ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಡಾ. ಶ್ಯಾಮ ಪ್ರಸಾದ್ ಮುಖರ್ಜಿಯವರ 125ನೇ ಜನ್ಮ ಜಯಂತಿಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ


ರಾಷ್ಟ್ರೀಯ ಏಕತೆಗೆ ತಮ್ಮ ಅಚಲ ಬದ್ಧತೆಯ ಮೂಲಕ ಪೀಳಿಗೆಗೆ ಸ್ಫೂರ್ತಿ ನೀಡುತ್ತಲೇ ಇರುವ ಭಾರತದ ಮಹಾನ್ ಪುತ್ರನಿಗೆ ನಾವು ಗೌರವ ಸಲ್ಲಿಸುತ್ತಿದ್ದೇವೆ: ಪ್ರಧಾನಮಂತ್ರಿ

ರಾಷ್ಟ್ರ ಮೊದಲು ಎಂಬ ಸಂಕಲ್ಪದ ಸರಕಾರ ಇದ್ದಾಗ, ರಾಷ್ಟ್ರೀಯ ವೀರರಿಗೂ ಸರಿಯಾದ ಗೌರವ ಸಿಗುತ್ತದೆ: ಪ್ರಧಾನಮಂತ್ರಿ

ದೇಶದಲ್ಲಿ ಎರಡು ಸಂವಿಧಾನಗಳು, ಇಬ್ಬರು ಪ್ರಧಾನಮಂತ್ರಿಗಳು ಮತ್ತು ಎರಡು ಧ್ವಜಗಳ ಮಾತನ್ನು ಡಾ. ಮುಖರ್ಜಿ ತೀವ್ರವಾಗಿ ವಿರೋಧಿಸಿದ್ದರು: ಪ್ರಧಾನಮಂತ್ರಿ

ರಾಷ್ಟ್ರ ನಿರ್ಮಾಣದ ಸಾರವು ಸಂಸ್ಥೆಗಳ ನಿರ್ಮಾಣದಲ್ಲಿದೆ ಎಂಬುದನ್ನು ಅವರು ಚೆನ್ನಾಗಿ ಅರ್ಥಮಾಡಿಕೊಂಡಿದ್ದರು: ಪ್ರಧಾನಮಂತ್ರಿ

ಮುಂದಿನ ದಶಕಗಳಲ್ಲಿ ಭಾರತದ ಆರ್ಥಿಕ ಶಕ್ತಿಯಾಗಿ ಮಾರ್ಪಡುವಂತಹ ರಾಷ್ಟ್ರೀಯ ಸಂಸ್ಥೆಗಳಿಗೆ ಡಾ. ಮುಖರ್ಜಿ ಅಡಿಪಾಯ ಹಾಕಿದರು: ಪ್ರಧಾನಮಂತ್ರಿ

प्रविष्टि तिथि: 06 JUL 2026 8:14PM by PIB Bengaluru

ಡಾ. ಶ್ಯಾಮ ಪ್ರಸಾದ್ ಮುಖರ್ಜಿ ಅವರ 125ನೇ ಜನ್ಮ ಜಯಂತಿ ಅಂಗವಾಗಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ವಿಡಿಯೋ ಸಂದೇಶದ ಮೂಲಕ ಸಭೆಯನ್ನುದ್ದೇಶಿಸಿ ಮಾತನಾಡಿದರು. ಪೂರ್ವ ನಿಗದಿತ ಪ್ರಯಾಣದ ಕಾರಣದಿಂದಾಗಿ ತಮ್ಮ ಭೌತಿಕ ಅನುಪಸ್ಥಿತಿಯನ್ನು ವಿವರಿಸುತ್ತಾ, ಈ ಮಹತ್ವದ ಸಂದರ್ಭಕ್ಕಾಗಿ ಭೌಗೋಳಿಕ ಅಂತರವನ್ನು ಕಡಿಮೆ ಮಾಡುವಲ್ಲಿ ಡಿಜಿಟಲ್ ಸಂಪರ್ಕ ವಹಿಸಿದ ಗಮನಾರ್ಹ ಶಕ್ತಿಯನ್ನು ಅವರು ಒತ್ತಿ ಹೇಳಿದರು. "ತಂತ್ರಜ್ಞಾನದ ಸಹಾಯದಿಂದ, ನಾನು ಐತಿಹಾಸಿಕ ಕಾರ್ಯಕ್ರಮದಲ್ಲಿ ನಿಮ್ಮೊಂದಿಗೆ ಸೇರುತ್ತಿದ್ದೇನೆ" ಎಂದು ಶ್ರೀ ಮೋದಿ ಹೇಳಿದರು.

ಇಡೀ ರಾಷ್ಟ್ರಕ್ಕೆ ಮತ್ತು ವಿಶೇಷವಾಗಿ ಪಶ್ಚಿಮ ಬಂಗಾಳಕ್ಕೆ ದಿನದ ಬಹಳ ಮುಖ್ಯವಾದ ಐತಿಹಾಸಿಕ ಮಹತ್ವವನ್ನು ಉಲ್ಲೇಖಿಸುತ್ತಾ, ಅದರ ಅತ್ಯಂತ ಶ್ರೇಷ್ಠ ಪುತ್ರರಲ್ಲಿ ಒಬ್ಬರಿಗೆ ಹೃತ್ಪೂರ್ವಕ ಗೌರವ ಸಲ್ಲಿಸುವ ಮೂಲಕ ಅವರು ಗೌರವ ಸಲ್ಲಿಸುವ ಸಭೆಯ ಮುಂದಾಳತ್ವ ವಹಿಸಿದ್ದರು. ರಾಷ್ಟ್ರದ ಮೂಲ ಸಮಗ್ರತೆಯನ್ನು ಕಾಪಾಡಲು ತಮ್ಮ ಸಂಪೂರ್ಣ ಅಸ್ತಿತ್ವವನ್ನು ಮೀಸಲಿಟ್ಟ ನಿಷ್ಠಾವಂತ ದೇಶಭಕ್ತನ ಹೊಳೆಯುವ ಚಿತ್ರಣವನ್ನು ಅವರು ಮುಂದಿಟ್ಟರು. "ಇಂದು ದೇಶದ ಭೂಮಿಯು ಭಾರತದ ಸಮಗ್ರತೆಗೆ ಸಮರ್ಪಿತವಾದ ದಾರ್ಶನಿಕನನ್ನು ಭಕ್ತಿಯಿಂದ ಸ್ಮರಿಸುತ್ತಿದೆ" ಎಂದು ಶ್ರೀ ಮೋದಿ ಹೇಳಿದರು.

ಪೂಜ್ಯ ನಾಯಕನ ಶಾಶ್ವತ ಪರಂಪರೆಯನ್ನು ಪ್ರತಿಬಿಂಬಿಸುತ್ತಾ, ದಶಕಗಳ ಹಿಂದೆ ನೆಟ್ಟ ಅಡಿಪಾಯದ ಚಿಂತನೆಗಳು ಈಗ ಸಾಮಾಜಿಕ ಮತ್ತು ರಾಜಕೀಯ ಭೂದೃಶ್ಯದಲ್ಲಿ ಹೇಗೆ ಗೋಚರವಾಗಿ ಅರಳುತ್ತಿವೆ ಎಂಬುದರತ್ತ ಪ್ರಧಾನಮಂತ್ರಿ ಗಮನ ಸೆಳೆದರು. ಈ ದೃಢವಾದ ಸೈದ್ಧಾಂತಿಕ ಚೌಕಟ್ಟು ರಾಷ್ಟ್ರದ ಸಮಕಾಲೀನ ಪ್ರಗತಿಗೆ ಮಾರ್ಗವನ್ನು ರೂಪಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿದೆ ಎಂದು ಅವರು ಶ್ಲಾಘಿಸಿದರು. "ಆಧುನಿಕ ಭಾರತಕ್ಕೆ ಪ್ರಗತಿ ನಿರ್ದೇಶನ ನೀಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವ ಕಲ್ಪನೆಯ ಬೀಜವನ್ನು ಇಂದು ನಾವು ಹೊಗಳುತ್ತಿದ್ದೇವೆ" ಎಂದು ಶ್ರೀ ಮೋದಿ ದೃಢಪಡಿಸಿದರು.

ರಾಷ್ಟ್ರೀಯ ಮಹತ್ವಾಕಾಂಕ್ಷೆಗಳನ್ನು ಸಾಧಿಸಲು ಅಗತ್ಯವಾದ ಅಂಶಗಳನ್ನು ವಿವರಿಸಿದ ಪ್ರಧಾನಮಂತ್ರಿಯವರು ಅವುಗಳ ನಡುವಿನ ಪ್ರಬಲವಾದ ಸಂಯೋಜನೆಯನ್ನು ವಿವರಿಸಿದರು. ಅಲ್ಲಿ ಅದಕ್ಕೆ ಆಧಾರವಾಗಿರುವ ಬೌದ್ಧಿಕ ಶಕ್ತಿ, ಶುದ್ಧ ಉದ್ದೇಶಗಳು ಮತ್ತು ಸಂಪೂರ್ಣ ಸಮರ್ಪಣೆ ಸರಾಗವಾಗಿ ಒಮ್ಮುಖವಾಗುತ್ತವೆ ಎಂದು ಹೇಳಿದ ಅವರು ಈ ಯಶಸ್ವಿ ಸೂತ್ರದ ಅಂತಿಮ ಸಾಕಾರ ಮತ್ತು ಪ್ರಾಯೋಗಿಕ ದಾಖಲೆಯಾಗಿ ಅವರು ಪ್ರಸಿದ್ಧ ದಾರ್ಶನಿಕರ ಜೀವನವನ್ನು ಪ್ರಸ್ತುತಪಡಿಸಿದರು. "ಈ ಎಲ್ಲಾ ಕೊಂಡಿಗಳು ಪರಸ್ಪರ ಸಂಪರ್ಕಗೊಂಡಾಗ, ನಿರ್ಣಯದ ನೆರವೇರಿಕೆ ಖಚಿತ" ಎಂದು ಶ್ರೀ ಮೋದಿ ಪ್ರತಿಪಾದಿಸಿದರು.

125 ನೇ ಜನ್ಮ ವಾರ್ಷಿಕೋತ್ಸವದ ಮೈಲಿಗಲ್ಲನ್ನು ಗುರುತಿಸುತ್ತಾ, ಅವರು ಐತಿಹಾಸಿಕ ನಾಯಕನಿಗೆ ಗೌರವಯುತವಾಗಿ ತಮ್ಮ ಆಳವಾದ ವೈಯಕ್ತಿಕ ಗೌರವವನ್ನು ಅರ್ಪಿಸಿದರು. ಮಹಾನ್ ದೇಶಭಕ್ತನ ಅತ್ಯುನ್ನತ ಪರಂಪರೆ ಮತ್ತು ತ್ಯಾಗಗಳನ್ನು ಶ್ರದ್ಧಾಪೂರ್ವಕವಾಗಿ ಗೌರವಿಸಲು ಅವರು ಭಾಷಣವನ್ನು ಕ್ಷಣ ಕಾಲ ನಿಲ್ಲಿಸಿದರು. "ಈ ಸಂದರ್ಭದಲ್ಲಿ ನಾನು ಡಾ. ಮುಖರ್ಜಿ ಅವರಿಗೆ ನಮಸ್ಕರಿಸುತ್ತೇನೆ ಮತ್ತು ನನ್ನ ಗೌರವಗಳನ್ನು ಅರ್ಪಿಸುತ್ತೇನೆ" ಎಂದು ಶ್ರೀ ಮೋದಿ ಹೇಳಿದರು.

ಪ್ರಸ್ತುತ ಆಡಳಿತದ 'ರಾಷ್ಟ್ರ ಮೊದಲು' ಎಂಬ ನೀತಿಯನ್ನು ಐತಿಹಾಸಿಕ ವ್ಯಕ್ತಿಗಳಿಗೆ ನೀಡುವ  ಸಮರ್ಪಕ  ಮನ್ನಣೆಯೊಂದಿಗೆ ಜೋಡಿಸುತ್ತಾ, ಈ ವಾರ್ಷಿಕೋತ್ಸವಕ್ಕೆ ಮೀಸಲಾಗಿರುವ ಎರಡು ವರ್ಷಗಳ ರಾಷ್ಟ್ರೀಯ ಆಚರಣೆಯ ಉತ್ಸವವನ್ನು ಪ್ರಧಾನಮಂತ್ರಿ ವಿವರಿಸಿದರು. ಕಳೆದ ಜುಲೈನಲ್ಲಿ ಪ್ರಾರಂಭವಾದ ವಿಸ್ತೃತ ಸ್ಮರಣಾರ್ಥ ಕಾರ್ಯಕ್ರಮಗಳು ದಾರ್ಶನಿಕರ ಮಾರ್ಗವನ್ನು ಅನುಸರಿಸಲು ಮತ್ತು ಗೌರವಿಸಲು ಸಂಘಟಿತ, ದೀರ್ಘಕಾಲೀನ ಪ್ರಯತ್ನವನ್ನು ಪ್ರತಿನಿಧಿಸುತ್ತವೆ ಎಂದು ಅವರು ವಿವರಿಸಿದರು. "ರಾಷ್ಟ್ರ ಮೊದಲು" ಎಂಬ ಸಂಕಲ್ಪದೊಂದಿಗೆ ಸರ್ಕಾರವಿದ್ದಾಗ, ರಾಷ್ಟ್ರೀಯ ವೀರರಿಗೂ ಸರಿಯಾದ ಗೌರವ ಸಿಗುತ್ತದೆ" ಎಂದು ಶ್ರೀ ಮೋದಿ ಹೇಳಿದರು.

ಬಂಗಾಳದಲ್ಲಿ ಹೊಸದಾಗಿ ರಚನೆಯಾದ ರಾಜ್ಯ ಸರ್ಕಾರವು ರಾಷ್ಟ್ರೀಯ ಆಚರಣೆಗಳ ಭವ್ಯತೆಯನ್ನು ಹೇಗೆ ಗಮನಾರ್ಹವಾಗಿ ಹೆಚ್ಚಿಸಿದೆ ಎಂಬುದರತ್ತ ಪ್ರಧಾನಮಂತ್ರಿ ಗಮನ ಸೆಳೆದರು. ಇತ್ತೀಚೆಗೆ ನಡೆದ ಭವ್ಯವಾದ 'ಪಶ್ಚಿಮ ಬಂಗಾ ದಿವಸ್' ಆಚರಣೆಯನ್ನು ಅವರು ಪ್ರದೇಶದ ಶ್ರೀಮಂತ ಪರಂಪರೆಗೆ ಸುಂದರವಾದ, ಸಾಂಸ್ಕೃತಿಕವಾಗಿ ಪ್ರತಿಧ್ವನಿಸುವ ವಂದನೆ ಎಂದು ಶ್ಲಾಘಿಸಿದರು. "ಇಂದಿನ ಕಾರ್ಯಕ್ರಮವು ಓರ್ವರ ಪರಂಪರೆಯ ಮೇಲಿನ ಗೌರವದ ಭಾಗವಾಗಿದೆ" ಎಂದು ಶ್ರೀ ಮೋದಿ ಗಮನಿಸಿದರು.

ನಿರ್ಣಾಯಕ ಐತಿಹಾಸಿಕ ಸಂಸದೀಯ ದಾಖಲೆಗಳನ್ನು ಪರಿಶೀಲಿಸುತ್ತಾ, 1947 ರ ತೀವ್ರ ಬಿಕ್ಕಟ್ಟನ್ನು ಪ್ರಧಾನಮಂತ್ರಿ ನೆನಪಿಸಿಕೊಂಡರು, ಆಗ ಇಡೀ ಬಂಗಾಳವನ್ನು ರಾಷ್ಟ್ರದಿಂದ ಬೇರ್ಪಡಿಸುವ ಬೆದರಿಕೆ ಇತ್ತು. ಭಾರತದೊಂದಿಗೆ ರಾಜ್ಯದ ಶಾಶ್ವತ ಏಕೀಕರಣವನ್ನು ಖಚಿತವಾಗಿ ಖಚಿತಪಡಿಸಿಕೊಳ್ಳಲು ಸಾರ್ವಜನಿಕ ಅಭಿಪ್ರಾಯವನ್ನು ರೂಪಿಸುವಲ್ಲಿ ನಾಯಕನ ಬಂಡೆಯಂತಹ ದೃಢವಾದ ರಾಜಕೀಯ ಪ್ರತಿರೋಧ ಮತ್ತು ಮಾಸ್ಟರ್‌ಕ್ಲಾಸ್ ಅನ್ನು ಅವರು ಶ್ಲಾಘಿಸಿದರು. "ಡಾ. ಮುಖರ್ಜಿ ಪ್ರಸಿದ್ಧವಾಗಿ ಹೇಳಿದಂತೆ, ಸುವರ್ಣ ಭವಿಷ್ಯದ ಅಡಿಪಾಯವನ್ನು ರಾಷ್ಟ್ರೀಯ ಏಕತೆಯ ಆಧಾರದ ಮೇಲೆ ಮಾತ್ರ ಹಾಕಬಹುದು" ಎಂದು ಶ್ರೀ ಮೋದಿ ನೆನಪಿಸಿಕೊಂಡರು.

ಐತಿಹಾಸಿಕ ಪ್ರತಿಭಟನೆಯನ್ನು ಸಮಕಾಲೀನ ಭೌಗೋಳಿಕ ರಾಜಕೀಯ ಸವಾಲುಗಳಿಗೆ ಜೋಡಿಸಿದ ಅವರು, ಅಂತಹ ಬೃಹತ್ ರಾಜಕೀಯ ಇಚ್ಛಾಶಕ್ತಿಯ ನಿರಂತರ ಅನುರಣನವನ್ನು ಉಲ್ಲೇಖಿಸಿದರು. ಆ ಹಿಂದಿನ ಸಂದರ್ಭಗಳನ್ನು ಪ್ರತಿಬಿಂಬಿಸುವುದು ಆಧುನಿಕ ಭೂದೃಶ್ಯವನ್ನು ಸಾದೃಶಗೊಳಿಸಲು (ನ್ಯಾವಿಗೇಟ್ ಮಾಡಲು) ಪ್ರಮುಖ ಸೈದ್ಧಾಂತಿಕ ಶಕ್ತಿಯನ್ನು ಒದಗಿಸುತ್ತದೆ ಎಂದು ಅವರು ಒತ್ತಿ ಹೇಳಿದರು. "ಇಂದಿನ ಸಂದರ್ಭಗಳನ್ನು ನೋಡಿದಾಗ ನಾವು ಇಂದಿಗೂ ಘರ್ಜನೆಯ ಬೃಹತ್ ರಾಜಕೀಯ ಇಚ್ಛಾಶಕ್ತಿಯನ್ನು ಅನುಭವಿಸುತ್ತೇವೆ" ಎಂಬ ಅಂಶದತ್ತಲೂ  ಶ್ರೀ ಮೋದಿ ಗಮನ ಸೆಳೆದರು.

ಸಂಪೂರ್ಣ ರಾಷ್ಟ್ರೀಯ ಏಕೀಕರಣಕ್ಕಾಗಿ ನಡೆದ ಹೋರಾಟವನ್ನು  ಸ್ಮರಿಸಿದ  ಪ್ರಧಾನಮಂತ್ರಿ, ದೇಶದ ಗಡಿಯೊಳಗೆ ದ್ವಿ ಆಡಳಿತ ಮತ್ತು ಸಾಂಕೇತಿಕ ವ್ಯವಸ್ಥೆಗಳನ್ನು ಕಾಪಾಡಿಕೊಳ್ಳುವುದರ ವಿರುದ್ಧದ ತೀವ್ರವಾದ ಐತಿಹಾಸಿಕ ವಿರೋಧವನ್ನು ವಿವರಿಸಿದರು. ಆಡಳಿತ ಮತ್ತು ರಾಷ್ಟ್ರೀಯ ಗುರುತಿನಲ್ಲಿ ಕಟ್ಟುನಿಟ್ಟಾದ ಏಕರೂಪತೆಯನ್ನು ಆಶಿಸುವ ಪ್ರಬಲವಾದ ಚುಟುಕಾದ ಘೋಷಣೆಗಳ ಮಂತ್ರವನ್ನು ಅವರು ನೆನಪಿಸಿಕೊಂಡರು. "ದೇಶದಲ್ಲಿ ಎರಡು ಸಂವಿಧಾನಗಳು, ಇಬ್ಬರು ಪ್ರಧಾನ ಮಂತ್ರಿಗಳು ಮತ್ತು ಎರಡು ಧ್ವಜಗಳ ಮಾತನ್ನು ಅವರು ತೀವ್ರವಾಗಿ ವಿರೋಧಿಸಿದರು" ಎಂದು ಶ್ರೀ ಮೋದಿ ಹೇಳಿದರು.

ಹೋರಾಟವನ್ನು ಕೇವಲ ರಾಜಕೀಯ ಘೋಷಣೆಯಾಗಿ ಮಾತ್ರವಲ್ಲದೆ ಸಮಾನ ಹಕ್ಕುಗಳಿಗಾಗಿರುವ ಆಳವಾದ ಕರೆಯೆಂದು ಚಿತ್ರಿಸಿದ ಅವರು, ಈ ಏಕೀಕರಣದ ಕಾರಣಕ್ಕಾಗಿ ಕಾಶ್ಮೀರದಲ್ಲಿ ಮಾಡಿದ ಅಂತಿಮ ತ್ಯಾಗವನ್ನು ಶೃದ್ಧಾಪೂರ್ವಕವಾಗಿ ಗುರುತಿಸಿದರು. ಪ್ರಸ್ತುತ ಆಡಳಿತವು 370 ನೇ ವಿಧಿಯ ಅಡೆತಡೆಗಳನ್ನು ಶಾಶ್ವತವಾಗಿ ಕೆಡವುವ ಮೂಲಕ ಪರಂಪರೆಯನ್ನು ಯಶಸ್ವಿಯಾಗಿ ಗೌರವಿಸಿದೆ ಎಂದು ಅವರು ಅಪಾರ ಹೆಮ್ಮೆ ವ್ಯಕ್ತಪಡಿಸಿದರು. "ಇಂದು ನಮ್ಮ ಸರ್ಕಾರವು ಗೋಡೆಯನ್ನು ಕೆಡವುವ ಮೂಲಕ, ಡಾ. ಮುಖರ್ಜಿ ಅವರ ಕನಸನ್ನು ನನಸಾಗಿಸಿದೆ ಎಂದು ಹೆಮ್ಮೆಪಡುತ್ತದೆ" ಎಂದು ಶ್ರೀ ಮೋದಿ ಪ್ರತಿಪಾದಿಸಿದರು.

ಏಕೀಕೃತ ರಾಷ್ಟ್ರದ ಚಿಂತನೆ-ದೃಷ್ಟಿಕೋನವನ್ನು ವಿಸ್ತರಿಸುತ್ತಾ, ಪ್ರಾದೇಶಿಕ ವಿಭಜನೆಗಳಿಲ್ಲದ, ಪೂರ್ವದಿಂದ ಪಶ್ಚಿಮಕ್ಕೆ ಸಮಾನ ಅವಕಾಶಗಳು ದೋಷರಹಿತವಾಗಿ ವಿಸ್ತರಿಸುವ, ಸುಗಮ ಸಮಾಜವನ್ನು ಪ್ರಧಾನಮಂತ್ರಿ ವಿವರಿಸಿದರು. ವೈಯಕ್ತಿಕ ರಾಜ್ಯ ಗುರುತುಗಳು ಸಾಮೂಹಿಕವಾಗಿ ಒಂದೇ ಹಂಚಿಕೆಯ ಶೀರ್ಷಿಕೆಯ ಅಡಿಯಲ್ಲಿ/ಹಣೆಬರಹದ ಅಡಿಯಲ್ಲಿ ರಾಷ್ಟ್ರೀಯ ಶಕ್ತಿಯನ್ನು ಬಲಪಡಿಸುವ ದೃಢವಾದ ಚೌಕಟ್ಟನ್ನು ಅವರು ನಿರೂಪಿಸಿದರು. "ಇದು ಅವರು ತಮ್ಮ ಜೀವನದಿಂದ ವ್ಯಾಖ್ಯಾನಿಸಿದ ಅದೇ ರಾಷ್ಟ್ರೀಯ ದೃಷ್ಟಿಕೋನದ ವಿಸ್ತರಣೆಯಾಗಿದೆ" ಎಂದು ಶ್ರೀ ಮೋದಿ ದೃಢಪಡಿಸಿದರು.

ಏಕರೂಪದ ಕಾನೂನು ಭೂದೃಶ್ಯದ ಸಾಕ್ಷಾತ್ಕಾರವನ್ನು ವಿವರಿಸುತ್ತ, ಸಮಗ್ರ ಆಡಳಿತ ಮಾದರಿಯಿಂದ ಪಡೆದ ವ್ಯಾಪಕ ಸ್ಫೂರ್ತಿಯನ್ನು ಅವರು ಗಮನಿಸಿದರು. ರಾಷ್ಟ್ರದ ಅಡಿಪಾಯದ ದಾಖಲೆಯನ್ನು ವಿನಾಯಿತಿ ಇಲ್ಲದೆ ಸಾರ್ವತ್ರಿಕವಾಗಿ ಅನ್ವಯಿಸುವುದನ್ನು ನೋಡುವಲ್ಲಿ ಇರುವ ಸಾಮೂಹಿಕ ಹೆಮ್ಮೆಯನ್ನು ಅವರು ಎತ್ತಿ ತೋರಿಸಿದರು. "ಇಂದು ಭಾರತದ ಸಂವಿಧಾನವನ್ನು ದೇಶಾದ್ಯಂತ ಪೂರ್ಣ ಹೆಮ್ಮೆ ಮತ್ತು ವೈಭವದಿಂದ ಜಾರಿಗೆ ತರಲಾಗಿದೆ" ಎಂದು ಶ್ರೀ ಮೋದಿ ನುಡಿದರು.

ಶಿಕ್ಷಣದ ನಿರ್ಣಾಯಕ ಕ್ಷೇತ್ರದತ್ತ ಗಮನ ಹರಿಸಿದ ಪ್ರಧಾನಮಂತ್ರಿ, ಕಲ್ಕತ್ತಾ ವಿಶ್ವವಿದ್ಯಾಲಯದ ಅತ್ಯಂತ ಕಿರಿಯ ಉಪಕುಲಪತಿಯಾಗಿ ದಾರ್ಶನಿಕನ ಆರಂಭಿಕ ಆಡಳಿತಾತ್ಮಕ ಪ್ರತಿಭೆಯನ್ನು ಸ್ಮರಿಸಿದರು. ಶೈಕ್ಷಣಿಕ ಸ್ಥಳಗಳನ್ನು ಆಡಳಿತಾತ್ಮಕ ಅಡೆತಡೆಗಳಿಂದ ಮುಕ್ತಗೊಳಿಸಿ ರಾಷ್ಟ್ರೀಯ ಭವಿಷ್ಯ ನಿರ್ಮಾಣದ ಸಕ್ರಿಯ ಎಂಜಿನ್‌ಗಳಾಗಿ ಪರಿವರ್ತಿಸುವ ಉದ್ದೇಶಪೂರ್ವಕ ಪ್ರಯತ್ನವನ್ನು ಅವರು ಶ್ಲಾಘಿಸಿದರು, ವಸಾಹತುಶಾಹಿ ಮನಸ್ಥಿತಿಗಳಿಂದ ಸಂಪೂರ್ಣವಾಗಿ ಮುಕ್ತಗೊಳಿಸಿದ್ದನ್ನೂ ಅವರು ಕೊಂಡಾಡಿದರು. "ರಾಷ್ಟ್ರ ನಿರ್ಮಾಣದ ಸಾರವು ಸಂಸ್ಥೆಗಳ ನಿರ್ಮಾಣದಲ್ಲಿದೆ ಎಂದು ಅವರು ಚೆನ್ನಾಗಿ ಅರ್ಥಮಾಡಿಕೊಂಡರು" ಎಂದು ಶ್ರೀ ಮೋದಿ ಹೇಳಿದರು.

ಭಾಷಾ ಹೆಮ್ಮೆಯ ಮೇಲೆ ಕೇಂದ್ರೀಕರಿಸಿದ ಅವರು, ಸ್ಥಳೀಯ ಭಾಷೆಯ ಬೋಧನೆಯ ಮೂಲಕ ಪ್ರಾದೇಶಿಕ ಸ್ವಾಭಿಮಾನವನ್ನು ಪುನಃಸ್ಥಾಪಿಸುವ ಐತಿಹಾಸಿಕ ಉತ್ತೇಜನವನ್ನೂ ಎತ್ತಿ ತೋರಿಸಿದರು. ನಿಜವಾದ ರಾಷ್ಟ್ರೀಯ ವಿಶ್ವಾಸವು ಸ್ಥಳೀಯ ಆತ್ಮ ಮತ್ತು ಅದರ ಸ್ಥಳೀಯ ಭಾಷೆಗಳೊಂದಿಗೆ ಆಳವಾಗಿ ಹೆಣೆದುಕೊಂಡಿರಬೇಕು ಎಂಬ ಮೂಲ ನಂಬಿಕೆಯನ್ನು ಅವರು ಪುನರುಚ್ಚರಿಸಿದರು. "ಭಾರತವು ಆತ್ಮವಿಶ್ವಾಸದ ರಾಷ್ಟ್ರವಾಗಬೇಕಾದರೆ, ಅದರ ಶಿಕ್ಷಣವು ಭಾರತೀಯ ಆತ್ಮದೊಂದಿಗೆ ಸಂಪರ್ಕ ಹೊಂದಿರಬೇಕು ಎಂಬುದು ಅವರ ನಂಬಿಕೆಯಾಗಿತ್ತು" ಎಂದು ಶ್ರೀ ಮೋದಿ ದೃಢಪಡಿಸಿದರು.

ಐತಿಹಾಸಿಕ ಶೈಕ್ಷಣಿಕ ತತ್ವಶಾಸ್ತ್ರಗಳನ್ನು ಆಧುನಿಕ ನೀತಿಯೊಂದಿಗೆ ಜೋಡಿಸುತ್ತಾ, ಹೊಸ ಶಿಕ್ಷಣ ನೀತಿಯು ಸ್ಥಳೀಯ ಭಾಷೆಗಳಿಗೆ ಬಲವಾದ ಒತ್ತು ನೀಡುವುದನ್ನು ಪ್ರಧಾನಮಂತ್ರಿ ಹೆಮ್ಮೆಯಿಂದ ಪ್ರಸ್ತಾಪಿಸಿದರು. ಈ ಪ್ರಸ್ತುತ ವ್ಯವಸ್ಥಿತ ಪರಿಷ್ಕರಣೆಯು ದೀರ್ಘಕಾಲದ ರಾಷ್ಟ್ರೀಯ ಆಶಯದ ಅಂತಿಮ ಆಡಳಿತಾತ್ಮಕ ನೆರವೇರಿಕೆಯಾಗಿದೆ  ಎಂದರು. "ಡಾ. ಮುಖರ್ಜಿ ಅವರು ಸ್ಥಳೀಯ ಭಾಷೆಗಳಿಗೆ ಸಂಬಂಧಿಸಿದಂತೆ ಕಂಡ ಕನಸನ್ನು ನಮ್ಮ ಸರ್ಕಾರ ಪೂರೈಸಿದೆ" ಎಂದು ಶ್ರೀ ಮೋದಿ ಪ್ರತಿಪಾದಿಸಿದರು.

ಸ್ವತಂತ್ರ ಭಾರತದ ಮೊದಲ ಕೈಗಾರಿಕಾ ಸಚಿವರ ಆರ್ಥಿಕ ದೂರದೃಷ್ಟಿಯನ್ನು ಅನ್ವೇಷಿಸುತ್ತಾ, ಚಿತ್ತರಂಜನ್ ಲೋಕೋಮೋಟಿವ್ ವರ್ಕ್ಸ್, ಸಿಂದ್ರಿ ರಸಗೊಬ್ಬರ ಸ್ಥಾವರ, ದಾಮೋದರ್ ವ್ಯಾಲಿ ಕಾರ್ಪೊರೇಷನ್ ಮತ್ತು ಐಎಫ್‌ಸಿಐನಂತಹ ಸ್ಮಾರಕ ಸಂಸ್ಥೆಗಳ ಸ್ಥಾಪನೆಯನ್ನು ಪಟ್ಟಿ ಮಾಡಿದರು. ಈ ಅಡಿಪಾಯ ಸಂಸ್ಥೆಗಳು ದಶಕಗಳ ಕಾಲ ರಾಷ್ಟ್ರದ ರೈಲ್ವೆ, ಕೃಷಿ, ಇಂಧನ ಮತ್ತು ಹಣಕಾಸು ಕ್ಷೇತ್ರಗಳನ್ನು ಯಶಸ್ವಿಯಾಗಿ ಪೂರೈಸಿದ ಕೀರ್ತಿಗೆ ಪಾತ್ರವಾಗಿವೆ. "ಮುಂದಿನ ದಶಕಗಳಲ್ಲಿ ಭಾರತದ ಆರ್ಥಿಕ ಶಕ್ತಿಯಾಗಿ ಮಾರ್ಪಟ್ಟ ಅಂತಹ ರಾಷ್ಟ್ರೀಯ ಸಂಸ್ಥೆಗಳಿಗೆ ಅವರು ಅಡಿಪಾಯ ಹಾಕಿದರು" ಎಂದು ಶ್ರೀ ಮೋದಿ ನುಡಿದರು.

ವಿಸ್ತಾರವಾದ ಮೂಲಸೌಕರ್ಯ ಮತ್ತು ಶೈಕ್ಷಣಿಕ ಯೋಜನೆಗಳ ಉದ್ದೇಶವನ್ನು ಪುನರ್ವಿಮರ್ಶಿಸಿದ ಪ್ರಧಾನಮಂತ್ರಿ, ಅವುಗಳನ್ನು ಎಂದಿಗೂ ಕೇವಲ ಕಾರ್ಖಾನೆಗಳು ಅಥವಾ ಪದವಿ ನೀಡುವ ಗಿರಣಿಗಳಾಗಿ ನೋಡಲಾಗುವುದಿಲ್ಲ ಎಂದು ವಿವರಿಸಿದರು. ಬದಲಾಗಿ, ಸಂಶೋಧನಾ ಪ್ರಯೋಗಾಲಯಗಳು ಮತ್ತು ಕೈಗಾರಿಕಾ ಸ್ಥಾವರಗಳು ರಾಷ್ಟ್ರೀಯ ಪ್ರಗತಿಗೆ ಮೀಸಲಾದ ಪವಿತ್ರ ಸ್ಥಳಗಳಾಗಿ ಕಾರ್ಯನಿರ್ವಹಿಸುವ ಆಳವಾದ ತತ್ವಶಾಸ್ತ್ರವನ್ನು ಅವರು ವಿವರಿಸಿದರು. "ಅವರಿಗೆ, ಇವೆಲ್ಲವೂ ರಾಷ್ಟ್ರ ನಿರ್ಮಾಣದ ಧ್ಯಾನ ಕೇಂದ್ರಗಳಾಗಿದ್ದವು" ಎಂದು ಶ್ರೀ ಮೋದಿ ಹೇಳಿದರು.

ಸಮಗ್ರ ಅಭಿವೃದ್ಧಿ ಸಿದ್ಧಾಂತವನ್ನು ವಿವರಿಸುತ್ತಾ, ಪ್ರತಿಭೆಯನ್ನು ಪೋಷಿಸುವ, ನಾವೀನ್ಯತೆಯನ್ನು ಉತ್ತೇಜಿಸುವ ಮತ್ತು ಸಂಪೂರ್ಣ ಆರ್ಥಿಕ ಸ್ವಾವಲಂಬನೆಯನ್ನು ಭದ್ರಪಡಿಸುವ ವ್ಯವಸ್ಥೆಗಳ ಅಗತ್ಯವನ್ನು ಅವರು ಉಲ್ಲೇಖಿಸಿದರು. ಭವಿಷ್ಯದ ಪೀಳಿಗೆಗೆ ಸಬಲೀಕರಣಗೊಂಡ ಪರಂಪರೆಯನ್ನು ನಿರ್ಮಿಸುವ ನಿಖರವಾದ ಮನೋಭಾವವು ರಾಷ್ಟ್ರೀಯ ಪ್ರಗತಿಯ ಆಧುನಿಕ ದೃಷ್ಟಿಕೋನವನ್ನು ಮುನ್ನಡೆಸುತ್ತಿದೆ ಎಂದು ಅವರು ಘೋಷಿಸಿದರು. "ಈ ಮನೋಭಾವವೇ ಇಂದು ಅಭಿವೃದ್ಧಿ ಹೊಂದಿದ ಭಾರತಕ್ಕೆ ಸ್ಫೂರ್ತಿ" ಎಂದು ಶ್ರೀ ಮೋದಿ ದೃಢಪಡಿಸಿದರು.

ಯುವ ಪೀಳಿಗೆಗೆ ಕಾರ್ಯಪ್ರವೃತ್ತರಾಗಲು ಬಲವಾದ ಕರೆಯನ್ನು ನೀಡಿದ ಪ್ರಧಾನಮಂತ್ರಿ, ಏಕೀಕೃತ ರಾಷ್ಟ್ರಕ್ಕಾಗಿ ಐತಿಹಾಸಿಕ ಹೋರಾಟವನ್ನು ಸರ್ವೋಚ್ಚ ರಾಷ್ಟ್ರೀಯ ಶ್ರೇಷ್ಠತೆಗಾಗಿ ಆಧುನಿಕ ಹೋರಾಟವಾಗಿ ಉನ್ನತೀಕರಿಸುವಂತೆ ಆಗ್ರಸಿದರು. ಸಂಪೂರ್ಣ ಸ್ವಾವಲಂಬನೆಯನ್ನು ಸಾಧಿಸುವ ಬೃಹತ್ ಜವಾಬ್ದಾರಿಯನ್ನು ಸಾಮೂಹಿಕವಾಗಿ ಹೊರುವಂತೆ ಅವರು ಯುವಜನರಿಗೆ ಸವಾಲು ಹಾಕಿದರು. "ನಾವು ಅಭಿವೃದ್ಧಿ ಹೊಂದಿದ ಭಾರತದ ನಿರ್ಣಯವನ್ನು ಸಾಮೂಹಿಕವಾಗಿ ಪೂರೈಸಬೇಕು" ಎಂದು ಶ್ರೀ ಮೋದಿ ಪ್ರತಿಪಾದಿಸಿದರು.

ಐತಿಹಾಸಿಕ ಸಲಹೆಯೊಂದಿಗೆ ತಮ್ಮ ಭಾಷಣವನ್ನು ಮುಕ್ತಾಯಗೊಳಿಸುವಾಗ ಅವರು, ಪ್ರತಿಯೊಂದು ಕಾರ್ಯವನ್ನು ಸಂಪೂರ್ಣ ಗಂಭೀರತೆ, ಸಮರ್ಪಣೆ ಮತ್ತು ಪೂರ್ಣಗೊಳಿಸುವ ಬದ್ಧತೆಯೊಂದಿಗೆ ಕೈಗೊಳ್ಳುವಂತೆ ಪ್ರೇಕ್ಷಕರನ್ನು ಒತ್ತಾಯಿಸಿದರು. ಭಾಗವಹಿಸಿದ ಎಲ್ಲರಿಗೂ ಅವರ ಭವಿಷ್ಯದ ಪ್ರಯತ್ನಗಳಿಗಾಗಿ ತಮ್ಮ ಆತ್ಮೀಯ ಶುಭಾಶಯಗಳನ್ನು ತಿಳಿಸುವ ಮೂಲಕ ಪ್ರಧಾನಮಂತ್ರಿಯವರು ವರ್ಚುವಲ್ ಭಾಷಣವನ್ನು ಕೊನೆಗೊಳಿಸಿದರು. "ನೀವು ಯಾವುದೇ ಕೆಲಸವನ್ನು ಪ್ರಾರಂಭಿಸಿದರೂ ಅದನ್ನು ಪೂರ್ಣ ಗಂಭೀರತೆಯಿಂದ ಮಾಡಿ ಮತ್ತು ಅದನ್ನು ಅಪೂರ್ಣವಾಗಿ ಬಿಡಬೇಡಿ" ಎಂದು ಶ್ರೀ ಮೋದಿ ದೃಢವಾಗಿ ಹೇಳಿದರು.

 

*****


(रिलीज़ आईडी: 2281906) आगंतुक पटल : 12
इस विज्ञप्ति को इन भाषाओं में पढ़ें: English , Urdu , Marathi , हिन्दी , Manipuri , Bengali , Assamese , Punjabi , Gujarati , Odia , Telugu , Malayalam