ಪ್ರಧಾನ ಮಂತ್ರಿಯವರ ಕಛೇರಿ

ನವದೆಹಲಿಯ ಪ್ರಗತಿ ಮೈದಾನದಲ್ಲಿ ಅಂತರಾಷ್ಟ್ರೀಯ ಪ್ರದರ್ಶನ ಮತ್ತು ಸಭಾಂಗಣ (ಐಐಸಿಸಿ) ಸಂಕೀರ್ಣವನ್ನು ಪ್ರಧಾನಮಂತ್ರಿ ಉದ್ಘಾಟಿಸಿದರು


'ಭಾರತ್ ಮಂಟಪಂ' ಎಂದು ಅಂತರಾಷ್ಟ್ರೀಯ ಪ್ರದರ್ಶನ ಮತ್ತು ಸಭಾಂಗಣ (ಐಐಸಿಸಿ)  ಸಂಕೀರ್ಣ ಕ್ಕೆ ಹೆಸರಿಡಲಾಗಿದೆ 

ಜಿ-20 ನಾಣ್ಯ ಮತ್ತು ಜಿ-20 ಅಂಚೆಚೀಟಿಗಳನ್ನು ಅನಾವರಣಗೊಳಿಸಲಾಗಿದೆ

"ಭಾರತ ಮಂಟಪವು ಭಾರತದ ಸಾಮರ್ಥ್ಯಗಳು ಮತ್ತು ರಾಷ್ಟ್ರದ ಹೊಸ ಶಕ್ತಿಯ ಸಂಕೇತವೆಂದು ಕರೆಯಾಗಿದೆ, ಇದು ಭಾರತದ ಭವ್ಯತೆ ಮತ್ತು ಇಚ್ಛಾಶಕ್ತಿಯ ತತ್ವಶಾಸ್ತ್ರವಾಗಿದೆ"

“ಭಗವಾನ್ ಬಸವೇಶ್ವರರ ‘ಅನುಭವ ಮಂಟಪ’ವೇ ‘ಭಾರತ ಮಂಟಪ’ ಎಂಬ ಹೆಸರಿಗೆ ಪ್ರೇರಣೆ”

"ನಾವು ಸ್ವಾತಂತ್ರ್ಯದ 75 ನೇ ವಾರ್ಷಿಕೋತ್ಸವವನ್ನು ಆಚರಿಸುತ್ತಿರುವ ಈ ಸಂದರ್ಭದಲ್ಲಿ ಭಾರತ ಮಂಟಪವು ನಮ್ಮ ಪ್ರಜಾಪ್ರಭುತ್ವಕ್ಕೆ ಭಾರತೀಯರು ನೀಡಿದ ಸುಂದರ ಕೊಡುಗೆಯಾಗಿದೆ"

"21 ನೇ ಶತಮಾನದಲ್ಲಿ, ನಾವು 21 ನೇ ಶತಮಾನಕ್ಕೆ ಸೂಕ್ತವಾದ ನಿರ್ಮಾಣವನ್ನು ಹೊಂದಿರಬೇಕು"

"ಭಾರತವು 'ಥಿಂಕ್ ಬಿಗ್, ಡ್ರೀಮ್ ಬಿಗ್, ಆಕ್ಟ್ ಬಿಗ್' ತತ್ವದೊಂದಿಗೆ ಮುನ್ನಡೆಯುತ್ತಿದೆ"

“ಭಾರತದ ಅಭಿವೃದ್ಧಿ ಪಯಣ ಈಗ ತಡೆಯಲಾಗದು. ಸರ್ಕಾರದ ಮೂರನೇ ಅವಧಿಯಲ್ಲಿ, ಭಾರತವು ವಿಶ್ವದ ಅಗ್ರ ಮೂರು ಆರ್ಥಿಕತೆಗಳಲ್ಲಿ. ಇದು ಮೋದಿಯವರ ಗ್ಯಾರಂಟಿ"

"ಈ ಮೂಲಕ ಭಾರತದ ವೈವಿಧ್ಯತೆಯನ್ನು ಪ್ರದರ್ಶಿಸಲು ನಾವು ಜಿ-20 ಸಭೆಗಳನ್ನು ದೇಶದ 50ಕ್ಕೂ ಹೆಚ್ಚು ನಗರಗಳಿಗೆ ಕೊಂಡೊಯ್ದಿದ್ದೇವೆ"

Posted On: 26 JUL 2023 8:44PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ನವದೆಹಲಿಯ ಪ್ರಗತಿ ಮೈದಾನದಲ್ಲಿ ಅಂತರಾಷ್ಟ್ರೀಯ ಪ್ರದರ್ಶನ ಮತ್ತು ಸಮಾವೇಶ ಸಭಾಂಗಣ (ಇಂಟರ್ನ್ಯಾಷನಲ್ ಎಕ್ಸಿಬಿಷನ್-ಕಮ್-ಕನ್ವೆನ್ಷನ್ ಸೆಂಟರ್ - ಐಐಸಿಸಿ) ಸಂಕೀರ್ಣವನ್ನು ಉದ್ಘಾಟಿಸಿದರು. ಅವರು ಜಿ-20 ನಾಣ್ಯ ಮತ್ತು ಜಿ-20 ಅಂಚೆಚೀಟಿಯನ್ನು ಈ ಸಂದರ್ಭದಲ್ಲಿ ಅನಾವರಣಗೊಳಿಸಿದರು. ಸಮಾರಂಭದಲ್ಲಿ, ಡ್ರೋನ್ ಮೂಲಕ ನಡೆಸಲಾದ ವೀಕ್ಷಣಾ  ವ್ಯವಸ್ಥೆ ಮೂಲಕ ಕನ್ವೆನ್ಷನ್ ಸೆಂಟರ್ ಗೆ ‘ಭಾರತ ಮಂಟಪ’ ಎಂದು ನಾಮಕರಣ ಮಾಡಲಾಯಿತು ಮತ್ತು ಈ ಸಂದರ್ಭದಲ್ಲಿ ಪ್ರದರ್ಶಿಸಲಾದ ಸಾಂಸ್ಕೃತಿಕ ಕಾರ್ಯಕ್ರಮದಲ್ಲೂ ಪ್ರಧಾನಮಂತ್ರಿ ಭಾಗವಹಿಸಿದರು. ಪ್ರಧಾನಮಂತ್ರಿಯವರ ದೃಷ್ಟಿಕೋನದಂತೆ, ಮತ್ತು ರಾಷ್ಟ್ರೀಯ ಯೋಜನೆಯಾಗಿ ಸುಮಾರು ರೂ 2700 ಕೋಟಿ ವೆಚ್ಚದಲ್ಲಿ ಈ  ಸಂಕೀರ್ಣವನ್ನು ಅಭಿವೃದ್ಧಿಪಡಿಸಲಾಗಿದೆ.  ಪ್ರಗತಿಯ ಹಾದಿಯ ಭಾರತವನ್ನು ಜಾಗತಿಕ ವ್ಯಾಪಾರ ತಾಣವಾಗಿ ಉತ್ತೇಜಿಸಲು ಈ  ಸಂಕೀರ್ಣ ಸಹಾಯ ಮಾಡುತ್ತದೆ.

ಸಭೆಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು, ರಾಷ್ಟ್ರದ ಹೊಸ ಉತ್ಸಾಹ ಮತ್ತು ಚಿತ್ತವನ್ನು ಸೂಚಿಸಲು ಕವಿತೆಯ ಮೂಲಕ ತಮ್ಮ ಭಾಷಣವನ್ನು ಪ್ರಾರಂಭಿಸಿದರು. "ಭಾರತ ಮಂಟಪವು ಭಾರತದ ಸಾಮರ್ಥ್ಯಗಳು ಮತ್ತು ರಾಷ್ಟ್ರದ ಹೊಸ ಶಕ್ತಿಯ ಸಂಕೇತವಾಗಿದೆ, ಇದು ಭಾರತದ ಭವ್ಯತೆ ಮತ್ತು ಇಚ್ಛಾಶಕ್ತಿಯ ತತ್ವಶಾಸ್ತ್ರವಾಗಿದೆ" ಎಂದು ಪ್ರಧಾನಮಂತ್ರಿಯವರು  ಹೇಳಿದರು.

ಇಂದು ಬೆಳಗ್ಗೆ ಶ್ರಮಿಕ ವರ್ಗದವರನ್ನು ಅಭಿನಂದಿಸಿದ್ದನ್ನು ಸ್ಮರಿಸಿಕೊಂಡ ಪ್ರಧಾನಮಂತ್ರಿಯವರು, ಅವರ ಶ್ರಮ ಮತ್ತು ಸಮರ್ಪಣಾ ಮನೋಭಾವವನ್ನು ನೋಡಿ ಇಡೀ ರಾಷ್ಟ್ರವೇ ಪ್ರಭಾವಿತವಾಗಿದೆ ಎಂದು ಹೇಳಿದರು. ಭಾರತ ಮಂಟಪಕ್ಕಾಗಿ ದೆಹಲಿಯ ಜನತೆಗೆ ಹಾಗೂ ಪ್ರತಿಯೊಬ್ಬ ಭಾರತೀಯರಿಗೂ ಪ್ರಧಾನಮಂತ್ರಿಯವರು  ಅಭಿನಂದನೆ ಸಲ್ಲಿಸಿದರು. ಕಾರ್ಗಿಲ್ ವಿಜಯ್ ದಿವಸದ ಐತಿಹಾಸಿಕ ಸಂದರ್ಭವನ್ನು ಸ್ಮರಿಸಿಕೊಂಡ ಪ್ರಧಾನಮಂತ್ರಿಯವರು , ಕಾರ್ಗಿಲ್ ಯುದ್ಧದಲ್ಲಿ ಭಾರತಕ್ಕಾಗಿ ತಮ್ಮ ಪ್ರಾಣವನ್ನು ಅರ್ಪಿಸಿದ ಹುತಾತ್ಮರಿಗೆ ಇಡೀ ರಾಷ್ಟ್ರದ ಪರವಾಗಿ ಶ್ರದ್ಧಾಂಜಲಿ ಸಲ್ಲಿಸಿದರು.  

‘ಭಾರತ ಮಂಟಪ’ ಎಂಬ ಹೆಸರಿನ ಹಿಂದೆ ಭಗವಾನ್ ಬಸವೇಶ್ವರರ ‘ಅನುಭವ ಮಂಟಪ’ದ ಪ್ರೇರಣೆ ಇದೆ ಎಂದು ಪ್ರಧಾನಮಂತ್ರಿಯವರು ವಿವರಿಸಿದರು. ಅನುಭವ ಮಂಟಪವು ಚರ್ಚೆ ಮತ್ತು ಅಭಿವ್ಯಕ್ತಿಯ ಸಂಪ್ರದಾಯವನ್ನು ಪ್ರತಿನಿಧಿಸುತ್ತದೆ. ಭಾರತವನ್ನು ಪ್ರಜಾಪ್ರಭುತ್ವದ ತಾಯಿ ಎಂದು ಇಡೀ ಜಗತ್ತೇ ಒಪ್ಪಿಕೊಂಡಿದೆ ಎಂದು ಪ್ರಧಾನಮಂತ್ರಿಯವರು ಅವರು ಹೇಳಿದರು. ಅನೇಕ ಐತಿಹಾಸಿಕ ಮತ್ತು ಪುರಾತತ್ತ್ವ ಶಾಸ್ತ್ರದ ನಿದರ್ಶನಗಳನ್ನು ಪ್ರಧಾನಮಂತ್ರಿಯವರು ಅವರು ಈ ಸಂದರ್ಭದಲ್ಲಿ ಉಲ್ಲೇಖಿಸಿದ್ದಾರೆ. "ನಾವು ಸ್ವಾತಂತ್ರ್ಯದ 75 ನೇ ವಾರ್ಷಿಕೋತ್ಸವವನ್ನು ಆಚರಿಸುತ್ತಿರುವಾಗ ಈ ಭಾರತ ಮಂಟಪವು ನಮ್ಮ ಪ್ರಜಾಪ್ರಭುತ್ವಕ್ಕೆ ಭಾರತೀಯರು ನೀಡಿದ ಸುಂದರವಾದ ಕೊಡುಗೆಯಾಗಿದೆ. ಇನ್ನು ಕೆಲವೇ ವಾರಗಳಲ್ಲಿ ಇದೇ ಸ್ಥಳದಲ್ಲಿ ಜಿ20 ಶೃಂಗಸಭೆ ನಡೆಯುವಾಗ ಇಡೀ ವಿಶ್ವವೇ ಇಲ್ಲಿಂದ ಭಾರತದ ದಾಪುಗಾಲು ಮತ್ತು ಬೆಳವಣಿಗೆಗೆ ಸಾಕ್ಷಿಯಾಗಲಿದೆ ” ಎಂದು ಪ್ರಧಾನಮಂತ್ರಿಯವರು ಹೇಳಿದರು. 

ದೆಹಲಿಯಲ್ಲಿ ವಿಶ್ವ ದರ್ಜೆಯ ಸಮಾವೇಶ ಕೇಂದ್ರದ ಅಗತ್ಯವನ್ನು ವಿವರಿಸಿದ ಪ್ರಧಾನಮಂತ್ರಿಯವರು, "21 ನೇ ಶತಮಾನದಲ್ಲಿ ನಾವು 21 ನೇ ಶತಮಾನಕ್ಕೆ ಸೂಕ್ತವಾದ ನಿರ್ಮಾಣವನ್ನು ಹೊಂದಿರಬೇಕು" ಎಂದು ಹೇಳಿದರು. ಭಾರತ ಮಂಟಪವು ಪ್ರಪಂಚದಾದ್ಯಂತದ ಪ್ರದರ್ಶಕರಿಗೆ ಹೆಚ್ಚು ಪ್ರಯೋಜನಕಾರಿಯಾಗಿದೆ ಮತ್ತು ಭಾರತದಲ್ಲಿ ಸಮ್ಮೇಳನ ಪ್ರವಾಸೋದ್ಯಮಕ್ಕೆ ಇದು ಸಹಕಾರಿಯಾಗಿದೆ ಎಂದು ಪ್ರಧಾನಮಂತ್ರಿಯವರು ಹೇಳಿದರು. ಭಾರತ ಮಂಟಪವು ದೇಶದ ಸ್ಟಾರ್ಟ್ಅಪ್ಗಳ ಸಾಮರ್ಥ್ಯವನ್ನು ಪ್ರದರ್ಶಿಸಲು ವೇದಿಕೆಯಾಗಿ ಕಾರ್ಯನಿರ್ವಹಿಸುತ್ತದೆ, ಕಲಾವಿದರು ಮತ್ತು ನಟರ ಅಭಿನಯಕ್ಕೆ ಸಾಕ್ಷಿಯಾಗಿದೆ ಮತ್ತು ಕರಕುಶಲ ಕುಶಲಕರ್ಮಿಗಳ ಶ್ರಮವನ್ನು ಪ್ರದರ್ಶಿಸಲು ವೇದಿಕೆಯಾಗಿದೆ. “ಭಾರತ ಮಂಟಪವು ಆತ್ಮನಿರ್ಭರ ಭಾರತ್ ಮತ್ತು ಸ್ಥಳೀಯ ವ್ಯಾಪಾರದ ಅಭಿಯಾನಕ್ಕೊಂದು ಪ್ರತಿಬಿಂಬವಾಗಿದೆ”, ಆರ್ಥಿಕ ಪರಿಸರ ವಿಜ್ಞಾನ ಮತ್ತು ತಂತ್ರಜ್ಞಾನದಿಂದ ಪ್ರತಿಬಿಂಬಿಸುವ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಪ್ರಧಾನಮಂತ್ರಿಯವರು ಹೇಳಿದರು.

ಭಾರತ ಮಂಟಪದಂತಹ ಮೂಲಸೌಕರ್ಯವನ್ನು ನಾವು ದೇಶದಲ್ಲಿ ಈ ಹಿಂದೆಯೇ ಹೊಂದಿಸಬೇಕಿತ್ತು ಎಂದು ಪ್ರಧಾನಮಂತ್ರಿಯವರು ಹೇಳಿದರು. ಪಟ್ಟಭದ್ರ ಹಿತಾಸಕ್ತಿಗಳ ವಿರೋಧದ ನಡುವೆಯೂ ಮೂಲಸೌಕರ್ಯಗಳನ್ನು ಸೃಷ್ಟಿಸುವ ಅಗತ್ಯವನ್ನು ಅವರು ವಿವರಿಸಿ ಹೇಳಿದರು. ಸಮಾಜವನ್ನು ಒಡೆದು ಕೆಲಸ ಮಾಡುವುದರಿಂದ ಯಾವುದೇ ಸಮಾಜ ಪ್ರಗತಿ ಹೊಂದಲು ಸಾಧ್ಯವಿಲ್ಲ. ಭಾರತ ಮಂಟಪವು ದೂರದೃಷ್ಟಿಯ ಸಮಗ್ರ ಕಾರ್ಯಶೈಲಿಗೆ ನಿದರ್ಶನವಾಗಿದೆ ಎಂದು ಪ್ರಧಾನಮಂತ್ರಿಯವರು ಹೇಳಿದರು. ಈಗ 160 ಹೆಚ್ಚು ದೇಶಗಳಿಗೆ ಇ-ಕಾನ್ಫರೆನ್ಸ್ ವೀಸಾ ಸೌಲಭ್ಯದಂತಹ ಹಂತಗಳ ಬಗ್ಗೆ ವಿವರಿಸಿದರು. ದೆಹಲಿ ವಿಮಾನ ನಿಲ್ದಾಣದ ಸಾಮರ್ಥ್ಯವು 2014 ರಲ್ಲಿ 5 ಕೋಟಿಯಿಂದ ಇಂದು ವಾರ್ಷಿಕ 7.5 ಕೋಟಿಗೆ ಏರಿದೆ. ಜೇವರ್ ವಿಮಾನ ನಿಲ್ದಾಣವು ಕಾರ್ಯಾರಂಭಿಸಿದ ನಂತರ ಇದು ಮತ್ತಷ್ಟು ಬಲವಾಗಿರುತ್ತದೆ. ದೆಹಲಿ ಎನ್.ಸಿ.ಆರ್ ನಲ್ಲಿ ಆತಿಥ್ಯ ಉದ್ಯಮವು ಗಣನೀಯವಾಗಿ ವಿಸ್ತರಿಸಿದೆ. ಇದು ಸಮ್ಮೇಳನ ಪ್ರವಾಸೋದ್ಯಮಕ್ಕಾಗಿ ಸಂಪೂರ್ಣ ಪರಿಸರ ಹಾಗೂ ಪೂರಕ ವ್ಯವಸ್ಥೆಗಳನ್ನು ರಚಿಸುವ ಯೋಜಿತ ಕಾರ್ಯಕ್ರಮಗಳನ್ನು ಹೊಂದಿದೆ ಎಂದು ಪ್ರಧಾನಮಂತ್ರಿಯವರು ಹೇಳಿದರು.

ಇತ್ತೀಚೆಗೆ, ಕಳೆದ ಕೆಲವು ವರ್ಷಗಳಲ್ಲಿ, ರಾಜಧಾನಿಯ ಮೂಲಸೌಕರ್ಯ ಅಭಿವೃದ್ಧಿಯನ್ನು ಒತ್ತಿಹೇಳುತ್ತಾ, ಹೊಸದಾಗಿ ಸ್ಥಾಪನೆಗೊಂಡ ಸಂಸತ್ತಿನ ಕಟ್ಟಡವನ್ನು ವಿವರಿಸಿದರು ಮತ್ತು ಇದು ಪ್ರತಿಯೊಬ್ಬ ಭಾರತೀಯನಲ್ಲಿ ಅಪಾರ ಹೆಮ್ಮೆಯನ್ನು ತುಂಬುತ್ತದೆ ಎಂದು ಪ್ರಧಾನಮಂತ್ರಿಯವರು ಹೇಳಿದರು.

ಅವರು ರಾಷ್ಟ್ರೀಯ ಯುದ್ಧ ಸ್ಮಾರಕ, ಪೊಲೀಸ್ ಸ್ಮಾರಕ ಮತ್ತು ಬಾಬಾ ಸಾಹೇಬ್ ಅಂಬೇಡ್ಕರ್ ಸ್ಮಾರಕಗಳಂತಹ ಸ್ಮಾರಕಗಳ ಉದಾಹರಣೆಗಳನ್ನು ನೀಡಿದರು. ಕೆಲಸದ ಸಂಸ್ಕೃತಿ ಮತ್ತು ಕೆಲಸದ ವಾತಾವರಣವನ್ನು ಬದಲಾಯಿಸಲು ಸರ್ಕಾರವು ಪ್ರಚೋದನೆಯನ್ನು ನೀಡುತ್ತಿರುವುದರಿಂದ ಕರ್ತವ್ಯ ಪಥದ ಸುತ್ತಮುತ್ತಲಿನ ಕಚೇರಿ ಕಟ್ಟಡಗಳ ಅಭಿವೃದ್ಧಿ ಕಾರ್ಯಗಳು ಭರದಿಂದ ಸಾಗುತ್ತಿವೆ ಎಂದು ಪ್ರಧಾನಮಂತ್ರಿಯವರು ಹೇಳಿದರು. ಪ್ರಧಾನಮಂತ್ರಿ ಸಂಗ್ರಹಾಲಯವನ್ನು ಸ್ಪರ್ಶಿಸಿಕೊಂಡರು, ಹಾಗೂ ಇದು ಭಾರತವು ಇದುವರೆಗೆ ಕಂಡಿರುವ ಪ್ರತಿಯೊಬ್ಬ ಪ್ರಧಾನಮಂತ್ರಿಯವರ ಜೀವನದ ಕುರಿತು ಮಾಹಿತಿ ನೀಡುತ್ತದೆ. ವಿಶ್ವದ ಅತಿದೊಡ್ಡ ವಸ್ತುಸಂಗ್ರಹಾಲಯವಾದ 'ಯುಗ ಯುಗಾಂತರದ (ಯುಗೇ ಯುಗೀನ್ ) ಭಾರತ' ವು ಶೀಘ್ರವಾಗಿ ಹೊಸದಿಲ್ಲಿಯಲ್ಲಿಮೂಡಿ ಬರುತ್ತಿದೆ ಎಂದು ಪ್ರಧಾನಮಂತ್ರಿಯವರು ಮಾಹಿತಿ ನೀಡಿದರು. 

ಅಭಿವೃದ್ಧಿ ಹೊಂದಲು ನಾವು ದೊಡ್ಡದಾಗಿ ಯೋಚಿಸಬೇಕು ಮತ್ತು ದೊಡ್ಡ ಗುರಿಗಳನ್ನು ಸಾಧಿಸಬೇಕು ಎಂದು ಪ್ರಧಾನಮಂತ್ರಿಯವರು ಹೇಳಿದರು. ಅದಕ್ಕಾಗಿಯೇ ಅವರು, "ಭಾರತವು 'ಥಿಂಕ್ ಬಿಗ್, ಡ್ರೀಮ್ ಬಿಗ್, ಆಕ್ಟ್ ಬಿಗ್' ತತ್ವದೊಂದಿಗೆ ಮುನ್ನಡೆಯುತ್ತಿದೆ. ನಾವು ದೊಡ್ಡ, ಉತ್ತಮ ಮತ್ತು ವೇಗವಾಗಿ ರಚಿಸುತ್ತಿದ್ದೇವೆ" ಎಂದು ಹೇಳಿದರು. ಅವರು ವಿಶ್ವದ ಅತಿದೊಡ್ಡ ಸೌರ-ಚಕ್ರ ಉದ್ಯಾನವನ, ಅತಿ ಎತ್ತರದ ರೈಲು ಸೇತುವೆ, ಉದ್ದದ ಸುರಂಗ, ಅತಿ ಎತ್ತರದ ಮೋಟಾರು ರಸ್ತೆ, ಅತಿದೊಡ್ಡ ಕ್ರಿಕೆಟ್ ಕ್ರೀಡಾಂಗಣ, ವಿಶ್ವದ ಅತಿ ಎತ್ತರದ ಪ್ರತಿಮೆ ಮತ್ತು ಭಾರತದಲ್ಲಿ ಏಷ್ಯಾದ ಎರಡನೇ ಅತಿದೊಡ್ಡ ರೈಲು ಸೇತುವೆ ಹಾಗೂ ಹಸಿರು ಜಲಜನಕದಲ್ಲಿನ ದೇಸದ ದಾಪುಗಾಲುಗಳನ್ನು ಈ ಸಂದರ್ಭದಲ್ಲಿ ಪ್ರಸ್ತಾಪಿಸಿದರು.

"ಈಗಿನ ಸರ್ಕಾರದ ಈ ಸಮಕಾಲೀನ ಅವಧಿಯ ಮತ್ತು ಹಿಂದಿನ ಅವಧಿಯ ಅಭಿವೃದ್ಧಿಯ ಆಧಾರ ಸ್ತಂಭಗಳಿಗೆ ಇಡೀ ರಾಷ್ಟ್ರವು ಸಾಕ್ಷಿಯಾಗಿದೆ", ಭಾರತದ ಅಭಿವೃದ್ಧಿ ಈ ಪಯಣವು ಈಗ ತಡೆಯಲಾಗದು ಎಂದು ಅವರು ದೃಢಪಡಿಸಿದರು. ಪ್ರಸ್ತುತ ಸರ್ಕಾರವು 2014 ರಲ್ಲಿ ಅಧಿಕಾರಕ್ಕೆ ಬಂದಾಗ ಭಾರತವು ವಿಶ್ವದ 10 ನೇ ಅತಿದೊಡ್ಡ ಆರ್ಥಿಕತೆಯಾಗಿತ್ತು, ಆದರೆ ಇಂದು ಭಾರತವು ವಿಶ್ವದ 5 ನೇ ಅತಿದೊಡ್ಡ ಆರ್ಥಿಕತೆಯಾಗಿದೆ ಎಂದು ಹೇಳಿದರು. ಮೂರನೇ ಅವಧಿಯಲ್ಲಿ , ಭಾರತದ ಹೆಸರು ವಿಶ್ವದ ಅಗ್ರ 3 ಆರ್ಥಿಕತೆಗಳಲ್ಲಿ ದಾಖಲೆಯ ಪ್ರಕಾರ ಒಂದಾಗಲಿದೆ ಎಂದು ಪ್ರಧಾನಮಂತ್ರಿಯವರು ಜನತೆಗೆ ಭರವಸೆ ನೀಡಿದರು. ಇದು ಮೋದಿಯವರ ಗ್ಯಾರಂಟಿ ಎಂದು ಅವರು ಪ್ರತಿಪಾದಿಸಿದರು. ಮೂರನೇ ಅವಧಿಯಲ್ಲಿ, ಭಾರತದ ಅಭಿವೃದ್ಧಿ ಪಯಣದ ವೇಗವು ಅನೇಕ ಪಟ್ಟು ಹೆಚ್ಚಾಗುತ್ತದೆ ಮತ್ತು ನಾಗರಿಕರು ತಮ್ಮ ಕನಸುಗಳು ನನಸಾಗುವುದನ್ನು ವಾಸ್ತವಿಕವಾಗಿ ನೋಡಲಿದ್ದಾರೆ ಎಂದು ಪ್ರಧಾನಮಂತ್ರಿಯವರು ದೇಶದ  ನಾಗರಿಕರಿಗೆ ಭರವಸೆ ನೀಡಿದರು.

ಕಳೆದ 9 ವರ್ಷಗಳಲ್ಲಿ 34 ಲಕ್ಷ ಕೋಟಿ ರೂಪಾಯಿಗಳನ್ನು ಮೂಲಸೌಕರ್ಯಗಳ ಸೃಷ್ಟಿಗೆ ಖರ್ಚು ಮಾಡಿದ ಕಾರಣದಿಂದಾಗಿ ಇಂದು ಭಾರತ ಪುನರ್ನಿರ್ಮಾಣದ ಕ್ರಾಂತಿಗೆ ಸಾಕ್ಷಿಯಾಗಿದೆ ಎಂದು ಪ್ರಧಾನಮಂತ್ರಿಯವರು ಹೇಳಿದರು. ಈ ವರ್ಷವೂ ಬಂಡವಾಳ ವೆಚ್ಚವನ್ನು 10 ಲಕ್ಷ ಕೋಟಿಗೆ ಏರಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು. ಭಾರತವು ಅಭೂತಪೂರ್ವ ಪ್ರಗತಿಯ ವೇಗ ಮತ್ತು ಅಪಾರ ಪ್ರಮಾಣದಲ್ಲಿ ಕೆಲಸ ಮಾಡುತ್ತಿದೆ. ಹಿಂದಿನ ಏಳು ದಶಕಗಳಲ್ಲಿ ಕೇವಲ 20 ಸಾವಿರಕ್ಕೆ ಹೋಲಿಸಿದರೆ ಕಳೆದ 9 ವರ್ಷಗಳಲ್ಲಿ 40 ಸಾವಿರ ಕಿಮೀ ರೈಲು ಮಾರ್ಗಗಳ ವಿದ್ಯುದ್ದೀಕರಣ ನಡೆದಿದೆ. 2014ರ ಮೊದಲು ತಿಂಗಳಿಗೆ 600 ಮೀಟರ್ ಮೆಟ್ರೊ ಲೈನ್ ಹಾಕಲಾಗಿತ್ತು, ಇಂದು ಪ್ರತಿ ತಿಂಗಳು 6 ಕಿ.ಮೀ ಉದ್ದದ ಮೆಟ್ರೊ ಲೈನ್ ಹಾಕಲಾಗುತ್ತಿದೆ. 2014 ರಲ್ಲಿನ ಕೇವಲ 4 ಲಕ್ಷ ಕಿಮೀಗೆ ಹೋಲಿಸಿದರೆ, ಇಂದು, ದೇಶವು 7.25 ಕಿಮೀ ಉದ್ದದ ಗ್ರಾಮೀಣ ರಸ್ತೆಗಳನ್ನು ಹೊಂದಿದೆ. ವಿಮಾನ ನಿಲ್ದಾಣಗಳ ಸಂಖ್ಯೆಯು ಸುಮಾರು 70 ರಿಂದ 150 ಕ್ಕೆ ಏರಿದೆ. ನಗರಗಳ ಕೊಳವೆ ಗ್ಯಾಸ್ ವಿತರಣೆಯು 2014 ರಲ್ಲಿದ್ದ ಕೇವಲ 60 ನಗರಗಳಿಗೆ ಹೋಲಿಸಿದರೆ 600 ನಗರಗಳನ್ನು ತಲುಪಿದೆ.

"ನವ ಭಾರತವು ಮುಂದೆ ಸಾಗುತ್ತಿದೆ ಮತ್ತು ದಾರಿಯಲ್ಲಿ ಬರುವ ಎಲ್ಲಾ ಅಡೆತಡೆಗಳನ್ನು ನಿವಾರಿಸುತ್ತಿದೆ", ಸಮಸ್ಯೆಗಳಿಗೆ ಶಾಶ್ವತ ಪರಿಹಾರಗಳನ್ನು ಹುಡುಕುವಲ್ಲಿ ಸರ್ಕಾರವು ಗಮನಹರಿಸುತ್ತಿದೆ ಎಂದು ಪ್ರಧಾನಮಂತ್ರಿಯವರು ಹೇಳಿದರು. ಪ್ರಧಾನಮಂತ್ರಿ ಗತಿಶಕ್ತಿ ಮಾಸ್ಟರ್ಪ್ಲಾನ್ ಸಾಮಾಜಿಕ ಮೂಲಸೌಕರ್ಯ ಕ್ಷೇತ್ರಕ್ಕೆ ಸಮಗ್ರ ಬದಲಾವಣೆ ತಂದಿರುವ ಉದಾಹರಣೆಯನ್ನು ನೀಡುತ್ತಾ, ಇದು 1600 ಕ್ಕೂ ಹೆಚ್ಚು ದತ್ತಾಂಶಗಳನ್ನು ಒಳಗೊಂಡಿದೆ ಮತ್ತು ದೇಶದ ಸಮಯ ಹಾಗೂ ಹಣವನ್ನು ಉಳಿಸುವ ಗುರಿಯನ್ನು ಹೊಂದಿದೆ ಎಂದು ಹೇಳಿದರು.

ಪ್ರಧಾನಮಂತ್ರಿಯವರು 1930 ರ ಯುಗದತ್ತ ಗಮನ ಸೆಳೆದರು ಮತ್ತು ಕಳೆದ ಶತಮಾನದ ಮೂರನೇ ದಶಕವು ಸ್ವರಾಜ್ಯ ಗುರಿಯಾಗಿದ್ದ ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ನಿರ್ಣಾಯಕವಾಗಿದೆ ಎಂದು ಹೇಳಿದರು. ಅಂತೆಯೇ, ಈ ಶತಮಾನದ ಮೂರನೇ ದಶಕವು ಭಾರತಕ್ಕೆ ಅತ್ಯಂತ ನಿರ್ಣಾಯಕವಾಗಿದೆ ಎಂದು ಪ್ರಧಾನಮಂತ್ರಿಯವರು ಹೇಳಿದರು, ಏಕೆಂದರೆ ನಮ್ಮ ಗುರಿ ಸಮೃದ್ಧ ಭಾರತ, 'ವಿಕಸಿತ ಭಾರತ'. ಸ್ವರಾಜ್ ಆಂದೋಲನದ ಫಲವಾಗಿ ಭಾರತಕ್ಕೆ ಸ್ವಾತಂತ್ರ್ಯ ದೊರಕಿದೆ ಎಂದು ಪ್ರಧಾನಿ ಪುನರುಚ್ಚರಿಸಿದರು. "ಈಗ ಈ ಮೂರನೇ ದಶಕದಲ್ಲಿ, ನಾವು ಮುಂದಿನ 25 ವರ್ಷಗಳ ಕಾಲ 'ವಿಕಸಿತ್ ಭಾರತ್' ಗುರಿಯನ್ನು ಹೊಂದಿದ್ದೇವೆ", ಪ್ರತಿಯೊಬ್ಬ ಸ್ವಾತಂತ್ರ್ಯ ಹೋರಾಟಗಾರನ ಕನಸುಗಳನ್ನು ನನಸಾಗಿಸಲು ನಾಗರಿಕರನ್ನು ಹುರಿದುಂಬಿಸುತ್ತಾ, ತಮ್ಮ ಅನುಭವದ ಮೂಲಕ ಪ್ರಧಾನಮಂತ್ರಿಯವರು ಉದಾಹರಣೆಗಳೊಂದಿಗೆ ಮಾತನಾಡಿದರು. ತಮ್ಮ ಮುಂದೆ ಅನೇಕ ಸಾಧನೆಗಳ ಅವಕಾಶಗಳು ತೆರೆದುಕೊಳ್ಳುವುದನ್ನು ನಾನು ಕಣ್ಣಾರೆ ಕಂಡಿದ್ದೇನೆ ಮತ್ತು ರಾಷ್ಟ್ರದ ಸಾಮರ್ಥ್ಯದ ಬಗ್ಗೆ ಅರಿವಿದೆ ಎಂದು ಹೇಳಿದರು. “ಭಾರತ ಅಭಿವೃದ್ಧಿ ಹೊಂದಿದ ದೇಶವಾಗಬಹುದು! ಭಾರತವು ಬಡತನವನ್ನು ತೊಡೆದುಹಾಕಬಲ್ಲದು” ಎಂದು ಪ್ರಧಾನಮಂತ್ರಿ ಅವರು ಹೇಳಿದರು. ನೀತಿ ಆಯೋಗದ ವರದಿಯನ್ನು ಉಲ್ಲೇಖಿಸಿಕೊಂಡು, ಭಾರತದಲ್ಲಿ ಕೇವಲ 5 ವರ್ಷಗಳಲ್ಲಿ 13.5 ಕೋಟಿ ಜನರು ಬಡತನದಿಂದ ಹೊರಬಂದಿದ್ದಾರೆ ಎಂದು ಮಾಹಿತಿ ನೀಡಿದರು. ಅಂತರಾಷ್ಟ್ರೀಯ ಏಜೆನ್ಸಿಗಳು ಉಲ್ಲೇಖಿಸಿರುವಂತೆ ಭಾರತದಲ್ಲಿ ತೀವ್ರ ಬಡತನ ಈಗ ದೂರವಾಗುತ್ತಿದೆ ಎಂದು ಪುನರುಚ್ಚರಿಸಿದ ಅವರು, ಕಳೆದ 9 ವರ್ಷಗಳಲ್ಲಿ ಸರ್ಕಾರ ಮಾಡಿದ ನೀತಿಗಳು ಮತ್ತು ತೆಗೆದುಕೊಂಡ ನಿರ್ಧಾರಗಳಿಗೆ ಇದು ಮನ್ನಣೆಯಾಗಿದೆ ಎಂದು ಹೇಳಿದರು.

ಸ್ವಚ್ಛ ಸ್ಪಷ್ಟ ಉದ್ದೇಶಗಳು ಮತ್ತು ಸರಿಯಾದ ಉತ್ತಮ ನೀತಿಗಳ ಅಗತ್ಯವನ್ನು ಒತ್ತಿ ಹೇಳಿದ ಪ್ರಧಾನಮಂತ್ರಿಯವರು ಜಿ-20 ಅನ್ನು ಉದಾಹರಣೆಯಾಗಿ ಉಲ್ಲೇಖಿಸಿದರು. “ನಾವು ಜಿ-20 ಅನ್ನು ಕೇವಲ ಒಂದು ನಗರ ಅಥವಾ ಒಂದು ಸ್ಥಳಕ್ಕೆ ಸೀಮಿತಗೊಳಿಸಲಿಲ್ಲ. ನಾವು ಜಿ-20 ಸಭೆಗಳನ್ನು ದೇಶದ 50ಕ್ಕೂ ಹೆಚ್ಚು ನಗರಗಳಿಗೆ ಕೊಂಡೊಯ್ದಿದ್ದೇವೆ. ಈ ಮೂಲಕ ಭಾರತದ ವೈವಿಧ್ಯತೆಯನ್ನು ಪ್ರದರ್ಶಿಸಿದ್ದೇವೆ. ಭಾರತದ ಸಾಂಸ್ಕೃತಿಕ ಶಕ್ತಿ ಏನು, ಭಾರತದ ಪರಂಪರೆ ಏನು ಎಂಬುದನ್ನು ನಾವು ಜಗತ್ತಿಗೆ ತೋರಿಸಿದ್ದೇವೆ. ಜ20 ಅಧ್ಯಕ್ಷೀಯತೆಯನ್ನು ಮತ್ತಷ್ಟು ವಿಸ್ತರಿಸಲಾಗಿದೆ ಎಂದು ಹೇಳಿದರು.

 “ಜಿ-20 ಸಭೆಗಳಿಗಾಗಿ ಅನೇಕ ನಗರಗಳಲ್ಲಿ ಹೊಸ ಸೌಲಭ್ಯಗಳನ್ನು ನಿರ್ಮಿಸಲಾಗಿದೆ ಮತ್ತು ಹಳೆಯ ಸೌಲಭ್ಯಗಳನ್ನು ಆಧುನೀಕರಿಸಲಾಗಿದೆ. ಇದರಿಂದ ದೇಶಕ್ಕೆ ಮತ್ತು ದೇಶದ ಜನತೆಗೆ ಅನುಕೂಲವಾಯಿತು. ಇದು ಉತ್ತಮ ಆಡಳಿತ. ರಾಷ್ಟ್ರ ಮೊದಲು, ನಾಗರಿಕ ಮೊದಲು ಎಂಬ ಮನೋಭಾವವನ್ನು ಅನುಸರಿಸುವ ಮೂಲಕ ನಾವು ಭಾರತವನ್ನು ಅಭಿವೃದ್ಧಿಪಡಿಸಲಿದ್ದೇವೆ ಎಂದು ಹೇಳಿದರು.

ಕೇಂದ್ರ ವ್ಯಾಪಾರ ಮತ್ತು ವಾಣಿಜ್ಯ ಸಚಿವ ಶ್ರೀ ಪಿಯೂಷ್ ಗೋಯಲ್, ಇತರ ಹಲವಾರು ಕೇಂದ್ರ ಸಚಿವರು ಮತ್ತು ರಾಜ್ಯ ಸರ್ಕಾರಗಳ ಸಚಿವರು ಮತ್ತು ಪ್ರಮುಖ ಉದ್ಯಮ ತಜ್ಞರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಹಿನ್ನೆಲೆ

ದೇಶದಲ್ಲಿ ಸಭೆಗಳು, ಸಮ್ಮೇಳನಗಳು ಮತ್ತು ಪ್ರದರ್ಶನಗಳನ್ನು ಆಯೋಜಿಸಲು ವಿಶ್ವ ದರ್ಜೆಯ ಮೂಲಸೌಕರ್ಯವನ್ನು ಹೊಂದುವ ಪ್ರಧಾನಮಂತ್ರಿಯವರ ದೃಷ್ಟಿಕೋನವು ನವದೆಹಲಿಯ ಪ್ರಗತಿ ಮೈದಾನದಲ್ಲಿ ನಿರ್ಮಿಸಲಾದ ಇಂಟರ್ನ್ಯಾಷನಲ್ ಎಕ್ಸಿಬಿಷನ್-ಕಮ್-ಕನ್ವೆನ್ಷನ್ ಸೆಂಟರ್ (ಐಇಸಿಸಿ) ಪರಿಕಲ್ಪನೆಗೆ ಕಾರಣವಾಗಿದೆ. ಈ ಯೋಜನೆಯು ಪ್ರಗತಿ ಮೈದಾನದಲ್ಲಿನ ಹಳೆಯ ಮತ್ತು ಹಳೆಯ ಸೌಲಭ್ಯಗಳನ್ನು ನವೀಕರಿಸುತ್ತದೆ ಮತ್ತು ಸುಮಾರು 2700 ಕೋಟಿ ರೂಪಾಯಿ ವೆಚ್ಚದಲ್ಲಿ ರಾಷ್ಟ್ರೀಯ ಯೋಜನೆಯಾಗಿ ಅಭಿವೃದ್ಧಿಪಡಿಸಲಾಗಿದೆ. ಸರಿಸುಮಾರು 123 ಎಕರೆಗಳ ಕ್ಯಾಂಪಸ್ ಪ್ರದೇಶದೊಂದಿಗೆ, ಐಇಸಿಸಿ ಸಂಕೀರ್ಣವನ್ನು ಭಾರತದ ಅತಿದೊಡ್ಡ ಸಭೆಗಳು, ಪ್ರೋತ್ಸಾಹಕಗಳು, ಸಮ್ಮೇಳನಗಳು ಮತ್ತು ಪ್ರದರ್ಶನಗಳು (ಎಂಐಸಿಇ) ಇತ್ಯಾದಿಗಳ ತಾಣವಾಗಿ ಅಭಿವೃದ್ಧಿಪಡಿಸಲಾಗಿದೆ. ಈವೆಂಟ್ (ಕಾರ್ಯಕ್ರಮ/ಪ್ರದರ್ಶನ)ಗಳಿಗೆ ಲಭ್ಯವಿರುವ ಸ್ಥಳಾವಕಾಶದ ವಿಷಯದಲ್ಲಿ, ಈ ನೂತನ ಐಇಸಿಸಿ ಕಾಂಪ್ಲೆಕ್ಸ್ ಪ್ರಪಂಚದ ಉನ್ನತ ಪ್ರದರ್ಶನ ಮತ್ತು ಸಮಾವೇಶ ಸಂಕೀರ್ಣಗಳಲ್ಲಿ ತನ್ನ ಸ್ಥಾನ ಕಾದಿರಿಸಿದೆ. ಪ್ರಗತಿ ಮೈದಾನದಲ್ಲಿ ಹೊಸದಾಗಿ ಅಭಿವೃದ್ಧಿಪಡಿಸಲಾದ ಐಇಸಿಸಿ ಸಂಕೀರ್ಣವು ಕನ್ವೆನ್ಷನ್ ಸೆಂಟರ್, ಎಕ್ಸಿಬಿಷನ್ ಹಾಲ್ಗಳು ಮತ್ತು ಆಂಫಿಥಿಯೇಟರ್ ಸೇರಿದಂತೆ ಅನೇಕ ಅತ್ಯಾಧುನಿಕ ಸೌಲಭ್ಯಗಳನ್ನು ಒಳಗೊಂಡಿದೆ.

ಕನ್ವೆನ್ಷನ್ ಸೆಂಟರ್ ಅನ್ನು ಪ್ರಗತಿ ಮೈದಾನದ ಸಂಕೀರ್ಣದ ಕೇಂದ್ರಬಿಂದುವಾಗಿ ಅಭಿವೃದ್ಧಿಪಡಿಸಲಾಗಿದೆ. ಇದು ಭವ್ಯವಾದ ವಾಸ್ತುಶಿಲ್ಪದ ಅದ್ಭುತವಾಗಿದೆ, ದೊಡ್ಡ ಪ್ರಮಾಣದ ಅಂತರರಾಷ್ಟ್ರೀಯ ಪ್ರದರ್ಶನಗಳು, ವ್ಯಾಪಾರ ಮೇಳಗಳು, ಸಮಾವೇಶಗಳು, ಸಮ್ಮೇಳನಗಳು ಮತ್ತು ಇತರ ಪ್ರತಿಷ್ಠಿತ ಕಾರ್ಯಕ್ರಮಗಳನ್ನು ಆಯೋಜಿಸಲು ವಿನ್ಯಾಸಗೊಳಿಸಲಾಗಿದೆ. ಇದು ವಿವಿಧ ಮೀಟಿಂಗ್ ರೂಮ್ಗಳು, ಲಾಂಜ್ಗಳು, ಆಡಿಟೋರಿಯಮ್ಗಳು, ಆಂಫಿಥಿಯೇಟರ್ ಮತ್ತು ವ್ಯಾಪಾರ ಕೇಂದ್ರವನ್ನು ಹೊಂದಿದ್ದು, ಇದು ವ್ಯಾಪಕ ಶ್ರೇಣಿಯ ಈವೆಂಟ್ಗಳನ್ನು ಏಕಕಾಲದಲ್ಲಿ ಮಾಡುವ ಸಾಮರ್ಥ್ಯವನ್ನು ಹೊಂದಿದೆ. ಇದರ ಭವ್ಯವಾದ ಬಹುಪಯೋಗಿ ಸಭಾಂಗಣ ಮತ್ತು “ಮುಖ್ಯ ಸಭಾಂಗಣ(ಪ್ಲೀನರಿ ಹಾಲ್)” ಏಳು ಸಾವಿರ ಜನರ ಒಟ್ಟು ಸಾಮರ್ಥ್ಯವನ್ನು ಹೊಂದಿದೆ, ಇದು ಆಸ್ಟ್ರೇಲಿಯಾದ ಪ್ರಸಿದ್ಧ ಸಿಡ್ನಿ ಒಪೇರಾ ಹೌಸ್ನ ಆಸನ ಸಾಮರ್ಥ್ಯಕ್ಕಿಂತ ದೊಡ್ಡದಾಗಿದೆ. ಇದರ ಭವ್ಯವಾದ ಆಂಫಿಥಿಯೇಟರ್ 3,000 ವೀಕ್ಷಕರ ಆಸನ ಸಾಮರ್ಥ್ಯವನ್ನು ಹೊಂದಿದೆ.

ಕನ್ವೆನ್ಷನ್ ಸೆಂಟರ್ ಕಟ್ಟಡದ ವಾಸ್ತುಶಿಲ್ಪದ ವಿನ್ಯಾಸವು ಭಾರತೀಯ ಸಂಪ್ರದಾಯಗಳಿಂದ ಪ್ರೇರಿತವಾಗಿದೆ ಮತ್ತು ಆಧುನಿಕ ಸೌಲಭ್ಯಗಳು ಮತ್ತು ಜೀವನ ವಿಧಾನವನ್ನು ಅಳವಡಿಸಿಕೊಳ್ಳುವಾಗ ಅದರ ಹಿಂದಿನ ಭಾರತದ ವಿಶ್ವಾಸ ಮತ್ತು ದೃಢತೆಯನ್ನು ಪ್ರದರ್ಶಿಸುತ್ತದೆ. ಕಟ್ಟಡದ ಆಕಾರವನ್ನು ಶಂಖದಿಂದ (ಶಂಖದ ಚಿಪ್ಪಿನಿಂದ) ಪಡೆಯಲಾಗಿದೆ, ಮತ್ತು ಕನ್ವೆನ್ಷನ್ ಸೆಂಟರ್ನ ವಿವಿಧ ಗೋಡೆಗಳು ಮತ್ತು ಮುಂಭಾಗಗಳು ಭಾರತದ ಸಾಂಪ್ರದಾಯಿಕ ಕಲೆ ಮತ್ತು ಸಂಸ್ಕೃತಿಯ ಹಲವಾರು ಅಂಶಗಳನ್ನು ಚಿತ್ರಿಸುತ್ತದೆ 'ಸೂರ್ಯ ಶಕ್ತಿ' ಸೇರಿದಂತೆ ಸೌರ ಶಕ್ತಿಯನ್ನು ಬಳಸಿಕೊಳ್ಳುವಲ್ಲಿ ಭಾರತದ ಪ್ರಯತ್ನಗಳನ್ನು ಎತ್ತಿ ತೋರಿಸುತ್ತದೆ, 'ಶೂನ್ಯದಿಂದ ಇಸ್ರೋ ', ಬಾಹ್ಯಾಕಾಶದಲ್ಲಿ ನಮ್ಮ ಸಾಧನೆಗಳನ್ನು ಸ್ಮರಿಸುತ್ತಾ, ಪಂಚ ಮಹಾಭೂತವು ಸಾರ್ವತ್ರಿಕ ಅಡಿಪಾಯದ ಬಿಲ್ಡಿಂಗ್ ಬ್ಲಾಕ್ಸ್ ಅನ್ನು ಸೂಚಿಸುತ್ತದೆ - ಆಕಾಶ (ಆಕಾಶ), ವಾಯು (ಗಾಳಿ), ಅಗ್ನಿ (ಬೆಂಕಿ), ಜಲ (ನೀರು), ಪೃಥ್ವಿ (ಭೂಮಿ) ಇತ್ಯಾದಿ. ಅಲ್ಲದೆ, ದೇಶದ ವಿವಿಧ ಪ್ರದೇಶಗಳ ವಿವಿಧ ವರ್ಣಚಿತ್ರಗಳು ಮತ್ತು ಬುಡಕಟ್ಟು ಕಲಾ ಪ್ರಕಾರಗಳು ಕನ್ವೆನ್ಷನ್ ಸೆಂಟರ್ ಅನ್ನು ಅಲಂಕರಿಸುತ್ತವೆ.

ಕನ್ವೆನ್ಷನ್ ಸೆಂಟರ್ ನಲ್ಲಿ ಲಭ್ಯವಿರುವ ಇತರ ಸೌಲಭ್ಯಗಳು 5ಜಿ-ಸಕ್ರಿಯಗೊಳಿಸಿದ ಸಂಪೂರ್ಣ ವೈ-ಫೈ-ವ್ಯಾಪ್ತಿಯ ಕ್ಯಾಂಪಸ್, 10ಜಿ ಇಂಟ್ರಾನೆಟ್ ಸಂಪರ್ಕ, 16 ವಿವಿಧ ಭಾಷೆಗಳನ್ನು ಬೆಂಬಲಿಸಲು ಅತ್ಯಾಧುನಿಕ ತಂತ್ರಜ್ಞಾನವನ್ನು ಹೊಂದಿರುವ ಇಂಟರ್ಪ್ರಿಟರ್ ಕೊಠಡಿ, ಬೃಹತ್ ಗಾತ್ರದ ವೀಡಿಯೊ ಗೋಡೆಗಳೊಂದಿಗೆ ಸುಧಾರಿತ ಎವಿ ವ್ಯವಸ್ಥೆಗಳು, ಮಬ್ಬಾಗಿಸುವಿಕೆ ಮತ್ತು ಆಕ್ಯುಪೆನ್ಸಿ ಸಂವೇದಕಗಳೊಂದಿಗೆ ಬೆಳಕಿನ ನಿರ್ವಹಣಾ ವ್ಯವಸ್ಥೆ, ಅತ್ಯಾಧುನಿಕ ಡಿಸಿಎನ್  (ಡೇಟಾ ಕಮ್ಯುನಿಕೇಷನ್ ನೆಟ್ವರ್ಕ್) ವ್ಯವಸ್ಥೆ, ಸಮಗ್ರ ಕಣ್ಗಾವಲು ವ್ಯವಸ್ಥೆ ಮತ್ತು ಶಕ್ತಿ-ಸಮರ್ಥ ಕೇಂದ್ರೀಕೃತ ಹವಾನಿಯಂತ್ರಣ ವ್ಯವಸ್ಥೆಗಳು, ಕಟ್ಟಡ ನಿರ್ವಹಣಾ ವ್ಯವಸ್ಥೆ ಅತ್ಯುತ್ತಮ ಕಾರ್ಯನಿರ್ವಹಣೆ ಮತ್ತು ಶಕ್ತಿಯ ದಕ್ಷತೆಯನ್ನು ಖಾತ್ರಿಪಡಿಸುತ್ತದೆ. 

ಇದಲ್ಲದೆ, ಐಇಸಿಸಿ ಸಂಕೀರ್ಣವು ಏಳು ಪ್ರದರ್ಶನ ಸಭಾಂಗಣಗಳನ್ನು ಹೊಂದಿದೆ ಮತ್ತು ಪ್ರತಿಯೊಂದೂ ಪ್ರದರ್ಶನಗಳು, ವ್ಯಾಪಾರ ಮೇಳಗಳು ಮತ್ತು ವ್ಯಾಪಾರ ಕಾರ್ಯಕ್ರಮಗಳನ್ನು ಆಯೋಜಿಸಲು ಬಹುಮುಖ ಸ್ಥಳವಾಗಿ ಕಾರ್ಯನಿರ್ವಹಿಸುತ್ತದೆ. ಪ್ರದರ್ಶನ ಸಭಾಂಗಣಗಳನ್ನು ವೈವಿಧ್ಯಮಯ ಕೈಗಾರಿಕೆಗಳಿಗೆ ಅವಕಾಶ ಕಲ್ಪಿಸಲು ಮತ್ತು ಪ್ರಪಂಚದಾದ್ಯಂತದ ಉತ್ಪನ್ನಗಳು ಮತ್ತು ಸೇವೆಗಳನ್ನು ಪ್ರದರ್ಶಿಸಲು ವಿನ್ಯಾಸಗೊಳಿಸಲಾಗಿದೆ. ಈ ಅತ್ಯಾಧುನಿಕ ರಚನೆಗಳು ಆಧುನಿಕ ಎಂಜಿನಿಯರಿಂಗ್ ಮತ್ತು ವಾಸ್ತುಶಿಲ್ಪದ ಪರಾಕ್ರಮಕ್ಕೆ ಸಾಕ್ಷಿಯಾಗಿದೆ.

ಐಇಸಿಸಿಯ ಹೊರಗಿನ ಪ್ರದೇಶದ ಅಭಿವೃದ್ಧಿಯು ಸಹ ಚಿಂತನಶೀಲವಾಗಿ ವಿನ್ಯಾಸಗೊಳಿಸಲಾಗಿದೆ ಅದು ಮುಖ್ಯ ಸಂಕೀರ್ಣದ ಸೌಂದರ್ಯಕ್ಕೆ ಪೂರಕವಾಗಿದೆ ಮತ್ತು ಈ ಯೋಜನೆಗೆ ಹೋದ ಎಚ್ಚರಿಕೆಯ ಯೋಜನೆ ಮತ್ತು ಅಭಿವೃದ್ಧಿಗೆ ಸಾಕ್ಷಿಯಾಗಿದೆ. ಶಿಲ್ಪಗಳು, ಸ್ಥಾಪನೆಗಳು ಮತ್ತು ಭಿತ್ತಿಚಿತ್ರಗಳು ಭಾರತದ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಪ್ರದರ್ಶಿಸುತ್ತವೆ; ಸಂಗೀತ ಕಾರಂಜಿಗಳು ಮೋಡಿಮಾಡುವಿಕೆ ಮತ್ತು ಚಮತ್ಕಾರದ ಅಂಶವನ್ನು ಸೇರಿಸುತ್ತವೆ; ಕೊಳಗಳು, ಸರೋವರಗಳು ಮತ್ತು ಕೃತಕ ತೊರೆಗಳಂತಹ ಜಲಮೂಲಗಳು ಈ ಪ್ರದೇಶದ ಶಾಂತತೆ ಮತ್ತು ಸೌಂದರ್ಯವನ್ನು ಹೆಚ್ಚಿಸುತ್ತವೆ.

ಇದರಲ್ಲಿ ಸಂದರ್ಶಕರ ಅನುಕೂಲವು ಆದ್ಯತೆಯಾಗಿದೆ, ಇದು 5,500 ಕ್ಕೂ ಹೆಚ್ಚು ವಾಹನ ನಿಲುಗಡೆ ಸ್ಥಳಗಳಿವೆ. ಸಿಗ್ನಲ್-ಮುಕ್ತ ರಸ್ತೆಗಳ ಮೂಲಕ ಸುಲಭವಾಗಿ ಪ್ರವೇಶಿಸುವುದರಿಂದ ಸಂದರ್ಶಕರು ಯಾವುದೇ ತೊಂದರೆಯಿಲ್ಲದೆ ಸ್ಥಳವನ್ನು ತಲುಪಬಹುದು. ಅಲ್ಲದೆ, ಒಟ್ಟಾರೆ ವಿನ್ಯಾಸವು ಪಾಲ್ಗೊಳ್ಳುವವರ ಸೌಕರ್ಯ ಮತ್ತು ಅನುಕೂಲಕ್ಕಾಗಿ ಆದ್ಯತೆ ನೀಡುತ್ತದೆ, ಐಇಸಿಸಿ ಸಂಕೀರ್ಣದೊಳಗೆ ತಡೆರಹಿತ ಚಲನೆಯನ್ನು ಸುಗಮಗೊಳಿಸುತ್ತದೆ.

ಪ್ರಗತಿ ಮೈದಾನದಲ್ಲಿ ಹೊಸ ಐಇಸಿಸಿ ಸಂಕೀರ್ಣದ ಅಭಿವೃದ್ಧಿಯು ಭಾರತವನ್ನು ಜಾಗತಿಕ ವ್ಯಾಪಾರ ತಾಣವಾಗಿ ಉತ್ತೇಜಿಸಲು ಸಹಾಯ ಮಾಡುತ್ತದೆ. ಇದು ವ್ಯಾಪಾರ ಮತ್ತು ವಾಣಿಜ್ಯವನ್ನು ಉತ್ತೇಜಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ, ಆರ್ಥಿಕ ಬೆಳವಣಿಗೆ ಮತ್ತು ಉದ್ಯೋಗ ಸೃಷ್ಟಿಗೆ ಕಾರಣವಾಗುತ್ತದೆ. ಇದು ಸಣ್ಣ ಮತ್ತು ಮಧ್ಯಮ ಉದ್ಯಮಗಳ ಬೆಳವಣಿಗೆಯನ್ನು ಬೆಂಬಲಿಸುತ್ತದೆ ಮತ್ತು ಅವರ ಉತ್ಪನ್ನಗಳನ್ನು ಪ್ರದರ್ಶಿಸಲು ವೇದಿಕೆಯನ್ನು ಒದಗಿಸುತ್ತದೆ

ಇದರ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ವೇದಿಕೆಯಲ್ಲಿನ ಯುಸಿಟಿಎಸ್ ಮತ್ತು ಸೇವೆಗಳು, ಜ್ಞಾನ ವಿನಿಮಯವನ್ನು ಸುಗಮಗೊಳಿಸುತ್ತದೆ ಇದರಲ್ಲಿ ಅಳವಡಿಸಲಾದ ಉತ್ತಮ ಅಭ್ಯಾಸಗಳು, ತಾಂತ್ರಿಕ, ತಂತ್ರಜ್ಞಾನದ ಪ್ರಗತಿಗಳು ಮತ್ತು ಉದ್ಯಮದ ಪ್ರವೃತ್ತಿಗಳ ಪ್ರಸಾರವನ್ನು ಉತ್ತೇಜಿಸುತ್ತದೆ. ಪ್ರಗತಿ ಮೈದಾನದಲ್ಲಿರುವ ಐಇಸಿಸಿ ಸಂಕೀರ್ಣವು “ಆತ್ಮನಿರ್ಭರ ಭಾರತ್”ನ ಉತ್ಸಾಹದಲ್ಲಿ ಭಾರತದ ಆರ್ಥಿಕ ಮತ್ತು ತಾಂತ್ರಿಕ ಶ್ರೇಷ್ಠತೆಯ ಅನ್ವೇಷಣೆಯನ್ನು ಬಿಂಬಿಸುತ್ತದೆ ಮತ್ತು ನವ ಭಾರತವನ್ನು ನಿರ್ಮಿಸುವತ್ತ ಇದು ಒಂದು ಪ್ರಮುಖ ಹೆಜ್ಜೆಯಾಗಿದೆ. 

***

 



(Release ID: 1943305) Visitor Counter : 115