ಪ್ರಧಾನ ಮಂತ್ರಿಯವರ ಕಛೇರಿ

ಗೀತ ಜಯಂತಿ ಸಂದರ್ಭದಲ್ಲಿ ಜನತೆಗೆ ಪ್ರಧಾನಮಂತ್ರಿ ಶುಭಾಶಯ

Posted On: 14 DEC 2021 2:05PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಗೀತ ಜಯಂತಿಯ ಸಂದರ್ಭದಲ್ಲಿ ಜನತೆಗೆ ಶುಭ ಕೋರಿದ್ದಾರೆ. ಸಂದರ್ಭದಲ್ಲಿ ಶ್ರೀ ಮೋದಿ ಅವರು ಗೀತೆಯ ಕುರಿತಂತೆ ತಾವು ಇತ್ತೀಚೆಗೆ ಮಾಡಿದ ಎರಡು ಭಾಷಣಗಳನ್ನೂ ಹಂಚಿಕೊಂಡಿದ್ದಾರೆ.

ಸರಣಿ ಟ್ವೀಟ್ ನಲ್ಲಿ ಪ್ರಧಾನಮಂತ್ರಿಯವರು; "ಗೀತಾ ಜಯಂತಿಯಾದ ಇಂದು, ಗೀತೆಯ ಕುರಿತು ನಾನು ಇತ್ತೀಚೆಗೆ ನೀಡಿದ: ಸ್ವಾಮಿ ಚಿದ್ಭಾವಾನಂದರ ಭಗವದ್ ಗೀತಾ -ಪುಸ್ತಕ ಬಿಡುಗಡೆ. ಗೀತಾ ಕುರಿತಂತೆ ವಿವಿಧ ವಿದ್ವಾಂಸರ ಪ್ರತಿಕ್ರಿಯೆಗಳನ್ನು ಒಳಗೊಂಡ ಹಸ್ತಪ್ರತಿಗಳ ಬಿಡುಗಡೆ ವೇಳೆ ಮಾಡಿದ ಎರಡು ಭಾಷಣಗಳನ್ನು ಹಂಚಿಕೊಳ್ಳುತ್ತಿದ್ದೇನೆ.

ಗೀತೆಯ ಕುರಿತು ವಿವಿಧ ವಿದ್ವಾಂಸರಿಂದ ವ್ಯಾಖ್ಯಾನಗಳಿರುವ ಹಸ್ತಪ್ರತಿ ಬಿಡುಗಡೆ

सर्वोपनिषदो गावो दोग्धा गोपाल नन्दन:

पार्थो वत्स: सुधीर्भोक्ता दुग्धं गीतामृतं महत्।।

गीता जयंती की हार्दिक शुभकामनाएं।

ಗೀತಾ ಜಯಂತಿ ಸಂದರ್ಭದಲ್ಲಿ ಶುಭಾಶಯಗಳು.

ಜೀವನದ ಹಲವಾರು ಆಯಾಮಗಳಿಗೆ ಪ್ರಾಯೋಗಿಕ ಮಾರ್ಗದರ್ಶಿಯಾದ, ಗೀತಾ ಬೋಧನೆಗಳು ಜಾಗತಿಕವಾಗಿ ಪ್ರತಿಧ್ವನಿಸುತ್ತಿರುವುದನ್ನು ನೋಡಲು ಸಂತೋಷವಾಗುತ್ತದೆ"ಎಂದು ತಿಳಿಸಿದ್ದಾರೆ.

***



(Release ID: 1781415) Visitor Counter : 205