ಪ್ರಧಾನ ಮಂತ್ರಿಯವರ ಕಛೇರಿ

ಜಿಯಾನಿ ಜೋಗಿಂದರ್ ಸಿಂಗ್ ವೇದಾಂತಿ ಅವರ ನಿಧನಕ್ಕೆ ಪ್ರಧಾನಮಂತ್ರಿ ಸಂತಾಪ

Posted On: 15 MAY 2021 11:45PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಜಿಯಾನಿ ಜೋಗೀಂದರ್ ಸಿಂಗ್ ವೇದಾಂತಿ ಅವರ ನಿಧನಕ್ಕೆ ಶೋಕ ವ್ಯಕ್ತಪಡಿಸಿದ್ದಾರೆ. 
"ಟ್ವೀಟ್ ನಲ್ಲಿ ಪ್ರಧಾನಮಂತ್ರಿಯವರು, "ಜಿಯಾನಿ ಜೋಗೀಂಧರ್ ಸಿಂಗ್ ವೇದಾಂತಿ ಅವರು ವಿನಮ್ರ ಮತ್ತು ವಿದ್ವಾಂಸರಾಗಿದ್ದರು. ಅವರ ಬದುಕು ನಿಸ್ವಾರ್ಥ ಮಾನವ ಸೇವೆಯ ಅಭಿವ್ಯಕ್ತಿಯಾಗಿತ್ತು. ಅವರು ಸಹಾನುಭೂತಿ ಮತ್ತು ಸಾಮರಸ್ಯದ ಸಮಾಜವನ್ನು ರಚಿಸಲು ಶ್ರಮಿಸಿದರು. ಅವರ ನಿಧನದಿಂದ ದುಃಖಿತನಾಗಿದ್ದೇನೆ. ಅವರ ಕುಟುಂಬದವರಿಗೆ ಮತ್ತು ಅಭಿಮಾನಿಗಳಿಗೆ ಸಂತಾಪ ಸೂಚಿಸುತ್ತೇನೆ". ಎಂದು ತಿಳಿಸಿದ್ದಾರೆ.

***

 



(Release ID: 1719123) Visitor Counter : 169