ಪ್ರಧಾನ ಮಂತ್ರಿಯವರ ಕಛೇರಿ

ಪ್ರಧಾನಮಂತ್ರಿಯವರು 'ವಾಣಿಜ್ಯ ಭವನ'ವನ್ನು ಉದ್ಘಾಟಿಸಿದರು ಮತ್ತು ನಿರ್ಯಾತ್‌ ಪೋರ್ಟಲ್ ಗೆ ಚಾಲನೆ ನೀಡಿದರು.


"ದೇಶವು ನಾಗರಿಕ-ಕೇಂದ್ರಿತ ಆಡಳಿತದ ದಿಕ್ಕಿನಲ್ಲಿ ಸಾಗುತ್ತಿದೆ".

"ಡಾ. ಶ್ಯಾಮ ಪ್ರಸಾದ್ ಮುಖರ್ಜಿಯವರ ನೀತಿಗಳು, ನಿರ್ಧಾರಗಳು, ಸಂಕಲ್ಪ ಮತ್ತು ಅವುಗಳ ನೆರವೇರಿಕೆಗಳು ಸ್ವತಂತ್ರ ಭಾರತಕ್ಕೆ ನಿರ್ದೇಶನ ನೀಡುವಲ್ಲಿ ಬಹಳ ಮುಖ್ಯವಾದವು".

"ಸರ್ಕಾರ ಮತ್ತು ಅದರ ಸೌಲಭ್ಯಗಳಿಗೆ ಸುಲಭವಾದ ಲಭ್ಯತೆಯನ್ನು ಖಚಿತಪಡಿಸಿಕೊಳ್ಳುವುದು ಪ್ರಮುಖ ಆದ್ಯತೆಯಾಗಿದೆ".

"ಕಾರ್ಯಗಳು ಮತ್ತು ಯೋಜನೆಗಳನ್ನು ನಿಗದಿತ ಸಮಯದಲ್ಲಿ ಪೂರ್ಣಗೊಳಿಸಿದಾಗ ಮಾತ್ರ ತೆರಿಗೆದಾರರನ್ನು ಗೌರವಿಸಿದಂತಾಗುತ್ತದೆ".

"ಶಿಲಾನ್ಯಾಸದಿಂದ ವಾಣಿಜ್ಯ ಭವನದ ಉದ್ಘಾಟನೆಯವರೆಗೆ ದೇಶದಲ್ಲಿ ಪರಿವರ್ತನೆಯ ಪ್ರಗತಿಯಾಗಿದೆ".

" ದೇಶದಲ್ಲಿ ಅಭಿವೃದ್ಧಿಶೀಲದಿಂದ ಅಭಿವೃದ್ಧಿ ಹೊಂದಿದ ಸ್ಥಿತಿಗೆ ಪರಿವರ್ತನೆಯಲ್ಲಿ ರಫ್ತು ಪ್ರಮುಖ ಪಾತ್ರ ವಹಿಸುತ್ತದೆ".

Posted On: 23 JUN 2022 12:31PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ದೆಹಲಿಯಲ್ಲಿ 'ವಾಣಿಜ್ಯ ಭವನ'ವನ್ನು ಉದ್ಘಾಟಿಸಿದರು ಮತ್ತು ನಿರ್ಯಾತ್‌ ಪೋರ್ಟಲ್ ಅನ್ನು ಪ್ರಾರಂಭಿಸಿದರು. ಕೇಂದ್ರ ಸಚಿವರಾದ ಶ್ರೀ ಪಿಯೂಷ್ ಗೋಯಲ್, ಶ್ರೀ ಸೋಮ್ ಪ್ರಕಾಶ್ ಮತ್ತು ಶ್ರೀಮತಿ ಅನುಪ್ರಿಯಾ ಪಟೇಲ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು, ಕಳೆದ 8 ವರ್ಷಗಳಿಂದ ದೇಶವು ಸಾಗುತ್ತಿರುವ ನವಭಾರತದಲ್ಲಿ ನಾಗರಿಕ-ಕೇಂದ್ರಿತ ಆಡಳಿತದ ಪಯಣದ ದಿಕ್ಕಿನಲ್ಲಿ ಮತ್ತೊಂದು ಪ್ರಮುಖ ಹೆಜ್ಜೆಯನ್ನು ಇಂದು ತೆಗೆದುಕೊಳ್ಳಲಾಗಿದೆ ಎಂದು ಹೇಳಿದರು. ದೇಶಕ್ಕೆ ಹೊಸ ಮತ್ತು ಆಧುನಿಕ ವಾಣಿಜ್ಯ ಕಟ್ಟಡ ಹಾಗೂ ರಫ್ತು ಪೋರ್ಟಲ್, ಒಂದು ಭೌತಿಕ ಮತ್ತು ಇನ್ನೊಂದು ಡಿಜಿಟಲ್ ಮೂಲಸೌಕರ್ಯದ ಉಡುಗೊರೆ ಸಿಕ್ಕಿದೆ ಎಂದು ಹೇಳಿದರು.

ಇಂದು, ದೇಶದ ಮೊದಲ ಕೈಗಾರಿಕಾ ಸಚಿವ ಡಾ.ಶ್ಯಾಮ ಪ್ರಸಾದ್ ಮುಖರ್ಜಿಯವರ ಪುಣ್ಯತಿಥಿ ಎನ್ನುವುದರ ಬಗ್ಗೆ ಪ್ರಧಾನಮಂತ್ರಿಯವರು ಗಮನ ಸೆಳೆದರು. “ಸ್ವತಂತ್ರ ಭಾರತಕ್ಕೆ ನಿರ್ದೇಶನ ನೀಡುವಲ್ಲಿ ಅವರ ನೀತಿಗಳು, ನಿರ್ಧಾರಗಳು, ಸಂಕಲ್ಪ ಮತ್ತು ಅವುಗಳ ನೆರವೇರಿಕೆ ಬಹಳ ಮುಖ್ಯವಾಗಿತ್ತು. ಇಂದು ದೇಶವು ಅವರಿಗೆ ವಿನಮ್ರ ಶ್ರದ್ಧಾಂಜಲಿ ಸಲ್ಲಿಸುತ್ತಿದೆ,'' ಎಂದು ಹೇಳಿದರು.

ಸಚಿವಾಲಯದ ಹೊಸ ಮೂಲಸೌಕರ್ಯವನ್ನು ಉಲ್ಲೇಖಿಸಿದ ಪ್ರಧಾನಮಂತ್ರಿಯವರು, ವ್ಯವಹಾರವನ್ನು ಸುಲಭಗೊಳಿಸುವ ಪ್ರತಿಜ್ಞೆಯನ್ನು ನವೀಕರಿಸುವ ಸಮಯವೂ ಆಗಿದೆ ಮತ್ತು ಆ ಮೂಲಕ ‘ಜೀವನ ಸುಗಮ’ ಎಂದು ಹೇಳಿದರು. ಸುಲಭ ಪ್ರವೇಶ, ಎರಡರ ನಡುವಿನ ಕೊಂಡಿಯಾಗಿದೆ ಎಂದು ಅವರು ಹೇಳಿದರು. ಸರ್ಕಾರದೊಂದಿಗೆ ಸಂವಹನ ನಡೆಸಲು ಯಾವುದೇ ಅಡೆತಡೆಗಳು ಇರಬಾರದು ಮತ್ತು ಸರ್ಕಾರವನ್ನು ಸುಲಭವಾಗಿ ತಲುಪುವಂತೆ ಮಾಡುವುದು ಸರ್ಕಾರದ ಪ್ರಮುಖ ಆದ್ಯತೆಯಾಗಿದೆ ಎಂದು ಅವರು ಹೇಳಿದರು. ಈ ದೃಷ್ಟಿಕೋನವು ಸರ್ಕಾರದ ನೀತಿಗಳಲ್ಲಿ ಸ್ಪಷ್ಟವಾಗಿ ಪ್ರತಿಫಲಿಸುತ್ತದೆ ಎಂದು ಅವರು ಹೇಳಿದರು.

ಇತ್ತೀಚಿನ ಹಲವು ಉದಾಹರಣೆಗಳನ್ನು ಉಲ್ಲೇಖಿಸಿದ ಪ್ರಧಾನಮಂತ್ರಿಯವರು, ನವ ಭಾರತದ ಹೊಸ ಕಾಯಕದ ಸಂಸ್ಕೃತಿಯಲ್ಲಿ, ಪೂರ್ಣಗೊಳಿಸುವ ದಿನಾಂಕವು ಎಸ್‌ಒಪಿ ಯ ಭಾಗವಾಗಿದೆ ಮತ್ತು ಕಟ್ಟುನಿಟ್ಟಾಗಿ ಬದ್ಧವಾಗಿದೆ ಎಂದು ಹೇಳಿದರು. ಸರಕಾರದ ಯೋಜನೆಗಳು ವರ್ಷಾನುಗಟ್ಟಲೆ ಸ್ಥಗಿತಗೊಳ್ಳದೇ ನಿಗದಿತ ಸಮಯಕ್ಕೆ ಪೂರ್ಣಗೊಂಡಾಗ ಮಾತ್ರ ಸರಕಾರದ ಯೋಜನೆಗಳು ಗುರಿ ತಲುಪುತ್ತವೆ ಎಂದ ಅವರು, ದೇಶದ ತೆರಿಗೆದಾರರಿಗೆ ಗೌರವ ಸಿಗುತ್ತದೆ ಎಂದರು. ಈಗ ನಾವು ಪ್ರಧಾನಮಂತ್ರಿ ಗತಿಶಕ್ತಿ ರಾಷ್ಟ್ರೀಯ ಮಹಾಯೋಜನೆಯ ರೂಪದಲ್ಲಿ ಆಧುನಿಕ ವೇದಿಕೆಯನ್ನು ಹೊಂದಿದ್ದೇವೆ. ಈ ವಾಣಿಜ್ಯ ಭವನವು ರಾಷ್ಟ್ರಗಳಿಗೆ ‘ಗತಿ ಶಕ್ತಿ’ಯನ್ನು ನೀಡುತ್ತದೆ ಎಂದು ಹೇಳಿದರು.

ಈ ಅವಧಿಯಲ್ಲಿ ವಾಣಿಜ್ಯ ಕ್ಷೇತ್ರದಲ್ಲಿ ತಮ್ಮ ಸರ್ಕಾರದ ಸಾಧನೆಗಳ ಸಂಕೇತವಾಗಿ ಹೊಸ ವಾಣಿಜ್ಯ ಭವನವನ್ನು ಪ್ರಧಾನಮಂತ್ರಿಯವರು ಉಲ್ಲೇಖಿಸಿದರು. ಶಂಕುಸ್ಥಾಪನೆ ಸಂದರ್ಭದಲ್ಲಿ ಅವರು ಜಾಗತಿಕ ಆವಿಷ್ಕಾರ ಸೂಚ್ಯಂಕದಲ್ಲಿ ನಾವೀನ್ಯತೆ ಮತ್ತು ಸುಧಾರಣೆಯ ಅಗತ್ಯವನ್ನು ಒತ್ತಿ ಹೇಳಿರುವುದನ್ನು ಅವರು ನೆನಪಿಸಿಕೊಂಡರು. ಇಂದು, ಜಾಗತಿಕ ಆವಿಷ್ಕಾರ ಸೂಚ್ಯಂಕದಲ್ಲಿ ಭಾರತವು 46 ನೇ ಸ್ಥಾನದಲ್ಲಿದೆ ಮತ್ತು ನಿರಂತರವಾಗಿ ಸುಧಾರಿಸುತ್ತಿದೆ. ಆ ಸಮಯದಲ್ಲಿ ವ್ಯಾಪಾರ ಮಾಡಲು ಸುಗಮವಾಗಿರುವುದನ್ನು ಸುಧಾರಿಸುವ ಬಗ್ಗೆ ಮಾತನಾಡಿದ್ದ ಅವರು, ಇಂದು 32000 ಕ್ಕೂ ಹೆಚ್ಚು ಅನಗತ್ಯ ಅನುಸರಣೆಗಳನ್ನು ತೆಗೆದುಹಾಕಲಾಗಿದೆ. ಅದೇ ರೀತಿ ಕಟ್ಟಡದ ಶಂಕುಸ್ಥಾಪನೆ ವೇಳೆ ಜಿಎಸ್‌ಟಿ ಹೊಸದಾಗಿತ್ತು, ಇಂದು ತಿಂಗಳಿಗೆ 1 ಲಕ್ಷ ಕೋಟಿ ಜಿಎಸ್‌ಟಿ ಸಂಗ್ರಹ ಮಾಮೂಲಿಯಾಗಿದೆ. ಜಿಇಎಂ ವಿಷಯದಲ್ಲಿ ಅಂದು 9 ಸಾವಿರ ಕೋಟಿ ರೂಪಾಯಿ ಮೌಲ್ಯದ ಆರ್ಡರ್‌ಗಳ ಕುರಿತು ಚರ್ಚಿಸಲಾಗಿದ್ದು, ಇಂದು 45 ಲಕ್ಷಕ್ಕೂ ಹೆಚ್ಚು ಸಣ್ಣ ಉದ್ಯಮಿಗಳು ಪೋರ್ಟಲ್‌ನಲ್ಲಿ ನೋಂದಾಯಿಸಿ ಕೊಂಡಿದ್ದಾರೆ ಮತ್ತು 2.25 ಕೋಟಿಗೂ ಹೆಚ್ಚು ಮೌಲ್ಯದ ಆರ್ಡರ್‌ಗಳನ್ನು ಇರಿಸಲಾಗಿದೆ. ಪ್ರಧಾನಮಂತ್ರಿಯವರು ಆ ಸಮಯದಲ್ಲಿ 120 ಮೊಬೈಲ್ ಯೂನಿಟ್‌ಗಳ ಬಗ್ಗೆ ಮಾತನಾಡಿದ್ದರು 2014 ರಲ್ಲಿ ಕೇವಲ 2 ಇದ್ದು, ಇಂದು ಈ ಸಂಖ್ಯೆ 200 ದಾಟಿದೆ. ಇಂದು ಭಾರತವು 2300 ನೋಂದಾಯಿತ ಫಿನ್-ಟೆಕ್ ಸ್ಟಾರ್ಟ್ಅಪ್ಗಳನ್ನು ಹೊಂದಿದೆ, 500, 4 ವರ್ಷಗಳ ಹಿಂದೆ. ವಾಣಿಜ್ಯ ಭವನದ ಶಂಕುಸ್ಥಾಪನೆಯ ಸಮಯದಲ್ಲಿ ಭಾರತವು ಪ್ರತಿ ವರ್ಷ 8000 ನವೋದ್ಯಮ (ಸ್ಟಾರ್ಟಪ್‌)ಗಳನ್ನು ಗುರುತಿಸುತ್ತಿತ್ತು, ಇಂದು ಈ ಸಂಖ್ಯೆ 15000 ಕ್ಕಿಂತ ಹೆಚ್ಚಿದೆ ಎಂದು ಪ್ರಧಾನಮಂತ್ರಿಯವರು ಮಾಹಿತಿ ನೀಡಿದರು.

ಕಳೆದ ವರ್ಷ ಐತಿಹಾಸಿಕ ಜಾಗತಿಕ ಅಡೆತಡೆಗಳ ನಡುವೆಯೂ ಭಾರತದ ರಫ್ತು ಒಟ್ಟು 670 ಶತಕೋಟಿ ಡಾಲರ್ ಅಂದರೆ 50 ಲಕ್ಷ ಕೋಟಿ ರೂಪಾಯಿಗಳಷ್ಟಿತ್ತು ಎಂದು ಪ್ರಧಾನಮಂತ್ರಿಯವರು ಗಮನಿಸಿದರು. ಕಳೆದ ವರ್ಷ, ದೇಶವು ಪ್ರತಿ ಸವಾಲಿನ ನಡುವೆಯೂ $ 400 ಬಿಲಿಯನ್ ಅಂದರೆ 30 ಲಕ್ಷ ಕೋಟಿ ಸರಕು ರಫ್ತು ಮಿತಿಯನ್ನು ದಾಟಬೇಕು ಎಂದು ನಿರ್ಧರಿಸಿತ್ತು. ನಾವು ಇದನ್ನು ದಾಟಿ 418 ಬಿಲಿಯನ್ ಡಾಲರ್ ಅಂದರೆ 31 ಲಕ್ಷ ಕೋಟಿ ರೂಪಾಯಿಗಳ ರಫ್ತಿನ ಹೊಸ ದಾಖಲೆಯನ್ನು ಸೃಷ್ಟಿಸಿದ್ದೇವೆ. "ಕಳೆದ ವರ್ಷಗಳ ಈ ಯಶಸ್ಸಿನಿಂದ ಉತ್ತೇಜಿತರಾಗಿ, ನಾವು ಈಗ ನಮ್ಮ ರಫ್ತಿನ ಗುರಿಗಳನ್ನು ಹೆಚ್ಚಿಸಿದ್ದೇವೆ ಮತ್ತು ಅವುಗಳನ್ನು ಸಾಧಿಸಲು ನಮ್ಮ ಪ್ರಯತ್ನಗಳನ್ನು ದ್ವಿಗುಣಗೊಳಿಸಿದ್ದೇವೆ. ಈ ಹೊಸ ಗುರಿಗಳನ್ನು ಸಾಧಿಸಲು ಪ್ರತಿಯೊಬ್ಬರ ಸಾಮೂಹಿಕ ಪ್ರಯತ್ನವು ತುಂಬಾ ಅವಶ್ಯಕವಾಗಿದೆ” ಎಂದ ಅವರು ಅಲ್ಪಾವಧಿಯ ಗುರಿಗಳನ್ನು ಮಾತ್ರವಲ್ಲದೆ ದೀರ್ಘಾವಧಿಯ ಗುರಿಗಳನ್ನು ಹೊಂದಿಸಬೇಕು ಎಂದು ಹೇಳಿದರು.

ನಿರ್ಯಾತ್‌ - ಟ್ರೇಡ್ ಪೋರ್ಟಲ್‌ನ ವಾರ್ಷಿಕ ವಿಶ್ಲೇಷಣೆಗಾಗಿ ರಾಷ್ಟ್ರೀಯ ಆಮದು-ರಫ್ತು ಎಲ್ಲಾ ಮಧ್ಯಸ್ಥಗಾರರಿಗೆ ನೈಜ ಸಮಯದ ದತ್ತಾಂಶವನ್ನು ಒದಗಿಸುವ ಮೂಲಕ ʼಸಿಲೋ'- ಇಲಾಖೆಗಳ‌ ನಡುವೆ ಸಮನ್ವಯ ಇಲ್ಲದಿರುವುದನ್ನು ನಿವಾರಿಸಲು ಸಹಾಯ ಮಾಡುತ್ತದೆ ಎಂದು ಪ್ರಧಾನಮಂತ್ರಿಯವರು ಹೇಳಿದರು.

“ಈ ಪೋರ್ಟಲ್‌ನಿಂದ, ವಿಶ್ವದ 200 ಕ್ಕೂ ಹೆಚ್ಚು ದೇಶಗಳಿಗೆ ರಫ್ತು ಮಾಡಲಾದ 30 ಕ್ಕೂ ಹೆಚ್ಚು ಸರಕು ಗುಂಪುಗಳಿಗೆ ಸಂಬಂಧಿಸಿದ ಪ್ರಮುಖ ಮಾಹಿತಿಯು ಲಭ್ಯವಿರುತ್ತದೆ. ಮುಂದಿನ ದಿನಗಳಲ್ಲಿ ಜಿಲ್ಲಾವಾರು ರಫ್ತಿಗೆ ಸಂಬಂಧಿಸಿದ ಮಾಹಿತಿಯೂ ಈ ಬಗ್ಗೆ ಲಭ್ಯವಾಗಲಿದೆ. ಇದು ಜಿಲ್ಲೆಗಳನ್ನು ಪ್ರಮುಖ ರಫ್ತು ಕೇಂದ್ರಗಳನ್ನಾಗಿ ಅಭಿವೃದ್ಧಿಪಡಿಸುವ ಪ್ರಯತ್ನಗಳನ್ನು ಬಲಪಡಿಸುತ್ತದೆ” ಎಂದು ಪ್ರಧಾನಮಂತ್ರಿ ಹೇಳಿದರು.

ಅಭಿವೃದ್ಧಿ ಹೊಂದುತ್ತಿರುವ ದೇಶದಿಂದ ಅಭಿವೃದ್ಧಿ ಹೊಂದಿದ ದೇಶವನ್ನಾಗಿ ಭಾರತವನ್ನು ಪರಿವರ್ತಿಸುವಲ್ಲಿ ರಫ್ತುಗಳನ್ನು ಹೆಚ್ಚಿಸುವ ಪಾತ್ರವನ್ನು ಪ್ರಧಾನಮಂತ್ರಿಯವರು ಒತ್ತಿ ಹೇಳಿದರು. ಕಳೆದ ಎಂಟು ವರ್ಷಗಳಲ್ಲಿ ಭಾರತವು ತನ್ನ ರಫ್ತುಗಳನ್ನು ನಿರಂತರವಾಗಿ ಹೆಚ್ಚಿಸುತ್ತಿದೆ ಮತ್ತು ರಫ್ತು ಗುರಿಗಳನ್ನು ಸಾಧಿಸುತ್ತಿದೆ ಎಂದು ಪ್ರಧಾನಮಂತ್ರಿಯವರು ಹೇಳಿದರು. ರಫ್ತುಗಳನ್ನು ಹೆಚ್ಚಿಸಲು, ಪ್ರಕ್ರಿಯೆಯನ್ನು ಸರಾಗಗೊಳಿಸುವ ಮತ್ತು ಉತ್ಪನ್ನಗಳನ್ನು ಹೊಸ ಮಾರುಕಟ್ಟೆಗಳಿಗೆ ಕೊಂಡೊಯ್ಯಲು ಉತ್ತಮ ನೀತಿಗಳು ಬಹಳಷ್ಟು ಸಹಾಯ ಮಾಡಿದೆ. ಇಂದು ಸರ್ಕಾರದ ಪ್ರತಿ ಸಚಿವಾಲಯ, ಪ್ರತಿಯೊಂದು ಇಲಾಖೆಗಳು ‘ಸಂಪೂರ್ಣ ಸರ್ಕಾರದ’ ಧೋರಣೆಯೊಂದಿಗೆ ರಫ್ತು ಹೆಚ್ಚಿಸಲು ಆದ್ಯತೆ ನೀಡುತ್ತಿವೆ ಎಂದರು. ಅದು ಅತಿಸಣ್ಣ ಮತ್ತು ಅತಿ ಸಣ್ಣ ಕೈಗಾರಿಕೆಗಳ ಸಚಿವಾಲಯ ಅಥವಾ ವಿದೇಶಾಂಗ ವ್ಯವಹಾರಗಳು, ಕೃಷಿ ಅಥವಾ ವಾಣಿಜ್ಯ ಸಚಿವಾಲಯವಾಗಿರಲಿ, ಎಲ್ಲರೂ ಒಂದೇ ಗುರಿಗಾಗಿ ಸಾಮಾನ್ಯ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. “ಹೊಸ ಕ್ಷೇತ್ರಗಳಿಂದ ರಫ್ತು ಹೆಚ್ಚುತ್ತಿದೆ. ಅನೇಕ ಮಹತ್ವಾಕಾಂಕ್ಷೆಯ ಜಿಲ್ಲೆಗಳಿಂದಲೂ, ರಫ್ತು ಈಗ ಅನೇಕ ಪಟ್ಟು ಹೆಚ್ಚಾಗಿದೆ. ಹತ್ತಿ ಮತ್ತು ಕೈಮಗ್ಗ ಉತ್ಪನ್ನಗಳ ರಫ್ತು ಶೇಕಡಾ 55 ರಷ್ಟು ಹೆಚ್ಚಳವಾಗಿದ್ದು, ತಳಮಟ್ಟದಲ್ಲಿ ಕೆಲಸ ಹೇಗೆ ನಡೆಯುತ್ತಿದೆ ಎನ್ನುವುದನ್ನು ತೋರಿಸುತ್ತದೆ" ಎಂದು ಅವರು ಗಮನ ಸೆಳೆದರು.

ʼವೋಕಲ್ ಫಾರ್ ಲೋಕಲ್ʼ ಅಭಿಯಾನ, ‘ಒಂದು ಜಿಲ್ಲೆ, ಒಂದು ಉತ್ಪನ್ನ’ ಯೋಜನೆ ಮೂಲಕ ಸ್ಥಳೀಯ ಉತ್ಪನ್ನಗಳಿಗೆ ಸರ್ಕಾರ ಒತ್ತು ನೀಡಿರುವುದು ರಫ್ತು ಹೆಚ್ಚಳಕ್ಕೆ ಸಹಕಾರಿಯಾಗಿದೆ ಎಂದು ಪ್ರಧಾನಮಂತ್ರಿಯವರು ಹೇಳಿದರು. ಈಗ ನಮ್ಮ ಅನೇಕ ಉತ್ಪನ್ನಗಳನ್ನು ಪ್ರಪಂಚದ ಹೊಸ ದೇಶಗಳಿಗೆ ಮೊದಲ ಬಾರಿಗೆ ರಫ್ತು ಮಾಡಲಾಗುತ್ತಿದೆ. ಬಹ್ರೇನ್‌ಗೆ ರಫ್ತಾಗುತ್ತಿರುವ ಸಿತಾಭೋಗ್ ಮಿಠಾಯಿ, ಲಂಡನ್‌ಗೆ ನಾಗಾಲ್ಯಾಂಡ್‌ನ ತಾಜಾ ಮೆಣಸಿನಕಾಯಿ, ಅಸ್ಸಾಂನ ತಾಜಾ ಬರ್ಮೀಸ್ ದ್ರಾಕ್ಷಿಗಳು ದುಬೈಗೆ, ಛತ್ತೀಸ್‌ಗಢದಿಂದ ಫ್ರಾನ್ಸ್‌ಗೆ ಬುಡಕಟ್ಟು ಮಹುವಾ ಉತ್ಪನ್ನಗಳು ಮತ್ತು ಕಾರ್ಗಿಲ್‌ನ ಖುಮಾನಿ ದುಬೈಗೆ ರಫ್ತು ಮಾಡುವಂತಹ ಉದಾಹರಣೆಗಳನ್ನು ಅವರು "ನಮ್ಮ ಸ್ಥಳೀಯ ವಸ್ತುಗಳು ವೇಗವಾಗಿ ಜಾಗತಿಕವಾಗುತ್ತಿದೆ" ಎಂದು ಹೇಳಿದರು. .

ಇತ್ತೀಚೆಗೆ ಕೈಗೊಂಡ ಕ್ರಮಗಳ ಬಗ್ಗೆ ಪುನರುಚ್ಚರಿಸಿದ ಪ್ರಧಾನಮಂತ್ರಿಯವರು "ನಮ್ಮ ರೈತರು, ನೇಕಾರರು ಮತ್ತು ನಮ್ಮ ಸಾಂಪ್ರದಾಯಿಕ ಉತ್ಪನ್ನಗಳನ್ನು ರಫ್ತು ಪರಿಸರ ವ್ಯವಸ್ಥೆಯೊಂದಿಗೆ ಸಂಪರ್ಕವೇರ್ಪಡಲು ನಾವು ಜಿಐ ಟ್ಯಾಗಿಂಗ್‌ಗೆ ಸಹಾಯ ಮಾಡುತ್ತಿದ್ದೇವೆ ಮತ್ತು ಒತ್ತು ನೀಡುತ್ತಿದ್ದೇವೆ" ಎಂದು ಹೇಳಿದರು. ಅವರು ಕಳೆದ ವರ್ಷ ಯುಎಇ ಮತ್ತು ಆಸ್ಟ್ರೇಲಿಯಾದೊಂದಿಗೆ ವ್ಯಾಪಾರ ಒಪ್ಪಂದಗಳನ್ನು ಉಲ್ಲೇಖಿಸಿದರು ಮತ್ತು ಇತರ ದೇಶಗಳೊಂದಿಗೆ ಸಾಕಷ್ಟು ಪ್ರಗತಿಯಾಗಿದೆ ಎಂದು ಮಾಹಿತಿ ನೀಡಿದರು. ವಿದೇಶದಲ್ಲಿರುವ ಭಾರತೀಯ ರಾಜತಾಂತ್ರಿಕ ಸಂಸ್ಥೆಗಳು ಅತ್ಯಂತ ಸವಾಲಿನ ವಾತಾವರಣವನ್ನು ಭಾರತಕ್ಕೆ ಅವಕಾಶಗಳಾಗಿ ಪರಿವರ್ತಿಸಲು ಶ್ರಮಿಸುತ್ತಿವೆ ಎಂದು ಅವರು ಶ್ಲಾಘಿಸಿದರು. "ವ್ಯಾಪಾರಕ್ಕಾಗಿ, ಹೊಸ ಮಾರುಕಟ್ಟೆಗಳನ್ನು ಗುರುತಿಸುವುದು ಮತ್ತು ಅವರ ಅಗತ್ಯಗಳನ್ನು ಗುರುತಿಸಿದ ನಂತರ ಉತ್ಪನ್ನಗಳನ್ನು ತಯಾರಿಸುವುದು ದೇಶದ ಪ್ರಗತಿಗೆ ಬಹಳ ಮುಖ್ಯ" ಎಂದು ಅವರು ಹೇಳಿದರು.

ಕೊನೆಯಲ್ಲಿ, ಇತ್ತೀಚಿನ ದಿನಗಳಲ್ಲಿ ಅಭಿವೃದ್ಧಿಪಡಿಸಲಾದ ಪೋರ್ಟಲ್‌ಗಳು ಮತ್ತು ವೇದಿಕೆಗಳನ್ನು ನಿಯಮಿತವಾಗಿ ಪರಿಶೀಲಿಸಲು ಪ್ರತಿ ಇಲಾಖೆಗೆ ಪ್ರಧಾನಮಂತ್ರಿಯವರು ವಿನಂತಿಸಿದರು. "ನಾವು ಈ ಸಾಧನಗಳನ್ನು ಅಭಿವೃದ್ಧಿಪಡಿಸಿದ ಗುರಿಗಳು, ಅವುಗಳನ್ನು ಎಲ್ಲಿಯವರೆಗೆ ಅದನ್ನು ಉಪಯೋಗಿಸಬಹುದು ಮತ್ತು ಸಮಸ್ಯೆಯಿದ್ದರೆ ಅವುಗಳನ್ನು ಪರಿಹರಿಸಲು ಪ್ರಯತ್ನಗಳನ್ನು ಮಾಡಬೇಕು." ಎಂದು ಹೇಳಿದರು.

 

******

 

 

 

 

 

 

 



(Release ID: 1836527) Visitor Counter : 127