ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

"ಮುಂದಿನ ಕೋವಿಡ್ -19 ಅಲೆಗಳಲ್ಲಿ ಮಕ್ಕಳು ಗಂಭೀರವಾಗಿ ಸೋಂಕಿತರಾಗುವರು ಎಂದು ಯಾವುದೇ ವಿವರಗಳು ಇಲ್ಲ"


ಭವಿಷ್ಯದ ಅಲೆಗಳನ್ನು ತಪ್ಪಿಸಲು, ಕೋವಿಡ್ ಸೂಕ್ತ ವರ್ತನೆಯನ್ನು ಕಟ್ಟುನಿಟ್ಟಾಗಿ ಅನುಸರಿಸಿ: ಡಾ. ಗುಲೇರಿಯಾ

Posted On: 08 JUN 2021 5:52PM by PIB Bengaluru

"ಕೋವಿಡ್ -19 ಸಾಂಕ್ರಾಮಿಕದ ಮುಂದಿನ ಅಲೆಗಳು ಮಕ್ಕಳಲ್ಲಿ ತೀವ್ರ ಅನಾರೋಗ್ಯಕ್ಕೆ ಕಾರಣವಾಗುತ್ತವೆ ಎನ್ನುವುದು ತಪ್ಪು ಮಾಹಿತಿಯಾಗಿದೆ.  ಮುಂದಿನ ಅಲೆಗಳಲ್ಲಿ ಮಕ್ಕಳು ಗಂಭೀರವಾಗಿ ಸೋಂಕಿಗೆ ಒಳಗಾಗುತ್ತಾರೆ ಎಂಬುದನ್ನು ತೋರಿಸಲು ಭಾರತದಿಂದ ಅಥವಾ ಜಾಗತಿಕವಾಗಿ ಯಾವುದೇ ವಿವರಗಳು ಇಲ್ಲ.” ಪಿಐಬಿ ದೆಹಲಿಯ ರಾಷ್ಟ್ರೀಯ ಮಾಧ್ಯಮ ಕೇಂದ್ರದಲ್ಲಿ ಇಂದು ನಡೆದ ಕೋವಿಡ್ -19 ಕುರಿತ ಮಾಧ್ಯಮಗೋಷ್ಠಿಯಲ್ಲಿ  ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (ಏಮ್ಸ್) ದೆಹಲಿಯ ನಿರ್ದೇಶಕ ಡಾ.ರಂದೀಪ್ ಗುಲೇರಿಯಾ ವಿಷಯವನ್ನು ತಿಳಿಸಿದ್ದಾರೆ.

ಭಾರತದ ಎರಡನೇ ಅಲೆಯ ಸಂದರ್ಭದಲ್ಲಿ ಸೋಂಕಿಗೆ ಒಳಗಾದ ಮತ್ತು ಆಸ್ಪತ್ರೆಗಳಲ್ಲಿ ದಾಖಲಾದ 60% ರಿಂದ 70% ಮಕ್ಕಳು ಬಹು ಖಾಯಿಲೆಗಳಿದ್ದವರು ಅಥವಾ ಕಡಿಮೆ ರೋಗನಿರೋಧಕ ಶಕ್ತಿಯನ್ನು ಹೊಂದಿದ್ದವರು ಎಂದು ಡಾ. ಗುಲೇರಿಯಾ ಉಲ್ಲೇಖಿಸಿದ್ದಾರೆ; ಆರೋಗ್ಯವಂತ ಮಕ್ಕಳು ಆಸ್ಪತ್ರೆಗೆ ದಾಖಲಾಗದ ಅವಶ್ಯಕತೆಯಿಲ್ಲದೆ ಸೌಮ್ಯ ಕಾಯಿಲೆಯಿಂದ ಚೇತರಿಸಿಕೊಂಡರು.

 

ಭವಿಷ್ಯದ ಅಲೆಗಳನ್ನು ತಡೆಗಟ್ಟುವಲ್ಲಿ ಕೋವಿಡ್ ಸೂಕ್ತ ವರ್ತನೆ ಮುಖ್ಯವಾಗಿದೆ

ಯಾವುದೇ ಸಾಂಕ್ರಾಮಿಕ ರೋಗದಲ್ಲಿ ಅಲೆಗಳು ಏಕೆ ಸಂಭವಿಸುತ್ತವೆ ಎಂದು ಏಮ್ಸ್ ನಿರ್ದೇಶಕರು ವಿವರಿಸಿದರು. ಉಸಿರಾಟದ ವೈರಾಣುಳಿಂದ ಉಂಟಾಗುವ ಸಾಂಕ್ರಾಮಿಕ ರೋಗಗಳಲ್ಲಿ ಅಲೆಗಳು ಸಾಮಾನ್ಯವಾಗಿ ಸಂಭವಿಸುತ್ತವೆ; 1918 ರ ಸ್ಪ್ಯಾನಿಷ್ ಜ್ವರ, ಎಚ್ 1 ಎನ್ 1 (ಹಂದಿ) ಜ್ವರ ಉದಾಹರಣೆಗಳಾಗಿವೆ ಎಂದು ಡಾ. ಗುಲೇರಿಯಾ ಹೇಳಿದರು. "1918 ರ ಎರಡನೇ ಅಲೆ ಸ್ಪ್ಯಾನಿಷ್ ಜ್ವರ ದೊಡ್ಡದಾಗಿತ್ತು, ಅದರ ನಂತರ ಸಣ್ಣ ಮೂರನೇ ಅಲೆ ಇತ್ತು."

 


 

ಮತ್ತು ನಮಗೆ ತಿಳಿದಂತೆ, ಎಸ್ ಆರ್ ಎಸ್-ಸಿಒವಿ-2 ಒಂದು ಉಸಿರಾಟದ ವೈರಸ್.

1.         ಸುಲಭವಾಗಿ ತುತ್ತಾಗುವ ಜನಸಂಖ್ಯೆ ಇರುವಾಗ ಬಹು ಅಲೆಗಳು ಸಂಭವಿಸುತ್ತವೆ

ಜನಸಂಖ್ಯೆಯ ಬಹುಪಾಲು ಭಾಗವು ಸೋಂಕಿನ ವಿರುದ್ಧ ರೋಗನಿರೋಧಕ ಶಕ್ತಿಯನ್ನು ಪಡೆದಾಗ, ವೈರಸ್ ಸ್ಥಳೀಯವಾಗಿ ಪರಿಣಮಿಸುತ್ತದೆ ಮತ್ತು ಸೋಂಕು  ಋತುವಿಗೆ ತಕ್ಕಂತೆ ಆಗುತ್ತದೆ, ಉದಾಹರಣೆಗೆ H1N1 ನಂತೆ ಸಾಮಾನ್ಯವಾಗಿ ಮಾನ್ಸೂನ್ ಅಥವಾ ಚಳಿಗಾಲದಲ್ಲಿ ಹರಡುತ್ತದೆ.

 

2.         ವೈರಸ್ ಬದಲಾವಣೆಯಿಂದಾಗಿ ಅಲೆಗಳು ಸಂಭವಿಸಬಹುದು (ಉದಾಹರಣೆಗೆ ಹೊಸ ರೂಪಾಂತರಗಳು)

ಹೊಸ ರೂಪಾಂತರಗಳು ಹೆಚ್ಚು ಸಾಂಕ್ರಾಮಿಕವಾಗುವುದರಿಂದ, ವೈರಸ್ ಹರಡಲು ಹೆಚ್ಚಿನ ಅವಕಾಶವಿರುತ್ತದೆ.

3.         ಅಲೆಯ ಹಿಂದಿನ ಒಂದು ಕಾರಣವೆಂದರೆ ಮಾನವರ ನಡವಳಿಕೆ

ಡಾ. ಗುಲೇರಿಯಾ ಹೀಗೆ ಎಚ್ಚರಿಸುತ್ತಾರೆ: “ಪ್ರಕರಣಗಳು ಹೆಚ್ಚಾದಾಗ, ಜನರಲ್ಲಿ ಭಯವಿರುತ್ತದೆ ಮತ್ತು ಮಾನವರ ನಡವಳಿಕೆಯು ಬದಲಾಗುತ್ತದೆ. ಜನರು ಕೋವಿಡ್ ಅನ್ನು ಕಟ್ಟುನಿಟ್ಟಾಗಿ ಸೂಕ್ತ ನಡವಳಿಕೆಗಳನ್ನು ಅನುಸರಿಸಿದರೆ ಮತ್ತು ಔಷಧವಿಲ್ಲದ ಕಾರ್ಯಗಳು ವೈರಾಣು (ವೈರಸ್) ಪ್ರಸರಣ ಸರಪಳಿಯನ್ನು ಮುರಿಯಲು ಸಹಾಯ ಮಾಡುತ್ತದೆ.  ಆದರೆ ಅನ್ಲಾಕ್ ಮಾಡುವಾಗ, ಜನರು ಹೆಚ್ಚು ಸೋಂಕು ಸಂಭವಿಸುವುದಿಲ್ಲ ಎಂದು ಭಾವಿಸುತ್ತಾರೆ ಮತ್ತು ಕೋವಿಡ್ ಸೂಕ್ತ ನಡವಳಿಕೆಯನ್ನು ಅನುಸರಿಸುವುದಿಲ್ಲ. ಈ ಕಾರಣದಿಂದಾಗಿ, ವೈರಸ್ ಮತ್ತೆ ಸಮುದಾಯದಲ್ಲಿ ಹರಡಲು ಪ್ರಾರಂಭಿಸುತ್ತದೆ, ಇದು ಮತ್ತೊಂದು ಅಲೆಗೆ ಕಾರಣವಾಗುತ್ತದೆ. ”

ನಾವು ಮುಂದಿನ ಅಲೆಗಳನ್ನು ನಿಲ್ಲಿಸಬೇಕಾದರೆ, ನಮ್ಮ ಜನಸಂಖ್ಯೆಯ ಹೆಚ್ಚಿನ ಭಾಗಕ್ಕೆ ಲಸಿಕೆ ಹಾಕಲಾಗಿದೆ ಅಥವಾ ನೈಸರ್ಗಿಕ ರೋಗನಿರೋಧಕ ಶಕ್ತಿಯನ್ನು ಪಡೆದುಕೊಂಡಿದೆ ಎಂದು ಹೇಳುವವರೆಗೂ ನಾವು ಕೋವಿಡ್ ಸೂಕ್ತ ನಡವಳಿಕೆಯನ್ನು ಕಟ್ಟುನಿಟ್ಟಾಗಿ ಅನುಸರಿಸಬೇಕಾಗಿದೆ ಎಂದು ನಿರ್ದೇಶಕರು ಹೇಳಿದರು. “ಸಾಕಷ್ಟು ಜನರಿಗೆ ಲಸಿಕೆ ಹಾಕಿದಾಗ ಅಥವಾ ಸೋಂಕಿನ ವಿರುದ್ಧ ನಾವು ನೈಸರ್ಗಿಕವಾಗಿ   ರೋಗನಿರೋಧಕ ಶಕ್ತಿಯನ್ನು ಪಡೆದಾಗ, ಈ ಅಲೆಗಳು ನಿಲ್ಲುತ್ತವೆ.  ಕೋವಿಡ್ ಸೂಕ್ತವಾದ ನಡವಳಿಕೆಯನ್ನು ಕಟ್ಟುನಿಟ್ಟಾಗಿ ಅನುಸರಿಸುವುದೊಂದೇ ಮಾರ್ಗವಾಗಿದೆ”.

****



(Release ID: 1725438) Visitor Counter : 354