ಪ್ರಧಾನ ಮಂತ್ರಿಯವರ ಕಛೇರಿ

ಓಣಂ ಅಂತರರಾಷ್ಟ್ರೀಯ ಉತ್ಸವವಾಗಿ ಹೊರಹೊಮ್ಮುತ್ತಿದೆ: ಮನ್ ಕಿ ಬಾತ್‌ನಲ್ಲಿ ಪ್ರಧಾನಿ

Posted On: 30 AUG 2020 3:08PM by PIB Bengaluru

ತಮ್ಮ ಇತ್ತೀಚಿನ ಮನ್ ಕಿ ಬಾತ್ ನಲ್ಲಿ ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ಓಣಂ ಹಬ್ಬದ ಬಗ್ಗೆ ಮಾತನಾಡಿದರು. ಚಿಂಗಂ ತಿಂಗಳಲ್ಲಿ ಬರುವ ಹಬ್ಬದ ಅವಧಿಯಲ್ಲಿ ಜನರು ಹೊಸದನ್ನು ಖರೀದಿಸುತ್ತಾರೆ, ಮನೆಗಳನ್ನು ಅಲಂಕರಿಸುತ್ತಾರೆ, ಪೂಕಲಂ ತಯಾರಿಸುತ್ತಾರೆ ಮತ್ತು ಓಣಂ-ಸಾದಿಯಾವನ್ನು ಆನಂದಿಸುತ್ತಾರೆ ಎಂದು ಅವರು ಹೇಳಿದರು.

ಓಣಂ ಹೆಚ್ಚು ಹೆಚ್ಚು ವಿದೇಶಗಳಿಗೆ ತಲುಪಿರುವುದರಿಂದ ಈಗ ಅಂತರರಾಷ್ಟ್ರೀಯ ಉತ್ಸವವಾಗಿ ಹೊರಹೊಮ್ಮುತ್ತಿದೆ ಎಂದು ಪ್ರಧಾನಿ ಹೇಳಿದರು.

ಓಣಂ ಕೃಷಿಗೆ ಸಂಬಂಧಿಸಿರುವ ಹಬ್ಬವಾಗಿದ್ದು, ಗ್ರಾಮೀಣ ಆರ್ಥಿಕತೆಗೆ ಹೊಸ ಆರಂಭದ ಸಮಯವಾಗಿದೆ ಎಂದು ಹೇಳಿದರು. ಸಮಾಜವು ರೈತರ ಶ್ರಮದಿಂದ ಪೌಷ್ಠಿಕ ಆಹಾರವನ್ನು ಪಡೆಯುತ್ತದೆ. ನಮ್ಮ ಆಹಾರ ಪೂರೈಕೆದಾರರಾದ ಅನ್ನದಾತನಿಗೆ ವೇದಗಳ ಕಾಲದಿಂದಲೂ ಪ್ರಶಂಸೆ ಮಾಡಲಾಗಿದೆ ಎಂದು ಸ್ಮರಿಸಿಕೊಂಡರು. ಕೊರೊನಾದಂತಹ ಸಂಕಷ್ಟದ ಕಾಲದಲ್ಲಿಯೂ ಸಹ, ನಮ್ಮ ರೈತರು ಹೆಚ್ಚು ಬಿತ್ತನೆ ಮಾಡುವ ಮೂಲಕ ತಮ್ಮ ದೃಢತೆಯನ್ನು ಸಾಬೀತು ಮಾಡಿದ್ದಾರೆ. ಅವರ ಪರಿಶ್ರಮಕ್ಕೆ ನನ್ನ ನಮನ ಎಂದು ಪ್ರಧಾನಿ ಹೇಳಿದರು.

***


(Release ID: 1649823)