ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ತಜಕಿಸ್ತಾನದ ದುಶಾಂಬೆಯಲ್ಲಿ ಎಸ್.ಇ.ಒ ರಾಷ್ಟ್ರಗಳ ಮುಖ್ಯಸ್ಥರ 21ನೇ ಸಭೆ

Posted On: 15 SEP 2021 1:00PM by PIB Bengaluru

2021 ಸೆಪ್ಟೆಂಬರ್ 17 ರಂದು ದುಶಾಂಬೆಯಲ್ಲಿ ಹೈಬ್ರಿಡ್ ಮಾದರಿಯಲ್ಲಿ 21 ನೇ ಎಸ್.ಸಿ. ಮಂಡಳಿಯ ಮುಖ್ಯಸ್ಥರ ಸಭೆ ನಡೆಯಲಿದೆ. ತಜಕಿಸ್ತಾನದ ಗೌರವಾನ್ವಿತ ಅಧ್ಯಕ್ಷರಾದ ಎಮೊಮಲಿ ರಹ್ಮೊನ್ ಅವರು ಸಭೆಯ ಅಧ್ಯಕ್ಷತೆ ವಹಿಸಲಿದ್ದಾರೆ. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಭಾರತದ ನಿಯೋಗದ ಅಧ್ಯಕ್ಷತೆ ವಹಿಸಲಿದ್ದಾರೆ ಮತ್ತು ವಿಡಿಯೋ ಸಂಪರ್ಕದ ಮೂಲಕ ಪೂರ್ಣ ಅಧಿವೇಶನ ಉದ್ದೇಶಿಸಿ ಮಾತನಾಡಲಿದ್ದಾರೆ. ವಿದೇಶಾಂಗ ಸಚಿವ ಡಾ.ಎಸ್. ಜೈಶಂಕರ್ ಅವರು ಸಹ ಭಾರತವನ್ನು ಪ್ರತಿನಿಧಿಸಲಿದ್ದಾರೆ.

ಎಸ್.ಸಿ. ಶೃಂಗ ಸಭೆಯಲ್ಲಿ ಎಸ್.ಸಿ. ಸದಸ್ಯ ರಾಷ್ಟ್ರಗಳು, ವೀಕ್ಷಕ ರಾಷ್ಟ್ರಗಳು, ಎಸ್.ಸಿ. ಪ್ರಧಾನ ಕಾರ್ಯದರ್ಶಿ, ಎಸ್.ಸಿ. ಪ್ರಾದೇಶಿಕ ಭಯೋತ್ಪಾದನಾ ವಿರೋಧಿ ರಚನೆಯ [ಆರ್..ಟಿ.ಎಸ್] ಕಾರ್ಯಕಾರಿ ನಿರ್ದೇಶಕರು, ತುರ್ಕಮೆನಿಸ್ತಾನದ ಅಧ್ಯಕ್ಷರು ಮತ್ತು ಇತರೆ ಆಹ್ವಾನಿತ ಅತಿಥಿಗಳು ಪಾಲ್ಗೊಳ್ಳಲಿದ್ದಾರೆ.

ಎಸ್.ಸಿ. ಶೃಂಗ ಸಭೆ ಹೈಬ್ರಿಡ್ ಮಾದರಿಯಲ್ಲಿ ನಡೆಯಲಿದೆ ಮತ್ತು ನಾಲ್ಕನೇ ಶೃಂಗಸಭೆಯಲ್ಲಿ ಭಾರತ ಎಸ್.ಸಿ. ಸದಸ್ಯರು ಪೂರ್ಣಪ್ರಮಾಣದಲ್ಲಿ ಪಾಲ್ಗೊಳ್ಳಲಿದ್ದಾರೆ. ಸಂಸ್ಥೆಯು ವರ್ಷ ತನ್ನ 20 ನೇ ವಾರ್ಷಿಕೋತ್ಸವವನ್ನು ಆಚರಿಸುತ್ತಿರುವುದರಿಂದ ಶೃಂಗಸಭೆಯು ಮಹತ್ವ ಪಡೆದುಕೊಂಡಿದೆ. ಸಂಘಟನೆಯ ಎರಡು ದಶಕಗಳ ಚಟುವಟಿಕೆಗಳ ಕುರಿತು ಶೃಂಗಸಭೆ ನಾಯಕರು ಪ್ರಗತಿ ಪರಿಶೀಲನೆ ನಡೆಸಲಿದ್ದಾರೆ ಮತ್ತು ರಾಷ್ಟ್ರಗಳ ಪರಿಸ್ಥಿತಿ ಮತ್ತು ಭವಿಷ್ಯದ ಸಹಕಾರ ಕುರಿತು ಚರ್ಚಿಸಲಿದ್ದಾರೆ. ಪ್ರಾದೇಶಿಕ ಮತ್ತು ಜಾಗತಿಕ ಪ್ರಾಮುಖ್ಯತೆಯ ವಿಷಯಗಳ ಕುರಿತಂತೆಯೂ ಸಭೆಯಲ್ಲಿ ಚರ್ಚೆ ನಡೆಯುವ ನಿರೀಕ್ಷೆಯಿದೆ.

***


(Release ID: 1755442)