ಪ್ರಧಾನ ಮಂತ್ರಿಯವರ ಕಛೇರಿ
ಪಶ್ಚಿಮ ಬಂಗಾಳದ ಕೋಲ್ಕತ್ತಾದಲ್ಲಿ ನಡೆದ 12ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಪ್ರಧಾನಮಂತ್ರಿ ಅವರ ಭಾಷಣದ ಕನ್ನಡ ಅನುವಾದ
प्रविष्टि तिथि:
21 JUN 2026 8:25AM by PIB Bengaluru
ಗೌರವಾನ್ವಿತ ರಾಜ್ಯಪಾಲ ಶ್ರೀ ಆರ್.ಎನ್. ರವಿ ಜಿ, ಉತ್ಸಾಹಭರಿತ ಮುಖ್ಯಮಂತ್ರಿ ಶ್ರೀ ಸುವೇಂದು ಅಧಿಕಾರಿ ಜಿ, ಕೇಂದ್ರ ಸರ್ಕಾರದಲ್ಲಿ ನನ್ನ ಸಹೋದ್ಯೋಗಿ ಶ್ರೀ ಪ್ರತಾಪರಾವ್ ಜಾಧವ್ ಜಿ, ವೇದಿಕೆಯಲ್ಲಿದ್ದ ಎಲ್ಲಾ ಇತರ ಗಣ್ಯರು, ಕೋಲ್ಕತ್ತಾದಲ್ಲಿ ನೆರೆದಿದ್ದ ಎಲ್ಲ ಜನರೇ, ಭಾರತ ಮತ್ತು ವಿಶ್ವದಾದ್ಯಂತದ ಈ ಯೋಗ ಆಚರಣೆಯಲ್ಲಿ ಭಾಗವಹಿಸುತ್ತಿರುವ ಪ್ರತಿಯೊಬ್ಬರೂ ಮತ್ತು ನನ್ನ ಪ್ರೀತಿಯ ದೇಶವಾಸಿಗಳೇ, ನಿಮ್ಮೆಲ್ಲರಿಗೂ ನನ್ನ ಶುಭಾಶಯಗಳು.
ಜೂನ್ 21 ರಂದು ಭೂಮಿಯ ಕೆಲವು ಭಾಗಗಳಲ್ಲಿ, ಹಗಲು ಬೆಳಕು ಅತಿ ಹೆಚ್ಚು ಅವಧಿಯ ದಿನವಾಗಿದೆ. ಮತ್ತು ಅಂತಾರಾಷ್ಟ್ರೀಯ ಯೋಗ ದಿನದ ಕಾರಣದಿಂದಾಗಿ ಜೂನ್ 21 ರಂದು ವಿಶ್ವದ ಅತಿದೊಡ್ಡ ಸಾಮೂಹಿಕ ಆಚರಣೆಯ ದಿನವಾಗಿದೆ. ಜಗತ್ತಿನ ವಿವಿಧ ಮೂಲೆಗಳಿಂದ ಯೋಗದ ಅಸಾಧಾರಣ ಚಿತ್ರಗಳು ಬರುತ್ತಿವೆ. ಭಾರತದಲ್ಲಿ ಹಿಮಾಲಯದಿಂದ ಹಿಂದೂ ಮಹಾಸಾಗರದವರೆಗೆ, ಈಶಾನ್ಯ ಮತ್ತು ಪೂರ್ವದಲ್ಲಿ ಬಂಗಾಳದಿಂದ ಪಶ್ಚಿಮದಲ್ಲಿ ಸೌರಾಷ್ಟ್ರದವರೆಗೆ, ಇಡೀ ರಾಷ್ಟ್ರವು ಯೋಗದ ಶಕ್ತಿ ಮತ್ತು ಪ್ರಜ್ಞೆಯಿಂದ ತುಂಬಿರುವಂತೆ ಕಾಣುತ್ತದೆ. ಇಡೀ ದೇಶ, ಇಡೀ ಜಗತ್ತು ಬೆಸೆದಿದೆ ಮತ್ತು ಅದು ಯೋಗದ ನಿಜವಾದ ಶಕ್ತಿ. ಯೋಗ ಎಲ್ಲರನ್ನೂ ಒಗ್ಗೂಡಿಸುತ್ತದೆ, ಯೋಗ ಎಲ್ಲರನ್ನೂ ಒಟ್ಟಿಗೆ ತರುತ್ತದೆ. ಈ ಸಂದರ್ಭದಲ್ಲಿ ಅಂತಾರಾಷ್ಟ್ರೀಯ ಯೋಗ ದಿನದಂದು ನಾನು ಇಡೀ ಜಗತ್ತಿಗೆ, ಎಲ್ಲಾ ಮಾನವೀಯತೆಗೆ ನನ್ನ ಹೃತ್ಪೂರ್ವಕ ಶುಭಾಶಯ ತಿಳಿಸುತ್ತೇನೆ.
ಮಿತ್ರರೇ,
ಯೋಗ ದಿನದಂದು ಕೋಲ್ಕತ್ತಾದ ಜನರು ಇಲ್ಲಿ, ವಿಶೇಷವಾಗಿ ಬಂಗಾಳದಲ್ಲಿ ರಚಿಸಲಾದ ಸ್ವಚ್ಛತಾ ಯೋಗಕ್ಕಾಗಿ ನಾನು ಅವರನ್ನು ಶ್ಲಾಘಿಸಲು ಬಯಸುತ್ತೇನೆ. ಇದು ಅದ್ಭುತ ಉಪಕ್ರಮ – ‘ಸ್ವಚ್ಛತಾ ಸೇ ಸ್ವಾಗತ್’ ಉಪಕ್ರಮಕ್ಕಾಗಿ ಇಲ್ಲಿ ಕೈಗೊಂಡಿರುವ ಸ್ಥಿರ ಪ್ರಯತ್ನಗಳು ಮತ್ತು ನಾಗರಿಕ ಕರ್ತವ್ಯವು ನಮ್ಮ ಎಲ್ಲಾ ದೇಶವಾಸಿಗಳಿಗೆ ಒಂದು ದೊಡ್ಡ ಸ್ಫೂರ್ತಿಯಾಗಿದೆ.
ಮಿತ್ರರೇ,
ಯೋಗ ದಿನದ ಸಂದರ್ಭದಲ್ಲಿ ಬಂಗಾಳದಲ್ಲಿರುವುದು ನಿಜಕ್ಕೂ ವಿಶೇಷ. ಭಗವಾನ್ ರಾಮಕೃಷ್ಣ ಪರಮಹಂಸರಂತಹ ಸಂತರು ಜನಿಸಿದ, ಸ್ವಾಮಿ ವಿವೇಕಾನಂದರು ಇಡೀ ಜಗತ್ತಿಗೆ ಯೋಗವನ್ನು ಪರಿಚಯಿಸಿದ, ಮಹರ್ಷಿ ಅರಬಿಂದೋರಂತಹ ಮಹಾನ್ ಯೋಗಿಗಳು ಜನಿಸಿದ, ಲಹಿರಿ ಮಹಾಶಯರು ಯೋಗ ಸಂಪ್ರದಾಯವನ್ನು ಹೊಸ ಎತ್ತರಕ್ಕೆ ಏರಿಸಿದ ಬಂಗಾಳದ ಈ ಪವಿತ್ರ ಭೂಮಿ - ಈ ಮಣ್ಣಿನಲ್ಲಿ ಸಾಮೂಹಿಕ ಯೋಗವನ್ನು ಅನುಭವಿಸುವುದು ಒಂದು ವಿಶಿಷ್ಟ ಆಧ್ಯಾತ್ಮಿಕ ಭಾವನೆ ನೀಡುತ್ತದೆ. ಈ ಭೂಮಿಯಲ್ಲಿ ಜನಿಸಿದ ಗುರುದೇವ್ ರವೀಂದ್ರನಾಥ ಟ್ಯಾಗೋರ್, ಮನುಷ್ಯನ ಗುರುತು ಪ್ರತ್ಯೇಕವಾಗಿ ಉಳಿಯುವುದರಲ್ಲಲ್ಲ, ಆದರೆ ಅವನ ಸುತ್ತಲಿನ ಪ್ರಪಂಚದೊಂದಿಗೆ ಸಂಪರ್ಕ ಸಾಧಿಸುವಲ್ಲಿ ಇದೆ ಎಂದು ನಂಬಿದ್ದರು. ಈ ಸಂಪರ್ಕವು ಯೋಗದ ಸಾರವಾಗಿದೆ. ಮಹರ್ಷಿ ಅರಬಿಂದೋ ಅವರು ಕೂಡ ಹೀಗೆ ಹೇಳಿದರು - ನಮ್ಮ ಇಡೀ ಜೀವನವು ಯೋಗವೇ, ನಮಗೆ ಅದರ ಬಗ್ಗೆ ಅರಿವಿರಲಿ ಅಥವಾ ತಿಳಿಯದೆಯೇ, ಯೋಗವು ನಮ್ಮ ಸ್ವಭಾವದ ಭಾಗವಾದಾಗ, ಅದು ಮನುಕುಲದ ಐಕ್ಯತೆಯ ಭದ್ರ ಬುನಾದಿಯಾಗುತ್ತದೆ.
ಮಿತ್ರರೇ,
ಯೋಗವು ಕೇವಲ ದೈಹಿಕ ವ್ಯಾಯಾಮದ ಸಾಧನವಲ್ಲ. ಯೋಗವು ಯಾವುದೇ ಒಂದು ವಯಸ್ಸಿನ ಗುಂಪಿಗೆ ಸೀಮಿತವಾಗಿಲ್ಲ. ಭಾರತದಲ್ಲಿ ಯೋಗವು ಮಾನವ ಜೀವನದಲ್ಲಿ ಒಂದು ಬೆಳಕು, ಪ್ರಜ್ಞೆ ಮತ್ತು ಶಕ್ತಿಯೊಂದಿಗಿನ ಒಕ್ಕೂಟ ಎಂದು ನಮಗೆ ತಿಳಿದಿದೆ ಮತ್ತು ನೋಡಿದ್ದೇವೆ. ಅದಕ್ಕಾಗಿಯೇ ಈ ವರ್ಷದ ಅಂತಾರಾಷ್ಟ್ರೀಯ ಯೋಗ ದಿನದ ಘೋಷವಾಕ್ಯ ‘ಆರೋಗ್ಯಕರ ವೃದ್ಧಾಪ್ಯಕ್ಕಾಗಿ ಯೋಗ’ ಎಂದು ಆಯ್ಕೆ ಮಾಡಲಾಗಿದ್ದು, ವಯಸ್ಸು ಮುಂದುವರೆದಂತೆ ನಾವು ಆರೋಗ್ಯವಾಗಿ, ಶಕ್ತಿಯುತವಾಗಿ ಮತ್ತು ಸಕ್ರಿಯವಾಗಿ ಉಳಿಯಬಹುದು - ಯೋಗವು ಇದಕ್ಕೆ ನಮಗೆ ಜೀವನದ ಮಾರ್ಗವನ್ನು ತೋರಿಸುತ್ತದೆ.
ಮಿತ್ರರೇ,
”ಆರೋಗ್ಯಕರ ವೃದ್ಧಾಪ್ಯಕ್ಕಾಗಿ ಯೋಗ’’ ಎಂದು ನಾವು ಮಾತನಾಡುವಾಗ, ವಯಸ್ಸು ಮಾನವ ಸಾಮರ್ಥ್ಯವನ್ನು ಕಡಿಮೆ ಮಾಡದಂತೆ ನಾವು ಕೆಲಸ ಮಾಡಬಹುದು ಎಂದರ್ಥ. ಯೋಗವು ಮಾನವ ಜೀವನವು ನಿರಂತರ ಬೆಳವಣಿಗೆಗೆ ಶ್ರಮಿಸಲು ಸಹಾಯ ಮಾಡುತ್ತದೆ. ನಾವು 20 ವರ್ಷಕ್ಕಿಂತ 40 ವರ್ಷ ವಯಸ್ಸಿನಲ್ಲಿ ಹೆಚ್ಚು ಹೊಂದಿಕೊಳ್ಳುವವರಾಗಿರಬೇಕು. 30 ವರ್ಷಕ್ಕಿಂತ 50 ವರ್ಷ ವಯಸ್ಸಿನಲ್ಲಿ ಹೆಚ್ಚು ಶಕ್ತಿಯುತವಾಗಿರಬೇಕು. 50 ವರ್ಷಕ್ಕಿಂತ 70 ವರ್ಷ ವಯಸ್ಸಿನಲ್ಲಿ ಜೀವನಶೈಲಿ ಕಾಯಿಲೆಗಳಿಗೆ ಹೆಚ್ಚು ನಿಗ್ರಹವಾಗಿರಬೇಕು. ಅದಕ್ಕೆ ಯೋಗವು ನಮಗೆ ಸಹಾಯ ಮಾಡುತ್ತದೆ. ಇದು ನಮ್ಮ ದೇಹವನ್ನು ಹೊಂದಿಕೊಳ್ಳುವಂತೆ ಮಾಡಲು ಸಹಾಯ ಮಾಡುತ್ತದೆ. ಇದು ನಮ್ಮ ಶಕ್ತಿಯ ಮಟ್ಟವನ್ನು ಉನ್ನತ ಮಟ್ಟದಲ್ಲಿರಿಸುತ್ತದೆ, ಇದು ಶಾಂತ ಒತ್ತಡ-ಮುಕ್ತ ಜೀವನ ಕಾಯ್ದುಕೊಳ್ಳಲು ಸಹಾಯ ಮಾಡುತ್ತದೆ ಮತ್ತು ಜೀವನಶೈಲಿ ಕಾಯಿಲೆಗಳನ್ನು ದೂರವಿಡಲು ಸಹಾಯ ಮಾಡುತ್ತದೆ.ಅಲ್ಲದೆ, ನಿಯಮಿತ ಅಭ್ಯಾಸದೊಂದಿಗೆ ಯೋಗವು ನಮ್ಮ ಸ್ವಂತ ದೇಹ ಮತ್ತು ಮನಸ್ಸಿನ ಜೀವಿತಾವಧಿಯ ಕಲಿಯುವವರಾಗಿ ಉಳಿಯಲು ನಮಗೆ ಕಲಿಸುತ್ತದೆ. ನಾವು ನಮ್ಮ ಬಗ್ಗೆ ಹೆಚ್ಚು ತಿಳಿದುಕೊಂಡಷ್ಟೂ, ನಾವು ನಮ್ಮನ್ನು ಉತ್ತಮವಾಗಿ ನಿರ್ವಹಿಸಬಹುದು. ಅದಕ್ಕಾಗಿಯೇ, ‘ಆರೋಗ್ಯಕರ ವೃದ್ಧಾಪ್ಯಕ್ಕಾಗಿ ಯೋಗ’. ಈ ವಿಷಯವನ್ನು ವಯಸ್ಸಾದವರಿಗೆ ಮಾತ್ರವಲ್ಲದೆ ಎಲ್ಲಾ ವಯಸ್ಸಿನ ಜನರಿಗೆ ಎಂದು ನೋಡಬೇಕು.
ಮಿತ್ರರೇ,
ಗೀತೆಯಲ್ಲಿ ಶ್ರೀಕೃಷ್ಣನು ಯೋಗದ ಬಗ್ಗೆ ಹೀಗೆ ಹೇಳಿದ್ದಾನೆ: “ಯುಕ್ತ ಆಹಾರ ವಿಹಾರಸ್ಯ, ಯುಕ್ತ ಚೇಷ್ಟಸ್ಯ ಕರ್ಮಸು, ಯುಕ್ತ ಸ್ವಪ್ನವಬೋಧಸ್ಯ, ಯೋಗೋ ಭವತಿ ದುಃಖಃ.” ಅದರರ್ಥ ಸಮತೋಲಿತ ಆಹಾರ ಮತ್ತು ಮನರಂಜನೆ, ಸಮತೋಲಿತ ಕ್ರಿಯೆಗಳು ಮತ್ತು ಕರ್ತವ್ಯಗಳು, ಸಮತೋಲಿತ ನಿದ್ರೆ ಮತ್ತು ಎಚ್ಚರದ ಮೂಲಕ, ಯೋಗವು ದುಃಖವನ್ನು ನಾಶಮಾಡುತ್ತದೆ. ಸಮತೋಲನವು ಯೋಗದ ಅಡಿಪಾಯವಾಗಿದೆ. ಸಮತೋಲನವು ನಮ್ಮ ಜೀವನದ ಅಡಿಪಾಯವೂ ಆಗಿದೆ. ಆದರೂ, ಆಧುನಿಕ ಕಾಲದಲ್ಲಿ, ಹೆಚ್ಚಿನ ಜನರು ಜೀವನದಲ್ಲಿ ಅಸಮತೋಲನದೊಂದಿಗೆ ಹೋರಾಡುತ್ತಾರೆ. ಯೋಗವು ನಮಗೆ ಸಮತೋಲಿತ ರೀತಿಯಲ್ಲಿ ಬದುಕುವ ಕಲೆ ಕಲಿಸುತ್ತದೆ. ಯೋಗವು ನಮಗೆ ಮಾಡಬೇಕಾದ ಮತ್ತು ಮಾಡಬಾರದ ವಿಷಯಗಳನ್ನು ತೋರಿಸುತ್ತದೆ. ಮತ್ತು ನಾವು ನಮ್ಮ ದೇಹವನ್ನು ಸರಿಯಾಗಿ ಮಾರ್ಗದರ್ಶನ ಮಾಡಲು ಕಲಿತಾಗ ಆರೋಗ್ಯವು ನಮ್ಮ ನೈಸರ್ಗಿಕ ಸ್ಥಿತಿಯಾಗುತ್ತದೆ.
ಮಿತ್ರರೇ,
ಯೋಗವು ನಮ್ಮ ದೈಹಿಕ ಆರೋಗ್ಯದ ಮೇಲೆ ಮಾತ್ರ ಕೇಂದ್ರೀಕರಿಸುವುದಿಲ್ಲ. ಯೋಗವು ಮಾನಸಿಕ ಆರೋಗ್ಯದಿಂದ ದೈಹಿಕ ಆರೋಗ್ಯಕ್ಕೆ ಮಾರ್ಗವನ್ನು ತೋರಿಸುತ್ತದೆ. ಅದಕ್ಕಾಗಿಯೇ ಯೋಗದಲ್ಲಿ ಹೀಗೆ ಹೇಳಲಾಗಿದೆ - ”ಯುಕ್ತಚೇಷ್ಟಸ್ಯ ಕರ್ಮಸು”” - ಅಂದರೆ, ನಾವು ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬುದರ ಅರಿವು. ಈ ಅರಿವು ನಮ್ಮ ಜೀವನದಲ್ಲಿ ಶಾಂತಿಯ ಮೂಲವಾಗುತ್ತದೆ ಮತ್ತು ಅದು ವಿಶ್ವ ಶಾಂತಿಯ ಹಾದಿ ತೆರೆಯುತ್ತದೆ. ಅದಕ್ಕಾಗಿಯೇ ಇಂದು ಯೋಗವು ನಮ್ಮ ವೈಯಕ್ತಿಕ ಜೀವನಶೈಲಿಗೆ ಅತ್ಯಗತ್ಯವಾಗಿದೆ, ಆದರೆ ಪ್ರಪಂಚದ ಉತ್ತಮ ಭವಿಷ್ಯಕ್ಕೂ ಇದು ಅವಶ್ಯಕವಾಗಿದೆ.
ಮಿತ್ರರೇ,
ಅಂತಾರಾಷ್ಟ್ರೀಯ ಯೋಗ ದಿನದಂದು ಪ್ರತಿ ವರ್ಷ ಲಕ್ಷಾಂತರ ಜನರು ಯೋಗ ಚಟುವಟಿಕೆಗಳಲ್ಲಿ ಭಾಗವಹಿಸುತ್ತಿದ್ದಾರೆ. ಈ ದಿನವು ನಮ್ಮ ಸಾಮೂಹಿಕ ಸಂಕಲ್ಪವನ್ನು ನವೀಕರಿಸಲು ಅವಕಾಶವನ್ನು ಒದಗಿಸುತ್ತದೆ. ಯೋಗವು ಒಂದೇ ದಿನ ಅಥವಾ ಒಂದೇ ಕಾರ್ಯಕ್ರಮಕ್ಕೆ ಸೀಮಿತವಾಗಿರದೆ, ತಮ್ಮ ಜೀವನ, ಅವರ ಕುಟುಂಬಗಳು ಮತ್ತು ಭವಿಷ್ಯದ ಪೀಳಿಗೆಯ ಜೀವನದ ಶಾಶ್ವತ ಭಾಗವಾಗುವಂತೆ ನೋಡಿಕೊಳ್ಳಲು ನಾವು ಪಣ ತೋಡೋಣ.
ಮಿತ್ರರೇ,
ಆ ನಿಟ್ಟಿನಲ್ಲಿ ಈ ವರ್ಷ “ಯೋಗ 365’’ ಉಪಕ್ರಮ ಹಮ್ಮಿಕೊಳ್ಳಲಾಗಿತ್ತು.ಆ ಉಪಕ್ರಮದ ಅಡಿಯಲ್ಲಿ 100 ದಿನಗಳ ಆನ್ಲೈನ್ ಯೋಗ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು ಮತ್ತು ಇದು ಅಭೂತಪೂರ್ವ ಸಾರ್ವಜನಿಕ ಭಾಗವಹಿಸುವಿಕೆಗೆ ಸಾಕ್ಷಿಯಾಯಿತು. 130 ದೇಶಗಳಿಂದ ಮೂರು ದಶಲಕ್ಷಕ್ಕೂ ಅಧಿಕ ಜನರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಮಿತ್ರರೇ,
ಆರೋಗ್ಯಕರ ಸಮಾಜವು ಸದೃಢವಾದ, ಹೆಚ್ಚು ಸಮೃದ್ಧ ಮತ್ತು ಹೆಚ್ಚು ಆತ್ಮವಿಶ್ವಾಸದ ರಾಷ್ಟ್ರಕ್ಕೆ ಅಡಿಪಾಯ ಹಾಕುತ್ತದೆ. ನಾನು ನಿಮ್ಮೆಲ್ಲರಿಗೂ ಶುಭಾಶಯಗಳುಲ.”ಸರ್ವೇ ಭವಂತು ಸುಖಿನಃ, ಸರ್ವೇ ಸಂತು ನಿರಾಮಯಃ’’ (ಎಲ್ಲರೂ ಸಂತೋಷವಾಗಿರಲಿ, ಎಲ್ಲರೂ ಅನಾರೋಗ್ಯದಿಂದ ಮುಕ್ತರಾಗಲಿ). ಇದರೊಂದಿಗೆ ಮತ್ತೊಮ್ಮೆ ಎಲ್ಲರಿಗೂ ಅಂತಾರಾಷ್ಟ್ರೀಯ ಯೋಗ ದಿನದ ಶುಭಾಶಯಗಳನ್ನು ಕೋರುತ್ತೇನೆ.
ತುಂಬಾ ತುಂಬಾ ಧನ್ಯವಾದಗಳು!
ಹಕ್ಕು ನಿರಾಕರಣೆ - ಇದು ಪ್ರಧಾನಮಂತ್ರಿ ಅವರ ಭಾಷಣದ ಅಂದಾಜು ಅನುವಾದವಾಗಿದೆ. ಮೂಲ ಭಾಷಣವನ್ನು ಹಿಂದಿಯಲ್ಲಿ ನೀಡಲಾಗಿದೆ.
*****
(रिलीज़ आईडी: 2276542)
आगंतुक पटल : 9
इस विज्ञप्ति को इन भाषाओं में पढ़ें:
Gujarati
,
English
,
Urdu
,
हिन्दी
,
Marathi
,
Manipuri
,
Assamese
,
Bengali
,
Punjabi
,
Odia
,
Telugu
,
Malayalam