ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಎಚ್ ಪಿಸಿಎಲ್ ಮುಂಬೈ ಮತ್ತು ವಿಶಾಖಪಟ್ಟಣಂ ರಿಫೈನರೀಸ್ ನ ಅದ್ಭುತ ಭೌತಿಕ ಕಾರ್ಯಕ್ಷಮತೆಯ ಬಗ್ಗೆ ಸಂತಸ ವ್ಯಕ್ತಪಡಿಸಿದ ಪ್ರಧಾನಿ

ಪ್ರಕಟಣಾ ದಿನಾಂಕ: 16 MAY 2023 9:40AM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಎಚ್ ಪಿಸಿಎಲ್ ಮುಂಬೈ ಮತ್ತು ವಿಶಾಖಪಟ್ಟಣಂ ರಿಫೈನರೀಸ್ ನ ಅದ್ಭುತ ಭೌತಿಕ ಸಾಧನೆಯ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ.

ನಮ್ಮ ನಾಗರಿಕರಿಗೆ ಕೈಗೆಟಕುವ ದರದ ಇಂಧನದ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು ಎಚ್ ಪಿಸಿಎಲ್ ಕರ್ತವ್ಯದ ಕರೆಯನ್ನು ಮೀರಿದೆ ಎಂದು ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಶ್ರೀ ಹರ್ದೀಪ್ ಸಿಂಗ್ ಪುರಿ ಟ್ವೀಟ್ ಥ್ರೆಡ್ ನಲ್ಲಿ ಮಾಹಿತಿ ನೀಡಿದ್ದಾರೆ.

ಎಚ್ಪಿಸಿಎಲ್ ಮುಂಬೈ ಮತ್ತು ವಿಶಾಖಪಟ್ಟಣಂ ರಿಫೈನರೀಸ್ 2023 ರ ಜನವರಿ-ಮಾರ್ಚ್ ಅವಧಿಯಲ್ಲಿ 113% ಸಾಮರ್ಥ್ಯದೊಂದಿಗೆ ಕಾರ್ಯನಿರ್ವಹಿಸುತ್ತಿದ್ದು, ತ್ರೈಮಾಸಿಕ ಗರಿಷ್ಠ 4.96 ಎಂಎಂಟಿ ಕಚ್ಚಾ ತೈಲವನ್ನು ಸಂಸ್ಕರಿಸುತ್ತದೆ.

ಕೇಂದ್ರ ಸಚಿವರ ಟ್ವೀಟ್ ಥ್ರೆಡ್ ಗೆ ಪ್ರತಿಕ್ರಿಯಿಸಿದ ಪ್ರಧಾನಿ;

"ಇಂಧನ ಕ್ಷೇತ್ರಕ್ಕೆ ಸಿಹಿ ಸುದ್ದಿ"

 

******


(ಪ್ರಕಟಣೆ ಐ.ಡಿ.: 1925178) ವಿಸಿಟರ್ ಕೌಂಟರ್ : 182