ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಶ್ರೀ ರಾಮಕಾಂತ್ ರಥ್ ಅವರ ನಿಧನಕ್ಕೆ ಪ್ರಧಾನಮಂತ್ರಿ ಸಂತಾಪ 

Posted On: 16 MAR 2025 2:53PM by PIB Bengaluru

ಖ್ಯಾತ ಕವಿ ಮತ್ತು ವಿದ್ವಾಂಸರಾದ ಶ್ರೀ ರಾಮಕಾಂತ್‌ ರಥ್ ಅವರ ನಿಧನಕ್ಕೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸಂತಾಪ ಸೂಚಿಸಿದ್ದಾರೆ ಮತ್ತು ಶ್ರೀ ರಾಮಕಾಂತ್ ರಥ್ ಅವರ ಕೃತಿಗಳು, ವಿಶೇಷವಾಗಿ ಕಾವ್ಯ‌ ರಚನೆಗಳು, ಸಮಾಜದ ಎಲ್ಲಾ ವರ್ಗಗಳಲ್ಲಿ ವ್ಯಾಪಕವಾಗಿ ಜನಪ್ರಿಯವಾಗಿವೆ ಎಂದು ಹೇಳಿದ್ದಾರೆ.

ಪ್ರಧಾನಮಂತ್ರಿಗಳ ಕಚೇರಿಯ ಎಕ್ಸ್ ಪೋಸ್ಟ್ ಹೀಗಿದೆ:

"ಶ್ರೀ ರಮಾಕಾಂತ್ ರಥ್ ಅವರು ಪರಿಣಾಮಕಾರಿ ಆಡಳಿತಗಾರ ಮತ್ತು ವಿದ್ವಾಂಸರಾಗಿ ತಮ್ಮನ್ನು ಗುರುತಿಸಿಕೊಂಡಿದ್ದರು. ಅವರ ಕೃತಿಗಳು, ವಿಶೇಷವಾಗಿ ಕಾವ್ಯ, ಸಮಾಜದ ಎಲ್ಲಾ ವರ್ಗಗಳಲ್ಲಿ ವ್ಯಾಪಕವಾಗಿ ಜನಪ್ರಿಯವಾಗಿವೆ. ಅವರ ನಿಧನದಿಂದ ದುಃಖಿತನಾಗಿದ್ದೇನೆ. ಈ ಶೋಕದ ಸಮಯದಲ್ಲಿ ಅವರ ಕುಟುಂಬ ಮತ್ತು ಅಭಿಮಾನಿಗಳಿಗೆ ನನ್ನ ಸಂತಾಪಗಳು. ಓಂ ಶಾಂತಿ : ಪ್ರಧಾನಮಂತ್ರಿ @narendramodi"

 

 

*****


(Release ID: 2111793) Visitor Counter : 8