ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಗುರುದೇವ ರವೀಂದ್ರನಾಥ್ ಠಾಗೋರ್ ಜಯಂತಿ ಪ್ರಯುಕ್ತ ಪ್ರಧಾನಮಂತ್ರಿ ಗೌರವ ನಮನ

Posted On: 09 MAY 2025 2:27PM by PIB Bengaluru

ಗುರುದೇವ ರವೀಂದ್ರನಾಥ್ ಠಾಗೋರ್ ಅವರ ಜಯಂತಿ ಪ್ರಯುಕ್ತ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಗೌರವ ನಮನ ಸಲ್ಲಿಸಿದ್ದಾರೆ.

ಭಾರತ ದೇಶದ ಸಾಹಿತ್ಯ ಮತ್ತು ಸಂಸ್ಕೃತಿಯ ಆತ್ಮವಾಗಿ ಗುರುದೇವ ರವೀಂದ್ರನಾಥ್ ಠಾಗೋರ್ ಅವರನ್ನು ಸ್ಮರಿಸಲಾಗುತ್ತಿದೆ. ಠಾಗೋರ್ ಅವರ ಕೃತಿಗಳು ದೇಶದ ಜನರಲ್ಲಿ ಮಾನವೀಯತೆ ಮತ್ತು ರಾಷ್ಟ್ರೀಯತೆ ಮೂಡುವಂತೆ ಮಾಡುತ್ತದೆ ಎಂದು ಪ್ರಧಾನಿಯವರು ಹೇಳಿದ್ದಾರೆ.

ಎಕ್ಸ್ ಪೋಸ್ಟ್ ನಲ್ಲಿ ಬರೆದುಕೊಂಡಿರುವ ಪ್ರಧಾನಮಂತ್ರಿ ಅವರು;

ಗುರುದೇವ ರವೀಂದ್ರನಾಥ್ ಠಾಗೋರ್ ಅವರ ಜಯಂತಿ ಅಂಗವಾಗಿ ಗೌರವ ನಮನಗಳು. ಭಾರತ ದೇಶದ ಸಾಹಿತ್ಯ ಮತ್ತು ಸಂಸ್ಕೃತಿಯ ಆತ್ಮವೆಂದು ಅವರನ್ನು ಸ್ಮರಿಸಲಾಗುತ್ತದೆ. ಮಾನವೀಯತೆ ಮತ್ತು ರಾಷ್ಟ್ರೀಯತೆಯ ಸ್ಫೂರ್ತಿ ಮೂಡಿಸುವಲ್ಲಿ ಅವರ ಕೃತಿಗಳು, ಬರಹಗಳು ಒತ್ತು ನೀಡುತ್ತವೆ. ಶಿಕ್ಷಣ ಮತ್ತು ಕಲಿಕೆ ಮೇಲಿನ ಅವರ ಸತತ ಪ್ರಯತ್ನಗಳನ್ನು ಶಾಂತಿನಿಕೇತನವನ್ನು ಪೋಷಿಸಿದ ರೀತಿಯಿಂದ ತಿಳಿದುಕೊಳ್ಳಬಹುದಾಗಿದ್ದು, ಅದು ಅತ್ಯಂತ ಸ್ಫೂರ್ತಿದಾಯಕವಾಗಿದೆ ಎಂದು ಹೇಳಿದ್ದಾರೆ.

 

 

*****


(Release ID: 2128310)