ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಭಾರತದ ಜವಳಿ ವಲಯದ ಬೆಳವಣಿಗೆಯ ಕುರಿತು ಲೇಖನವನ್ನು ಹಂಚಿಕೊಂಡಿರುವ ಪ್ರಧಾನಮಂತ್ರಿ

प्रविष्टि तिथि: 20 JAN 2026 3:18PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಕೇಂದ್ರ ಜವಳಿ ಉದ್ಯಮ ಖಾತೆ ಸಚಿವರಾದ ಶ್ರೀ ಗಿರಿರಾಜ್ ಸಿಂಗ್ ಅವರ ಲೇಖನವನ್ನು ಹಂಚಿಕೊಂಡಿದ್ದಾರೆ.

ಈ ಲೇಖನವು ಭಾರತದಲ್ಲಿ ಜವಳಿ ವಲಯವು ಪರಂಪರೆಯ ಉದ್ಯಮದಿಂದ ಬಲಿಷ್ಠ, ಉದ್ಯೋಗ ಸೃಷ್ಟಿಸುವ ಹಾಗೂ ಜನಕೇಂದ್ರಿತ ಬೆಳವಣಿಗೆಯ ಎಂಜಿನ್ ಆಗಿ ಪ್ರಗತಿ ಹೊಂದಿದ ರೀತಿಯನ್ನು ವಿವರಿಸುತ್ತದೆ. ಇದು ಆತ್ಮನಿರ್ಭರ ಭಾರತದ ನಿಜವಾದ ಚೈತನ್ಯವನ್ನು ಸಾಕಾರಗೊಳಿಸುತ್ತದೆ. ಪಿಎಂ ಮಿತ್ರ ಪಾರ್ಕ್‌ಗಳು, ಪಿ ಎಲ್ ಐ ಯೋಜನೆಗಳು ಹಾಗೂ ಹೊಸ ಮುಕ್ತ ವ್ಯಾಪಾರ ಒಪ್ಪಂದಗಳಂತಹ ಉಪಕ್ರಮಗಳು ಮುಂದಿನ ಹಂತದ ಉದ್ಯೋಗ ಸೃಷ್ಟಿಗೆ ದಾರಿ ಮಾಡಿಕೊಡುತ್ತಿವೆ ಎಂಬುದನ್ನು ಲೇಖನ ಉಲ್ಲೇಖಿಸುತ್ತದೆ.

ಪ್ರಧಾನಮಂತ್ರಿಗಳ ಕಚೇರಿ ಎಕ್ಸ್ ಪೋಸ್ಟ್ ನಲ್ಲಿ ಇದನ್ನು ಪ್ರಕಟಿಸಿದೆ:  

“ಈ ಲೇಖನದಲ್ಲಿ ಕೇಂದ್ರ ಸಚಿವರಾದ ಶ್ರೀ ಗಿರಿರಾಜ್ ಸಿಂಗ್ ಅವರು ಭಾರತದಲ್ಲಿನ ವಸ್ತ್ರೋದ್ಯಮವು ಪರಂಪರೆಯ ಉದ್ಯಮದಿಂದ ಬಲಿಷ್ಠ, ಉದ್ಯೋಗ ಸೃಷ್ಟಿಸುವ, ಜನಕೇಂದ್ರಿತ ಬೆಳವಣಿಗೆಯ ಎಂಜಿನ್ ಆಗಿ ಬೆಳೆಯುತ್ತಿರುವುದನ್ನು ವಿವರಿಸಿದ್ದಾರೆ. ಇದು ಆತ್ಮನಿರ್ಭರ ಭಾರತದ ನಿಜವಾದ ಚೈತನ್ಯವನ್ನು ಸಾಕಾರಗೊಳಿಸುತ್ತದೆ.

ಪಿಎಂ ಮಿತ್ರ ಪಾರ್ಕ್‌ಗಳು, ಪಿಎಲ್ ಐ ಯೋಜನೆಗಳು ಮತ್ತು ಹೊಸ ಮುಕ್ತ ವ್ಯಾಪಾರ ಒಪ್ಪಂದಗಳು ಮುಂದಿನ ಹಂತದ ಉದ್ಯೋಗ ಸೃಷ್ಟಿಗೆ ಕಾರಣವಾಗುತ್ತಿವೆ ಎಂಬುದನ್ನು ಸಚಿವರು ಲೇಖನದಲ್ಲಿ ಉಲ್ಲೇಖಿಸಿದ್ದಾರೆ.”

 

*****


(रिलीज़ आईडी: 2216461) आगंतुक पटल : 5
इस विज्ञप्ति को इन भाषाओं में पढ़ें: English , Urdu , Marathi , हिन्दी , Bengali , Assamese , Punjabi , Gujarati , Telugu , Malayalam