ಪ್ರಧಾನ ಮಂತ್ರಿಯವರ ಕಛೇರಿ
ಪ್ರಧಾನಮಂತ್ರಿಯವರು ಆಚಾರ್ಯ ಕೃಪಲಾನಿ ಅವರ ಜನ್ಮ ವಾರ್ಷಿಕೋತ್ಸವದಂದು ಅವರನ್ನು ಸ್ಮರಿಸಿದರು
ಪ್ರಕಟಣಾ ದಿನಾಂಕ:
11 NOV 2024 9:27AM by PIB Bengaluru
ಶ್ರೀ ನರೇಂದ್ರ ಮೋದಿ ಅವರು ಆಚಾರ್ಯ ಕೃಪಲಾನಿ ಅವರ ಜನ್ಮಜಯಂತಿ ಅಂಗವಾಗಿ ಅವರಿಗೆ ಗೌರವ ಸಲ್ಲಿಸಿದರು. ಭಾರತದ ಸ್ವಾತಂತ್ರ್ಯ ಸಂಗ್ರಾಮದ ಅಪ್ರತಿಮ ವ್ಯಕ್ತಿ ಮತ್ತು ಬುದ್ಧಿವಂತಿಕೆ, ಸಮಗ್ರತೆ ಹಾಗೂ ಧೈರ್ಯದ ಮೂರ್ತರೂಪ ಎಂದು ಕೃಪಲಾನಿ ಅವರನ್ನು ನೆನಪಿಸಿಕೊಂಡ ಶ್ರೀ ಮೋದಿ ಅವರು, ಸಮೃದ್ಧ, ಬಲಿಷ್ಠ, ಬಡವರು ಮತ್ತು ನಿರ್ಗತಿಕರು ಸಬಲ ಭಾರತದ ಉದಾತ್ತ ದೃಷ್ಟಿಯನ್ನು ಪೂರೈಸುವ ಸರ್ಕಾರದ ಬದ್ಧತೆಯನ್ನು ಪುನರುಚ್ಚರಿಸಿದರು.
ಈ ಬಗ್ಗೆ ಎಕ್ಸ್ ಪೋಸ್ಟ್ ನಲ್ಲಿ ಬರೆದುಕೊಂಡಿರುವ ಪ್ರಧಾನ ಮಂತ್ರಿಗಳು,
“ಆಚಾರ್ಯ ಕೃಪಲಾನಿ ಅವರ ಜನ್ಮ ವಾರ್ಷಿಕೋತ್ಸವದಂದು ಅವರನ್ನು ಸ್ಮರಿಸುತ್ತಿದ್ದೇನೆ. ಅವರು ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಅತ್ಯುನ್ನತ ವ್ಯಕ್ತಿಯಾಗಿದ್ದರು. ಬುದ್ಧಿವಂತಿಕೆ, ಸಮಗ್ರತೆ ಮತ್ತು ಧೈರ್ಯದ ಮೂರ್ತರೂಪವಾಗಿದ್ದರು. ಅವರು ಪ್ರಜಾಸತ್ತಾತ್ಮಕ ಮೌಲ್ಯಗಳು ಮತ್ತು ಸಾಮಾಜಿಕ ನ್ಯಾಯದ ತತ್ವಗಳಿಗೆ ಆಳವಾಗಿ ಬದ್ಧರಾಗಿದ್ದರು.
ಆಚಾರ್ಯ ಕೃಪಲಾನಿ ಅವರು ಅನ್ಯಾಯದ ವಿರುದ್ಧ ಹೋರಾಡಲು ಹೆದರುತ್ತಿರಲಿಲ್ಲ. ಸಮೃದ್ಧ, ಬಲಿಷ್ಠ, ಬಡವರು ಮತ್ತು ನಿರ್ಗತಿಕರು ಸಬಲರಾಗುವ ಭಾರತದ ಉದಾತ್ತ ದೃಷ್ಟಿಯನ್ನು ಪೂರೈಸುವ ನಮ್ಮ ಬದ್ಧತೆಯನ್ನು ನಾವು ಪುನರುಚ್ಚರಿಸುತ್ತೇವೆ ಎಂದಿದ್ದಾರೆ.
*****
(ಪ್ರಕಟಣೆ ಐ.ಡಿ.: 2072325)
ವಿಸಿಟರ್ ಕೌಂಟರ್ : 79
ಪ್ರಕಟಣೆಯನ್ನು ಇದರಲ್ಲಿ ಓದಿ:
English
,
Urdu
,
Marathi
,
हिन्दी
,
Bengali
,
Manipuri
,
Assamese
,
Punjabi
,
Gujarati
,
Odia
,
Tamil
,
Telugu
,
Malayalam