ವಾರ್ತಾ ಮತ್ತು ಪ್ರಸಾರ ಸಚಿವಾಲಯ
ಜಾಗತಿಕ ಬೌದ್ಧಿಕ ಆಸ್ತಿ ಪರಿಸರ ವ್ಯವಸ್ಥೆಯನ್ನು ಪರಿವರ್ತಿಸುವ ಅಗತ್ಯವಿದೆ; ಎಲ್ಲಾ ದೇಶಗಳಿಗೆ ಉದ್ಯೋಗ, ಅಭಿವೃದ್ಧಿ ಮತ್ತು ನಾವೀನ್ಯತೆಗಾಗಿ ಬೌದ್ಧಿಕ ಆಸ್ತಿ ವೇಗವರ್ಧಕವಾಗಿ ಕಾರ್ಯನಿರ್ವಹಿಸುತ್ತದೆ: ಡಬ್ಲ್ಯೂಐಪಿಒ ಮಹಾನಿರ್ದೇಶಕ ಡರೆನ್ ಟ್ಯಾಂಗ್
ವೇವ್ಸ್ 2025 ರಲ್ಲಿ “ಶ್ರವ್ಯ-ದೃಶ್ಯ ಪ್ರದರ್ಶಕರು ಮತ್ತು ಕಂಟೆಂಟ್ ರಚನೆಕಾರರಿಗೆ ಬೌದ್ಧಿಕ ಆಸ್ತಿ ಮತ್ತು ಹಕ್ಕುಸ್ವಾಮ್ಯದ ಪಾತ್ರ” ಎಂಬ ವಿಷಯ ಕುರಿತ ಅಧಿವೇಶನವು ಒಳನೋಟವುಳ್ಳ ಸಂವಾದವನ್ನು ಹುಟ್ಟುಹಾಕಿತು
Posted On:
01 MAY 2025 8:06PM
|
Location:
PIB Bengaluru
ಮುಂಬೈನ ಜಿಯೋ ವರ್ಲ್ಡ್ ಸೆಂಟರ್ ನಲ್ಲಿ ನಡೆಯುತ್ತಿರುವ ಜಾಗತಿಕ ಶ್ರವ್ಯ-ದೃಶ್ಯ ಮತ್ತು ಮನರಂಜನಾ ಶೃಂಗಸಭೆಯಲ್ಲಿ (ವೇವ್ಸ್) ಇಂದು ರಲ್ಲಿ “ಶ್ರವ್ಯ-ದೃಶ್ಯ ಪ್ರದರ್ಶಕರು ಮತ್ತು ಕಂಟೆಂಟ್ ರಚನೆಕಾರರಿಗೆ ಬೌದ್ಧಿಕ ಆಸ್ತಿ ಮತ್ತು ಹಕ್ಕುಸ್ವಾಮ್ಯದ ಪಾತ್ರ” ಎಂಬ ವಿಷಯ ಕುರಿತು ಚರ್ಚೆ ನಡೆಯಿತು. ಡಿಜಿಟಲ್ ಯುಗದಲ್ಲಿ ಕಂಟೆಂಟ್ ಸೃಷ್ಟಿಕರ್ತರನ್ನು ಸಬಲೀಕರಣಗೊಳಿಸುವಲ್ಲಿ ಐಪಿ (ಬೌದ್ಧಿಕ ಆಸ್ತಿ) ಹಕ್ಕುಗಳ ಪಾತ್ರವನ್ನು ಚರ್ಚಿಸಲು ಈ ಅಧಿವೇಶನವು ಜಾಗತಿಕ ಮನರಂಜನೆ, ಕಾನೂನು ಮತ್ತು ಸೃಜನಶೀಲ ಉದ್ಯಮಗಳ ಪ್ರಭಾವಿ ವ್ಯಕ್ತಿಗಳನ್ನು ಒಟ್ಟುಗೂಡಿಸಿತು.

ವಿಕಸನಗೊಳ್ಳುತ್ತಿರುವ ಕಾನೂನು ಸನ್ನಿವೇಶದ ಬಗ್ಗೆ ಚರ್ಚೆಯು ಪ್ರತಿಬಿಂಬಿಸಿತು. ವಿಶೇಷವಾಗಿ ಅನಧಿಕೃತ ಬಳಕೆ ಮತ್ತು ಶೋಷಣೆಗೆ ಹೆಚ್ಚು ಗುರಿಯಾಗುತ್ತಿರುವ ಪ್ರದರ್ಶಕರು ಮತ್ತು ಕಂಟೆಂಟ್ ರಚನೆಕಾರರಿಗೆ, ಬೌದ್ಧಿಕ ಆಸ್ತಿ ಹಕ್ಕುಗಳ ಬಲವಾದ ಅರಿವು ಮತ್ತು ರಕ್ಷಣೆಯ ತುರ್ತು ಅಗತ್ಯವನ್ನು ಎತ್ತಿ ತೋರಿಸಿತು.
ಹಿರಿಯ ವಕೀಲರಾದ ಶ್ರೀ ಅಮೀತ್ ದತ್ತ ಅವರು ಅಧಿವೇಶನವನ್ನು ನಡೆಸಿಕೊಟ್ಟರು, ತಜ್ಞರು ಮತ್ತು ಸೃಜನಶೀಲರ ನಡುವೆ ಕ್ರಿಯಾತ್ಮಕ ಚರ್ಚೆಯನ್ನು ಹುಟ್ಟುಹಾಕಿದರು. ಚರ್ಚಾ ಪ್ಯಾನೆಲ್ ನಲ್ಲಿ ವಿಶ್ವ ಬೌದ್ಧಿಕ ಆಸ್ತಿ ಸಂಸ್ಥೆಯ (ಡಬ್ಲ್ಯೂಐಪಿಒ) ಮಹಾನಿರ್ದೇಶಕ ಶ್ರೀ ಡರೆನ್ ಟ್ಯಾಂಗ್ ಇದ್ದರು. ಅವರು ನೀತಿ ಚೌಕಟ್ಟುಗಳು ಮತ್ತು ವಿಶ್ವಾದ್ಯಂತ ಪ್ರದರ್ಶಕರಿಗೆ ರಕ್ಷಣೆಯನ್ನು ಬಲಪಡಿಸಲು ಡಬ್ಲ್ಯೂಬೌದ್ಧಿಕ ಆಸ್ತಿ ಒ ಪ್ರಯತ್ನಗಳ ಕುರಿತು ಜಾಗತಿಕ ದೃಷ್ಟಿಕೋನವನ್ನು ಪ್ರಸ್ತುತಪಡಿಸಿದರು. ಕಳೆದ 5 ದಶಕಗಳಲ್ಲಿ ಭಾರತದ ಬೌದ್ಧಿಕ ಆಸ್ತಿ ಪ್ರಯಾಣ ಅಸಾಧಾರಣವಾಗಿದೆ ಮತ್ತು ಅದರ ಸೃಜನಶೀಲ ಆರ್ಥಿಕತೆಯು ಅಗಾಧವಾಗಿ ಬೆಳೆಯುತ್ತಿದೆ ಎಂದು ಅವರು ಹೇಳಿದರು. ಎಲ್ಲಾ ದೇಶಗಳಿಗೆ ಉದ್ಯೋಗ, ಅಭಿವೃದ್ಧಿ ಮತ್ತು ನಾವೀನ್ಯತೆಗಾಗಿ ಬೌದ್ಧಿಕ ಆಸ್ತಿ ವೇಗವರ್ಧಕವಾಗಿ ಕಾರ್ಯನಿರ್ವಹಿಸುವುದರಿಂದ ಜಾಗತಿಕ ಬೌದ್ಧಿಕ ಆಸ್ತಿ ಪರಿಸರ ವ್ಯವಸ್ಥೆಯನ್ನು ಪರಿವರ್ತಿಸುವ ಅವಶ್ಯಕತೆಯಿದೆ ಎಂದು ಅವರು ಹೇಳಿದರು. ಡಬ್ಲ್ಯೂಐಪಿಒ ದ ಸೃಜನಶೀಲ ಆರ್ಥಿಕ ದತ್ತಾಂಶ ಮಾದರಿಯ ಬಗ್ಗೆ ಮಾತನಾಡುತ್ತಾ, ಸೃಜನಶೀಲ ಆರ್ಥಿಕತೆಯನ್ನು ಅಳೆಯಲು ಉತ್ತಮ ಮೆಟ್ರಿಕ್ ಗಳನ್ನು ಕಂಡುಹಿಡಿಯಲು ನೀತಿ ನಿರೂಪಕರು, ಅರ್ಥಶಾಸ್ತ್ರಜ್ಞರು ಮತ್ತು ಅದರ ಸದಸ್ಯ ರಾಷ್ಟ್ರಗಳ ಕಂಟೆಂಟ್ ಸೃಷ್ಟಿಕರ್ತರಿಗೆ ಇದು ಸಹಾಯ ಮಾಡುತ್ತಿದೆ ಎಂದು ಅವರು ಹೇಳಿದರು.
ಖ್ಯಾತ ನಿರ್ದೇಶಕ ಮತ್ತು ನಾಟಕಕಾರ ಫಿರೋಜ್ ಅಬ್ಬಾಸ್ ಖಾನ್ ಅವರು ರಂಗಭೂಮಿಯಲ್ಲಿನ ತಮ್ಮ ದಶಕಗಳ ಅನುಭವ ಮತ್ತು ಮೂಲ ಸೃಜನಶೀಲ ಕೃತಿಗಳನ್ನು ರಕ್ಷಿಸುವ ಸವಾಲುಗಳ ಒಳನೋಟಗಳನ್ನು ಹಂಚಿಕೊಂಡರು. ಬೌದ್ಧಿಕ ಆಸ್ತಿ ಮಾನವ ಘನತೆಗೆ ಸಂಬಂಧಿಸಿದೆ ಮತ್ತು ಸಮಾಜವು ಮೊದಲು ಕಲಾವಿದರ ಕೆಲಸವನ್ನು ಗೌರವಿಸಬೇಕು ಎಂದು ಅವರು ಹೇಳಿದರು.
ಖ್ಯಾತ ಚಲನಚಿತ್ರ ಮತ್ತು ಟೆಲೆವಿಷನ್ ನಿರ್ಮಾಪಕ ಸ್ಟೀವ್ ಕ್ರೋನ್, ಶ್ರವ್ಯ-ದೃಶ್ಯ ಕಥೆ ಹೇಳುವಿಕೆಯಲ್ಲಿನ ಹೂಡಿಕೆಗಳನ್ನು ರಕ್ಷಿಸುವಲ್ಲಿ ಹಕ್ಕುಸ್ವಾಮ್ಯದ ಪ್ರಾಮುಖ್ಯತೆ ಮತ್ತು ಪ್ರಮಾಣೀಕೃತ ಜಾಗತಿಕ ಜಾರಿ ಕಾರ್ಯವಿಧಾನಗಳ ಅಗತ್ಯವನ್ನು ಒತ್ತಿ ಹೇಳಿದರು. ಹಕ್ಕುಸ್ವಾಮ್ಯವು ಕೇವಲ ಹಣಕ್ಕೆ ಸಂಬಂಧಿಸಿದ್ದಲ್ಲ, ಬದಲಿಗೆ ಕಂಟೆಂಟ್ ಸೃಷ್ಟಿಕರ್ತರ ಕೆಲಸವನ್ನು ಶೋಷಣೆಯಿಂದ ರಕ್ಷಿಸುವುದಾಗಿದೆ ಎಂದು ಅವರು ಹೇಳಿದರು.
ಹಿರಿಯ ಚಿತ್ರಕಥೆಗಾರ ಅಂಜುಮ್ ರಾಜಬಲಿ, ಸೃಜನಶೀಲ ಪ್ರಕ್ರಿಯೆಯ ಬಗ್ಗೆ ಮತ್ತು ಹೆಚ್ಚು ಸಂಕೀರ್ಣವಾಗುತ್ತಿರುವ ಕಂಟೆಂಟ್ ಆರ್ಥಿಕತೆಯಲ್ಲಿ ಬರಹಗಾರರು ತಮ್ಮ ಹಕ್ಕುಗಳನ್ನು ಅರ್ಥಮಾಡಿಕೊಳ್ಳುವ ಮತ್ತು ಪಡೆಯುವ ಅಗತ್ಯತೆಯ ಬಗ್ಗೆ ಮಾತನಾಡಿದರು. ಇಂದು ಲಭ್ಯತೆಯು ತುಂಬಾ ಸುಲಭವಾಗಿದೆ ಮತ್ತು ಇದಕ್ಕೆ ನಿರ್ಬಂಧಗಳು ಇರಬೇಕು ಎಂದು ಅವರು ಹೇಳಿದರು.
ಅಧಿವೇಶನದಲ್ಲಿ, ಹಕ್ಕುಸ್ವಾಮ್ಯ ಮಾಲೀಕತ್ವ, ಪರವಾನಗಿ, ನೈತಿಕ ಹಕ್ಕುಗಳು, ಎಐ ಪ್ರಭಾವ ಮತ್ತು ವೇಗವಾಗಿ ಡಿಜಿಟಲೀಕರಣಗೊಳ್ಳುತ್ತಿರುವ ಜಗತ್ತಿನಲ್ಲಿ ಲಭ್ಯತೆ ಮತ್ತು ರಕ್ಷಣೆಯ ನಡುವಿನ ಸಮತೋಲನ ಕುರಿತು ಪ್ಯಾನೆಲಿಸ್ಟ್ ಗಳು ಆಳವಾದ ಚರ್ಚೆ ನಡೆಸಿದರು.
*****
Release ID:
(Release ID: 2125993)
| Visitor Counter:
24