ಹಣಕಾಸು ಸಚಿವಾಲಯ

ಆರು ವರ್ಷಗಳ ಯಶಸ್ವಿ ಅನುಷ್ಠಾನವನ್ನು ಪೂರ್ಣಗೊಳಿಸಿದ ಪ್ರಧಾನ ಮಂತ್ರಿ ಜನಧನ್ ಯೋಜನೆ (ಪಿಎಂಜೆಡಿವೈ) - ಹಣಕಾಸು ಸೇರ್ಪಡೆಗಾಗಿ ರಾಷ್ಟ್ರೀಯ ಅಭಿಯಾನ

ಮೋದಿ ಸರ್ಕಾರದ ಜನ ಕೇಂದ್ರಿತ ಆರ್ಥಿಕ ಉಪಕ್ರಮಗಳಿಗೆ ಪಿಎಂಜೆಡಿವೈ ಅಡಿಪಾಯವಾಗಿದೆ - ಹಣಕಾಸು ಸಚಿವರು
ಪಿಎಂಜೆಡಿವೈ ಯೋಜನೆ ಆರಂಭವಾದಾಗಿನಿಂದ 40.35 ಕೋಟಿಗೂ ಹೆಚ್ಚು ಫಲಾನುಭವಿಗಳು 1.31 ಲಕ್ಷ ಕೋಟಿ ರೂ. ಠೇವಣಿಯೊಂದಿಗೆ ಬ್ಯಾಂಕಿಂಗ್ ವ್ಯವಸ್ಥೆಗೆ ಸೇರ್ಪಡೆಯಾಗಿದ್ದಾರೆ
ಶೇ.63.6 ಗ್ರಾಮೀಣ ಪಿಎಂಜೆಡಿವೈ ಖಾತೆಗಳು; ಶೇ.55.2 ಮಹಿಳಾ ಪಿಎಂಜೆಡಿವೈ ಖಾತೆಗಳು
ಪಿಎಂ ಗರೀಬ್ ಕಲ್ಯಾಣ್ ಯೋಜನೆ ಅಡಿಯಲ್ಲಿ 2020 ರ ಏಪ್ರಿಲ್-ಜೂನ್ ಅವಧಿಯಲ್ಲಿ ಮಹಿಳಾ ಪಿಎಂಜೆಡಿವೈ ಖಾತೆದಾರರಿಗೆ ಒಟ್ಟು 30,705 ಕೋಟಿ ರೂ.ಜಮೆ ಮಾಡಲಾಗಿದೆ
ಸುಮಾರು 8 ಕೋಟಿ ಪಿಎಂಜೆಡಿವೈ ಖಾತೆದಾರರು ಸರ್ಕಾರದ ವಿವಿಧ ಯೋಜನೆಗಳ ನೇರ ಸವಲತ್ತು ವರ್ಗಾವಣೆಯನ್ನು (ಡಿಬಿಟಿ) ಪಡೆಯುತ್ತಿದ್ದಾರೆ

Posted On: 28 AUG 2020 7:27AM by PIB Bengaluru

ನವದೆಹಲಿ ಆಗಸ್ಟ್ 28, : ದುರ್ಬಲ ಮತ್ತು ಸಾಮಾಜಿಕ-ಆರ್ಥಿಕವಾಗಿ ನಿರ್ಲಕ್ಷಿಸಲ್ಪಟ್ಟ ವರ್ಗಗಳಿಗೆ ಹಣಕಾಸಿನ ಒಳಗೊಳ್ಳುವಿಕೆ ಮತ್ತು ಬೆಂಬಲವನ್ನು ಒದಗಿಸಲು ಹಣಕಾಸು ಸಚಿವಾಲಯವು ಬದ್ಧವಾಗಿದೆ. ಹಣಕಾಸು ಸೇರ್ಪಡೆ ಸರ್ಕಾರದ ರಾಷ್ಟ್ರೀಯ ಆದ್ಯತೆಯಾಗಿದ್ದು, ಅದು ಸಮಗ್ರ ಬೆಳವಣಿಗೆಗೆ ಅನುವು ಮಾಡಿಕೊಡುತ್ತದೆ. ಇದು ಬಡವರು ತಮ್ಮ ಉಳಿತಾಯವನ್ನು ಔಪಚಾರಿಕ ಹಣಕಾಸು ವ್ಯವಸ್ಥೆಯಡಿ ತರಲು ದಾರಿ ತೋರಿಸುತ್ತದೆ. ಇದು ಹಳ್ಳಿಗಳಲ್ಲಿರುವ ಅವರ ಕುಟುಂಬಗಳಿಗೆ ಹಣವನ್ನು ರವಾನಿಸುವ ಒಂದು ಮಾರ್ಗವಾಗಿದೆ ಮತ್ತು ಲೇವಾದೇವಿದಾರರ ಹಿಡಿತದಿಂದ ಅವರನ್ನು ಮುಕ್ತಗೊಳಿಸುತ್ತದೆ. ಸರ್ಕಾರದ ಬದ್ಧತೆಯ ಪ್ರಮುಖ ಉಪಕ್ರಮವೆಂದರೆ ಪ್ರಧಾನ ಮಂತ್ರಿ ಜನಧನ್ ಯೋಜನೆ (ಪಿಎಂಜೆಡಿವೈ), ಇದು ವಿಶ್ವದ ಅತಿದೊಡ್ಡ ಆರ್ಥಿಕ ಸೇರ್ಪಡೆ ಉಪಕ್ರಮಗಳಲ್ಲಿ ಒಂದಾಗಿದೆ.

 

ಪ್ರಧಾನ ಮಂತ್ರಿ ಜನಧನ್ ಯೋಜನೆಯನ್ನು ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು 2014 ಆಗಸ್ಟ್ 15 ರಂದು ತಮ್ಮ ಸ್ವಾತಂತ್ರ್ಯ ದಿನದ ಭಾಷಣದಲ್ಲಿ ಘೋಷಿಸಿದರು. ಆಗಸ್ಟ್ 28 ರಂದು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಸಂದರ್ಭವು ದುರಾಚಾರದ ಸುಳಿಯಿಂದ ಬಡವರ ವಿಮೋಚನೆಯನ್ನು ಆಚರಿಸುವ ಹಬ್ಬವೆಂದು ಬಣ್ಣಿಸಿದ್ದರು.

 

ಪಿಎಂಜೆಡಿವೈ 6 ನೇ ವಾರ್ಷಿಕೋತ್ಸವದಂದು ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್ ಯೋಜನೆಯ ಮಹತ್ವವನ್ನು ಪುನರುಚ್ಚರಿಸಿದರು ಪ್ರಧಾನ ಮಂತ್ರಿ ಜನ ಧನ್ ಯೋಜನೆಯು, ಮೋದಿ ಸರ್ಕಾರದ ಜನ ಕೇಂದ್ರಿತ ಆರ್ಥಿಕ ಉಪಕ್ರಮಗಳಿಗೆ ಅಡಿಪಾಯವಾಗಿದೆ. ಅದು ನೇರ ಸವಲತ್ತು ವರ್ಗಾವಣೆ ಇರಲಿ, ಕೋವಿಡ್-19 ಹಣಕಾಸು ನೆರವು, ಪಿಎಂ-ಕಿಸಾನ್, ಎಂ.ಜಿ.ಎನ್.ಆರ್.ಜಿ. ಅಡಿಯಲ್ಲಿ ಕೂಲಿಯ ಹೆಚ್ಚಳ, ಜೀವ ಮತ್ತು ಆರೋಗ್ಯ ವಿಮಾ ರಕ್ಷಣೆಯೇ ಆಗಲಿ, ಮೊದಲ ಹೆಜ್ಜೆಯಾಗಿ ಪ್ರತಿಯೊಬ್ಬ ವಯಸ್ಕರಿಗೂ ಬ್ಯಾಂಕ್ ಖಾತೆಯನ್ನು ಒದಗಿಸುವುದು, ಇದನ್ನು ಪಿಎಂಜೆಡಿವೈ ಬಹುತೇಕ ಪೂರ್ಣಗೊಳಿಸಿದೆ. ಎಂದು ಅವರು ಹೇಳಿದರು.

 

ಸಂದರ್ಭದಲ್ಲಿ ಮಾತನಾಡಿದ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ರಾಜ್ಯ ಸಚಿವ ಶ್ರೀ ಅನುರಾಗ್ ಠಾಕೂರ್ ಯೋಜನೆಯ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು. "ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ, ಪಿಎಂಜೆಡಿವೈ ಬ್ಯಾಂಕಿಂಗ್ ವ್ಯವಸ್ಥೆಯಿಂದ ಹೊರಗಿದ್ದವರನ್ನು ವ್ಯವಸ್ಥೆಗೆ ತಂದಿದೆ, ಭಾರತದ ಆರ್ಥಿಕ ವ್ಯಾಪ್ತಿಯನ್ನು ವಿಸ್ತರಿಸಿದೆ ಮತ್ತು 40 ಕೋಟಿ ಖಾತೆದಾರರಿಗೆ ಆರ್ಥಿಕ ಸೇರ್ಪಡೆ ತಂದಿದೆ. ಫಲಾನುಭವಿಗಳಲ್ಲಿ ಹೆಚ್ಚಿನವರು ಮಹಿಳೆಯರು ಮತ್ತು ಬಹುತೇಕ ಖಾತೆಗಳು ಗ್ರಾಮೀಣ ಭಾರತದವು. ಇಂದಿನ ಕೋವಿಡ್-19 ಸಾಂಕ್ರಾಮಿಕದ ಸಂದರ್ಭದಲ್ಲಿ, ನೇರ ಸವಲತ್ತು ವರ್ಗಾವಣೆಯ ಮೂಲಕ ಸಮಾಜದ ದುರ್ಬಲ ವರ್ಗಗಳಿಗೆ ಆರ್ಥಿಕ ಭದ್ರತೆಯನ್ನು ಒದಗಿಸಲು ಗಮನಾರ್ಹವಾದ ವೇಗ ಮತ್ತು ತಡೆರಹಿತ ಪ್ರಕ್ರಿಯೆಗೆ ನಾವು ಸಾಕ್ಷಿಯಾಗಿದ್ದೇವೆ. ಪ್ರಮುಖ ಅಂಶವೆಂದರೆ ಪಿಎಂ ಜನ ಧನ್ ಖಾತೆಗಳ ಮೂಲಕ ನೇರ ಸವಲತ್ತು ವರ್ಗಾವಣೆಯ ಪ್ರತಿ ರೂಪಾಯಿಯೂ ಉದ್ದೇಶಿತ ಫಲಾನುಭವಿಗೆ ತಲುಪುವುದು ಖಾತ್ರಿಯಾಗಿದೆ ಮತ್ತು ವ್ಯವಸ್ಥಿತ ಸೋರಿಕೆಯನ್ನು ತಡೆಗಟ್ಟಿದೆ ಎಂದು ಅವರು ಹೇಳಿದರು.

ಯಶಸ್ವಿ ಅನುಷ್ಠಾನದ 6 ವರ್ಷಗಳನ್ನು ಪೂರ್ಣಗೊಳಿಸಿರುವ ಯೋಜನೆಯ ಪ್ರಮುಖ ಅಂಶಗಳು ಮತ್ತು ಸಾಧನೆಗಳನ್ನು ನೋಡೋಣ.

ಹಿನ್ನೆಲೆ

ಪ್ರಧಾನ ಮಂತ್ರಿ ಜನಧನ್ ಯೋಜನೆ (ಪಿಎಂಜೆಡಿವೈ) ಹಣಕಾಸು ಸೇವೆಗಳಾದ ಬ್ಯಾಂಕಿಂಗ್ / ಉಳಿತಾಯ ಮತ್ತು ಠೇವಣಿ ಖಾತೆಗಳು, ರವಾನೆ, ಸಾಲ, ವಿಮೆ, ಪಿಂಚಣಿಗಳಿಗೆ ಕೈಗೆಟುಕುವ ವೆಚ್ಚದಲ್ಲಿ ಪ್ರವೇಶವನ್ನು ಖಚಿತಪಡಿಸಿಕೊಳ್ಳಲು ಇರುವ ಹಣಕಾಸು ಸೇರ್ಪಡೆಗಾಗಿನ ರಾಷ್ಟ್ರೀಯ ಅಭಿಯಾನ,

1. ಉದ್ದೇಶಗಳು:

ಕೈಗೆಟುಕುವ ವೆಚ್ಚದಲ್ಲಿ ಹಣಕಾಸು ಉತ್ಪನ್ನಗಳು ಮತ್ತು ಸೇವೆಗಳ ಪ್ರವೇಶವನ್ನು ಖಚಿತಪಡಿಸಿಕೊಳ್ಳುವುದು

ವೆಚ್ಚವನ್ನು ತಗ್ಗಿಸಲು ಮತ್ತು ವ್ಯಾಪ್ತಿಯನ್ನು ವಿಸ್ತರಿಸಲು ತಂತ್ರಜ್ಞಾನದ ಬಳಕೆ

2. ಯೋಜನೆಯ ಮೂಲ ತತ್ವಗಳು

ಎಲ್ಲರಿಗೂ ಬ್ಯಾಂಕಿಂಗ್ ವ್ಯವಸ್ಥೆ- ಕೆವೈಸಿ, -ಕೆವೈಸಿಯಲ್ಲಿ ವಿನಾಯ್ತಿ ನೀಡಿ, ಶಿಬಿರಗಳ ಮಾದರಿಯಲ್ಲಿ, ಶೂನ್ಯ ಬಾಕಿ ಮತ್ತು ಶೂನ್ಯ ಶುಲ್ಕಗಳೊಂದಿಗೆ ಕನಿಷ್ಠ ಠೇವಣಿಯೊಂದಿಗೆ ಮೂಲ ಉಳಿತಾಯ ಬ್ಯಾಂಕ್ (ಬಿಎಸ್ಬಿಡಿ) ಖಾತೆಯನ್ನು ತೆರೆಯುವುದು.

ಎಲ್ಲರಿಗೂ ಸುರಕ್ಷೆ - ನಗದು ಹಿಂಪಡೆಯಲು ಮತ್ತು ವ್ಯಾಪಾರಿ ಸ್ಥಳಗಳಲ್ಲಿ ಪಾವತಿಸಲು, 2 ಲಕ್ಷ ರೂ.ಗಳ ಉಚಿತ ಅಪಘಾತ ವಿಮಾ ರಕ್ಷಣೆಯೊಂದಿಗೆ ಸುರಕ್ಷಿತ ಡೆಬಿಟ್ ಕಾರ್ಡ್ ಗಳನ್ನುನೀಡುವುದು.

ಹಣವಿಲ್ಲದವರಿಗೆ ಹಣಕಾಸು ಒದಗಿಸುವುದು - ಸಣ್ಣ-ವಿಮೆ, ಬಳಕೆಗಾಗಿ ಓವರ್ ಡ್ರಾಫ್ಟ್, ಸಣ್ಣ-ಪಿಂಚಣಿ ಮತ್ತು ಸಣ್ಣ-ಸಾಲಗಳಂತಹ ಇತರ ಹಣಕಾಸು ಉತ್ಪನ್ನಗಳು.

3. ಆರಂಭಿಕ ಲಕ್ಷಣಗಳು

ಕೆಳಗಿನ 6 ಸ್ತಂಭಗಳ ಆಧಾರದ ಮೇಲೆ ಯೋಜನೆಯನ್ನು ಪ್ರಾರಂಭಿಸಲಾಗಿದೆ:

ಬ್ಯಾಂಕಿಂಗ್ ಸೇವೆಗಳಿಗೆ ಸಾರ್ವತ್ರಿಕ ಪ್ರವೇಶ - ಶಾಖೆ

ಪ್ರತಿ ಕುಟುಂಬಕ್ಕೆ 10,000 ರೂ. ಓವರ್ ಡ್ರಾಫ್ಟ್, ಸೌಲಭ್ಯ ಹೊಂದಿರುವ ಮೂಲ ಉಳಿತಾಯ ಬ್ಯಾಂಕ್ ಖಾತೆ.

ಹಣಕಾಸು ಸಾಕ್ಷರತಾ ಕಾರ್ಯಕ್ರಮ- ಉಳಿತಾಯವನ್ನು ಉತ್ತೇಜಿಸುವುದು, ಎಟಿಎಂಗಳ ಬಳಕೆ, ಸಾಲಕ್ಕೆ ಸಿದ್ಧವಾಗುವುದು, ವಿಮೆ ಮತ್ತು ಪಿಂಚಣಿಗಳನ್ನು ಪಡೆಯುವುದು, ಬ್ಯಾಂಕಿಂಗ್ ಸೇವೆಗಳಿಗಾಗಿ ಮೂಲ ಮೊಬೈಲ್ ಫೋನ್ ಗಳನ್ನು ಬಳಸುವುದು.

ಸಾಲ ಖಾತ್ರಿ ನಿಧಿ ರಚನೆ ಡೀಫಾಲ್ಟ್ ರ್ ಗಳ ವಿರುದ್ಧ ಬ್ಯಾಂಕುಗಳಿಗೆ ಖಾತ್ರಿ ನೀಡಲು

ವಿಮೆ - ಆಗಸ್ಟ್ 2014 ರಿಂದ 31 ಜನವರಿ 2015 ರವರೆಗೆ ತೆರೆಯಲಾದ ಖಾತೆಗಳಿಗೆ ಅಪಘಾತ 1,00,000 ರೂ.ಗಳ ಅಪಘಾತ ಮತ್ತು 30,000 ಲೈಫ್ ಕವರ್ ವಿಮೆ.

ಅಸಂಘಟಿತ ವಲಯಕ್ಕೆ ಪಿಂಚಣಿ ಯೋಜನೆ

4. ಹಿಂದಿನ ಅನುಭವದ ಆಧಾರದ ಮೇಲೆ ಪಿಎಂಜೆಡಿವೈನಲ್ಲಿ ಅಳವಡಿಸಿಕೊಂಡಿರುವ ಪ್ರಮುಖ ವಿಧಾನ:

ತೆರೆಯಲಾದ ಖಾತೆಗಳು ಬ್ಯಾಂಕುಗಳ ಕೋರ್ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಆನ್ಲೈನ್ ಖಾತೆಗಳಾಗಿರುತ್ತವೆ

ರುಪೇ ಡೆಬಿಟ್ ಕಾರ್ಡ್ ಅಥವಾ ಆಧಾರ್ ಆಧಾರಿತ ಪಾವತಿ ವ್ಯವಸ್ಥೆ (ಎಇಪಿಎಸ್) ಮೂಲಕ ಅಂತರ್-ಕಾರ್ಯಾವಿಧಾನ

ಸ್ಥಿರ-ಬಿಂದು ವ್ಯವಹಾರಗಳು

ತೊಡಕಿನ ಕೆವೈಸಿ ಬದಲಿಗೆ ಸರಳೀಕೃತ ಕೆವೈಸಿ/-ಕೆವೈಸಿ

5. ಹೊಸ ವೈಶಿಷ್ಟ್ಯಗಳೊಂದಿಗೆ ಪಿಎಂಜೆಡಿವೈ ವಿಸ್ತರಣೆ

ಕೆಲವು ಮಾರ್ಪಾಡುಗಳೊಂದಿಗೆ ಸಮಗ್ರ ಪಿಎಂಜೆಡಿವೈ ಕಾರ್ಯಕ್ರಮವನ್ನು 28.8.2018 ನಿಂದಾಚೆಗೂ ವಿಸ್ತರಿಸಲು ಸರ್ಕಾರ ನಿರ್ಧರಿಸಿದೆ

ಪ್ರತಿ ಕುಟುಂಬ ಬದಲು ಬ್ಯಾಂಕ್ ಖಾತೆಯಿಲ್ಲದ ಪ್ರತಿ ವಯಸ್ಕರಿಗೆ ಗಮನ ಬದಲು

ರುಪೇ ಕಾರ್ಡ್ ವಿಮೆ - ರುಪೇ ಕಾರ್ಡ್ ಗಳಲ್ಲಿ ಉಚಿತ ಅಪಘಾತ ವಿಮಾ ರಕ್ಷಣೆಯನ್ನು ರೂ. 1 ಲಕ್ಷದಿಂದ 28.8.2018 ನಂತರ ತೆರೆಯಲಾದ ಪಿಎಂಜೆಡಿವೈ ಖಾತೆಗಳಿಗೆ 2 ಲಕ್ಷ ರೂ.ಗೆ ಹೆಚ್ಚಳ

ಓವರ್ ಡ್ರಾಫ್ಟ್, ಸೌಲಭ್ಯಗಳಲ್ಲಿ ಹೆಚ್ಚಳ

ಓವರ್ ಡ್ರಾಫ್ಟ್, ಮಿತಿ 5,000 ರೂ.ಗಳಿಂದ 10,000 ರೂ.ಗಳಿಗೆ ದ್ವಿಗುಣಗೊಂಡಿದೆ; 2,000 ರೂ.ಗಳವರೆಗೆ ಷರತ್ತುಗಳಿಲ್ಲದೆ ಓವರ್ ಡ್ರಾಫ್ಟ್,

ಓವರ್ ಡ್ರಾಫ್ಟ್, ಗಾಗಿ ಗರಿಷ್ಠ ವಯೋಮಿತಿ 60 ರಿಂದ 65 ವರ್ಷಕ್ಕೆ ಹೆಚ್ಚಳ

6. ಪಿಎಂಜೆಡಿವೈ ಸಾಧನೆಗಳು- 19 ಆಗಸ್ಟ್ 2020 ರವರೆಗೆ:

) ಪಿಎಂಜೆಡಿವೈ ಖಾತೆಗಳು

19 ಆಗಸ್ಟ್ 2020 ಹೊತ್ತಿಗೆ ಒಟ್ಟು ಪಿಎಂಜೆಡಿವೈ ಖಾತೆಗಳ ಸಂಖ್ಯೆ: 40.35 ಕೋಟಿ; ಗ್ರಾಮೀಣ ಪಿಎಂಜೆಡಿವೈ ಖಾತೆಗಳು: ಶೇ. 63.6, ಮಹಿಳಾ ಪಿಎಂಜೆಡಿವೈ ಖಾತೆಗಳು: ಶೇ.55.2

ಯೋಜನೆಯ ಮೊದಲ ವರ್ಷದಲ್ಲಿ 17.90 ಕೋಟಿ ಪಿಎಂಜೆಡಿವೈ ಖಾತೆಗಳನ್ನು ತೆರೆಯಲಾಯಿತು

ಪಿಎಂಜೆಡಿವೈ ಅಡಿಯಲ್ಲಿ ತೆರೆಯಲಾದ ಖಾತೆಗಳ ಸಂಖ್ಯೆಯಲ್ಲಿ ನಿರಂತರ ಹೆಚ್ಚಳ

 

ಬಿ) ಸಕ್ರಿಯ ಪಿಎಂಜೆಡಿವೈ ಖಾತೆಗಳು

ಅಸ್ತಿತ್ವದಲ್ಲಿರುವ ಆರ್ಬಿಐ ಮಾರ್ಗಸೂಚಿಗಳ ಪ್ರಕಾರ, ಎರಡು ವರ್ಷಗಳ ಅವಧಿಯಲ್ಲಿ ಖಾತೆಯಲ್ಲಿ ಗ್ರಾಹಕ ಪ್ರೇರಿತ ವಹಿವಾಟುಗಳು ಇಲ್ಲದಿದ್ದರೆ ಪಿಎಂಜೆಡಿವೈ ಖಾತೆಯನ್ನು ನಿಷ್ಕ್ರಿಯವೆಂದು ಪರಿಗಣಿಸಲಾಗುತ್ತದೆ.

ಆಗಸ್ಟ್ 2020 ರಲ್ಲಿ, ಒಟ್ಟು 40.35 ಕೋಟಿ ಪಿಎಂಜೆಡಿವೈ ಖಾತೆಗಳಲ್ಲಿ, 34.81 ಕೋಟಿ (ಶೇ.86.3) ಕಾರ್ಯನಿರ್ವಹಿಸುತ್ತಿವೆ

ಸಕ್ರಿಯ ಖಾತೆಗಳ ಶೇಕಡವಾರು ಹೆಚ್ಚಳವು ಖಾತೆಗಳನ್ನು ಗ್ರಾಹಕರು ನಿಯಮಿತವಾಗಿ ಬಳಸುತ್ತಿದ್ದಾರೆ ಎಂಬುದರ ಸೂಚನೆಯಾಗಿದೆ

ಸಿ) ಪಿಎಂಜೆಡಿವೈ ಖಾತೆಗಳ ಅಡಿಯಲ್ಲಿ ಠೇವಣಿ

   

 

ಪಿಎಂಜೆಡಿವೈ ಖಾತೆಗಳ ಅಡಿಯಲ್ಲಿ ಒಟ್ಟು ಠೇವಣಿ 1.31 ಲಕ್ಷ ಕೋಟಿ ರೂ

2.3 ಪಟ್ಟು ಖಾತೆಗಳ ಹೆಚ್ಚಳದೊಂದಿಗೆ ಸುಮಾರು 5.7 ಪಟ್ಟು ಠೇವಣಿಗಳು ಹೆಚ್ಚಾಗಿವೆ (ಆಗಸ್ಟ್ 20 / ಆಗಸ್ಟ್ 15)

ಡಿ) ಪ್ರತಿ ಪಿಎಂಜೆಡಿವೈ ಖಾತೆ ಸರಾಸರಿ ಠೇವಣಿ

ಪ್ರತಿ ಖಾತೆಯಲ್ಲಿ ಸರಾಸರಿ ಠೇವಣಿ ರೂ. 3239

ಆಗಸ್ಟ್ 15 ರಿಂದೀಚೆಗೆ ಪ್ರತಿ ಖಾತೆಯ ಸರಾಸರಿ ಠೇವಣಿ 2.5 ಪಟ್ಟು ಹೆಚ್ಚಾಗಿದೆ

ಸರಾಸರಿ ಠೇವಣಿ ಹೆಚ್ಚಳವು ಖಾತೆಗಳ ಹೆಚ್ಚಿನ ಬಳಕೆ ಮತ್ತು ಖಾತೆದಾರರ ಉಳಿತಾಯದ ಅಭ್ಯಾಸದ ಸೂಚನೆಯಾಗಿದೆ

) ಪಿಎಂಜೆಡಿವೈ ಖಾತೆದಾರರಿಗೆ ರುಪೆ ಕಾರ್ಡ್

 

ಪಿಎಂಜೆಡಿವೈ ಖಾತೆದಾರರಿಗೆ ನೀಡಲಾದ ಒಟ್ಟು ರುಪೇ ಕಾರ್ಡ್ ಗಳು: 29.75 ಕೋಟಿ

ರುಪೇ ಕಾರ್ಡ್ ಗಳ ಸಂಖ್ಯೆ ಮತ್ತು ಅವುಗಳ ಬಳಕೆ ನಿರಂತರವಾಗಿ ಹೆಚ್ಚಾಗಿದೆ

7. ಜನಧನ್ ದರ್ಶಕ್ ಅಪ್ಲಿಕೇಶನ್

ದೇಶದಲ್ಲಿ ಬ್ಯಾಂಕ್ ಶಾಖೆಗಳು, ಎಟಿಎಂಗಳು, ಬ್ಯಾಂಕ್ ಮಿತ್ರಗಳು, ಅಂಚೆ ಕಚೇರಿಗಳಂತಹ ಬ್ಯಾಂಕಿಂಗ್ ಸೇವಾ ಕೇಂದ್ರಗಳನ್ನು ಪತ್ತೆ ಹಚ್ಚಲು ನಾಗರಿಕ ಕೇಂದ್ರಿತ ವೇದಿಕೆಯನ್ನು ಒದಗಿಸಲು ಮೊಬೈಲ್ ಅಪ್ಲಿಕೇಶನ್ ಅನ್ನು ಪ್ರಾರಂಭಿಸಲಾಯಿತು. ಜಿಐಎಸ್ ಅಪ್ಲಿಕೇಶನ್ನಲ್ಲಿ 8 ಲಕ್ಷಕ್ಕೂ ಹೆಚ್ಚು ಬ್ಯಾಂಕಿಂಗ್ ಸೇವಾಕೇಂದ್ರಗಳನ್ನು ಮ್ಯಾಪ್ ಮಾಡಲಾಗಿದೆ. ಸಾಮಾನ್ಯ ಜನರ ಅಗತ್ಯತೆ ಮತ್ತು ಅನುಕೂಲಕ್ಕೆ ಅನುಗುಣವಾಗಿ ಜನ ಧನ್ ದರ್ಶಕ್ ಆ್ಯಪ್ ಅಡಿಯಲ್ಲಿ ಸೌಲಭ್ಯಗಳನ್ನು ಪಡೆಯಬಹುದು. ಅಪ್ಲಿಕೇಶನ್ನ ವೆಬ್ ಆವೃತ್ತಿಗೆ http://findmybank.gov.in ಲಿಂಕ್ ಮೂಲಕ ಪ್ರವೇಶಿಸಬಹುದು.

5 ಕಿ.ಮೀ ವ್ಯಾಪ್ತಿಯಲ್ಲಿ ಬ್ಯಾಂಕಿಂಗ್ ಸೇವಾ ಕೇಂದ್ರಗಳ ಸೇವೆ ಇಲ್ಲದ ಗ್ರಾಮಗಳನ್ನು ಗುರುತಿಸಲು ಅಪ್ಲಿಕೇಶನ್ ಅನ್ನು ಬಳಸಲಾಗುತ್ತಿದೆ. ಗುರುತಿಸಲ್ಪಟ್ಟ ಹಳ್ಳಿಗಳನ್ನು ಬ್ಯಾಂಕಿಂಗ್ ಮಳಿಗೆಗಳನ್ನು ತೆರೆಯಲು ಸಂಬಂಧಪಟ್ಟ ಎಸ್.ಎಲ್.ಬಿ.ಸಿ.ಗಳು ವಿವಿಧ ಬ್ಯಾಂಕ್ ಗಳಿಗೆ ಹಂಚಲಾಗುತ್ತದೆ. ಪ್ರಯತ್ನಗಳು ಅಂತಹ ಸೇವೆಗಳಿಲ್ಲದ ಗ್ರಾಮಗಳ ಸಂಖ್ಯೆಯಲ್ಲಿ ಗಮನಾರ್ಹ ಇಳಿಕೆಗೆ ಕಾರಣವಾಗಿವೆ.

8. ಪಿಎಂಜೆಡಿವೈ ಮಹಿಳಾ ಫಲಾನುಭವಿಗಳಿಗಾಗಿ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಪ್ಯಾಕೇಜ್ (ಪಿಎಂಜಿಕೆಪಿ)

ಮಾನ್ಯ ಹಣಕಾಸು ಸಚಿವರು 26.3.2020 ರಂದು ಪಿಎಂ ಗರೀಬ್ ಕಲ್ಯಾಣ್ ಯೋಜನೆ ಅಡಿಯಲ್ಲಿ ಮಾಡಿದ ಪ್ರಕಟಣೆಯಂತೆ, ಪ್ರಧಾನ್ ಮಂತ್ರಿ ಧನ್ ಯೋಜನೆ (ಪಿಎಂಜೆಡಿವೈ) ಅಡಿಯಲ್ಲಿ ಮೂರು ತಿಂಗಳವರೆಗೆ (ಏಪ್ರಿಲ್ 20 ರಿಂದ ಜೂನ್ 20) ತಿಂಗಳಿಗೆ 500 ರೂ.ಗಳನ್ನು ಮಹಿಳಾ ಖಾತೆದಾರರ ಖಾತೆಗಳಿಗೆ ಜಮಾ ಮಾಡಲಾಗಿದೆ. 2020 ಏಪ್ರಿಲ್-ಜೂನ್ ಅವಧಿಯಲ್ಲಿ ಮಹಿಳಾ ಪಿಎಂಜೆಡಿವೈ ಖಾತೆದಾರರ ಖಾತೆಗಳಲ್ಲಿ ಒಟ್ಟು 30,705 ಕೋಟಿ ರೂ.ಗಳನ್ನು ಜಮಾ ಮಾಡಲಾಗಿದೆ.

ನೇರ ಸವಲತ್ತು ವರ್ಗಾವಣೆಯ ಸುಗಮ ವಹಿವಾಟುಗಳ ಖಾತ್ರಿ:

ಬ್ಯಾಂಕುಗಳು ತಿಳಿಸಿರುವಂತೆ, ಸುಮಾರು 8 ಕೋಟಿ ಪಿಎಂಜೆಡಿವೈ ಖಾತೆದಾರರು ವಿವಿಧ ಯೋಜನೆಗಳ ಅಡಿಯಲ್ಲಿ ಸರ್ಕಾರದ ನೇರ ಸವಲತ್ತು ವರ್ಗಾವಣೆಯನ್ನು (ಡಿಬಿಟಿ) ಪಡೆಯುತ್ತಿದ್ದಾರೆ. ಅರ್ಹ ಫಲಾನುಭವಿಗಳು ತಮ್ಮ ಡಿಬಿಟಿಯನ್ನು ಸಮಯಕ್ಕೆ ಸರಿಯಾಗಿ ಪಡೆದುಕೊಳ್ಳುತ್ತಿರುವುದನ್ನು ಖಚಿತಪಡಿಸಿಕೊಳ್ಳಲು, ಡಿಬಿಟಿ ಮಿಷನ್, ಎನ್ಪಿಸಿಐ, ಬ್ಯಾಂಕುಗಳು ಮತ್ತು ಇತರ ಹಲವಾರು ಸಚಿವಾಲಯಗಳೊಂದಿಗೆ ಸಮಾಲೋಚಿಸಿ ತಪ್ಪಿಸಬಹುದಾದ ಡಿಬಿಟಿ ವೈಫಲ್ಯಗಳನ್ನು ಗುರುತಿಸುವಲ್ಲಿ ಇಲಾಖೆಯು ಸಕ್ರಿಯ ಪಾತ್ರ ವಹಿಸಿದೆ. ಬ್ಯಾಂಕುಗಳು ಮತ್ತು ಎನ್ಪಿಸಿಐನೊಂದಿಗಿನ ನಿಯಮಿತ ವಿಡಿಯೋ ಕಾನ್ಫರೆನ್ಸ್ ಮೂಲಕ ವಿಷಯದಲ್ಲಿ ನಿಕಟ ಮೇಲ್ವಿಚಾರಣೆ ನಡೆಸಲಾಗಿದೆ. ಇದರಿಂದಾಗಿ ತಪ್ಪಿಸಬಹುದಾದ ಕಾರಣಗಳ ಡಿಬಿಟಿ ವೈಫಲ್ಯದ ಸಂಖ್ಯೆಯು ಏಪ್ರಿಲ್ 19 ರಲ್ಲಿದ್ದ 5.23 ಲಕ್ಷ (ಶೇ.0.20) ದಿಂದ ಜೂನ್ 20 ರಲ್ಲಿ 1.1 ಲಕ್ಷಕ್ಕೆ (ಶೇ.0.04) ತಗ್ಗಿದೆ

***



(Release ID: 1649112) Visitor Counter : 358