ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ
azadi ka amrit mahotsav

ಶ್ರೀ ಅನುರಾಗ್‌ ಠಾಕೂರ್‌, ಗಣ್ಯ ಕ್ರೀಡಾಪಟುಗಳು ಫಿಟ್‌ ಇಂಡಿಯಾ ರಸಪ್ರಶ್ನೆಯಲ್ಲಿ ರಾಜ್ಯ ಸುತ್ತಿನಲ್ಲಿ ಭಾಗವಹಿಸುವವರನ್ನು ಹುರಿದುಂಬಿಸಿದರು

Posted On: 08 FEB 2022 2:40PM by PIB Bengaluru

ಫೆಬ್ರವರಿ 10ರಂದು ಪ್ರಾರಂಭವಾಗಲಿರುವ ಮೊಟ್ಟಮೊದಲ ಫಿಟ್‌ ಇಂಡಿಯಾ ಕ್ವಿಜ್‌ನ ರಾಜ್ಯ ಸುತ್ತಿನ ಮೊದಲು ಕೇಂದ್ರ ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವ ಶ್ರೀ ಅನುರಾಗ್‌ ಠಾಕೂರ್‌ ಅವರು ಗಣ್ಯ ಕ್ರೀಡಾಪಟುಗಳೊಂದಿಗೆ ವಿದ್ಯಾರ್ಥಿಗಳನ್ನು ಹುರಿದುಂಬಿಸಿದರು. 36 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ189 ವಿಶಿಷ್ಟ ಜಿಲ್ಲೆಗಳಿಂದ 360 ಶಾಲೆಗಳು ಗೌರವಕ್ಕಾಗಿ ಸ್ಪರ್ಧಿಸಲಿವೆ.

ಕೇಂದ್ರ ಸಚಿವರಾದ ಶ್ರೀ ಅನುರಾಗ್‌ ಠಾಕೂರ್‌ ಅವರು, “ನಮ್ಮ ಗೌರವಾನ್ವಿತ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಎರಡು ವರ್ಷಗಳ ಹಿಂದೆ ಫಿಟ್‌ ಇಂಡಿಯಾ ಆಂದೋಲನಕ್ಕೆ ಸೇರಲು ಸ್ಪಷ್ಟವಾದ ಕರೆಯನ್ನು ನೀಡಿದ್ದರು. ಅವರ ದೃಷ್ಟಿಯನ್ನು ಮುಂದಕ್ಕೆ ತೆಗೆದುಕೊಂಡು, ನಾವು ಫಿಟ್‌ ಇಂಡಿಯಾ ಕ್ವಿಜ್‌ ಎಂಬ ಕಾರ್ಯಕ್ರಮವನ್ನು ಪ್ರಾರಂಭಿಸಿದ್ದೇವೆ - ಭಾರತದ ಮೊದಲ ಶಾಲಾ ಫಿಟ್ನೆಸ್‌ ಮತ್ತು ಕ್ರೀಡಾ ರಸಪ್ರಶ್ನೆ ಇದಾಗಿದೆ. ಕ್ವಿಜ್‌ನ ಪ್ರಾಥಮಿಕ ಸುತ್ತಿನಲ್ಲಿಭಾಗವಹಿಸಿದ ಭಾರತದಾದ್ಯಂತದ ಎಲ್ಲಾ ವಿದ್ಯಾರ್ಥಿಗಳನ್ನು ನಾನು ಅಭಿನಂದಿಸುತ್ತೇನೆ ಮತ್ತು ಎಲ್ಲಾ ರಾಜ್ಯ ಸುತ್ತಿನ ಸ್ಪರ್ಧಿಗಳಿಗೆ ನಾನು ಶುಭ ಹಾರೈಸುತ್ತೇನೆ ಮತ್ತು ನಿಮ್ಮ ಶಾಲೆ, ಜಿಲ್ಲೆ ಮತ್ತು ರಾಜ್ಯವನ್ನು ನೀವು ಹೆಮ್ಮೆ ಪಡಿಸುತ್ತೀರಿ ಎಂದು ನಾನು ಭಾವಿಸುತ್ತೇನೆ,” ಎಂದು ಶ್ರೀ ಠಾಕೂರ್‌ ಹೇಳಿದರು.

ರಾಜ್ಯ ಸುತ್ತುಗಳು ವೆಬ್‌ ಆಧಾರಿತ ಸುತ್ತಿನಲ್ಲಿರಲಿದ್ದು, ರಾಜ್ಯ ಚಾಂಪಿಯನ್‌ ಆಗಲು 8 ರಿಂದ 32 ತಂಡಗಳು ಸ್ಪರ್ಧಿಸುತ್ತವೆ. ಕಾರ್ಯಕ್ರಮವನ್ನು ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ, ಭಾರತೀಯ ಕ್ರೀಡಾ ಪ್ರಾಧಿಕಾರ ಮತ್ತು ಫಿಟ್‌ ಇಂಡಿಯಾದ ಸಾಮಾಜಿಕ ಮಾಧ್ಯಮ ನಿರ್ವಹಣೆಯಲ್ಲಿಪ್ರಸಾರ ಮಾಡಲಾಗುತ್ತದೆ. ರಸಪ್ರಶ್ನೆಯು 3.25 ಕೋಟಿ ರೂಪಾಯಿಗಳ ಬಹುಮಾನವನ್ನು ಒಳಗೊಂಡಿದೆ. ಇದನ್ನು ರಸಪ್ರಶ್ನೆಯ ವಿವಿಧ ಹಂತಗಳಲ್ಲಿವಿಜೇತ ಶಾಲೆಗಳು ಮತ್ತು ವಿದ್ಯಾರ್ಥಿಗಳಿಗೆ ಹಂಚಲಾಗುತ್ತದೆ.

ಶ್ರೀ ಅವರನ್ನು ಸೇರುವುದು ಮುಂಬರುವ ಸುತ್ತುಗಳಿಗೆ ಭಾಗವಹಿಸುವ ವಿದ್ಯಾರ್ಥಿಗಳಿಗೆ ಶುಭ ಹಾರೈಸುವ ಗಣ್ಯ ಕ್ರೀಡಾಪಟುಗಳ ಸಮೂಹವಾಗಿದೆ. ಟೋಕಿಯೊ ಒಲಿಂಪಿಕ್ಸ್‌ನ ಬೆಳ್ಳಿ ಪದಕ ವಿಜೇತೆ ಮೀರಾಬಾಯಿ ಚಾನು, ಭಾಗವಹಿಸುವವರಿಗೆ ನಾನು ಶುಭ ಹಾರೈಸುತ್ತೇನೆ. ಎಲ್ಲಾ ವಿದ್ಯಾರ್ಥಿಗಳು ತಮ್ಮ ಅತ್ಯುತ್ತಮವಾದದ್ದನ್ನು ನೀಡುತ್ತಾರೆ ಮತ್ತು ಪ್ರತಿಯೊಬ್ಬರೂ ತಮ್ಮ ರಾಜ್ಯವನ್ನು ಮೊಟ್ಟಮೊದಲ ಫಿಟ್‌ ಇಂಡಿಯಾ ಕ್ವಿಜ್‌ ಚಾಂಪಿಯನ್‌ ಆಗಲು ಪೋತ್ಸಾಹಿಸುತ್ತಾರೆ ಎಂದು ನಾನು ಭಾವಿಸುತ್ತೇನೆ ಎಂದು ಹೇಳಿದರು.

ಟೋಕಿಯೊ ಪ್ಯಾರಾಲಿಂಪಿಕ್ಸ್‌ ಕಂಚಿನ ಪದಕ ವಿಜೇತ ಶರದ್‌ ಕುಮಾರ್‌, ಟೇಬಲ್‌ ಟೆನಿಸ್ತಾರೆ ಮಣಿಕಾ ಬಾತ್ರಾ, “ಭಾಗವಹಿಸುವವರಿಗೆ ನಾನು ಶುಭ ಹಾರೈಸುತ್ತೇನೆ. ಅತ್ಯುತ್ತಮ ರಾಜ್ಯ ಗೆಲ್ಲಲಿ,” ಎಂದು ಹೇಳಿದರು.

ಕ್ವಿಜ್‌ನ ಪ್ರಾಥಮಿಕ ಸುತ್ತಿನಲ್ಲಿ13,502 ಶಾಲೆಗಳಿಂದ ಒಟ್ಟು 36,299 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಇದು ಬಾಲಕ ಮತ್ತು ಬಾಲಕಿಯರು ಸಮಾನ ಭಾಗವಹಿಸುವಿಕೆಯನ್ನು ಕಂಡಿತು. ಉತ್ತರ ಪ್ರದೇಶದ ಇಬ್ಬರು ವಿದ್ಯಾರ್ಥಿಗಳು ಇತರ ಎಲ್ಲರಾಜ್ಯಗಳ ವಿದ್ಯಾರ್ಥಿಗಳನ್ನು ಹಿಂದಿಕ್ಕಿ ಪ್ರಾಥಮಿಕ ಸುತ್ತಿನಲ್ಲಿಅಗ್ರ ಅಂಕ ಗಳಿಸಿದರು. ಗ್ರೇಟರ್‌ ನೋಯ್ಡಾದ ಡೆಲ್ಲಿಪಬ್ಲಿಕ್‌ ಶಾಲೆಯ ದಿವ್ಯಾಂಶು ಚಮೋಲಿ ಪ್ರಥಮ ಸ್ಥಾನ ಗಳಿಸಿದರೆ, ವಾರಣಾಸಿಯ ಲಹರ್ತಾರಾದ ಸನ್ಬೀಮ್‌ ಶಾಲೆಯ ಶಾಶ್ವತ್‌ ಮಿಶ್ರಾ ನಂತರದ ಸ್ಥಾನದಲ್ಲಿದ್ದಾರೆ. ಇವರಿಬ್ಬರ ನಂತರ ಬೆಂಗಳೂರಿನ ಬಾಲ್ಡ್‌ವಿನ್‌ ಬಾಲಕಿಯರ ಪ್ರೌಢಶಾಲೆಯ ಅರ್ಕಮಿತಾ ಅವರು ಕರ್ನಾಟಕ ರಾಜ್ಯಕ್ಕೆ ಅಗ್ರ ಅಂಕ ತಂದಿದ್ದಾರೆ.

ರಾಜ್ಯ ಸುತ್ತುಗಳ ನಂತರ, 36 ಶಾಲಾ ತಂಡಗಳು (ಪ್ರತಿ ರಾಜ್ಯ ಮತ್ತು/ಅಥವಾ ಕೇಂದ್ರಾಡಳಿತ ಪ್ರದೇಶದಿಂದ ವಿಜೇತರು) ವರ್ಷದ ನಂತರ ನಡೆಯಲಿರುವ ರಾಷ್ಟ್ರೀಯ ಸುತ್ತಿಗೆ ತೆರಳುತ್ತಾರೆ ಮತ್ತು ಇದನ್ನು ಸ್ಟಾರ್‌ ಸ್ಪೋರ್ಟ್ಸ್ನಲ್ಲಿ ಪ್ರಸಾರ ಮಾಡಲಾಗುತ್ತದೆ ಮತ್ತು ಬಹು ಸಾಮಾಜಿಕ ಮಾಧ್ಯಮ ಚಾನೆಲ್‌ಗಳಲ್ಲಿಪ್ರಸಾರ ಮಾಡಲಾಗುತ್ತದೆ.

***


(Release ID: 1796520)