ಸ್ಪಷ್ಟ ಪಕ್ಷಪಾತ ನೀತಿ ತೋರಿಸುತ್ತವೆ.
ಆರ್ಥಿಕ ಸಮೀಕ್ಷೆಯ ಪ್ರಕಾರ, ಭಾರತವು ಹವಾಮಾನ ಹಣಕಾಸಿನಲ್ಲಿ ಜಾಗತಿಕ ಸವಾಲುಗಳನ್ನು ಎದುರಿಸುತ್ತಿದೆ, ಹಣಕಾಸು ಸೌರ, ಪವನ ಶಕ್ತಿ ಮತ್ತು ಶಕ್ತಿ ಕಾರ್ಯಕ್ಷಮತೆ ಮುಂತಾದ ಪ್ರಬಲ ಕ್ಷೇತ್ರಗಳತ್ತ ಹೆಚ್ಚು ಕೇಂದ್ರೀಕೃತವಾಗಿದೆ. ಹೊಂದಾಣಿಕೆ, ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಸಚಿವಾಲಯ (MSME)ಗಳಿಗೆ ಹಣಕಾಸು, ನಗರ ಮೂಲಸೌಕರ್ಯ, ಹಾಗೂ ಕಡಿಮೆ ಮಾಡಲು ಕಷ್ಟವಾದ ಕೈಗಾರಿಕೆಗಳು ಮುಂತಾದ ಪ್ರಮುಖ ಕ್ಷೇತ್ರಗಳು ಅಲ್ಪಹಣಕಾಸು ಪಡೆದಿವೆ. ಪ್ರಸ್ತುತ, ಭಾರತದಲ್ಲಿ ನಿಯಂತ್ರಣ (mitigation) ಕಾರ್ಯಗಳಿಗೆ ಶೇಕಡಾ 83ರಷ್ಟು ಮತ್ತು ಹೊಂದಾಣಿಕೆ ಕಾರ್ಯಗಳಿಗೆ ಶೇಕಡಾ 98ರಷ್ಟು ಹಣಕಾಸು ದೇಶೀಯ ಮೂಲಗಳಿಂದ ಬಂದಿದೆ.
ಭಾರತೀಯ ದೃಷ್ಟಿಕೋನದಲ್ಲಿ ಹಣಕಾಸು ಅಂತರವನ್ನು ಭರಿಸುವುದು
ಭಾರತವು ಹವಾಮಾನ ಕ್ರಮಗಳಿಗಾಗಿ ಹಣಕಾಸು ವಿಸ್ತರಣೆ ಮಾಡಲು ದೇಶೀಯ ಮತ್ತು ಅಂತಾರಾಷ್ಟ್ರೀಯ ಮೂಲಗಳಿಂದ ಎರಡೂ ಮಾರ್ಗದ ದ್ವಿಪ್ರಮುಖ ತಂತ್ರವನ್ನು ಅಳವಡಿಸಿಕೊಂಡಿದೆ.
ದೇಶೀಯ ಹಣಕಾಸು ವ್ಯವಸ್ಥೆಯನ್ನು ಬಲಪಡಿಸುವುದು
ಭಾರತೀಯ ನವೀಕರಿಸಬಹುದಾದ ಶಕ್ತಿ ಅಭಿವೃದ್ಧಿ ಸಂಸ್ಥೆ ಲಿಮಿಟೆಡ್IREDA, ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್-NABARD, ಭಾರತದ ಸಣ್ಣ ಕೈಗಾರಿಕಾ ಅಭಿವೃದ್ಧಿ ಬ್ಯಾಂಕ್-SIDBI, ಪವರ್ ಫೈನಾನ್ಸ್ ಕಾರ್ಪೋರೇಶನ್ ಲಿಮಿಟೆಡ್, ಹಾಗೂ ಗ್ರಾಮೀಣ ವಿದ್ಯುತ್ೀಕರಣ ನಿಗಮ ಲಿಮಿಟೆಡ್-Rural Electrification Corporation Ltd. ಮುಂತಾದ ಸಂಸ್ಥೆಗಳು ಈಗಾಗಲೇ ಕಡಿಮೆ-ಕಾರ್ಬನ್ / ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿವೆ. ಇವು ಸ್ಥಿರತೆಯನ್ನು ಉತ್ತೇಜಿಸುವುದು ಮತ್ತು ಹಸಿರು ಹೂಡಿಕೆಗಳನ್ನು ಪ್ರೋತ್ಸಾಹಿಸುವುದು ಸೇರಿದಂತೆ ಪ್ರಮುಖ ಉಪಕ್ರಮಗಳು ಮತ್ತು ಯೋಜನೆಗಳ ಮೂಲಕ ಕಾರ್ಯನಿರ್ವಹಿಸುತ್ತಿವೆ. ಈ ಸಂಸ್ಥೆಗಳು ಹವಾಮಾನ ಯೋಜನೆಗಳ ತಯಾರಿಕೆಗೆ ಬೆಂಬಲ ನೀಡುತ್ತವೆ ಮತ್ತು ಪ್ರಾಜೆಕ್ಟ್ಗಳ ವಿತ್ತೀಯ ಸೌಲಭ್ಯಕ್ಕೆ ಅರ್ಹತೆ ಹೆಚ್ಚಿಸಲು ಪ್ರೇರಣಾತ್ಮಕ ಹೂಡಿಕೆಯನ್ನು ಒದಗಿಸುತ್ತವೆ, ಇದು ಭಾರತದಲ್ಲಿ ಹವಾಮಾನ ಕ್ರಮಗಳಂತಹ ಅಭಿವೃದ್ಧಿ ಆದ್ಯತೆಗಳಿಗೆ ನೇರ ಸಂಬಂಧ ಹೊಂದಿದೆ.
ಸೆಬಿಯ ಬಿಸಿನೆಸ್ ರೆಸ್ಪಾನ್ಸಿಬಿಲಿಟಿ ಮತ್ತು ಸ್ಟೇನಬಿಲಿಟಿ ರಿಪೋರ್ಟ್ ಚೌಕಟ್ಟು, ಹಸಿರು ಬಾಂಡ್ ಮಾರ್ಗಸೂಚಿಗಳು ಮತ್ತು ಅಂತಾರಾಷ್ಟ್ರೀಯ ಹಣಕಾಸು ಸೇವಾ ಕೇಂದ್ರ ಪ್ರಾಧಿಕಾರ IFSCAಯ ಸ್ಥಿರತೆಯ ಸಂಪರ್ಕಿತ ಸಾಲ ಮಾರ್ಗದರ್ಶಿಗಳು ಹವಾಮಾನ ಸಂಬಂಧಿತ ಹೂಡಿಕೆಗಳಲ್ಲಿ ಗುಣಮಟ್ಟ ಮತ್ತು ಹೂಡಿಕೆದಾರರ ನಂಬಿಕೆಯನ್ನು ಸುಧಾರಿಸುತ್ತವೆ.
ಆಳವಾದ ಮತ್ತು ದ್ರವೀಭಾವಿತ ಬಾಂಡ್ ಮಾರುಕಟ್ಟೆಗಳು
ಹವಾಮಾನ ಮೂಲಸೌಕರ್ಯಕ್ಕೆ ಹಣಕಾಸು ಒದಗಿಸಲು ಬಾಂಡ್ ಮಾರುಕಟ್ಟೆಗಳು ಅತ್ಯಂತ ಪ್ರಮುಖವಾಗಿವೆ, ಏಕೆಂದರೆ ಈ ರೀತಿಯ ಮೂಲಸೌಕರ್ಯವು ಬಹಳಷ್ಟು ಪ್ರಾಥಮಿಕ ಹೂಡಿಕೆ ಮತ್ತು ದೀರ್ಘಾವಧಿಯ ಪಾವತಿ ಅವಧಿಗಳನ್ನು ಅಗತ್ಯವಿದೆ. ಹೆಚ್ಚು ಆಳವಿರುವ, ತ್ವರಿತವಾಗಿ ಖರೀದಿ-ಮಾರಾಟ ಮಾಡಲು ಸಾಧ್ಯವಿರುವ ಬಾಂಡ್ ಮಾರುಕಟ್ಟೆಗಳು ದೀರ್ಘಾವಧಿಯ, ಸ್ಥಿರ ಹಾಗೂ ವಿಸ್ತರಿಸಬಹುದಾದ ಹಣಕಾಸಿನ ವ್ಯವಸ್ಥೆಯನ್ನು ನಿರೀಕ್ಷಿತ ವೆಚ್ಚದಲ್ಲಿ ಒದಗಿಸಬಹುದು.
ಸಾರ್ವಜನಿಕ ಹಸಿರು ಬಾಂಡ್ಗಳು ಕಡಿಮೆ-ಕಾರ್ಬನ್ ಸಾರ್ವಜನಿಕ ಮೂಲಸೌಕರ್ಯ ಯೋಜನೆಗಳಿಗೆ ಹಣಕಾಸು ಒದಗಿಸಲು ಬಿಡುಗಡೆಯಾಗಿವೆ. ಇವು ನೀತಿ ಸೂಚನೆ ಮತ್ತು ಮಾರುಕಟ್ಟೆ ಮಾನದಂಡಗಳು ಒದಗಿಸುತ್ತವೆ.
ಒಂದು ಕಡೆ, ಪ್ರಬಲ ಮಾರುಕಟ್ಟೆಗಳು ದೀರ್ಘಾವಧಿಯ ಬಂಡವಾಳ ಹೊಂದಿರುವ ಸಂಸ್ಥಾತ್ಮಕ ಹೂಡಿಕೆದಾರರಿಂದ ಹೂಡಿಕೆಯನ್ನು ಆಕರ್ಷಿಸಲು ಅತ್ಯಂತ ಪ್ರಮುಖವಾಗಿವೆ. ಇನ್ನೊಂದು ಕಡೆ, ಬಾಂಡ್ ಮಾರುಕಟ್ಟೆಗಳು ಸ್ಥಳೀಯ ಆಡಳಿತಾತ್ಮಕ ಸಂಸ್ಥೆಗಳಿಗೆ ಸ್ಥಳೀಯ ನಾಣ್ಯದ ಹಣಕಾಸು ವಸೂಲಿ ಮಾಡುವ ಮಹತ್ವದ ವೇದಿಕೆ ಒದಗಿಸುತ್ತವೆ, ಇದನ್ನು ನೀರಿನ ಸರಬರಾಜು, ತ್ಯಾಜ್ಯ ನಿರ್ವಹಣೆ, ಹಸಿರು ಇಂಧನ ಮುಂತಾದ ಹವಾಮಾನ-ಸಮರ್ಪಿತ ಕಾರ್ಯಗಳಿಗೆ, ಸ್ಥಳೀಯ ಹೊಂದಾಣಿಕೆ ಮತ್ತು ಸಹನಶೀಲ ಅಗತ್ಯಗಳಿಗೆ ತಕ್ಕಂತೆ ರೂಪಿಸಲಾಗಿದೆ. ಸಮೀಕ್ಷೆ ತಿಳಿಸುವಂತೆ, ಇಂದೋರ್, ಘಾಜಿಯಾಬಾದ್, ಅಹಮದಾಬಾದ್ ಮತ್ತು ವಡೋದರಾ ನಗರ ಸ್ಥಳೀಯ ಸಂಸ್ಥೆಗಳು ಸೆಬಿಯ ಹಸಿರು ಬಾಂಡ್ ಚೌಕಟ್ಟಿನಂತೆ ಹಸಿರು ಬಾಂಡ್ಗಳನ್ನು ಬಿಡುಗಡೆಯಾಗಿವೆ. ನಗರ ಹಸಿರು ಬಾಂಡ್ಗಳು ಮುಂದಿನ 5–10 ವರ್ಷಗಳಲ್ಲಿ ಸ್ಥಳೀಯ ಸಂಸ್ಥೆಗಳ ಹವಾಮಾನ ಕ್ರಮಗಳಿಗೆ ಸುಮಾರು 2.5–6.9 ಬಿಲಿಯನ್ ಡಾಲರ್ ಮೊತ್ತವನ್ನು ಬಿಡುಗಡೆ ಮಾಡಲು ಸಹಾಯ ಮಾಡಬಹುದು.
ಸಮೀಕ್ಷೆ ಗ್ರೀನಿಯಮ್—ಅಂದರೆ ಹಸಿರು ಬಾಂಡ್ಗಳ ಲಾಭದಾಯಕತೆಯ ಹೆಚ್ಚುವರಿ, ಸಾಮಾನ್ಯ ಬಾಂಡ್ಗಳೊಂದಿಗೆ ಹೋಲಿಸಿದಾಗ—ಬಹಳಷ್ಟು ಸಾರ್ವಜನಿಕ ಹೊರತಂದವರಿಗೆ ಕಂಡುಬಂದಿರುವುದು ತಿಳಿಸಿದೆ, ಆದರೆ ಇದರ ಪ್ರಮಾಣ ಮತ್ತು ಸ್ಥಿರತೆ ಮಾರುಕಟ್ಟೆ ಪ್ರಕಾರ ಬಹಳ ಬೇರೆಬೇರೆ ಆಗಿದೆ.ಇದಲ್ಲದೆ, ಭಾರತ ಸರ್ಕಾರವು ಆರ್ಥಿಕ ವರ್ಷ 2026ರಲ್ಲಿ 15,000 ಕೋಟಿ ರೂಪಾಯಿ ಮೌಲ್ಯದ ಸಾರ್ವಜನಿಕ ಹಸಿರು ಬಾಂಡ್ಗಳನ್ನು ಬಿಡುಗಡೆ ಮಾಡಿದ್ದು, ಆರ್ಥಿಕ ವರ್ಷ 2023ರಿಂದ ಒಟ್ಟು 72,697 ಕೋಟಿ ರೂಪಾಯಿ ಮೌಲ್ಯದ ಹಸಿರು ಬಾಂಡ್ ಬಿಡುಗಡೆಯಾಗಿದೆ.
ಅಂತಾರಾಷ್ಟ್ರೀಯ ಅನುಭವವು ತೋರಿಸುತ್ತದೆ, ಗ್ರೀನಿಯಮ್ ಫಲಿತಾಂಶಗಳು ಹೂಡಿಕೆದಾರರ ಉದ್ದೇಶದ ಮೇಲೆ ಕಡಿಮೆ ಅವಲಂಬಿತವಾಗಿವೆ; ಬದಲಾಗಿ ಇದು ಮಾರುಕಟ್ಟೆ,ಹಣದ ಲಭ್ಯತೆ, ವಿಶ್ವಾಸಾರ್ಹತೆ, ಮತ್ತು ವರದಿ ಚೌಕಟ್ಟಿನ ಮೇಲೆ ಹೆಚ್ಚು ಅವಲಂಬಿತವಾಗಿದೆ. ಭಾರತದಲ್ಲಿ ಗ್ರೀನಿಯಮ್ ನ್ನು ಮಧ್ಯಂತರ (0–6 bps) ಎಂದು ಸ್ಪಷ್ಟ ಸಾರ್ವಜನಿಕ ಹಸಿರು ಬಾಂಡ್ ಚೌಕಟ್ಟು, ದೇಶೀಯ ಸಂಸ್ಥಾತ್ಮಕ ಬೇಡಿಕೆಯ ಬಲ, ನೀತಿ ಸೂಚನೆ ಮೌಲ್ಯ ಮೇಲೆ ವರ್ಗೀಕರಿಸಲಾಗಿದೆ.
ಅಂತಾರಾಷ್ಟ್ರೀಯ ಹವಾಮಾನ ಹಣಕಾಸು ಮತ್ತು ಬಹುಪಕ್ಷೀಯ ಅಭಿವೃದ್ಧಿ ಬ್ಯಾಂಕ್ಗಳ (MDBs) ಪಾತ್ರ
ಸಮೀಕ್ಷೆ ಸ್ಪಷ್ಟವಾಗಿ ಹೇಳುವಂತೆ, ಜಾಗತಿಕ ಬಂಡವಾಳ ಮಾರುಕಟ್ಟೆಗಳಲ್ಲಿ ಸಾಕಷ್ಟು ನಿಧಿ ಲಭ್ಯವಿದೆ, ಆದರೆ ಜಾಗತಿಕ ದಕ್ಷಿಣದ ಸ್ಥಿರ ಬೆಳವಣಿಗೆ ಮತ್ತು ಹವಾಮಾನ ಯೋಜನೆಗಳಿಗೆ ನಗದು ಹರಿವು ನಿರ್ಬಂಧಿತವಾಗಿದೆ, ಏಕೆಂದರೆ ಜಾಗತಿಕ ಹಣಕಾಸು ವ್ಯವಸ್ಥೆಯ ರಚನೆಗೆ ಒಳಪಡುವ ನಿರಂತರ ಅಪಾಯ ನಿರ್ಬಂಧ ಇದೆ. ಇದು ಬಹುಪಕ್ಷೀಯ ಅಭಿವೃದ್ಧಿ ಬ್ಯಾಂಕ್ಗಳ ಕಾರ್ಯಾಚರಣಾ ಮಾದರಿಗಳಲ್ಲಿಯೂ ಮತ್ತು ಅಭಿವೃದ್ಧಿ ಹೊಂದಿರುವ ದೇಶಗಳ ನಿಟ್ಟಿನಲ್ಲಿ ಜಾಗೃತ ನಿಯಂತ್ರಣ ಗಳಲ್ಲಿಯೂ ಸ್ಪಷ್ಟವಾಗಿ ಕಾಣಬಹುದು.
ಬಹುಪಕ್ಷೀಯ ಅಭಿವೃದ್ಧಿ ಬ್ಯಾಂಕ್ಗಳು-MDBಗಳು ಇನ್ನೂ ಕಡಿಮೆ ಅಪಾಯ, ಸರ್ಕಾರಿ ಬೆಂಬಲಿತ ಸಾಲ ಮತ್ತು ಎಎಎ ರೇಟಿಂಗ್ಗಳ ರಕ್ಷಣೆಯನ್ನು ಹೊಂದಿವೆ., ಇದರಿಂದ ಬ್ಯಾಲೆನ್ಸ್-ಶೀಟ್ ಮರುಬಳಕೆ ಮತ್ತು ಖಾಸಗಿ ಬಂಡವಾಳ ಆಕರ್ಷಣೆ ಸೀಮಿತವಾಗುತ್ತದೆ. ಖಾಸಗಿ ಹೂಡಿಕೆಯನ್ನು ಆಕರ್ಷಿಸಲು ಗ್ಯಾರಂಟಿಗಳು, ವಿಮೆ ಮತ್ತು ಮಿಶ್ರ ಹಣಕಾಸು ಬಳಸಿಕೊಂಡು ಬಹುಪಕ್ಷೀಯ ಅಭಿವೃದ್ಧಿ ಬ್ಯಾಂಕ್ಗಳನ್ನು ಜಾಗತಿಕ ಅಪಾಯ ವ್ಯವಸ್ಥಾಪಕರಾಗಿ ಮರುಸ್ಥಾಪಿಸಲು, "ಮೂಲ-ಹಿಡಿತ" ದಿಂದ "ಮೂಲ-ಹಂಚಿಕೆ" ಗೆ ಬ್ಯಾಲೆನ್ಸ್-ಶೀಟ್ ಸುಧಾರಣೆ ಕಡೆಗೆ ಬದಲಾವಣೆ ಅತ್ಯಗತ್ಯವಾಗಿದೆ.
******
(ಪ್ರಕಟಣೆ ಐ.ಡಿ.: 2220600)
ವಿಸಿಟರ್ ಕೌಂಟರ್ : 20