ವಾರ್ತಾ ಮತ್ತು ಪ್ರಸಾರ ಸಚಿವಾಲಯ
azadi ka amrit mahotsav

ಭಾರತದಿಂದ ಕುವೈತ್ ಗೆ ಸರ್ವಪಕ್ಷ ನಿಯೋಗದ ಭೇಟಿ (ಮೇ 26-27, 2025)

Posted On: 25 MAY 2025 3:18PM by PIB Bengaluru

ಗೌರವಾನ್ವಿತ ಲೋಕಸಭಾ ಸದಸ್ಯರಾದ ಶ್ರೀ ಬೈಜಯಂತ್ ಜಯ್ ಪಾಂಡಾ ನೇತೃತ್ವದ ಭಾರತದ ಸರ್ವಪಕ್ಷ ನಿಯೋಗವು, ಸೇವೆಯಲ್ಲಿರುವ ಸಂಸತ್ ಸದಸ್ಯರು, ಮಾಜಿ ಸಚಿವರು ಮತ್ತು ಭಾರತದ ಮಾಜಿ ವಿದೇಶಾಂಗ ಕಾರ್ಯದರ್ಶಿಗಳನ್ನು ಒಳಗೊಂಡಿದ್ದು, ಭಯೋತ್ಪಾದನೆಯ ವಿರುದ್ಧ ಭಾರತದ ಒಗ್ಗಟ್ಟಿನ ಮತ್ತು ಅಚಲ ನಿಲುವನ್ನು, ಅದರ ಎಲ್ಲಾ ರೂಪಗಳು ಹಾಗು ಅಭಿವ್ಯಕ್ತಿಗಳಲ್ಲಿ ಬಿಂಬಿಸುವ ಗುರಿಯನ್ನು ಹೊಂದಿರುವ ರಾಜತಾಂತ್ರಿಕ ಪ್ರಯತ್ನದ ಭಾಗವಾಗಿ 2025ರ ಮೇ 26 ರಿಂದ 27 ರವರೆಗೆ ಕುವೈತ್ ದೇಶಕ್ಕೆ  ಭೇಟಿ ನೀಡಲಿದೆ.

2. ನಿಯೋಗದ ಸದಸ್ಯರು  :

i) ಶ್ರೀ ಬೈಜಯಂತ್ ಜಯ್ ಪಾಂಡಾ, ಗೌರವಾನ್ವಿತ ಸಂಸತ್ ಸದಸ್ಯರು, ಲೋಕಸಭೆ; ಮಾಜಿ ಸಂಸದರು (ರಾಜ್ಯಸಭೆ)

ii) ಡಾ. ನಿಶಿಕಾಂತ್ ದುಬೆ, ಮಾನ್ಯ ಸಂಸದರು (ಲೋಕಸಭೆ), ಅಧ್ಯಕ್ಷರು, ಸಂವಹನ ಮತ್ತು ಮಾಹಿತಿ ತಂತ್ರಜ್ಞಾನ ಸಮಿತಿ

iii) ಶ್ರೀಮತಿ ಎಸ್. ಫಾಂಗ್ನಾನ್ ಕೊನ್ಯಾಕ್, ಗೌರವಾನ್ವಿತ ಸಂಸದರು (ರಾಜ್ಯಸಭೆ), ನಾಗಾಲ್ಯಾಂಡ್ನಿಂದ ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾದ ಮೊದಲ ಮಹಿಳೆ.

iv) ಶ್ರೀಮತಿ ರೇಖಾ ಶರ್ಮಾ, ಗೌರವಾನ್ವಿತ ಸಂಸದರು (ರಾಜ್ಯಸಭೆ), ರಾಷ್ಟ್ರೀಯ ಮಹಿಳಾ ಆಯೋಗದ ಮಾಜಿ ರಾಷ್ಟ್ರೀಯ ಅಧ್ಯಕ್ಷೆ

v) ಶ್ರೀ. ಅಸಾದುದ್ದೀನ್ ಓವೈಸಿ, ಮಾನ್ಯ ಸಂಸದರು (ಲೋಕಸಭೆ), ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ ಅಧ್ಯಕ್ಷ

vi) ಶ್ರೀ. ಸತ್ನಮ್ ಸಿಂಗ್ ಸಂಧು, ಮಾನ್ಯ ಸಂಸದರು (ರಾಜ್ಯಸಭೆ), ಸ್ಥಾಪಕ ಕುಲಪತಿ, ಚಂಡೀಗಢ ವಿಶ್ವವಿದ್ಯಾಲಯ

vii) ಶ್ರೀ. ಗುಲಾಂ ನಬಿ ಆಜಾದ್, ಮಾಜಿ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು, ಮಾಜಿ ಮುಖ್ಯಮಂತ್ರಿ, ಮಾಜಿ ಸಂಸದರು (ರಾಜ್ಯಸಭೆ)

viii) ಶ್ರೀ. ಹರ್ಷವರ್ಧನ್ ಶ್ರಿಂಗ್ಲಾ, ಮಾಜಿ ವಿದೇಶಾಂಗ ಕಾರ್ಯದರ್ಶಿ, ಅಮೆರಿಕಾ, ಬಾಂಗ್ಲಾದೇಶ ಮತ್ತು ಥೈಲ್ಯಾಂಡ್ ನ ಭಾರತದ ಮಾಜಿ ರಾಯಭಾರಿ

3. ಕುವೈತ್ ನಲ್ಲಿ ತಮ್ಮ ವಾಸ್ತವ್ಯದ ಸಮಯದಲ್ಲಿ, ನಿಯೋಗವು ಕುವೈತ್ ಸರ್ಕಾರದ ಹಿರಿಯ ಗಣ್ಯರು, ನಾಗರಿಕ ಸಮಾಜದ ಪ್ರಮುಖ ಸದಸ್ಯರು, ಪ್ರಭಾವಿಗಳು, ಚಿಂತಕರ ಚಾವಡಿಗಳು, ಮಾಧ್ಯಮ ಮತ್ತು ಭಾರತೀಯ ವಲಸಿಗರ  ವಿವಿಧ ವರ್ಗದೊಂದಿಗೆ ಸಂವಾದ ನಡೆಸಲಿದೆ.

 

*****


(Release ID: 2131354)