ಗೃಹ ವ್ಯವಹಾರಗಳ ಸಚಿವಾಲಯ

ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ​​​​​​​ ಶ್ರೀ ಅಮಿತ್ ಶಾ ಅವರು ಇಂದು ಹರಿಯಾಣದ ಮಹೇಂದ್ರಗಢದಲ್ಲಿ 'ಪಿಚ್ಡಾ ವರ್ಗ್‌ ಸಮ್ಮಾನ್ ಸಮ್ಮೇಳನ'ವನ್ನು ಉದ್ದೇಶಿಸಿ ಮಾತನಾಡಿದರು


ಒಬಿಸಿ ಕಲ್ಯಾಣಕ್ಕಾಗಿ ಹರಿಯಾಣ ಸರ್ಕಾರದ 3 ಪ್ರಮುಖ ನಿರ್ಧಾರಗಳು: ಕೆನೆಪದರ ಮಿತಿಯನ್ನು  6 ಲಕ್ಷದಿಂದ  8 ಲಕ್ಷ ರೂ.ಗೆ ಹೆಚ್ಚಿಸುವುದು, ಪಂಚಾಯತ್‌ ಗಳು ಮತ್ತು ಮುನ್ಸಿಪಲ್ ಕಾರ್ಪೊರೇಷನ್‌ ಗಳಲ್ಲಿ ಗ್ರೂಪ್ ಎ ಗೆ ಶೇ.8 ಮತ್ತು ಗ್ರೂಪ್ ಬಿ ಗೆ ಶೇ.5 ಮೀಸಲಾತಿ ಒದಗಿಸುವುದು

ಈ ಮೂರೂ ಜನಪರ ನಿರ್ಧಾರಗಳು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ಜನಕಲ್ಯಾಣ ನೀತಿಗಳಿಗೆ ಅನುಗುಣವಾಗಿವೆ

ನಮ್ಮ ಪಕ್ಷ ಹಿಂದುಳಿದ ವರ್ಗದಿಂದ ಬಂದ ಮೊದಲ ಬಲಿಷ್ಠ ಪ್ರಧಾನಿಯನ್ನು ದೇಶಕ್ಕೆ ನೀಡಿದೆ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ನಾಯಕತ್ವದಲ್ಲಿ ಹರಿಯಾಣದ ಚಿತ್ರಣವು ಈಸ್ ಆಫ್ ಡುಯಿಂಗ್ ಕರಪ್ಶನ್ ರಾಜ್ಯದಿಂದ ಈಸ್ ಆಫ್ ಡೂಯಿಂಗ್ ಬ್ಯುಸಿನೆಸ್ ಆಗಿ ಸುಧಾರಿಸಿದೆ

ಒಬಿಸಿ ಆಯೋಗಕ್ಕೆ ಸಾಂವಿಧಾನಿಕ ಮಾನ್ಯತೆ ನೀಡುವ ಮೂಲಕ ಇಡೀ ಹಿಂದುಳಿದ ಸಮಾಜಕ್ಕೆ ಸಾಂವಿಧಾನಿಕ ಹಕ್ಕುಗಳನ್ನು ನೀಡಲು ಮೋದಿಯವರು ಕೆಲಸ ಮಾಡಿದ್ದಾರೆ

ಮೊಟ್ಟಮೊದಲ ಬಾರಿಗೆ ಕೇಂದ್ರೀಯ ವಿದ್ಯಾಲಯಗಳು, ನವೋದಯ ವಿದ್ಯಾಲಯಗಳು, ಸೈನಿಕ ಶಾಲೆಗಳು ಮತ್ತು ನೀಟ್ ಪರೀಕ್ಷೆಗಳಲ್ಲಿ ಒಬಿಸಿಗಳಿಗೆ ಮೋದಿಯವರು ಶೇ.27 ಮೀಸಲಾತಿ ನೀಡಿದ್ದಾರೆ

ಉದ್ಯೋಗಗಳಲ್ಲಿನ ಭ್ರಷ್ಟಾಚಾರ, ಜಾತಿವಾದದ ಹರಡುವಿಕೆ, ಒಬಿಸಿ ಸಮಾಜಕ್ಕೆ ಅನ್ಯಾಯ ಮತ್ತು ಸ್ವಜನಪಕ್ಷಪಾತಕ್ಕೆ ಹಿಂದಿನ ಸರ್ಕಾರಗಳನ್ನು ಹೊಣೆಗಾರರನ್ನಾಗಿ ಮಾಡಬೇಕು

Posted On: 16 JUL 2024 5:34PM by PIB Bengaluru

ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ಇಂದು ಹರಿಯಾಣದ ಮಹೇಂದ್ರಗಢದಲ್ಲಿ 'ಪಿಚ್ಡಾ ವರ್ಗ್ ಸಮ್ಮಾನ್ ಸಮ್ಮೇಳನ'‌ (ಹಿಂದುಳಿದ ವರ್ಗ ಸಮ್ಮಾನ ಸಮ್ಮೇಳನ) ವನ್ನು ಉದ್ದೇಶಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಹರಿಯಾಣದ ಮುಖ್ಯಮಂತ್ರಿ ಶ್ರೀ ನಯಾಬ್ ಸಿಂಗ್ ಸೈನಿ, ಕೇಂದ್ರ ಸಚಿವರುಗಳಾದ ಶ್ರೀ ಧರ್ಮೇಂದ್ರ ಪ್ರಧಾನ್, ಶ್ರೀ ರಾವ್ ಇಂದ್ರಜಿತ್ ಸಿಂಗ್ ಮತ್ತು ಶ್ರೀ ಕ್ರಿಶನ್ ಪಾಲ್ ಗುರ್ಜರ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

https://static.pib.gov.in/WriteReadData/userfiles/image/image001ITK0.jpg

ಹರಿಯಾಣ ನೆಲವು ಭಾರತದಲ್ಲಿ 3 ವಿಷಯಗಳಿಗೆ - ಸೇನೆಯಲ್ಲಿ ಗರಿಷ್ಠ ಸಂಖ್ಯೆಯ ಜವಾನರು, ಗರಿಷ್ಠ ಸಂಖ್ಯೆಯ ಕ್ರೀಡಾಪಟುಗಳು ಮತ್ತು ಗರಿಷ್ಠ ಆಹಾರ ಧಾನ್ಯ ಉತ್ಪಾದನೆ- ಪ್ರಸಿದ್ಧವಾಗಿದೆ ಎಂದು ಶ್ರೀ ಅಮಿತ್ ಶಾ ಅವರು ತಮ್ಮ ಭಾಷಣದಲ್ಲಿ ಹೇಳಿದರು. ಹರಿಯಾಣ ಸಂಪುಟವು ಮೂರು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಂಡಿದೆ, ಮೊದಲನೆಯದು ಕೆನೆ ಪದರದ ಮಿತಿಯನ್ನು ವೇತನ ಮತ್ತು ಕೃಷಿ ಆದಾಯವನ್ನು ಹೊರತುಪಡಿಸಿ 6 ರಿಂದ 8 ಲಕ್ಷ ರೂ.ಗಳಿಗೆ ಹೆಚ್ಚಿಸುವುದು, ಎರಡನೆಯದಾಗಿ ಪಂಚಾಯತ್‌ ಗಳಲ್ಲಿ ಗ್ರೂಪ್ ಎ ಗೆ ಶೇ.8 ಮತ್ತು ಗ್ರೂಪ್ ಬಿಗೆ ಶೇ.5 ಮೀಸಲಾತಿಯನ್ನು ಒದಗಿಸುವುದು ಮತ್ತು ಮುನ್ಸಿಪಲ್ ಕಾರ್ಪೊರೇಷನ್‌ ಗಳಲ್ಲಿಯೂ ಇದೇ ರೀತಿಯ ಮೀಸಲಾತಿಯನ್ನು ವಿಸ್ತರಿಸುವುದು. ಈ ಮೂರು ಜನಪರ ನಿರ್ಧಾರಗಳು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ಸಾರ್ವಜನಿಕ ಕಲ್ಯಾಣ ನೀತಿಗಳಿಗೆ ಅನುಗುಣವಾಗಿವೆ ಎಂದು ಶ್ರೀ ಶಾ ಹೇಳಿದರು.

https://static.pib.gov.in/WriteReadData/userfiles/image/image00270RX.jpg

2014 ರಲ್ಲಿ, ಶ್ರೀ ನರೇಂದ್ರ ಮೋದಿ ಅವರು ಸಂಸತ್ತಿನಲ್ಲಿ ಪ್ರಧಾನಿಯಾಗಿ ತಮ್ಮ ಮೊದಲ ಭಾಷಣದಲ್ಲಿ, ಇದು ದಲಿತರು, ಬಡವರು ಮತ್ತು ಹಿಂದುಳಿದವರ ಸರ್ಕಾರ ಎಂದು ಹೇಳಿದ್ದರು ಎಂದು ಕೇಂದ್ರ ಗೃಹ ಸಚಿವರು ತಿಳಿಸಿದರು. ಹಿಂದುಳಿದ ವರ್ಗದಿಂದ ಬಂದ ಮೊದಲ ಬಲಿಷ್ಠ ಪ್ರಧಾನಿಯನ್ನು ತಮ್ಮ ಪಕ್ಷ ದೇಶಕ್ಕೆ ನೀಡಿದೆ ಎಂದು ಗೃಹ ಸಚಿವರು ಹೇಳಿದರು. ಇಂದು ಪ್ರಧಾನಿ ಮೋದಿಯವರ ನೇತೃತ್ವದ ಕೇಂದ್ರ ಸಚಿವ ಸಂಪುಟದಲ್ಲಿರುವ 71 ಸಚಿವರಲ್ಲಿ 27 ಮಂದಿ ಹಿಂದುಳಿದ ವರ್ಗಗಳಿಗೆ ಸೇರಿದ್ದು, ಇದರಲ್ಲಿ ಹರಿಯಾಣದ 2 ಮಂದಿ ಸೇರಿದ್ದಾರೆ ಎಂದರು. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಹರಿಯಾಣ ಸೇರಿದಂತೆ ದೇಶದ ಸಂಪೂರ್ಣ ಒಬಿಸಿ ಸಮುದಾಯವನ್ನು ಗೌರವಿಸಿದ್ದಾರೆ ಎಂದು ಅವರು ಹೇಳಿದರು.

https://static.pib.gov.in/WriteReadData/userfiles/image/image003VGYY.jpg

ಒಬಿಸಿ ಮೀಸಲಾತಿಗಾಗಿ 1957 ರಲ್ಲಿ ಕಾಕಾ ಕಾಲೇಲ್ಕರ್ ಆಯೋಗವನ್ನು ರಚಿಸಿದಾಗ ಅದನ್ನು ಹಲವು ವರ್ಷಗಳವರೆಗೆ ಜಾರಿಗೆ ತರಲು ಅವಕಾಶ ನೀಡಲಿಲ್ಲ ಎಂದು ಶ್ರೀ ಅಮಿತ್ ಶಾ ಹೇಳಿದರು. 1980ರಲ್ಲಿ ಅಂದಿನ ಪ್ರಧಾನಿ ಮಂಡಲ್ ಆಯೋಗವನ್ನು ತಡೆ ಹಿಡಿದಿದ್ದರು, 1990ರಲ್ಲಿ ಅದನ್ನು ಜಾರಿಗೆ ತಂದಾಗ ಅಂದಿನ ಪ್ರಧಾನಿ ವಿರೋಧಿಸಿದ್ದರು. ಒಬಿಸಿ ಆಯೋಗಕ್ಕೆ ಸಾಂವಿಧಾನಿಕ ಮಾನ್ಯತೆ ನೀಡುವ ಮೂಲಕ ಪ್ರಧಾನಿ ಮೋದಿಯವರು ಒಬಿಸಿ ಸಮಾಜಕ್ಕೆ ಸಾಂವಿಧಾನಿಕ ಹಕ್ಕುಗಳನ್ನು ಒದಗಿಸಿದ್ದಾರೆ ಎಂದರು. ಮೊಟ್ಟಮೊದಲ ಬಾರಿಗೆ ಮೋದಿಯವರು ಕೇಂದ್ರೀಯ ವಿದ್ಯಾಲಯಗಳು, ನವೋದಯ ವಿದ್ಯಾಲಯಗಳು, ಸೈನಿಕ ಶಾಲೆಗಳು ಮತ್ತು ನೀಟ್ ಪರೀಕ್ಷೆಗಳಲ್ಲಿ ಒಬಿಸಿಗೆ ಶೇಕಡಾ 27 ರಷ್ಟು ಮೀಸಲಾತಿಯನ್ನು ನೀಡಿದ್ದಾರೆ ಎಂದು ಶ್ರೀ ಶಾ ಹೇಳಿದರು. ಇದರೊಂದಿಗೆ ಕೃಷಿ ಮತ್ತು ಸಂಬಳದ ಆದಾಯವನ್ನು ಹೊರತುಪಡಿಸಿ ಕೆನೆಪದರದ ಮಿತಿಯನ್ನು ಹೆಚ್ಚಿಸುವ ಐತಿಹಾಸಿಕ ನಿರ್ಧಾರವನ್ನೂ ಪ್ರಧಾನಿ ಮೋದಿ ತೆಗೆದುಕೊಂಡಿದ್ದಾರೆ ಎಂದು ಅವರು ಹೇಳಿದರು.

ಹರಿಯಾಣ ಸರ್ಕಾರವು ಹಿಂದುಳಿದ ವರ್ಗಗಳ ಕಲ್ಯಾಣಕ್ಕಾಗಿ ಹಲವಾರು ಯೋಜನೆಗಳನ್ನು ಪ್ರಾರಂಭಿಸಿದೆ ಎಂದು ಕೇಂದ್ರ ಗೃಹ ಸಚಿವರು ಹೇಳಿದರು. ಹರಿಯಾಣದಲ್ಲಿ ಹಿಂದುಳಿದ ವರ್ಗದ ವ್ಯಕ್ತಿಯನ್ನು ಮುಖ್ಯಮಂತ್ರಿಯನ್ನಾಗಿ ಮಾಡಲಾಗಿದ್ದು, ಈಗ ಶ್ರೀ ನಯಾಬ್ ಸಿಂಗ್ ಸೈನಿ ಅವರ ನೇತೃತ್ವದಲ್ಲಿ ರಾಜ್ಯವು ಪ್ರಗತಿಯತ್ತ ಸಾಗಲಿದೆ ಎಂದರು. ಹಿಂದಿನ ಸರ್ಕಾರಗಳು ಹರಿಯಾಣಕ್ಕೆ ಜಾತೀಯತೆ ಮತ್ತು ಭ್ರಷ್ಟಾಚಾರವನ್ನು ಹೊರತುಪಡಿಸಿ ಏನನ್ನೂ ನೀಡಿಲ್ಲ ಎಂದು ಶ್ರೀ ಶಾ ಹೇಳಿದರು. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ನಾಯಕತ್ವದಲ್ಲಿ ಹರಿಯಾಣದ ಚಿತ್ರಣವು ಈಸ್ ಆಫ್ ಡೂಯಿಂಗ್ ಕರಪ್ಷನ್ ರಾಜ್ಯದಿಂದ ಈಸ್ ಆಫ್ ಡೂಯಿಂಗ್ ಬ್ಯುಸಿನೆಸ್‌ ಗೆ ಸುಧಾರಿಸಿದೆ ಎಂದು ಅವರು ಹೇಳಿದರು.

https://static.pib.gov.in/WriteReadData/userfiles/image/image004PV63.jpg

ಮೋದಿ ಸರ್ಕಾರವು ಹರಿಯಾಣಕ್ಕೆ ಅಭಿವೃದ್ಧಿ ಆಧಾರಿತ ಸರ್ಕಾರವನ್ನು ನೀಡಿದೆ ಎಂದು ಶ್ರೀ ಅಮಿತ್ ಶಾ ಹೇಳಿದರು. ಇಂದು ಹರಿಯಾಣ ದೇಶದಲ್ಲೇ ಅತಿ ಹೆಚ್ಚು ಬಾಸ್ಮತಿ ಅಕ್ಕಿಯನ್ನು ರಫ್ತು ಮಾಡುವ ರಾಜ್ಯವಾಗಿದೆ, ಸೇನೆಯ ಪ್ರತಿ ಹತ್ತನೇ ಯೋಧ ಹರಿಯಾಣದವರಾಗಿದ್ದಾರೆ ಮತ್ತು ಗರಿಷ್ಠ ಬೆಳೆಯನ್ನು ಹರಿಯಾಣ ಸರ್ಕಾರವು ಎಂ ಎಸ್‌ ಪಿ ಮೇಲೆ ಖರೀದಿಸುತ್ತದೆ ಎಂದು ಅವರು ಹೇಳಿದರು. ಹರಿಯಾಣವು ಹಳ್ಳಿಯಲ್ಲಿ ಲಾಲ್ ಡೋರಾ ಅಡಿಯಲ್ಲಿ ಭೂಮಿಯ ಮಾಲೀಕತ್ವವನ್ನು ನೀಡಿದ ಮೊದಲ ರಾಜ್ಯವಾಯಿತು, ಹೆಚ್ಚು ವಿದ್ಯಾವಂತ ಪಂಚಾಯತ್‌ ಗಳನ್ನು ಹೊಂದಿರುವ ರಾಜ್ಯವಾಗಿದೆ, 50 ಪ್ರತಿಶತದಷ್ಟು ಮಹಿಳೆಯರ ಭಾಗವಹಿಸುವಿಕೆ ಮತ್ತು ಪ್ರತಿ ಮನೆಗೆ ನಲ್ಲಿ ನೀರನ್ನು ಒದಗಿಸಿದ ಮೊದಲ ರಾಜ್ಯವಾಯಿತು. ಮೊದಲ ಆಯುಷ್ ವಿಶ್ವವಿದ್ಯಾನಿಲಯವನ್ನು ಹರಿಯಾಣದಲ್ಲಿ ನಿರ್ಮಿಸಲಾಗಿದ್ದು, ಅತಿ ಹೆಚ್ಚು ತಲಾವಾರು ಜಿ ಎಸ್‌ ಟಿ ಸಂಗ್ರಹ ಹರಿಯಾಣದಲ್ಲಿದೆ ಮತ್ತು ದೇಶದ ಆರ್ಥಿಕತೆಗೆ ರಾಜ್ಯವು ಹೆಚ್ಚು ತಲಾವಾರು ಕೊಡುಗೆ ನೀಡುತ್ತಿದೆ ಎಂದು ಅವರು ಹೇಳಿದರು. ಇದಲ್ಲದೆ, ಹರಿಯಾಣವು ಹಾಲು ಉತ್ಪಾದನೆಯಲ್ಲಿ ಮೂರನೇ ಸ್ಥಾನದಲ್ಲಿದೆ, ಗರಿಷ್ಠ ಸಾಮಾಜಿಕ ಭದ್ರತಾ ಪಿಂಚಣಿಗಳನ್ನು ಹೊಂದಿದೆ ಮತ್ತು ಗುಣಮಟ್ಟದಲ್ಲಿ ಸುಧಾರಣೆಗಾಗಿ ಮೂರು ಪ್ರಶಸ್ತಿಗಳನ್ನು ಪಡೆದಿದೆ. ಜಗತ್ತಿನ 400 ಫಾರ್ಚೂನ್ ಕಂಪನಿಗಳು ಸಹ ಹರಿಯಾಣದಲ್ಲಿ ಇವೆ ಎಂದು ಅವರು ಹೇಳಿದರು.

ಹಿಂದಿನ ಸರ್ಕಾರಗಳು ಅಭಿವೃದ್ಧಿಯ ಹೆಸರಿನಲ್ಲಿ ಹರಿಯಾಣಕ್ಕೆ ಏನನ್ನೂ ನೀಡಲಿಲ್ಲ ಎಂದು ಕೇಂದ್ರ ಗೃಹ ಸಚಿವರು ಹೇಳಿದರು. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಕೇಂದ್ರ ಸರ್ಕಾರ ಮತ್ತು ಹರಿಯಾಣ ಸರ್ಕಾರ ಜಂಟಿಯಾಗಿ ಮನೆ, ಗ್ಯಾಸ್ ಸಂಪರ್ಕ, ವಿದ್ಯುತ್, ಶೌಚಾಲಯ, ಬಡವರಿಗೆ 5 ಲಕ್ಷದವರೆಗೆ ಉಚಿತ ಚಿಕಿತ್ಸೆ ಜೊತೆಗೆ ಪ್ರತಿಯೊಬ್ಬರಿಗೂ 5 ಕೆಜಿ ಉಚಿತ ಆಹಾರ ಧಾನ್ಯಗಳನ್ನು ಒದಗಿಸಿದೆ ಎಂದು ಅವರು ಹೇಳಿದರು. ಬಡವರು. ಹಿಂದಿನ ಕೇಂದ್ರ ಸರಕಾರ 10 ವರ್ಷಗಳ ಸುದೀರ್ಘ ಆಡಳಿತದಲ್ಲಿ ಹರಿಯಾಣಕ್ಕೆ ಕೇವಲ 41 ಸಾವಿರ ಕೋಟಿ ನೀಡಿದ್ದರೆ, ಪ್ರಧಾನಿ ಮೋದಿ ಸರಕಾರ 10 ವರ್ಷಗಳಲ್ಲಿ ಹರಿಯಾಣಕ್ಕೆ 2,69,000 ಕೋಟಿ ರೂ. ನೀಡಿದೆ ಎಂದರು. ಕಳೆದ 10 ವರ್ಷಗಳಲ್ಲಿ, ಹರಿಯಾಣದಲ್ಲಿ 12 ಎಕ್ಸ್‌ಪ್ರೆಸ್‌ವೇಗಳನ್ನು ನಿರ್ಮಿಸಲಾಗಿದೆ ಮತ್ತು ಪ್ರತಿ ರಾಜ್ಯದ ಪ್ರತಿ ಜಿಲ್ಲೆಯನ್ನು ರಾಷ್ಟ್ರೀಯ ಹೆದ್ದಾರಿಗಳೊಂದಿಗೆ ಸಂಪರ್ಕಿಸಲಾಗಿದೆ ಎಂದು ಶ್ರೀ ಶಾ ಹೇಳಿದರು. ಗುರುಗ್ರಾಮ-ಸಿಕಂದರಪುರ ಮತ್ತು ಬದರಪುರ್-ಮುಜೆಸರ್‌ ನಿಂದ ಮೆಟ್ರೋ ರೈಲು ಪ್ರಾರಂಭವಾಗಿದೆ ಮತ್ತು ಹಿಸಾರ್‌ ನಲ್ಲಿ ಮೊದಲ ವಿಮಾನ ನಿಲ್ದಾಣವನ್ನು ನಿರ್ಮಿಸಲಾಯಿತು. ಮೋದಿ ಸರ್ಕಾರದ ಅಡಿಯಲ್ಲಿ, ರೇವಾರಿಯಲ್ಲಿ 750 ಹಾಸಿಗೆಗಳನ್ನು ಹೊಂದಿರುವ ಏಮ್ಸ್ ಅನ್ನು ನಿರ್ಮಿಸಲಾಯಿತು ಮತ್ತು ಜಜ್ಜರ್‌ ನಲ್ಲಿ ಐಐಟಿ ದೆಹಲಿಯ ಹೊಸ ಕ್ಯಾಂಪಸ್ ಅನ್ನು ಸ್ಥಾಪಿಸಲಾಯಿತು ಮತ್ತು ಮತ್ತು 2000 ಕೋಟಿ ರೂ. ವೆಚ್ಚದಲ್ಲಿ ಬದ್ಸಾ ಗ್ರಾಮದಲ್ಲಿ ಅತಿದೊಡ್ಡ ಕ್ಯಾನ್ಸರ್ ಸಂಸ್ಥೆಯನ್ನು ನಿರ್ಮಿಸಲಾಗಿದೆ ಎಂದು ಶ್ರೀ ಅಮಿತ್‌ ಶಾ ಹೇಳಿದರು.

 

*****



(Release ID: 2033769) Visitor Counter : 8