ಪ್ರಧಾನ ಮಂತ್ರಿಯವರ ಕಛೇರಿ

​​​​​​​ಮತುವಾ ಮಹಾಮೇಳಕ್ಕೆ ಭೇಟಿ ನೀಡುವಂತೆ ಜನತೆಗೆ ಪ್ರಧಾನಿ ಒತ್ತಾಯ

Posted On: 17 MAR 2023 9:35AM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಹೆಚ್ಚಿನ ಸಂಖ್ಯೆಯಲ್ಲಿ ಜನರು ಮತುವಾ ಮಹಾ ಮೇಳಕ್ಕೆ ಭೇಟಿ ನೀಡುವಂತೆ ಒತ್ತಾಯಿಸಿದ್ದಾರೆ ಮತ್ತು ಸೇವೆ ಮತ್ತು ದಯೆಯ ಮಾರ್ಗದರ್ಶನಕ್ಕಾಗಿ ಶ್ರೀ ಶ್ರೀ ಹರಿಚಂದ್ ಠಾಕೂರ್‌ ಜಿ ಅವರಿಗೆ ಗೌರವ ನಮನ ಸಲ್ಲಿಸಿದ್ದಾರೆ.

ಕೇಂದ್ರ ಸಚಿವ ಶ್ರೀ ಶಂತನು ಠಾಕೂರ್ ಅವರ ಟ್ವೀಟ್ ಗೆ ಪ್ರತಿಕ್ರಿಯಿಸಿ ಮರು ಟ್ವೀಟ್ ಮಾಡಿರುವ ಪ್ರಧಾನಿ ಹೀಗೆ ಹೇಳಿದ್ದಾರೆ.

“#ಮತುವಾಮಹಾಮೇಳ, ಮತುವ ಸಮುದಾಯದ ಅದ್ಭುತ ಸಂಸ್ಕೃತಿಯನ್ನು ಬಿಂಬಿಸುವ ಪ್ರಮುಖ ಕಾರ್ಯಕ್ರಮವಾಗಿದೆ. ಹೆಚ್ಚಿನ ಜನರು ಮೇಳಕ್ಕೆ ಭೇಟಿ ನೀಡುವಂತೆ ನಾನು ಒತ್ತಾಯಿಸುತ್ತೇನೆ. ದಯೆ ಮತ್ತು ಸೇವೆಯ ಮಾರ್ಗವನ್ನು ತೋರಿಸಿದ ಶ್ರೀ ಶ್ರೀ ಹರಿಚಂದ್‌ ಠಾಕೂರ್ ಜಿ ಅವರಿಗೆ ಮನುಕುಲ ಎಂದೆಂದಿಗೂ ಋಣಿಯಾಗಿರುತ್ತದೆ’’  

"এক অত্যন্ত গুরুত্বপূর্ন অনুষ্ঠান হল #MatuaMahaMela2023, যেটি মতুয়া সম্প্রদায়ের স্পন্দমান সংস্কৃতিকে তুলে ধরে। আরো অনেকেই এই মেলা দেখুন, এই আমার অনুরোধ। দয়া ও সেবার পথ দেখানোর জন্য ঠাকুর শ্রীশ্রী হরিচাঁদ জীর প্রতি মানবজাতি চিরঋণী হয়ে থাকবে।"

 

****



(Release ID: 1907976) Visitor Counter : 97