ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ

ನೋವೆಲ್ ಕೊರೊನಾ ವೈರಾಣು ಗಮನದಲ್ಲಿಟ್ಟುಕೊಂಡು ನಿಷ್ಕ್ರೀಯ ವೈರಾಣು ಲಸಿಕೆ

Posted On: 16 APR 2020 6:45PM by PIB Bengaluru

ನೋವೆಲ್ ಕೊರೊನಾ ವೈರಾಣು ಗಮನದಲ್ಲಿಟ್ಟುಕೊಂಡು ನಿಷ್ಕ್ರೀಯ ವೈರಾಣು ಲಸಿಕೆ

 

ಜೀವಕೋಶೀಯ ಮತ್ತು ಅಣುಸಂಬಂಧಿ ಜೀವವಿಜ್ಞಾನ ಕೇಂದ್ರ (ಸಿಸಿಎಂಬಿ)ಸಂಶೋಧಕರು ಮಹಾಮಾರಿ ನೊವೆಲ್ ಕೊರೊನಾ ವೈರಾಣುವಿಗಾಗಿ ನಿಷ್ಕ್ರೀಯ ವೈರಾಣು ಲಸಿಕೆ ಅಭಿವೃದ್ಧಿಪಡಿಸುತ್ತಿದ್ದಾರೆ. ನಿಷ್ಕ್ರೀಯ ವೈರಾಣು ಲಸಿಕೆಗಳು ಸರಳ ಉತ್ಪಾದನೆ ಮತ್ತು ಸುರಕ್ಷತೆಗೆ ಹೆಸರುವಾಸಿಯಾಗಿವೆ. ಈ ವೈರಾಣುವಿನ ಪ್ರಗತಿ ಮತ್ತು ಮಾರಣಾಂತಿಕ ಪರಿಣಾಮಗಳನ್ನು ತಡೆಯಲು ಲಸಿಕೆ ಹಾಕುವುದು ಅತ್ಯಂತ ಪರಿಣಾಮಕಾರಿ ಮತ್ತು ಖಚಿತವಾದ ಮಾರ್ಗವಾಗಿದೆ ಎಂದು ಭಾವಿಸಲಾಗಿದೆ. ವಿಶ್ವಾದ್ಯಂತದ ಹಲವಾರು ಸಂಸ್ಥೆಗಳು ಲಸಿಕೆಯನ್ನು ಕಂಡುಹಿಡಿಯುವ ಕಾರ್ಯದಲ್ಲಿ ತೊಡಗಿವೆ ಮತ್ತು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯು ಹೆಚ್ ಒ) ಅಭಿವೃದ್ಧಿಪಡಿಸುತ್ತಿರುವ 42 ಕ್ಕೂ ಹೆಚ್ಚು ಭರವಸೆಯ ಸಂಸ್ಥೆಗಳನ್ನು ಪಟ್ಟಿ ಮಾಡಿದೆ.         

ದೊಡ್ಡ ಸಂಖ್ಯೆಯಲ್ಲಿ ಸಕ್ರೀಯ ವೈರಾಣು ಅಭಿವೃದ್ಧಿ ಮಾಡಲಾಗುತ್ತದೆ ಮತ್ತು ನಂತರ ಅವನ್ನು ಶಾಖ ಅಥವಾ ರಾಸಾಯನಿಕ ಬಳಸಿ ನಾಶಪಡಿಸಲಾಗುತ್ತದೆ. ರೋಗಕಾರಕವನ್ನು ನಾಶಪಡಿಸಲಾಗಿದ್ದರೂ ಅಥವಾ ಅದರ ಸಂತಾನೋತ್ಪತ್ತಿ ಸಾಮರ್ಥ್ಯ ಕಳೆದುಕೊಳ್ಳುವಂತೆ ಮಾಡಿದ್ದರೂ ವೈರಾಣುವಿನ ವಿವಿಧ ಭಾಗಗಳು ಹಾಗೇ ಇರುತ್ತವೆ. ಉದಾಹರಣೆಗೆ ಅದು ಜೀವಕೋಶವನ್ನು ಪ್ರವೇಶಿಸುವ ಸ್ಪೈಕ್ ಪ್ರೋಟೀನ್. ಪ್ರತಿರೋಧಕ ವ್ಯವಸ್ಥೆಯಿಂದ ಗುರುತಿಸಲ್ಪಟ್ಟ ಪ್ರತಿಜನಕವನ್ನು (ಅದರ ರಾಸಾಯನಿಕ ರಚನೆಯನ್ನು) ದುರ್ಬಲಗೊಳಿಸದೇ ಬಿಡಲಾಗಿರುತ್ತದೆ. ಈ ಮೃತ ಸೂಕ್ಷ್ಮಾಣುಜೀವಿ ದೇಹವನ್ನು ಪ್ರವೇಶಿಸಿದಾಗ, ರೋಗಕಾರಕವು ಮೃತ ಸ್ಥಿತಿಯಲ್ಲಿದೆ ಎಂದು ಅರಿಯದೇ ವೈರಾಣುವಿನಲ್ಲಿರುವ ಸಕ್ರೀಯ ಭಾಗಗಳಿಗಾಗಿ ದೇಹದ ರೋಗ ನಿರೋಧಕ ಶಕ್ತಿ ಪ್ರತಿಕ್ರಿಯಿಸಿ ಪ್ರತಿರೋಧಕಗಳನ್ನು ಉತ್ಪಾದಿಸುತ್ತದೆ. ಇದೇ ರೀತಿ ಪೋಲಿಯೊ ಮತ್ತು ರೇಬೀಸ್ ಲಸಿಕೆಗಳನ್ನೂ ತಯಾರಿಸಲಾಗಿತ್ತು          

ವೈರಾಣು ಮೃತ ಸ್ಥಿತಿಯಲ್ಲಿರುವುದರಿಂದ ಅದು ಪುನರುತ್ಪತ್ತಿ ಮಾಡುವುದಾಗಲಿ ಅಥವಾ ಯಾವುದೇ ಸಾಮಾನ್ಯ ರೋಗಕ್ಕೂ ಇದು ಕಾರಣವಾಗದು. ಹೀಗೆ, ಇದು ಕಡಿಮೆ ರೋಗ ನಿರೋಧಕ ಶಕ್ತಿ ಹೊಂದಿದವರು ಅಂದರೆ ವೃದ್ಧರು ಮತ್ತು ರಿಗೂ ನೀಡುವುದು ಸುರಕ್ಷಿತ ಮತ್ತು ಬೇರಾವುದೇ ರೋಗದಿಂದ ನರಳುತ್ತಿರುವವರಿಗೆ ನೀಡುವುದೂ ಸುರಕ್ಷಿತವಾಗಿದೆ.  

ಇಂಡಿಯಾ ಸೈನ್ಸ್ ವೈರ್ ಜೊತೆಗೆ ಮಾತನಾಡುತ್ತಾ ಸಿಸಿಎಂಬಿ ನಿರ್ದೇಶಕರಾದ ಡಾ. ರಾಕೇಶ್ ಮಿಶ್ರಾ ನಾವು ಬೃಹತ್ ಪ್ರಮಾಣದಲ್ಲಿ ವೈರಾಣು ಉತ್ಪತ್ತಿ ಮಾಡಿ ಅವನ್ನು ನಿಷ್ಕ್ರಿಯಗೊಳಿಸಿದರೆ ಅದು ಜನರಿಗೆ ನೀಡಬಲ್ಲ ಲಸಿಕೆಗೆ ಮೂಲವಸ್ತುವಾಗುತ್ತದೆ. ಈಗ ವೈರಾಣು ಸಕ್ರೀಯವಾಗಿರುವುದಿಲ್ಲ ಆದರೆ ಮಾನವ ದೇಹ ವೈರಾಣು ಪ್ರೊಟೀನ್ ಗಳನ್ನು ಗುರುತಿಸಿ ಅದರ ವಿರುದ್ಧ ಪ್ರತಿಕಾಯಗಳನ್ನು ಸಿದ್ಧಪಡಿಸಲಾರಂಭಿಸುತ್ತದೆ. ಆದ್ದರಿಂದ ಇದು ನಿಷ್ಕ್ರೀಯ ವೈರಾಣು ಲಸಿಕೆಯಂತೆ ಕಾರ್ಯನಿರ್ವಹಿಸುತ್ತದೆ.” ಎಂದು ಹೇಳಿದರು. ಒಮ್ಮೆ ವೈರಾಣುವಿನ ಕೋಶ ಬೆಳವಣಿಗೆ ಆಧಾರಿತ ಉತ್ಪಾದನೆ ಪೂರ್ತಿಯಾದ ನಂತರ, ಅದನ್ನು ಉದ್ಯಮ ಪಾಲುದಾರರಿಗೆ ನೀಡಲಾಗುವುದು ಎಂದು ಹೇಳಿದರು.

ಮಾನವ ದೇಹದ ಹೊರಗೆ ವೈರಾಣು ಅಭಿವೃದ್ಧಿಪಡಿಸುವುದೇ ಮಹತ್ವದ ತಾಂತ್ರಿಕ ಸವಾಲಾಗಿದೆ. ನೊವೆಲ್ ಕೊರೊನಾ ವೈರಾಣು ಮಾನವ ಕೋಶಗಳಲ್ಲಿ ಅದರಲ್ಲೂ ವಿಶೇಷವಾಗಿ ಎಸಿಇ2 ಗ್ರಾಹಕಗಳನ್ನು ಹೊಂದಿರುವ ಜೀವಕೋಶಗಳಲ್ಲಿ ಜೀವಂತವಾಗಿ ವಿಕಸನಗೊಳ್ಳುವುದರಿಂದ ಮಾನವನ ದೇಹದ ಹೊರಗೆ ವೈರಾಣು ಅಭಿವೃದ್ಧಿಗೆ ಸೂಕ್ತ ಸೆಲ್ ಲೈನ್ ಮೂಲವನ್ನು ಗುರುತಿಸುವುದು ಈ ತಂತ್ರಜ್ಞಾನಕ್ಕೆ ಪ್ರಮುಖವಾದದ್ದಾಗಿದೆ. ಪೆಟ್ರಿ ಡಿಶ್ ನಲ್ಲಿ ಬೆಳೆದಿರುವ ಆಫ್ರಿಕಾದ ಗ್ರೀನ್ ಮಂಕಿ(ಹಸಿರು ಕೋತಿ) ಯ ಎಪಿಥಿಲಿಯಲ್ ಸೆಲ್ ಲೈನ್ ಅನ್ನು ಕೃತಕ ಸಂಸ್ಕರಣೆಗೆ ಮತ್ತು ಈ ಮಾರಣಾಂತಿಕ ವೈರಾಣು ಅಭಿವೃದ್ಧಿಗೆ ಸಿಸಿಎಂಬಿ ಬಳಸುತ್ತಿದೆ. ಕೊರೊನಾ ವೈರಾಣು ಸೋಂಕು ಹರಡಲು, ಅಭಿವೃದ್ಧಿ ಹೊಂದಲು ಮತ್ತು ಸಂಖ್ಯೆ ಹೆಚ್ಚಳಕ್ಕೆ ಸೂಕ್ತವಾದುದನ್ನು ಹುಡುಕಲು ಮತ್ತಷ್ಟು ಸೆಲ್ ಲೈನ್ ಗಳನ್ನು ಪರಿಶೋಧಿಸಲಾಗುತ್ತಿದೆಈ ಜೀವಕೋಶಗಳನ್ನು ಗಮನಿಸಲಾಗುತ್ತಿದ್ದು ಯಾವುದೇ ಬದಲಾವಣೆ ಅಂದರೆ ಜೀವಕೋಶಗಳು ಸಾಯುವುದು ಮತ್ತು ವೈರಸ್ ಬಿಡುಗಡೆ ಮಾಡುವುದೂ ಸೇರಿದಂತೆ ಬದಲಾವಣೆ ಕಂಡುಬಂದರೆ ಈ ಸಂಸ್ಕರಣೆ ಪಾಸಿಟಿವ್ ಎಂದರ್ಥ. “ ನಾವು ಜೀವಕೋಶಗಳ ಸಂಸ್ಕರಣೆ ಮಾಡುತ್ತಿದ್ದೇವೆ, ಅದು ವೈರಾಣುವಿಗೆ ಆಶ್ರಯ ನೀಡುತ್ತದೆ. ಇದರಿಂದ ನಾವು ಇನ್ ವಿಟ್ರೊ ಸಿಸ್ಟೆಮ್ ಅನ್ನು ಸೃಷ್ಟಿಸಬಹುದು ಮತ್ತು ಅದರ ಸಾಮರ್ಥ್ಯವನ್ನು ಪರಿಶೀಲಿಸಬಹದು.” ಎಂದು ಡಾ ಮಿಶ್ರಾ ಹೇಳಿದ್ದಾರೆ. ಕೋಶ ಸಂಸ್ಕರಣೆಯಲ್ಲಿ ನೊವೆಲ್ ಕೊರೊನಾ ವೈರಾಣುವನ್ನು ಅಭಿವೃದ್ಧಿಪಡಿಸಿ. ನಿಷ್ಕ್ರಿಯಗೊಳಿಸಲಾಗುವುದು, ಮತ್ತು ಲಸಿಕೆಯನ್ನು ತಯಾರಿಸಲಾಗುವುದು.            

ನೊವೆಲ್ ಕೊರೊನಾ ವೈರಾಣುವಿಗಾಗಿ ಸೂಕ್ತವಾದ ಜೀವಕೋಶ ಸಂಸ್ಕರಣೆಯನ್ನು ಪತ್ತೆ ಹಚ್ಚುವುದು ಔಷಧಿಗಳ ಅಭಿವೃದ್ಧಿಯಲ್ಲೂ ಸಹಾಯ ಮಾಡುತ್ತದೆ. ಒಮ್ಮೆ ವೈರಾಣು ಜೀವಕೋಶಕ್ಕೆ ಸೋಂಕು ತಗುಲಿಸಿದಾಗ ಸಂಭಾವ್ಯ ಔಷಧಿ ಪರೀಕ್ಷಾರ್ಥಿಯನ್ನು ಇದಕ್ಕಾಗಿ ಪರೀಕ್ಷಿಸಬಹುದು.  

ನಾವು ವೈರಾಣುವಿನಿಂದ ಹೊಸ ಜೀವಕೋಶಕ್ಕೆ ಸೋಕು ತಗುಲಿಸಿದರೆ 2-3 ದಿನಗಳ ನಂತರ ಜೀವಕೋಶ ಸಾವನ್ನಪ್ಪುತ್ತದೆ ಮತ್ತು ಸಾಕಷ್ಟು ವೈರಾಣುಗಳು ಉತ್ಪತ್ತಿಯಾಗುತ್ತವೆ. ಆದಾಗ್ಯೂ, ನೀವು ಸೂಕ್ತ ಔಷಧಿಯನ್ನು ನೀಡಿ ನಿಗಾವಹಿಸಿದರೆ ಜೀವಕೋಶ ಸಾಯುವುದಿಲ್ಲ ಮತ್ತು ಔಷಧಿ ಪರಿಣಾಮಕಾರಿಯಾಗಿದ್ದಲ್ಲಿ ವೈರಾಣುಗಳ ಸಂಖ್ಯೆ ಹೆಚ್ಚುವುದನ್ನು ಕೂಡಾ ತಡೆಗಟ್ಟಬಹುದು”, ಎಂದು ಅವರು ವಿವರಿಸಿದರು. ಹೀಗೆ ಒಂದು ನಿರ್ದಿಷ್ಟ ಔಷಧಿ ಆಂಟಿ ವೈರಲ್ ಆಗಿ ಪರಿಣಾಮಕಾರಿಯಾಗಿದೆಯೇ ಎಂದು ಪರೀಕ್ಷಿಸಬಹುದು

ಇದಲ್ಲದೆ, ಸಿಸಿಎಂಬಿ ಮಾದರಿಗಳನ್ನು ಸಹ ಸಂಗ್ರಹಿಸುತ್ತದೆ ಮತ್ತು ಹೆಚ್ಚಿನ ಸಂಖ್ಯೆಯಲ್ಲಿ ವೈರಾಣು ಸೋಂಕು ಶಂಕಿತರನ್ನು ಪರೀಕ್ಷಿಸಲು ತಮ್ಮ ಸೌಲಭ್ಯಗಳನ್ನು ಬಳಸಿಕೊಳ್ಳುತ್ತಿದೆ.    

****



(Release ID: 1615322) Visitor Counter : 278