ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

ಲಯನ್ಸ್ ಕ್ಲಬ್ಸ್ ಇಂಟರ್ನ್ಯಾಷನಲ್ ಜೊತೆ ಡಾ. ಹರ್ಷವರ್ಧನ್  ವಿಡಿಯೋ ಸಂವಾದ

Posted On: 29 APR 2020 5:07PM by PIB Bengaluru

ಲಯನ್ಸ್ ಕ್ಲಬ್ಸ್ ಇಂಟರ್ನ್ಯಾಷನಲ್ ಜೊತೆ ಡಾ. ಹರ್ಷವರ್ಧನ್  ವಿಡಿಯೋ ಸಂವಾದ

ಕೊವಿಡ್-19 ವಿರುದ್ಧ ಹೋರಾಟಕ್ಕೆ ಸಾಮಾಜಿಕ ಅಂತರ ಮತ್ತು "ನಾವು"(WE) ಶಕ್ತಿ ಮೂಲಾಧಾರ: ಡಾ.ಹರ್ಷವರ್ಧನ್

 

ವಿಶೇಷವಾಗಿ ಪಿಎಂ ಕೇರ್ಸ್ ನಿಧಿಗೆ ಕೊಡುಗೆ, ಉಪಕರಣಗಳು, ಸ್ಯಾನಿಟೈಜರ್ಸ್ ಆಹಾರ, ಪಿಪಿಇ ಕಿಟ್ ಮತ್ತು ಆಸ್ಪತ್ರೆಗಳಿಗೆ ಎನ್ 95 ಮುಖವಾಡಗಳು ಇತ್ಯಾದಿಗಳ ಮೂಲಕ "ಕೊವಿಡ್-19 ವಿರುದ್ಧದ ಹೋರಾಟದಲ್ಲಿ ಲಯನ್ಸ್ ಕ್ಲಬ್ ಸದಸ್ಯರು ಗಮನಾರ್ಹ ಕೊಡುಗೆ ನೀಡಿದ್ದಾರೆ, ನಾನು ಅವರನ್ನು ಗೌರವಿಸುತ್ತೇನೆ, " ಎಂದು ವಿಡಿಯೋ ಸಂವಾದ ಮೂಲಕ ದೇಶಾದ್ಯಂತದ ಲಯನ್ಸ್ ಕ್ಲಬ್ ಇಂಟರ್ನ್ಯಾಷನಲ್ ಸದಸ್ಯರೊಂದಿಗೆ ಸಂವಹನ ನಡೆಸಿದಾಗ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ. ಹರ್ಷವರ್ಧನ್  ಅವರು ಹೇಳಿದರು. ಪೋಲಿಯೊ, ಕಣ್ಣಿನ ಪೊರೆ ಮುಂತಾದ ಅಭಿಯಾನಗಳಲ್ಲಿ ಲಯನ್ಸ್ ಕ್ಲಬ್ ನೀಡಿದ ಕೊಡುಗೆಗಳನ್ನು ಸಚಿವರು ಶ್ಲಾಘಿಸಿದರು. ಮತ್ತು ಕೊವಿಡ್-19 ಹೋರಾಟದಲ್ಲಿ ಸರ್ಕಾರದ ಪ್ರಯತ್ನಗಳನ್ನು ಮತ್ತೆ ಸಾಮೂಹಿಕವಾಗಿ ಬೆಂಬಲಿಸುವಂತೆ ಅವರಿಗೆ ಸೂಚಿಸಿದರು. ವಿಶ್ವದ 200 ಕ್ಕೂ ಹೆಚ್ಚು ದೇಶಗಳಲ್ಲಿ ಹರಡಿದ ಕೊವಿಡ್-19 ಅನ್ನು ಸೋಲಿಸಲು ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡುವ ಸಂದರ್ಭಹಗಳ ಹಂತಕ್ಕೆ ತಲುಪಬೇಕುಎಂದು ಅವರು ಹೇಳಿದರು. ಅನೇಕರಿಗೆ ಅಗತ್ಯವಾದ ವೈದ್ಯಕೀಯ ಉಪಕರಣಗಳು ಮತ್ತು ರಕ್ಷಣಾತ್ಮ ಉಪಕರಣಗಳು, ಲಕ್ಷಾಂತರ ಜನರಿಗೆ ಊಟವನ್ನು ಒದಗಿಸಿದ್ದಕ್ಕಾಗಿ ಅವರನ್ನು ಸಚಿವ ಡಾ. ಹರ್ಷವರ್ಧನ್  ಅವರು ಶ್ಲಾಘಿಸಿದರು.

ಕೊವಿಡ್-19 ಎದುರಿಸುವಲ್ಲಿ ಭಾರತದ ವಿಧಾನಗಳನ್ನು ಎತ್ತಿ ತೋರಿಸುತ್ತಾ, ಸಚಿವ ಡಾ. ಹರ್ಷವರ್ಧನ್  ಅವರು ಈ ಬಾರಿ ನಮ್ಮ ವಿಧಾನದ ವಿಶಿಷ್ಟ ಲಕ್ಷಣವು ಐದು ಪಟ್ಟು ಹೆಚ್ಚಾಗಿದೆ: (i) ನಿರಂತರ ಪರಿಸ್ಥಿತಿಯ ಅರಿವನ್ನು ಕಾಪಾಡಿಕೊಳ್ಳುವುದು, (ii) ಪೂರ್ವಭಾವಿ ಯೋಚನೆಮತ್ತು ಪೂರ್ವಭಾವಿ ವಿಧಾನಗಳ, (iii) ವಿಕಸಿಸುತ್ತಿರುವ ಸನ್ನಿವೇಶಕ್ಕೆ ನಿರಂತರವಾಗಿ ಶ್ರೇಣೀಕೃತ ಪ್ರತಿಕ್ರಿಯೆ , (iv) ಎಲ್ಲಾ ಹಂತಗಳಲ್ಲಿ ಅಂತರ-ವಲಯ ಸಮನ್ವಯ ಕಾಪಾಡುವುದು, ಮತ್ತು ಕೊನೆಯದಾಗಿ, ಆದರೆ ಮುಖ್ಯವಾಗಿ (v) ಈ ರೋಗವನ್ನು ಎದುರಿಸಲು ಜನರ ಆಂದೋಲನವನ್ನು ರೂಪಿಸುವುದು. ಎಂದು ಹೇಳಿದರು.

ರೋಗವನ್ನು ನಿಭಾಯಿಸುವಲ್ಲಿ ಭಾರತದ ಸಾಮರ್ಥ್ಯದ ಬಗ್ಗೆ ಪ್ರತಿಕ್ರಿಯಿಸಿದ ಸಚಿವ ಡಾ. ಹರ್ಷವರ್ಧನ್  ಅವರು, “ಭಾರತವು ಈ ಹಿಂದೆ ಅಂತರರಾಷ್ಟ್ರೀಯ ಕಾಳಜಿ ಮತ್ತು ಸಾಂಕ್ರಾಮಿಕ ರೋಗಗಳ ಸಾರ್ವಜನಿಕ ಆರೋಗ್ಯ ತುರ್ತು ಪರಿಸ್ಥಿತಿಗಳನ್ನು ಯಶಸ್ವಿಯಾಗಿ ನಿಭಾಯಿಸಿದೆ. ನಮ್ಮ ರಾಷ್ಟ್ರವು ಸಾರ್ವಜನಿಕ ಆರೋಗ್ಯ ತುರ್ತುಸ್ಥಿತಿಗಳನ್ನು ನಿರ್ವಹಿಸಲು ಅಂತರರಾಷ್ಟ್ರೀಯ ಆರೋಗ್ಯ ನಿಯಮಗಳಲ್ಲಿ ನಿಗದಿಪಡಿಸಿದ ಅಗತ್ಯವಾದ ರಾಷ್ಟ್ರೀಯ ಪ್ರಮುಖ ಸಾಮರ್ಥ್ಯಗಳನ್ನು ಹೊಂದಿದೆ. ಸಾಂಕ್ರಾಮಿಕ ಪೀಡಿತ ಕಾಯಿಲೆಗಳಿಗೆ ರಾಷ್ಟ್ರವ್ಯಾಪಿ ಕಣ್ಗಾವಲು ವ್ಯವಸ್ಥೆಯಾಗಿರುವ ಇಂಟಿಗ್ರೇಟೆಡ್ ಡಿಸೀಸ್ ಕಣ್ಗಾವಲು ಕಾರ್ಯಕ್ರಮ (ಐಡಿಎಸ್ಪಿ) ಅನ್ನು ಕೊವಿಡ್ ಪ್ರತಿಕ್ರಿಯೆಯ ಕಡೆಗೆ ಸಕ್ರಿಯಗೊಳಿಸಲಾಗಿದೆ ಮತ್ತು ಗಣನೀಯ ಡಿಜಿಟಲ್ ಒಳಹರಿವಿನೊಂದಿಗೆ ಇನ್ನಷ್ಟು ಬಲಪಡಿಸಲಾಗುತ್ತಿದೆ. ಎಂದು ಹೇಳಿದರು.

ಕಳೆದ ಮೂರು ದಿನಗಳಿಂದ ದೇಶದಲ್ಲಿ ದ್ವಿಗುಣಗೊಳಿಸುವ ಪ್ರಮಾಣ 11.3 ದಿನಗಳಾಗಿದೆ. ಕೊವಿಡ್ ಸೋಕಿತ ರೋಗಿಗಳಲ್ಲಿ ಜಾಗತಿಕ ಮರಣ ಪ್ರಮಾಣವು ಸುಮಾರು 7% ರಷ್ಟಿದ್ದರೂ, ಭಾರತವು ಸುಮಾರು 3% ನಷ್ಟು ಮರಣ ಪ್ರಮಾಣವನ್ನು ಹೊಂದಿದೆ ಮತ್ತು ಸಹ-ಅಸ್ವಸ್ಥತೆಯ ವ್ಯಕ್ತಿಗಳ ಸಾವಿನ ಪ್ರಮಾಣ 86% ಆಗಿದೆ ಎಂದು ಅವರು ಹೇಳಿದರು.

ಕೇವಲ 0.33% ಕೊವಿಡ್ ಸೋಕಿತ ರೋಗಿಗಳು ವೆಂಟಿಲೇಟರ್‌ಗಳಲ್ಲಿದ್ದಾರೆ, 1.5% ರೋಗಿಗಳು ಆಮ್ಲಜನಕದ ಬೆಂಬಲದಲ್ಲಿದ್ದಾರೆ ಮತ್ತು 2.34% ರೋಗಿಗಳು ಐಸಿಯುನಲ್ಲಿದ್ದಾರೆ, ಇದು ದೇಶಾದ್ಯಂತ ನೀಡಲಾಗುತ್ತಿರುವ ಆರೈಕೆಯ ಗುಣಮಟ್ಟವನ್ನು ಪ್ರತಿಬಿಂಬಿಸುತ್ತದೆ . ಇನ್ನೂ ಹೆಚ್ಚಿನ ಸಂಭವನೀಯತೆಯ ಸಂದರ್ಭದಲ್ಲಿ, ದೇಶವು ಪ್ರತ್ಯೇಕ ಹಾಸಿಗೆಗಳು, ವೆಂಟಿಲೇಟರ್‌ಗಳು, ಪಿಪಿಇ, ಮುಖವಾಡಗಳು ಇತ್ಯಾದಿಗಳನ್ನು ಹೊಂದಿದೆ. ಎಂದು ಸಚಿವರು ಹೇಳಿದರು.

97 ಖಾಸಗಿ ಲ್ಯಾಬ್‌ಗಳ ಜೊತೆಗೆ 288 ಸರ್ಕಾರಿ ಪ್ರಯೋಗಾಲಯಗಳು ಕಾರ್ಯನಿರ್ವಹಿಸುತ್ತಿವೆ ಎಂದು ಸಚಿವರು ಮಾಹಿತಿ ನೀಡಿದರು. ಸುಮಾರು 16,000 ಮಾದರಿ ಸಂಗ್ರಹ ಕೇಂದ್ರಗಳನ್ನು ಹೊಂದಿರುವ ಸರಪಳಿಗಳು ಮತ್ತು ದಿನಕ್ಕೆ 60,000 ಪರೀಕ್ಷೆಗಳನ್ನು ಪರೀಕ್ಷಿಸುವುದು. ಮುಂದಿನ ಕೆಲವೇ ದಿನಗಳಲ್ಲಿ ಪರೀಕ್ಷಾ ಸಾಮರ್ಥ್ಯವನ್ನು ದಿನಕ್ಕೆ 1 ಲಕ್ಷ ಪರೀಕ್ಷೆಗಳಿಗೆ ಹೆಚ್ಚಿಸಲು ಸರ್ಕಾರ ಕೆಲಸ ಮಾಡುತ್ತಿದೆ ಎಂದು ಸಚಿವರು ಹೇಳಿದರು.

ಲಸಿಕೆಯ ಅಭಿವೃದ್ಧಿಗೆ ಹೆಚ್ಚು ಸಮಯ ಬೇಕಾಗುವುದರಿಂದ, ಲಾಕ್‌ಡೌನ್ ಮತ್ತು ಸಾಮಾಜಿಕ ಅಂತರರವು ಪರಿಣಾಮಕಾರಿ 'ಸಾಮಾಜಿಕ ಲಸಿಕೆ'ಯಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಆರೋಗ್ಯ ಸಚಿವರು ಹೇಳಿದರು. ನನ್ನ ಉಸ್ತುವಾರಿಯಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯವೂ ಸಹ ಕಾರ್ಯನಿರ್ವಹಿಸುತ್ತಿದೆ ನಾವೀನ್ಯತೆಗಳು ಮತ್ತು ಪರೀಕ್ಷಾ ಕಾರ್ಯವಿಧಾನವನ್ನು ವೇಗವಾಗಿ ಮಾಡಲು ಹೊರಟಿರುವ ಕೆಲವು ಯೋಜನೆಗಳಿಗೆ ಧನಸಹಾಯ ನೀಡಲಾಗುತ್ತಿದೆ ಎಂದು ಸಚಿವರು ಹೇಳಿದರು.

ಕೊವಿಡ್-19 ಎದುರಿಸುವಲ್ಲಿ ರಾಜ್ಯಗಳು / ಕೇಂದ್ರಾಡಳಿ ಪ್ರದೇಶಗಳು ಮತ್ತು ಸಮರ್ಪಿತ ಪಾಲುದಾರರ ಜೊತೆಗೆ ಭಾರತವು ವಿಜಯಶಾಲಿಯಾಗಿ ಹೊರಹೊಮ್ಮಲು ಸಾಧ್ಯವಾಗುತ್ತದೆ ಎಂದು ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ್  ಅವರು ಹೇಳಿದ್ದಾರೆ.

 

***



(Release ID: 1619568) Visitor Counter : 182