ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯ

ಲಾಕ್‌ಡೌನ್ ಸಮಯದಲ್ಲಿ ಹೆಚ್ಚುವರಿ ಬಾಧ್ಯತೆಗಳನ್ನು ಪೂರೈಸಿದ ನಂತರವೂ ಎಫ್‌ಸಿಐ ದಾಸ್ತಾನು ಸಾಕಷ್ಟು ಇದೆ: ಶ್ರೀ ರಾಮ್ ವಿಲಾಸ್ ಪಾಸ್ವಾನ್

Posted On: 05 MAY 2020 7:21PM by PIB Bengaluru

ಲಾಕ್ಡೌನ್ ಸಮಯದಲ್ಲಿ ಹೆಚ್ಚುವರಿ ಬಾಧ್ಯತೆಗಳನ್ನು ಪೂರೈಸಿದ ನಂತರವೂ ಎಫ್ಸಿಐ ದಾಸ್ತಾನು ಸಾಕಷ್ಟು ಇದೆ:

ಶ್ರೀ ರಾಮ್ ವಿಲಾಸ್ ಪಾಸ್ವಾನ್

ಲಾಕ್ ಡೌನ್ ಸಮಯದಲ್ಲಿ ಎಫ್ಸಿಐ 4.50 ಲಕ್ಷ ಮೆಟ್ರಿಕ್ ಟನ್ ಗೋಧಿ ಮತ್ತು 5.61 ಲಕ್ಷ ಮೆಟ್ರಿಕ್ ಟನ್ ಅಕ್ಕಿಯನ್ನು ಮುಕ್ತ ಮಾರುಕಟ್ಟೆ ಮಾರಾಟ ಯೋಜನೆಯ ಮೂಲಕ ಮಾರಾಟ ಮಾಡಿದೆ: ಸಚಿವರ ಹೇಳಿಕೆ

 

ಕೇಂದ್ರ ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವ ಶ್ರೀ ರಾಮ್ ವಿಲಾಸ್ ಪಾಸ್ವಾನ್ ರವರು ಸರ್ಕಾರ ಕೈಗೊಂಡ ವಿವಿಧ ಕ್ರಮಗಳ ಬಗ್ಗೆ, ರಾಜ್ಯಗಳಿಗೆ ಕಳುಹಿಸಿರುವ ಮತ್ತು ಸರ್ಕಾರದಲ್ಲಿ ಲಭ್ಯವಿರುವ ಆಹಾರ ಧಾನ್ಯಗಳು ಮತ್ತು ಬೇಳೆಕಾಳುಗಳ ಒಟ್ಟು ದಾಸ್ತಾನುಗಳ ಬಗ್ಗೆ ವಿವರವಾದ ಮಾಹಿತಿಯನ್ನು ನೀಡಿದರು.

4.5.2020 ವರದಿಯ ಪ್ರಕಾರ ಎಫ್ಸಿಐ (ಭಾರತೀಯ ಆಹಾರ ನಿಗಮ) ಪ್ರಸ್ತುತ 276.61 ಎಲ್ಎಂಟಿ ಅಕ್ಕಿ ಮತ್ತು 353.49 ಎಲ್ಎಂಟಿ ಗೋಧಿಯನ್ನು ಹೊಂದಿದೆ ಎಂದು ಸಚಿವರು ಹೇಳಿದರು. ಆದ್ದರಿಂದ ಒಟ್ಟು 630.10 ಎಲ್ಎಂಟಿ ಆಹಾರ ಧಾನ್ಯಗಳ ಸಂಗ್ರಹ ಲಭ್ಯವಿದೆ. ಎನ್ಎಫ್ಎಸ್ ಮತ್ತು ಇತರ ಕಲ್ಯಾಣ ಯೋಜನೆಗಳ ಅಡಿಯಲ್ಲಿ ತಿಂಗಳಿಗೆ ಸುಮಾರು 60 ಎಲ್ಎಂಟಿ ಆಹಾರ ಧಾನ್ಯಗಳು ಬೇಕಾಗುತ್ತವೆ.

ಲಾಕ್ ಡೌನ್ ವಿಧಿಸಿದಾಗಿನಿಂದ ಸುಮಾರು 69.52 ಎಲ್ಎಂಟಿ ಆಹಾರ ಧಾನ್ಯಗಳನ್ನು 2483 ರೈಲುಗಳ ಮೂಲಕ ಸಾಗಿಸಲಾಗಿದೆ ಎಂದು ಸಚಿವರು ಮಾಹಿತಿ ನೀಡಿದರು. ರೈಲಿನ ಹೊರತಾಗಿ ರಸ್ತೆಗಳು ಮತ್ತು ಜಲಮಾರ್ಗಗಳ ಮೂಲಕವೂ ಸಾರಿಗೆ ವ್ಯವಸ್ಥೆ ಮಾಡಲಾಯಿತು. ಒಟ್ಟು 137.62 ಎಲ್ಎಂಟಿ ಸಾಗಿಸಲಾಗಿದೆ. ಒಟ್ಟು 5.92 ಎಲ್ಎಂಟಿ ಧಾನ್ಯಗಳನ್ನು ಈಶಾನ್ಯ ರಾಜ್ಯಗಳಿಗೆ ಸಾಗಿಸಲಾಗಿದೆ.

ಲಾಕ್ಡೌನ್ ಸಮಯದಲ್ಲಿ, ಪರಿಹಾರ ಶಿಬಿರಗಳನ್ನು ನಡೆಸುತ್ತಿರುವ ಎನ್ಜಿಒಗಳು ಮತ್ತು ಸಾಮಾಜಿಕ ಸಂಸ್ಥೆಗಳು ಎಫ್ಸಿಐ ಡಿಪೋಗಳಿಂದ ನೇರವಾಗಿ ಮುಕ್ತ ಮಾರುಕಟ್ಟೆ ಮಾರಾಟ ಯೋಜನೆ (ಒಎಂಎಸ್ಎಸ್) ದರದಲ್ಲಿ ಗೋಧಿ ಮತ್ತು ಅಕ್ಕಿಯನ್ನು ಖರೀದಿಸಬಹುದು. ರಾಜ್ಯ ಸರ್ಕಾರಗಳು ಆಹಾರ ಧಾನ್ಯಗಳನ್ನು ಎಫ್ಸಿಐನಿಂದ ನೇರವಾಗಿ ಖರೀದಿಸಬಹುದು. ಮುಂದಿನ ಮೂರು ತಿಂಗಳವರೆಗೆ ರಾಜ್ಯ ಸರ್ಕಾರಗಳು ಪಡಿತರ ಚೀಟಿ ನೀಡಿರುವ ಎನ್ಎಫ್ಎಸ್ ಅಲ್ಲದ ಕುಟುಂಬಗಳಿಗೆ ರಾಜ್ಯ ಸರ್ಕಾರಗಳು ಅಕ್ಕಿ ಮತ್ತು ಗೋಧಿ ನೀಡಬಹುದು. ಅಗತ್ಯವಿರುವ ಎನ್ಎಫ್ಎಸ್ ಅಲ್ಲದ ಕುಟುಂಬಗಳಿಗೆ ಪಡಿತರ ನೀಡುವಂತೆ ಕೋರಿ ಒಎಂಎಸ್ಎಸ್ಗೆ ಸಂಬಂಧಿಸಿದ ಪತ್ರವನ್ನು ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಆಡಳಿತಾಧಿಕಾರಿಗಳಿಗೆ ಕಳುಹಿಸಲಾಗಿದೆ. ಒಎಂಎಸ್ಎಸ್ ಅಡಿಯಲ್ಲಿ ಅಕ್ಕಿ ದರವನ್ನು ಕೆಜಿ ರೂ.22 ಮತ್ತು ಗೋಧಿ ಕೆಜಿ 21 ರೂಪಾಯಿ ನಿಗದಿ ಪಡಿಸಲಾಗಿದೆ. ಲಾಕ್ ಡೌನ್ ಅವಧಿಯಲ್ಲಿ ಎಫ್ಸಿಐ 4.50 ಎಲ್ಎಂಟಿ ಗೋಧಿ ಮತ್ತು 5.61 ಎಲ್ಎಂಟಿ ಅಕ್ಕಿಯನ್ನು ಒಎಂಎಸ್ಎಸ್ ಮೂಲಕ ಮಾರಾಟ ಮಾಡಿದೆ.

ಪ್ರಧಾನ ಮಂತ್ರಿ ಗರಿಬ್ ಕಲ್ಯಾಣ್ ಆನ್ ಯೋಜನೆಅಡಿಯಲ್ಲಿ, ಮುಂದಿನ 3 ತಿಂಗಳುಗಳವರೆಗೆ ಒಟ್ಟು 104.4 ಎಲ್ಎಂಟಿ ಅಕ್ಕಿ ಮತ್ತು 15.6 ಎಲ್ಎಂಟಿ ಗೋಧಿ ಅಗತ್ಯವಿದ್ದು, ಅದರಲ್ಲಿ 59.50 ಎಲ್ಎಂಟಿ ಅಕ್ಕಿ ಮತ್ತು 8.14 ಎಲ್ಎಂಟಿ ಗೋಧಿಯನ್ನು ವಿವಿಧ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ತೆಗೆದುಕೊಂಡಿವೆ. ಪಂಜಾಬ್, ಹರಿಯಾಣ, ರಾಜಸ್ಥಾನ, ಚಂಡೀಗಢ, ದೆಹಲಿ ಮತ್ತು ಗುಜರಾತ್ಗಳಿಗೆ 6 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಗೋಧಿ ಹಂಚಿಕೆ ಮಾಡಲಾಗಿದೆ ಮತ್ತು ಉಳಿದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಅಕ್ಕಿ ನೀಡಲಾಗಿದೆ. ಭಾರತ ಸರ್ಕಾರವು ಸುಮಾರು 46,000 ಕೋಟಿ ರೂಪಾಯಿಗಳನ್ನುಈ ಯೋಜನೆಯಡಿಯಲ್ಲಿ ಭರಿಸಲಿದೆ.

ಬೇಳೆಕಾಳುಗಳಿಗೆ ಸಂಬಂಧಿಸಿದಂತೆ, ಮುಂದಿನ ಮೂರು ತಿಂಗಳ ಒಟ್ಟು ಅವಶ್ಯಕತೆ 5.82 ಎಲ್ಎಂಟಿ. ಇಲ್ಲಿಯವರೆಗೆ, 220727 ಮೆ.ಟನ್ ಧಾನ್ಯಗಳನ್ನು ರವಾನಿಸಲಾಗಿದ್ದು, 147165 ಮೆ.ಟನ್ ಧಾನ್ಯಗಳು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳನ್ನು ತಲುಪಿವೆ ಮತ್ತು 47490 ಮೆ.ಟನ್ ತಲುಪಿಸಲಾಗಿದೆ. 5 ಮೇ 2020 ವೇಳೆಗೆ ಒಟ್ಟು 12.54 ಎಲ್ಎಂಟಿ ಬೇಳೆಕಾಳುಗಳು (ತೊಗರಿ -5.16 ಎಲ್ಎಂಟಿ, ಹೆಸರು -1.26 ಎಲ್ಎಂಟಿ, ಉದ್ದು-25.5 ಎಲ್ಎಂಟಿ, ಕಡಲೆಬೇಳೆ -2.72 ಎಲ್ಎಂಟಿ ಮತ್ತು ಮಸೂರ -0.84 ಎಲ್ಎಂಟಿ) ಬಫರ್ ಸ್ಟಾಕ್ನಲ್ಲಿ ಲಭ್ಯವಿದೆ.

ಏತನ್ಮಧ್ಯೆ, ಕೋವಿಡ್-19 ಕಾರಣದಿಂದಾಗಿ ಹೆಚ್ಚಿದ ಬೇಡಿಕೆಯನ್ನು ಗಮನದಲ್ಲಿಟ್ಟುಕೊಂಡು ಗ್ರಾಹಕ ಸರಕುಗಳ ಇಲಾಖೆ ಅಗತ್ಯ ಸರಕುಗಳ ಕಾಯ್ದೆಯಡಿ ಮುಖಗವಸು ಮತ್ತು ಸ್ಯಾನಿಟೈಜರ್ಗಳಿಗೆ ಸೂಚನೆ ನೀಡಿದೆ. ಮುಖಗವಸುಗಳು, ಸ್ಯಾನಿಟೈಜರ್ಗಳು ಮತ್ತು ಅವುಗಳ ತಯಾರಿಕೆಯಲ್ಲಿ ಬಳಸುವ ಪದಾರ್ಥಗಳ ಬೆಲೆಗಳನ್ನು ಸಹ ನಿಗಧಿಪಡಿಸಲಾಗಿದೆ. ಲಾಕ್ಡೌನ್ ಅವಧಿಯಲ್ಲಿ ಪೂರೈಕೆ ಸರಪಳಿ ನಿರ್ವಹಣೆಯಲ್ಲಿ ಯಾವುದೇ ಅಡಚಣೆಗಳಿಲ್ಲದಿರುವುದನ್ನು ಖಾತ್ರಿ ಪಡಿಸಿಕೊಳ್ಳಲು ಮತ್ತು ಎಲ್ಲಾ ಅಗತ್ಯ ವಸ್ತುಗಳ ಬೆಲೆಗಳನ್ನು ಪರಿಶೀಲಿಸಲು ರಾಜ್ಯಗಳಿಗೆ ಮಾರ್ಗಸೂಚಿಗಳನ್ನು ನೀಡಲಾಗಿದೆ. ಅಗತ್ಯ ವಸ್ತುಗಳ (ಇಸಿ) ಕಾಯ್ದೆಯಡಿ ನಿರ್ಧಾರ ತೆಗೆದುಕೊಳ್ಳಲು ಕೇಂದ್ರವು ಎಲ್ಲಾ ಅಧಿಕಾರಗಳನ್ನು ರಾಜ್ಯ ಸರ್ಕಾರಗಳಿಗೆ ವಹಿಸಿದೆ.

***



(Release ID: 1621514) Visitor Counter : 182