ಪ್ರಧಾನ ಮಂತ್ರಿಯವರ ಕಛೇರಿ
ಮಾರ್ಚ್ 1, 2025 ರಂದು ನಡೆಯಲಿರುವ "ಕೃಷಿ ಮತ್ತು ಗ್ರಾಮೀಣ ಸಮೃದ್ಧಿ" ಕುರಿತ ಬಜೆಟ್ ನಂತರದ ವೆಬಿನಾರ್ ನಲ್ಲಿ ಪ್ರಧಾನಮಂತ್ರಿ ಅವರು ಭಾಗವಹಿಸಲಿದ್ದಾರೆ
ಈ ವರ್ಷದ ಬಜೆಟ್ ನ ದೃಷ್ಟಿಕೋನವನ್ನು ಕ್ರಿಯಾಶೀಲ ಫಲಿತಾಂಶಗಳಾಗಿ ಬದಲಾಯಿಸಲು ಸಹಯೋಗವನ್ನು ವೆಬಿನಾರ್ ಉತ್ತೇಜಿಸುತ್ತದೆ
Posted On:
28 FEB 2025 7:32PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾರ್ಚ್ 1, 2025 ರಂದು ಮಧ್ಯಾಹ್ನ 12:30 ಕ್ಕೆ ವಿಡಿಯೊ ಸಮಾವೇಶ ಮೂಲಕ "ಕೃಷಿ ಮತ್ತು ಗ್ರಾಮೀಣ ಸಮೃದ್ಧಿ" ಕುರಿತು ನಡೆಯುವ ಬಜೆಟ್ ನಂತರದ ವೆಬಿನಾರ್ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಸಭೆಯನ್ನು ಉದ್ದೇಶಿಸಿ ಅವರು ಭಾಷಣಮಾಡಲಿದ್ದಾರೆ.
ಈ ವರ್ಷದ ಬಜೆಟ್ ಪ್ರಕಟಣೆಗಳ ಪರಿಣಾಮಕಾರಿ ಅನುಷ್ಠಾನದ ಕಾರ್ಯತಂತ್ರದ ಮೇಲೆ ಕೇಂದ್ರೀಕೃತ ಚರ್ಚೆಗಾಗಿ ಪ್ರಮುಖ ಮಧ್ಯಸ್ಥಗಾರರನ್ನು ಒಟ್ಟುಗೂಡಿಸುವ ಗುರಿಯನ್ನು ಈ ವೆಬಿನಾರ್ ಹೊಂದಿದೆ. ಕೃಷಿ ಬೆಳವಣಿಗೆ ಮತ್ತು ಗ್ರಾಮೀಣ ಸಮೃದ್ಧಿಯ ಮೇಲೆ ಬಲವಾಗಿ ಒತ್ತು ನೀಡುವುದರೊಂದಿಗೆ, ಈ ಅಧಿವೇಶನವು ಬಜೆಟ್ ನ ದೃಷ್ಟಿಕೋನವನ್ನು ಕ್ರಿಯಾಶೀಲ ಫಲಿತಾಂಶಗಳಾಗಿ ಬದಲಾಯಿಸಲು ಸಾರ್ವತ್ರಿಕ ಸಹಯೋಗವನ್ನು ಉತ್ತೇಜಿಸುತ್ತದೆ. ಈ ವೆಬಿನಾರ್, ಖಾಸಗಿ ವಲಯದ ತಜ್ಞರು, ಉದ್ಯಮ ಪ್ರತಿನಿಧಿಗಳು ಮತ್ತು ವಿಷಯ ತಜ್ಞರನ್ನು ಅವರುಗಳ ಅನುಭವಗಳನ್ನು ಒಂದು ಕಡೆ ಜೋಡಿಸಲು ಮತ್ತು ಪರಿಣಾಮಕಾರಿ ಅನುಷ್ಠಾನಕ್ಕೆ ಚಾಲನೆ ನೀಡುತ್ತದೆ.
*****
(Release ID: 2158704)
Visitor Counter : 5
Read this release in:
Malayalam
,
English
,
Urdu
,
Marathi
,
हिन्दी
,
Bengali
,
Manipuri
,
Assamese
,
Punjabi
,
Gujarati
,
Odia
,
Tamil
,
Telugu