ವಸತಿ ಮತ್ತು ನಗರ ಬಡತನ ನಿರ್ಮೂಲನೆ ಸಚಿವಾಲಯ

ಮೇಯರ್ ಶೃಂಗಸಭೆಗಾಗಿ ಜುಲೈ 7-8 ರಂದು ಜಿ20 ರ ಯು20 ಕಾರ್ಯ ಸಮೂಹವು ಭೇಟಿಯಾಗಲಿದೆ


ಇದುವರೆಗೆ ನಡೆದ ಅತಿದೊಡ್ಡ ಯು20 ಶೃಂಗಸಭೆಯಲ್ಲಿ ಮೇಯರ್ಗಳು, ಉಪ ಮೇಯರ್ಗಳು ಮತ್ತು ನಗರ ಅಧಿಕಾರಿಗಳು ಮತ್ತು ಜ್ಞಾನ ಪಾಲುದಾರರು ಸೇರಿದಂತೆ 500ಕ್ಕೂ ಹೆಚ್ಚು ಜನರು  ಭಾಗವಹಿಸುವವರು. 

ಇಂಗಾಲರಹಿತ  ಪರಿಸರ , ಮಹಿಳೆಯರನ್ನು ಮುಖ್ಯವಾಹಿನಿಗೆ ತರುವುದು ನಗರಾಭಿವೃದ್ಧಿಯಲ್ಲಿ, ಯುವಕರು ಮತ್ತು ಮಕ್ಕಳು ಮತ್ತು ನಗರದ ಹೂಡಿಕೆಗಳನ್ನು ಮರು ವ್ಯಾಖ್ಯಾನಿಸುವುದು: ಭವಿಷ್ಯದ ತಂತ್ರಜ್ಞಾನಗಳನ್ನು ಬಳಸಿಕೊಳ್ಳುವ ಜಾಗತಿಕ ನಗರ ಚೌಕಟ್ಟನ್ನು ಒಳಗೊಂಡಿರುವ ವಿಷಯಾಧಾರಿತ ಅವಧಿಗಳು

ವಿಶ್ವ ಆರ್ಥಿಕ ವೇದಿಕೆ (ಡಬ್ಲ್ಯೂ ಇ ಎಫ್), ಸಿ40 ನಗರಗಳು, ಅಖಿಲ ಭಾರತ ಸ್ಥಳೀಯ ಸ್ವಯಂ ಸರ್ಕಾರದ ಸಂಸ್ಥೆ (ಎಐಐಎಲ್ಎಸ್ಜಿ), ಯುನೆಸ್ಕೊ, ಯುನಿಸೆಫ್, ಜಿಐಝೆಡ್, ಮತ್ತುಐಸಿಎಲ್ಇಐ  ಸಹಯೋಗದಲ್ಲಿ ಜ್ಞಾನ ಪಾಲುದಾರರು

Posted On: 05 JUL 2023 12:17PM by PIB Bengaluru

ಪ್ರಪಂಚದಾದ್ಯಂತ 57 ನಗರಗಳು ಮತ್ತು ಭಾರತದ 35 ನಗರಗಳ ಪ್ರತಿನಿಧಿಗಳು ಮತ್ತು ಭಾಗವಹಿಸುವವರು 7-8 ಜುಲೈ, 2023 ರಂದು ಅಹಮದಾಬಾದ್ ಮತ್ತು ಗುಜರಾತ್ನ ಗಾಂಧಿನಗರದ ಅವಳಿ ನಗರಗಳಲ್ಲಿ ಸೇರುವರು . ಜಿ-20 ಅಡಿಯಲ್ಲಿ ವರ್ಕಿಂಗ್ ಗ್ರೂಪ್ ಅರ್ಬನ್-20 ರ ಆರನೇ ಆವೃತ್ತಿಯ ಮೇಯರ್ಗಳ ಶೃಂಗಸಭೆಯನ್ನು ಆಯೋಜಿಸಲು ಈ ಸಿದ್ಧತೆಗಳನ್ನು ಮಾಡಲಾಗುತ್ತಿದೆ. ಜಿ 200 ದೇಶಗಳ ನಗರಗಳ ನಡುವೆ ಚರ್ಚೆಗಳನ್ನು ಸುಗಮಗೊಳಿಸುವ ಮೂಲಕ,  ಯು20 ನಗರಗಳ ಆದ್ಯತೆಗಳಿಗೆ ಸಂಬಂಧಿಸಿದಂತೆ ಜಿ20 ಮಾತುಕತೆಗಳನ್ನು ಸಾಮೂಹಿಕವಾಗಿ ತಿಳಿಸಲು ನಗರಗಳಿಗೆ ವೇದಿಕೆಯನ್ನು ಸ್ಥಾಪಿಸುತ್ತದೆ. 

ಮೇಯರ್ಗಳು, ಡೆಪ್ಯುಟಿ ಮೇಯರ್ಗಳು ಮತ್ತು ನಗರ ಅಧಿಕಾರಿಗಳು, ಹಾಗೂ ಸರ್ಕಾರಿ ಪ್ರತಿನಿಧಿಗಳು ಮತ್ತು ಜ್ಞಾನ ಪಾಲುದಾರರು ಸೇರಿದಂತೆ 500 ಕ್ಕೂ ಹೆಚ್ಚು ಭಾಗವಹಿಸುವವರೊಂದಿಗೆ, ಇದುವರೆಗಿನ ಅತಿದೊಡ್ಡ ಯು-20 ಶೃಂಗಸಭೆಗಳಲ್ಲಿ ಒಂದಾಗಲಿದೆ. ಎರಡೂ ನಗರದ ಯು-20 ಮುಖ್ಯಸ್ಥರನ್ನು ಅಹಮದಾಬಾದ್ ನಗರದ ಆದ್ಯತೆಗಳನ್ನು ವಿವರಿಸುವ ಬ್ಯಾನರ್ಗಳು ಮತ್ತು ಪೋಸ್ಟರ್ಗಳಿಂದ ಅಲಂಕರಿಸಲಾಗಿದೆ. 

ಪ್ರತಿನಿಧಿಗಳನ್ನು ಸ್ವಾಗತಿಸಲು ಅಹಮದಾಬಾದ್ ಸಜ್ಜಾಗಿದೆ ಮತ್ತು ಶೃಂಗಸಭೆಯನ್ನು ಭವ್ಯವಾಗಿ  ಯಶಸ್ವಿಗೊಳಿಸಲು ವಿಸ್ತಾರವಾದ ಸಿದ್ಧತೆಗಳು ನಡೆಯುತ್ತಿವೆ. ಆರಂಭಿಕ ಅಧಿವೇಶನ ಮತ್ತು ಯು-20 ಹೇಳಿಕೆಯನ್ನು ಮೇಯರ್ಗಳು ಜಿ-20 ನಾಯಕರಿಗೆ ಹಸ್ತಾಂತರಿಸುವುದರ ಜೊತೆಗೆ ಎರಡು ದಿನಗಳ ಕಾರ್ಯಕ್ರಮವು ಹಲವಾರು ವಿಷಯಾಧಾರಿತ ಸೆಷನ್ಗಳು ಮತ್ತು ಸ್ಪಾಟ್ಲೈಟ್ ಕಾರ್ಯಕ್ರಮಗಳನ್ನು ಒಳಗೊಂಡಿದೆ,. ಈ ಪ್ರಯತ್ನಕ್ಕೆ ಅಹಮದಾಬಾದ್ನ ನೋಡಲ್ ಸಚಿವಾಲಯವಾಗಿ, ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ (ಎಂಒಎಚ್ಅ), ರಾಷ್ಟ್ರೀಯ ನಗರ ವ್ಯವಹಾರಗಳ ಸಂಸ್ಥೆ (ಎನ್ಐಯುಎ, ಯು-20 ರ ತಾಂತ್ರಿಕ ಸಚಿವಾಲಯ ಮತ್ತು ಯು-20, ಸಿ-40 ನಗರಗಳು ಮತ್ತು ಯುಸಿಎಲ್ಜಿ (ಯುನೈಟೆಡ್ ಸಿಟಿ) ಸಂಚಾಲಕರು ಮತ್ತು ಸ್ಥಳೀಯ ಸರ್ಕಾರಗಳು) ಸೇರಿವೆ.

ಮೇಯರ್ ಸಭೆಯನ್ನು ಜುಲೈ 7 ರಂದು ಗುಜರಾತ್ನ ಗೌರವಾನ್ವಿತ ಮುಖ್ಯಮಂತ್ರಿ ಶ್ರೀ ಭೂಪೇಂದ್ರಭಾಯಿ ಪಟೇಲ್ ಮತ್ತು ವಸತಿ ಮತ್ತು ನಗರ ವ್ಯವಹಾರಗಳ ರಾಜ್ಯ ಸಚಿವರಾದ ಶ್ರೀ ಕೌಶಲ್ ಕಿಶೋರ್ ಅವರು ಅಧಿಕೃತವಾಗಿ ಉದ್ಘಾಟಿಸಲಿದ್ದಾರೆ. ಅಹಮದಾಬಾದ್ ನಗರದ ಪರವಾಗಿ ಅಹಮದಾಬಾದ್ನ ಗೌರವಾನ್ವಿತ ಮೇಯರ್ ಶ್ರೀ ಕಿರಿತ್ಕುಮಾರ್ ಜೆ. ಪರ್ಮಾರ್ ಅವರು ಪ್ರತಿನಿಧಿಗಳನ್ನು ಸ್ವಾಗತಿಸಲಿದ್ದಾರೆ ಮತ್ತು ಜಿ20 ನ ಸೌಸ್ ಶೆರ್ಪಾ ಶ್ರೀ ಅಭಯ್ ಠಾಕೂರ್ ಮತ್ತು ಸಚಿವಾಲಯದ  ಕಾರ್ಯದರ್ಶಿ ಶ್ರೀ ಮನೋಜ್ ಜೋಶಿ ಅವರು ಭಾರತೀಯ ನಗರಗಳ ಅಭಿವೃದ್ಧಿ ಪ್ರಯಾಣದ ಬಗ್ಗೆ ತಮ್ಮಉದ್ದೇಶಗಳನ್ನು ಹಂಚಿಕೊಳ್ಳಲಿದ್ದಾರೆ. 
ಶೃಂಗಸಭೆಯಲ್ಲಿ ಆರು ಯು-20 ಆದ್ಯತೆಯ ಕ್ಷೇತ್ರಗಳ ವಿಷಯಾಧಾರಿತ ಅವಧಿಗಳನ್ನು ಆಯೋಜಿಸಲಾಗುತ್ತದೆ. ಯು-20 ನ ಆದ್ಯತೆಯ ಪ್ರದೇಶಗಳು ಪರಿಸರ ಜವಾಬ್ದಾರಿ, ಹವಾಮಾನ ಹಣಕಾಸು ಮತ್ತು ಭವಿಷ್ಯದ ನಗರಗಳ ಮೇಲೆ ಜಿ-20 ನ ಮಹತ್ವವನ್ನು ಬಿಂಬಿಸುತ್ತವೆ  

ಯು-20 ಅಡಿಯಲ್ಲಿ ಆರು ಆದ್ಯತೆಗಳಿವೆ; 'ಪರಿಸರ ಜವಾಬ್ದಾರಿಯುತ ನಡವಳಿಕೆಗಳನ್ನು ಉತ್ತೇಜಿಸುವುದು', 'ಹವಾಮಾನ ಹಣಕಾಸು ವೇಗಗೊಳಿಸುವುದು', 'ಜಲ ಭದ್ರತೆಯನ್ನು ಖಾತರಿಪಡಿಸುವುದು', 'ಸ್ಥಳೀಯ ಸಂಸ್ಕೃತಿ ಮತ್ತು ಆರ್ಥಿಕತೆಯನ್ನು ಉತ್ತೇಜಿಸುವುದು', 'ನಗರ ಆಡಳಿತ ಮತ್ತು ಯೋಜನೆಗಾಗಿ ಚೌಕಟ್ಟನ್ನು ಮರುವಿನ್ಯಾಸಗೊಳಿಸುವುದು' ಮತ್ತು 'ಡಿಜಿಟಲ್ ನಗರ ಭವಿಷ್ಯವನ್ನು ವೇಗಗೊಳಿಸುವುದು'.

 ವಿಷಯಾಧಾರಿತ ಅವಧಿಗಳಲ್ಲಿ ಟೋಕಿಯೊ, ರಿಯಾದ್, ಪ್ಯಾರಿಸ್, ಸೂರತ್, ಶ್ರೀನಗರ, ಅಮ್ಮನ್, ಲಾಸ್ ಏಂಜಲೀಸ್, ನ್ಯೂಯಾರ್ಕ್ ಸಿಟಿ, ಕಟೋವಿಸ್, ರಿಯೊ ಡಿ ಜನೈರೊ, ದುಬೈ, ಇಂದೋರ್, ಕಿಚನರ್, ಲಂಡನ್, ಮಾಂಟೆವಿಡಿಯೊ, ಜೋಹಾನ್ಸ್ಬರ್ಗ್, ಕೊಚ್ಚಿ ಮತ್ತು ಡರ್ಬನ್ನ ಮೇಯರ್ಗಳು ಅಥವಾ ನಗರ ಸಮಾನತೆಗಳನ್ನು ಒಳಗೊಂಡಿತ್ತು. ಅಧಿಕಾರಿಗಳ ಮಾತುಕತೆಗಳು ಮತ್ತು ಪ್ರಸ್ತುತಿಗಳನ್ನು ಒಳಗೊಂಡಿರುತ್ತದೆ. 
ಕೆಳಗಿನ ಸ್ಪಾಟ್ಲೈಟ್ ಕಾರ್ಯಕ್ರಮಗಳು ಸಹ ಶೃಂಗಸಭೆಯ ಭಾಗವಾಗಿರುತ್ತವೆ:

•    ನಿರ್ಮಿತ ಪರಿಸರವನ್ನು ಇಂಗಾಲರಹಿತವನ್ನಾಗಿ ಮಾಡುವುದು
•    ನಗರಾಭಿವೃದ್ಧಿಯಲ್ಲಿ ಮಹಿಳೆಯರು, ಯುವಕರು ಮತ್ತು ಮಕ್ಕಳನ್ನು  ಮುಖ್ಯವಾಹಿನಿಗೆ ತರುವುದು 
•    ನಗರ ಹೂಡಿಕೆಯನ್ನು ಮರು ವ್ಯಾಖ್ಯಾನಿಸುವುದು: ಭವಿಷ್ಯದ ತಂತ್ರಜ್ಞಾನಗಳನ್ನು ಬಳಸಿಕೊಳ್ಳುವ ಜಾಗತಿಕ ನಗರ ಚೌಕಟ್ಟು
•     ವೃತ್ತಾಕಾರದ ಆರ್ಥಿಕತೆಯಲ್ಲಿ ನೀರು, ತ್ಯಾಜ್ಯನೀರು ಮತ್ತು ಘನ ತ್ಯಾಜ್ಯಕ್ಕೆ ಸಂಬಂಧಿಸಿದ ವಿಷಯಗಳನ್ನು ಅಂತಿಮಗೊಳಿಸುವುದು 
•    ಹವಾಮಾನ-ಪ್ರತಿಕ್ರಿಯಾತ್ಮಕ ಮತ್ತು ಸ್ಥಿತಿಸ್ಥಾಪಕ ನಗರಗಳನ್ನು ನಿರ್ಮಿಸುವುದು
•    ದತ್ತಾಂಶವು ಜನರಿಗೆ ಕೆಲಸ ಮಾಡಲು  ಅನುಕೂಲ ಮಾಡುವಂತೆ ಮಾಡುವುದು

ಈ ಕಾರ್ಯಕ್ರಮಗಳನ್ನು ಹಲವಾರು ಜ್ಞಾನ ಪಾಲುದಾರರು ಎನ್ಐಯುಎ ದೊಂದಿಗೆ ಸಹಕರಿಸುತ್ತಿದ್ದಾರೆ. ಇವುಗಳಲ್ಲಿ ವಿಶ್ವ ಆರ್ಥಿಕ ವೇದಿಕೆ, ಸಿ40 ನಗರಗಳು, ಅಖಿಲ ಭಾರತ ಸ್ಥಳೀಯ ಸ್ವಯಂ ಸರ್ಕಾರ ಸಂಸ್ಥೆ, ಯುನೆಸ್ಕೊ, ಯುನಿಸೆಫ್, ಜಿಐಝೆಡ್, ಮತ್ತು ಐಸಿಎಲ್ಇಐ ಸೇರಿವೆ. ಯುಎನ್ ಏಜೆನ್ಸಿಗಳು, ವರ್ಲ್ಡ್ ಬ್ಯಾಂಕ್ ಗ್ರೂಪ್, ಇಂಟರ್ನ್ಯಾಷನಲ್ ಫೈನಾನ್ಸ್ ಕಾರ್ಪೊರೇಷನ್ (ಐಎಫ್ಸಿ), ಮತ್ತು   ಸಂಸ್ಥೆಗಳು, ಅಭಿವೃದ್ಧಿ ಬ್ಯಾಂಕ್ಗಳು, ಇತ್ಯಾದಿ ಸೇರಿದಂತೆ ವಿವಿಧ ಸಂಸ್ಥೆಗಳಿಂದ ನಗರಾಭಿವೃದ್ಧಿ ಸಮಸ್ಯೆಗಳ ಕುರಿತು ಪರಿಣಿತರನ್ನು ಈ ಅಧಿವೇಶನಗಳಲ್ಲಿ ಸ್ಪೀಕರ್ಗಳು   ಒಳಗೊಂಡಿರುತ್ತಾರೆ.

ಪ್ರಪಂಚದಾದ್ಯಂತದ ಭಾಗವಹಿಸುವ ಮೇಯರ್ಗಳು ಯು20 ಆದ್ಯತೆಗಳು ಮತ್ತು ನಗರಗಳಿಗೆ ಸುಸ್ಥಿರತೆಯ ಕಾರ್ಯಸೂಚಿಯನ್ನು ಮತ್ತಷ್ಟು ಚರ್ಚಿಸಲು ಎರಡೂ ದಿನಗಳಲ್ಲಿ   ಅಧಿವೇಶನಗಳಲ್ಲಿ ತೊಡಗಿಸಿಕೊಳ್ಳುತ್ತಾರೆ. ಶೃಂಗಸಭೆಯ ಎರಡನೇ ದಿನದ   ಅಧಿವೇಶನವನ್ನು 'ಹವಾಮಾನ ಹಣಕಾಸು' ವಿಷಯದ ಕುರಿತು ನಗರಗಳ ದುಂಡುಮೇಜಿನ ಸಭೆಯಂತೆ ವಿನ್ಯಾಸಗೊಳಿಸಲಾಗಿದೆ.

ಮೇಯರ್ಗಳ ಶೃಂಗಸಭೆಯ ಸಮಯದಲ್ಲಿ, ಪ್ರತಿನಿಧಿಗಳು ಗಾಂಧಿನಗರದಲ್ಲಿರುವ ಅತ್ಯಾಧುನಿಕ ವ್ಯಾಪಾರ ಜಿಲ್ಲೆಯಾದ ಗಿಫ್ಟ್ ಸಿಟಿ (ಗುಜರಾತ್ ಇಂಟರ್ನ್ಯಾಶನಲ್ ಫೈನಾನ್ಸ್ ಟೆಕ್-ಸಿಟಿ) ಗೆ ಭೇಟಿ ನೀಡಲಿದ್ದಾರೆ. ಪ್ರತಿನಿಧಿಗಳು ಅಹಮದಾಬಾದ್ನ ಹಳೆಯ ನಗರದ ವಾಸ್ತುಶಿಲ್ಪವನ್ನು ಪರಂಪರೆಯ ನಡಿಗೆಯ ಮೂಲಕ ನೋಡುತ್ತಾರೆ ಮತ್ತು ಭಾರತದ ಸ್ವಾತಂತ್ರ್ಯ ಚಳವಳಿಯಲ್ಲಿ ಮಹಾತ್ಮ ಗಾಂಧಿಯವರ ಪ್ರಮುಖ ಪಾತ್ರವನ್ನು ಮತ್ತು ಜಗತ್ತಿಗೆ ಅವರ ಶಾಂತಿ ಮತ್ತು ಅಹಿಂಸೆಯ ಸಂದೇಶಗಳನ್ನು ಅರ್ಥಮಾಡಿಕೊಳ್ಳಲು ಸಾಬರಮತಿ ಆಶ್ರಮಕ್ಕೆ ಭೇಟಿ ನೀಡುತ್ತಾರೆ. ಅವರು ಸಾಬರಮತಿ ರಿವರ್ಫ್ರಂಟ್ ಸೇರಿದಂತೆ ಅಹಮದಾಬಾದ್ ನಗರದಲ್ಲಿ ಪ್ರಾರಂಭಿಸಲಾದ ವಿವಿಧ ನಗರಾಭಿವೃದ್ಧಿ ಉಪಕ್ರಮಗಳಿಗೆ ಭೇಟಿ ನೀಡಲಿದ್ದಾರೆ. ಪ್ರತಿನಿಧಿಗಳು ಗುಜರಾತ್ ಮತ್ತು ಭಾರತದ ಸಂಸ್ಕೃತಿಯ ವಿವಿಧ ಅಂಶಗಳನ್ನು ಪ್ರದರ್ಶಿಸುವ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಾರೆ ಮತ್ತು ರುಚಿಕರವಾದ ಗುಜರಾತಿ ಪಾಕಪದ್ಧತಿಯ ರುಚಿಯನ್ನು ಸವಿಯುತ್ತಾರೆ.

ಪ್ರತಿ ಸುತ್ತಿನಲ್ಲಿ ಯು-20 ಸಮಾಲೋಚನೆಗಳ ಫಲಿತಾಂಶದ ದಾಖಲೆಯಾದ ಹೇಳಿಕೆಯನ್ನು ಜಿ-20 ದೇಶಗಳ ನಗರಗಳು ಅನುಮೋದಿಸುತ್ತವೆ. ಜಿ-20 ಶೆರ್ಪಾ ಶ್ರೀ ಅಮಿತಾಭ್ ಕಾಂತ್ ಮತ್ತು ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳು ಮತ್ತು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲದ ಗೌರವಾನ್ವಿತ ಸಚಿವ ಶ್ರೀ ಹರ್ದೀಪ್ ಸಿಂಗ್ ಪುರಿ ಅವರಿಗೆ ಭಾಗವಹಿಸುವ ಮೇಯರ್ಗಳ ಹೇಳಿಕೆಯನ್ನು ಸಲ್ಲಿಸುವುದರೊಂದಿಗೆ ಮೇಯರ್ಗಳ ಶೃಂಗಸಭೆಯು ಮುಕ್ತಾಯಗೊಳ್ಳುತ್ತದೆ.

****



(Release ID: 1937573) Visitor Counter : 162