ಗೃಹ ವ್ಯವಹಾರಗಳ ಸಚಿವಾಲಯ
azadi ka amrit mahotsav

ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ತ್ರಿಪುರಾದಲ್ಲಿರುವ ಬಿ ಎಸ್ ಎಫ್ ನ ಲಂಕಾಮುರಾ ಗಡಿ ಹೊರಠಾಣೆಯನ್ನು ಪರಿಶೀಲಿಸಿದರು ಮತ್ತು ಗಡಿ ಕಾವಲುಗಾರರೊಂದಿಗೆ ಸಂವಾದ ನಡೆಸುವ ಮೂಲಕ ಸೈನಿಕರ ಮನೋಸ್ಥೈರ್ಯ ಹೆಚ್ಚಿಸಿದರು


ಅಪಾರ ತಾಳ್ಮೆ, ದಣಿವರಿಯದ ಕಠಿಣ ಪರಿಶ್ರಮ ಮತ್ತು ಭಾರತ ಮಾತೆಗೆ ಅನನ್ಯ ಭಕ್ತಿಯ ಸಂಕೇತವಾಗಿದ್ದ ಪೂಜ್ಯ 'ಗುರೂಜೀ' ಅವರ ಪುಣ್ಯತಿಥಿಯಂದು ಅವರಿಗೆ ಗೌರವ ನಮನ ಸಲ್ಲಿಕೆ; ಆರ್‌ ಎಸ್‌ ಎಸ್ ಅನ್ನು ರೂಪಿಸಿದ ಮಹಾಪುರುಷ ಗುರೂಜೀ ಅವರು, 'ರಾಷ್ಟ್ರವೇ ಮೊದಲು' ಎಂಬ ಆದರ್ಶಕ್ಕೆ ಎಂದಿಗೂ ಬತ್ತದ ಸ್ಫೂರ್ತಿಯ ಮೂಲವಾಗಿದ್ದಾರೆ

ವಿಶ್ವ ಪರಿಸರ ದಿನದಂದು, ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ಅಗರ್ತಲಾದಲ್ಲಿ “ಅಗರ್” (ಅಗರ್ವುಡ್) ಸಸಿಯನ್ನು ನೆಟ್ಟು, ಹಸಿರು ಮತ್ತು ಹೆಚ್ಚು ಪರಿಸರ ಜಾಗೃತಿಯ ಭಾರತದ ಸಂದೇಶವನ್ನು ನೀಡಿದರು

2019 ರಿಂದೀಚೆಗೆ, ಸಿಎಪಿಎಫ್ ಸಿಬ್ಬಂದಿ 7.5 ಕೋಟಿಗೂ ಹೆಚ್ಚು ಗಿಡಗಳನ್ನು ನೆಟ್ಟಿದ್ದಾರೆ, ಮುಂಬರುವ ವರ್ಷದಲ್ಲಿ 2 ಕೋಟಿ ಸಸಿಗಳನ್ನು ನೆಡುವ ಗುರಿ ಹೊಂದಿದ್ದಾರೆ; ಪ್ರತಿಯೊಬ್ಬ ಸೈನಿಕನೂ ಒಂದು ಗಿಡವನ್ನು ತನ್ನ ಕುಟುಂಬದ ಸದಸ್ಯನಂತೆ ಭಾವಿಸಿ ಪೋಷಿಸುತ್ತಾನೆ

ಮಾದಕ ದ್ರವ್ಯಗಳು, ಮಾನವ ಕಳ್ಳಸಾಗಣೆ, ಶಸ್ತ್ರಾಸ್ತ್ರಗಳ ಕಳ್ಳಸಾಗಣೆಯಾಗಲಿ ಅಥವಾ ಡ್ರೋನ್‌ ಗಳು ಒಡ್ಡುವ ಸವಾಲುಗಳೇ ಇರಲಿ, ಬಿ ಎಸ್ ಎಫ್ ತ್ರಿಪುರಾದಿಂದ ಬಂಗಾಳ ಮತ್ತು ಬಿಹಾರದವರೆಗಿನ ಗಡಿಯಲ್ಲಿ ಪ್ರತಿಯೊಂದು ಸವಾಲನ್ನು ಯಶಸ್ವಿಯಾಗಿ ಎದುರಿಸುತ್ತಿದೆ

ಪ್ಯಾರಿಸ್ ಒಪ್ಪಂದದ ಪ್ರತಿಯೊಂದು ಅಂಶವನ್ನು ನಿಗದಿತ ಸಮಯಕ್ಕಿಂತ ಮುಂಚಿತವಾಗಿಯೇ ಪೂರೈಸುವ ಮೂಲಕ ಭಾರತವು ಪರಿಸರ ಸಂರಕ್ಷಣೆಯಲ್ಲಿ ಜಾಗತಿಕ ಮಾದರಿಯಾಗಿ ಹೊರಹೊಮ್ಮಿದೆ; ಮೋದಿ ಸರ್ಕಾರವು ಋಗ್ವೇದದ ಸಂದೇಶವನ್ನು ವಾಸ್ತವಕ್ಕೆ ತಂದಿದೆ.

ಒಬ್ಬ ಜವಾನನಿಗೆ ಒಂದೇ ಒಂದು ಟ್ಯೂಬ್-ಲೈಟ್ ಒದಗಿಸುವುದಕ್ಕಾದರೂ ಸಮಯವನ್ನು ಮೀಸಲಿಡಲು ಸಿದ್ಧ; ಮೋದಿ ಸರ್ಕಾರವು ವಿದ್ಯುತ್, ಹಸಿರು ಇಂಧನ ಮತ್ತು ಸುರಕ್ಷಿತ ಕುಡಿಯುವ ನೀರಿನ ಮೂಲಕ ಗಡಿ ಹೊರಠಾಣೆಗಳ ಚಿತ್ರಣವನ್ನು ಬದಲಾಯಿಸುತ್ತಿದೆ

ಗಡಿಗಳಲ್ಲಿ ಶೀಘ್ರದಲ್ಲೇ 'ಸ್ಮಾರ್ಟ್ ಬಾರ್ಡರ್' ಪ್ರಾಯೋಗಿಕ ಯೋಜನೆಯನ್ನು ಪ್ರಾರಂಭಿಸಲಾಗುವುದು; ಅತ್ಯಾಧುನಿಕ ತಂತ್ರಜ್ಞಾನ, ಡ್ರೋನ್‌ ಗಳು, ಸೆನ್ಸಾರ್‌ ಗಳು ಮತ್ತು ಸ್ಮಾರ್ಟ್ ಬೇಲಿಗಳನ್ನು ಬಳಸಿಕೊಂಡು ಸ್ಮಾರ್ಟ್ ಭದ್ರತಾ ಗ್ರಿಡ್ ಅನ್ನು ರಚಿಸಲಾಗುತ್ತಿದೆ

ಗಡಿ ಭದ್ರತೆಯು ಇನ್ನು ಮುಂದೆ ಪ್ರತ್ಯೇಕವಾಗಿ ಕಾರ್ಯನಿರ್ವಹಿಸುವುದಿಲ್ಲ; ಜಿಲ್ಲಾಧಿಕಾರಿಗಳು, ಪೊಲೀಸ್ ವರಿಷ್ಠಾಧಿಕಾರಿಗಳು, ಪಟವಾರಿಗಳು ಮತ್ತು ಸರಪಂಚರ ಜಂಟಿ ಪ್ರಯತ್ನಗಳು, ಆಧುನಿಕ ತಂತ್ರಜ್ಞಾನ ಮತ್ತು ಬಿ ಎಸ್ ಎಫ್ ಸಿಬ್ಬಂದಿಯ ಕಠಿಣ ಪರಿಶ್ರಮದೊಂದಿಗೆ ಸೋರಿಕೆಯಿಲ್ಲದ ಭದ್ರತಾ ಗ್ರಿಡ್ ಅನ್ನು ರಚಿಸುತ್ತವೆ

ಗಡಿ ಬೇಲಿಯ ಬೃಹತ್ ಆಧುನೀಕರಣ - 650 ಕಿಮೀ ಹಳೆಯ ಬೇಲಿಯ ನವೀಕರಣ, 119 ಕಿಮೀ ಹೊಸ ಆಧುನಿಕ ಬೇಲಿಗೆ ಅನುಮೋದನೆ ಮತ್ತು ಮೊದಲ ಹಂತದ ಪ್ರಾರಂಭ

प्रविष्टि तिथि: 05 JUN 2026 4:50PM by PIB Bengaluru

ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ತ್ರಿಪುರಾದಲ್ಲಿರುವ ಬಿ ಎಸ್ ಎಫ್ ಲಂಕಾಮುರಾ ಗಡಿ ಹೊರಠಾಣೆಯನ್ನು ಪರಿಶೀಲಿಸಿದರು ಮತ್ತು ಗಡಿ ಕಾವಲುಗಾರರೊಂದಿಗೆ ಸಂವಾದ ನಡೆಸುವ ಮೂಲಕ ಸೈನಿಕರ ಮನೋಸ್ಥೈರ್ಯವನ್ನು ಹೆಚ್ಚಿಸಿದರು. ವಿಶ್ವ ಪರಿಸರ ದಿನದ ಅಂಗವಾಗಿ, ಕೇಂದ್ರ ಗೃಹ ಸಚಿವರು ತ್ರಿಪುರಾದ ರಾಜಧಾನಿ ಅಗರ್ತಲಾದಲ್ಲಿ ಸಸಿ ನೆಡುವ ಅಭಿಯಾನದ ಭಾಗವಾಗಿ ಅಗರ್ವುಡ್ ಸಸಿಯನ್ನು ನೆಟ್ಟರು. ಈ ಸಂದರ್ಭದಲ್ಲಿ ತ್ರಿಪುರಾ ಮುಖ್ಯಮಂತ್ರಿ ಡಾ. ಮಾಣಿಕ್ ಸಹಾ, ಕೇಂದ್ರ ಗೃಹ ಕಾರ್ಯದರ್ಶಿ, ಇಂಟೆಲಿಜೆನ್ಸ್ ಬ್ಯೂರೋ ನಿರ್ದೇಶಕರು, ಕಾರ್ಯದರ್ಶಿ (ಗಡಿ ನಿರ್ವಹಣೆ), ಮತ್ತು ಗಡಿ ಭದ್ರತಾ ಪಡೆಯ ಮಹಾನಿರ್ದೇಶಕರು ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

ಸಂದರ್ಭದಲ್ಲಿ ಮಾತನಾಡಿದ ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ, ಇಂದು ಇಲ್ಲಿ ಸಸಿ ನೆಡುವ ಕಾರ್ಯಕ್ರಮವನ್ನೂ ಆಯೋಜಿಸಲಾಗಿದೆ ಎಂದು ಹೇಳಿದರು. 2019 ರಿಂದ ಇಂದಿನವರೆಗೆ ನಮ್ಮ ಎಲ್ಲಾ ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳ (ಸಿಎಪಿಎಫ್) ಸಿಬ್ಬಂದಿ 7.5 ಕೋಟಿಗೂ ಹೆಚ್ಚು ಗಿಡಗಳನ್ನು ನೆಟ್ಟಿದ್ದಾರೆ ಎಂದು ಅವರು ಹೇಳಿದರು. ಈ ವರ್ಷ 40 ಲಕ್ಷದಿಂದ 60 ಲಕ್ಷದವರೆಗೆ ಗಿಡಗಳನ್ನು ನೆಡಲಾಗುವುದು ಮತ್ತು ಬದುಕುಳಿಯದ ಎಲ್ಲಾ ಸಸಿಗಳ ಜಾಗದಲ್ಲಿ ಮರು ಸಸಿಗಳನ್ನು ನೆಡಲಾಗುವುದು ಎಂದು ಅವರು ತಿಳಿಸಿದರು. ಮುಂದಿನ ವರ್ಷ ಸಿಎಪಿಎಫ್ ಸಿಬ್ಬಂದಿ 2 ಕೋಟಿ ಸಸಿಗಳನ್ನು ನೆಡಲಿದ್ದು, ಆ ಮೂಲಕ ಪರಿಸರ ಸಂರಕ್ಷಣೆ ಮತ್ತು ರಾಷ್ಟ್ರ ಸೇವೆ ಎರಡಕ್ಕೂ ಕೊಡುಗೆ ನೀಡಲಿದ್ದಾರೆ ಎಂದು ಅವರು ಹೇಳಿದರು.

ಶ್ರೀ ಅಮಿತ್ ಶಾ ಅವರು ವಿಶ್ವ ಪರಿಸರ ದಿನದಂದು ಪರಿಸರ ಸಂರಕ್ಷಣೆಯ ಮಹತ್ವ ಮತ್ತು ನಿಟ್ಟಿನಲ್ಲಿ ಮೋದಿ ಸರ್ಕಾರ ಕೈಗೊಂಡಿರುವ ಕಾರ್ಯಗಳನ್ನು ಒತ್ತಿಹೇಳಿದರು. ಓಝೋನ್ ಪದರವು ಸೂರ್ಯನ ಕಿರಣಗಳನ್ನು ಮನುಷ್ಯರಿಗೆ ಮತ್ತು ಇತರ ಜೀವಿಗಳಿಗೆ ಸೂಕ್ತವಾಗುವಂತೆ ಮಾಡುತ್ತದೆ ಎಂದು ಶ್ರೀ ಶಾ ಹೇಳಿದರು. ಈ ಸವಾಲನ್ನು ಎದುರಿಸಲು ಇರುವ ಏಕೈಕ ಮಾರ್ಗವೆಂದರೆ ಮರಗಳ ಸಂಖ್ಯೆಯನ್ನು ಹೆಚ್ಚಿಸುವುದು ಎಂದು ಅವರು ಹೇಳಿದರು.

ಪರಿಸರ ಸಂರಕ್ಷಣೆಗಾಗಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಏಕಕಾಲದಲ್ಲಿ ಹಲವು ಉಪಕ್ರಮಗಳನ್ನು ಕೈಗೊಂಡಿದ್ದಾರೆ ಎಂದು ಕೇಂದ್ರ ಗೃಹ ಸಚಿವರು ಹೇಳಿದರು. ಈ ನಿಟ್ಟಿನಲ್ಲಿ, ಪ್ಯಾರಿಸ್ ಸಮ್ಮೇಳನದಲ್ಲಿ ಭಾರತದ ಮಾದರಿಯನ್ನು ಅನುಕರಣೀಯ ಮಾದರಿ ಎಂದು ಗುರುತಿಸಲಾಗಿದೆ ಎಂದು ಅವರು ಹೇಳಿದರು. ಪ್ಯಾರಿಸ್ ಒಪ್ಪಂದದ ಗುರಿಗಳನ್ನು ನಿಗದಿತ ಸಮಯಕ್ಕಿಂತ ಮುಂಚಿತವಾಗಿ ಸಾಧಿಸುವ ಮೂಲಕ, ಭಾರತವು ಪರಿಸರ ಸಂರಕ್ಷಣೆಯ ಬಗ್ಗೆ ತನಗಿರುವ ಬದ್ಧತೆಯನ್ನು ಜಗತ್ತಿನ ಮುಂದೆ ಪ್ರದರ್ಶಿಸಿದೆ, ಇದು ಋಗ್ವೇದದಲ್ಲಿರುವ ಪರಿಸರ ಸಂರಕ್ಷಣೆಯ ಸಂದೇಶವನ್ನು ಪ್ರತಿಬಿಂಬಿಸುತ್ತದೆ ಎಂದು ಶ್ರೀ ಶಾ ಹೇಳಿದರು. ಎಲ್ಲಾ ಸಿಎಪಿಎಫ್ ಸಿಬ್ಬಂದಿ ಪ್ರತಿಯೊಂದು ಸಸಿಯನ್ನು ತಮ್ಮ ಸ್ವಂತ ಕುಟುಂಬದ ಸದಸ್ಯರಂತೆ ಭಾವಿಸಿ ಹೆಚ್ಚಿನ ಕಾಳಜಿ ವಹಿಸುತ್ತಿದ್ದಾರೆ. ಇದು ಕೇವಲ ಸರ್ಕಾರದ ಆದೇಶಗಳಿಂದ ನಡೆಸಲ್ಪಡುವ ಕಾರ್ಯಕ್ರಮವಾಗಬಾರದು, ಬದಲಿಗೆ ಸಹಜ ಅಭ್ಯಾಸವಾಗಬೇಕು, ಏಕೆಂದರೆ ಅಭ್ಯಾಸವಷ್ಟೇ ನಮ್ಮನ್ನು ಉಳಿಸಬಲ್ಲದು ಎಂದು ಅವರು ಹೇಳಿದರು.

ಇಂದು ಗಡಿ ಭದ್ರತಾ ಪಡೆಯ (ಬಿ ಎಸ್‌ ಎಫ್) 37 ನೇ ಬೆಟಾಲಿಯನ್‌‌ ನಲ್ಲಿ ಸಿಬ್ಬಂದಿ ವಸತಿಗೃಹದ ಇ-ಉದ್ಘಾಟನೆ ಮತ್ತು ಬಿ ಎಸ್ ಎಫ್ ನ 97 ನೇ ಬೆಟಾಲಿಯನ್‌ ನಲ್ಲಿ ಕ್ವಾರ್ಟರ್ ಗಾರ್ಡ್ ಸಂಕೀರ್ಣದ ಇ-ಶಂಕುಸ್ಥಾಪನೆಯನ್ನು ನೆರವೇರಿಸಲಾಗಿದೆ ಎಂದು ಶ್ರೀ ಅಮಿತ್ ಶಾ ಹೇಳಿದರು. ದೇಶದ ಗಡಿಗಳನ್ನು ಕಾಯುವ ಸಿಬ್ಬಂದಿಗೆ ಸೌಲಭ್ಯಗಳನ್ನು ಸುಧಾರಿಸಲು ಮೋದಿ ಸರ್ಕಾರ ಹಲವು ಉಪಕ್ರಮಗಳನ್ನು ಕೈಗೊಂಡಿದೆ ಎಂದು ಅವರು ಹೇಳಿದರು. ಸಿಬ್ಬಂದಿಯ ಆರೋಗ್ಯದ ಬಗ್ಗೆ ಮಾತ್ರವಲ್ಲದೆ ಅವರ ಕುಟುಂಬಗಳ ವಸತಿಯ ಬಗ್ಗೆಯೂ ಕಾಳಜಿ ವಹಿಸಲಾಗಿದೆ. ಬಿ ಎಸ್ ಎಫ್ ಎಂಬ ಹೆಸರನ್ನು ಪ್ರಸ್ತಾಪಿಸಿದರೆ ದೇಶದ ಜನರಲ್ಲಿ ಗೌರವದ ಭಾವನೆ ಮೂಡುತ್ತದೆ, ಅಂದರೆ ನೀವು ಎದುರಿಸುತ್ತಿರುವ ಕಷ್ಟಗಳನ್ನು ದೇಶವು ಕಾಣುತ್ತದೆ ಮತ್ತು ಗುರುತಿಸುತ್ತದೆ ಮತ್ತು ನಿಮ್ಮ ಶ್ರಮ, ತ್ಯಾಗ ಮತ್ತು ಸಮರ್ಪಣಾ ಮನೋಭಾವವನ್ನು ಗೌರವಿಸುತ್ತದೆ ಎಂದರ್ಥ ಎಂದು ಅವರು ಹೇಳಿದರು.

ಗಡಿಗಳನ್ನು ಸುರಕ್ಷಿತವಾಗಿಡುವ ಜವಾಬ್ದಾರಿ ಬಿ ಎಸ್ ಎಫ್ ಮೇಲಿದೆ ಎಂದು ಕೇಂದ್ರ ಗೃಹ ಸಚಿವರು ಹೇಳಿದರು. ಈ ವಿಶಾಲವಾದ ಗಡಿಗಳು ವಿವಿಧ ಸ್ಥಳಗಳಲ್ಲಿ ವಿವಿಧ ರೀತಿಯ ಸವಾಲುಗಳನ್ನು ಒಡ್ಡುತ್ತವೆ ಎಂದು ಅವರು ಹೇಳಿದರು. ಗಡಿ ಭದ್ರತಾ ಪಡೆ (ಬಿ ಎಸ್‌ ಎಫ್) ಮತ್ತು ಸಶಸ್ತ್ರ ಸೀಮಾ ಬಲ (ಎಸ್‌ ಎಸ್‌ ಬಿ) ನಿಯೋಜನೆಗೊಂಡಿರುವ ಕಡೆಗಳಲ್ಲೆಲ್ಲಾ "ಸ್ಮಾರ್ಟ್ ಬಾರ್ಡರ್"ಗಳನ್ನು ಅಭಿವೃದ್ಧಿಪಡಿಸಲು ಮೋದಿ ಸರ್ಕಾರ ನಿರ್ಧರಿಸಿದೆ ಎಂದು ಅವರು ಹೇಳಿದರು. ಚತುರ್ಮುಖ ಭದ್ರತಾ ಕಾರ್ಯತಂತ್ರದ ಅಡಿಯಲ್ಲಿ, ಸ್ಥಳೀಯ ಆಡಳಿತ, ತಂತ್ರಜ್ಞಾನ ಮತ್ತು ಭದ್ರತಾ ಸಿಬ್ಬಂದಿಯ ಸಮರ್ಪಣಾ ಮನೋಭಾವವನ್ನು ಸಂಯೋಜಿಸುವ ಮೂಲಕ ಗಡಿಗಳನ್ನು ಭೇದಿಸಲಾಗದಂತೆ ಮಾಡುವುದು ಇದರ ಉದ್ದೇಶವಾಗಿದೆ. ಸ್ಮಾರ್ಟ್ ಬಾರ್ಡರ್ ಪರಿಕಲ್ಪನೆಯು ಅಂತಿಮ ಹಂತದಲ್ಲಿದ್ದು, ಶೀಘ್ರದಲ್ಲೇ ಪ್ರಾಯೋಗಿಕ ಯೋಜನೆಯನ್ನು ಪ್ರಾರಂಭಿಸಲಾಗುವುದು ಎಂದು ಶ್ರೀ ಶಾ ಹೇಳಿದರು. ದೇಶದ ವಿವಿಧ ಗಡಿಗಳಾದ್ಯಂತ ಏಕಕಾಲದಲ್ಲಿ ಏಳು ಅಥವಾ ಎಂಟು ಸ್ಥಳಗಳಲ್ಲಿ ಪ್ರಾಯೋಗಿಕ ಯೋಜನೆಯನ್ನು ಜಾರಿಗೊಳಿಸಲಾಗುವುದು. ಪ್ರಾಯೋಗಿಕ ಅವಧಿಯಲ್ಲಿ ಎದುರಾಗುವ ಯಾವುದೇ ಸವಾಲುಗಳನ್ನು ಪರಿಹರಿಸಲಾಗುವುದು, ಅದರ ನಂತರ ಉಪಕ್ರಮವನ್ನು ಇಡೀ ಗಡಿ ಜಾಲವನ್ನು ಒಳಗೊಳ್ಳುವಂತೆ ವಿಸ್ತರಿಸಲಾಗುವುದು. ಜಿಲ್ಲಾ ಜಿಲ್ಲಾಧಿಕಾರಿಗಳು, ಪೊಲೀಸ್ ವರಿಷ್ಠಾಧಿಕಾರಿಗಳು, ಗ್ರಾಮದ ಪಟವಾರಿಗಳು ಮತ್ತು ಸರ್ಪಂಚರು ಕೂಡ ಚೌಕಟ್ಟಿನಲ್ಲಿ ಪ್ರಮುಖ ಪಾತ್ರ ವಹಿಸಲಿದ್ದಾರೆ ಎಂದು ಗೃಹ ಸಚಿವರು ತಿಳಿಸಿದರು. ಗಡಿ ಪ್ರದೇಶಗಳಲ್ಲಿನ ಸ್ಥಳೀಯ ಆಡಳಿತವನ್ನು ಪರಿಕಲ್ಪನೆಯಲ್ಲಿ ಸಂಯೋಜಿಸುವವರೆಗೆ, ಗಡಿಗಳನ್ನು ನಿಜವಾಗಿಯೂ ಭೇದಿಸಲಾಗದಂತೆ ಮಾಡಲು ಸಾಧ್ಯವಿಲ್ಲ ಎಂದು ಅವರು ಒತ್ತಿಹೇಳಿದರು. ಗಡಿ ಭದ್ರತೆಯನ್ನು ಪ್ರತ್ಯೇಕವಾಗಿ ಕಲ್ಪಿಸಿಕೊಳ್ಳುವುದು ಎಂದಿಗೂ ಯಶಸ್ವಿಯಾಗುವುದಿಲ್ಲ ಎಂದು ಅವರು ಹೇಳಿದರು.

ದೇಶದ ಗಡಿಗಳ ಭದ್ರತೆಗೆ ತ್ರಿಪುರಾ ಗಡಿಭಾಗ ಅತ್ಯಂತ ಪ್ರಮುಖವಾಗಿದೆ ಎಂದು ಶ್ರೀ ಅಮಿತ್ ಶಾ ಹೇಳಿದರು. ಗಡಿ ಬೇಲಿಯ ಆಧುನೀಕರಣಕ್ಕಾಗಿ, 15 ವರ್ಷಗಳಿಗಿಂತ ಹಳೆಯದಾದ ಸುಮಾರು 650 ಕಿಲೋಮೀಟರ್ ಬೇಲಿಯ ಒಂದು ಭಾಗವನ್ನು ಬದಲಾಯಿಸಲು 119 ಕಿಲೋಮೀಟರ್ ಹೊಸ ಬೇಲಿಯನ್ನು ಅಳವಡಿಸಲು ನಾವು ಅನುಮೋದನೆ ನೀಡಿದ್ದೇವೆ ಎಂದು ಅವರು ತಿಳಿಸಿದರು. ಗಡಿ ಹೊರಠಾಣೆಗಳಲ್ಲಿ ಸಿಬ್ಬಂದಿಗೆ ವಿದ್ಯುತ್ ಪೂರೈಕೆ, ಹಸಿರು ಇಂಧನ ಉಪಕ್ರಮಗಳು ಮತ್ತು ಸುರಕ್ಷಿತ ಕುಡಿಯುವ ನೀರಿನಂತಹ ಸೌಲಭ್ಯಗಳನ್ನು ಸುಧಾರಿಸುವ ಗುರಿಯನ್ನು ಹೊಂದಿರುವ ಹಲವಾರು ಯೋಜನೆಗಳನ್ನು ಪ್ರಾರಂಭಿಸಲಾಗಿದೆ ಮಾತ್ರವಲ್ಲದೆ ಪೂರ್ಣಗೊಳಿಸಲಾಗಿದೆ ಎಂದು ಅವರು ಹೇಳಿದರು.

ತ್ರಿಪುರಾ ಮೂರು ಕಡೆಗಳಲ್ಲಿ ಗಡಿಗಳಿಂದ ಸುತ್ತುವರೆದಿರುವ ಸೂಕ್ಷ್ಮ ರಾಜ್ಯವಾಗಿದೆ ಎಂದು ಕೇಂದ್ರ ಗೃಹ ಸಚಿವರು ಹೇಳಿದರು. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2047 ರ ವೇಳೆಗೆ ಭಾರತವನ್ನು ಸಂಪೂರ್ಣ ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡುವ ದೃಷ್ಟಿಕೋನವನ್ನು ಹೊಂದಿದ್ದಾರೆ ಎಂದು ಅವರು ಹೇಳಿದರು. ಈ ಗುರಿಯನ್ನು ಸಾಧಿಸಲು, ಭಾರತವನ್ನು ಮೊದಲು ಸುರಕ್ಷಿತಗೊಳಿಸಬೇಕು. ಕಳ್ಳಸಾಗಣೆ, ಮಾನವ ಕಳ್ಳಸಾಗಣೆ, ಯುವಜನತೆಯ ಮೇಲೆ ಪರಿಣಾಮ ಬೀರುವ ಮಾದಕ ದ್ರವ್ಯದ ದುರುಪಯೋಗದಿಂದ ದೇಶವನ್ನು ರಕ್ಷಿಸಬೇಕು. ಎಲ್ಲಾ ಕ್ಷೇತ್ರಗಳಲ್ಲಿ ಭದ್ರತೆಯನ್ನು ಖಚಿತಪಡಿಸುವ ಸ್ಮಾರ್ಟ್ ಸೆಕ್ಯೂರಿಟಿ ಗ್ರಿಡ್ ಅನ್ನು ನಿರ್ಮಿಸುವ ಕಾರ್ಯವನ್ನು ಭಾರತ ಸರ್ಕಾರ ಕೈಗೆತ್ತಿಕೊಂಡಿದೆ ಎಂದು ಶ್ರೀ ಶಾ ಹೇಳಿದರು. ಗಡಿ ಬೇಲಿಯ ಸಂಪೂರ್ಣ ಪರಿಕಲ್ಪನೆ ಮತ್ತು ನಮ್ಮ ಕೆಲಸದ ಸಂಸ್ಕೃತಿಯನ್ನು ಬದಲಾಯಿಸುವ ಅಗತ್ಯವಿದೆ ಎಂದು ಅವರು ಹೇಳಿದರು. ನಮ್ಮ ಸಮಾಜದ ಮೇಲೆ ಪರಿಣಾಮ ಬೀರುವ ಪ್ರತಿಯೊಂದು ಕೆಡುಕುಗಳಿಂದ ದೇಶ ಮತ್ತು ಅದರ ಗಡಿಗಳನ್ನು ರಕ್ಷಿಸುವುದು ನಮ್ಮ ಜವಾಬ್ದಾರಿಯಾಗಿದೆ. ಮುಂಬರುವ ದಿನಗಳಲ್ಲಿ ಗಡಿ ಭದ್ರತೆಯ ಜವಾಬ್ದಾರಿಯನ್ನು ಹೊಂದಿರುವ ಎಲ್ಲಾ ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳ ಕೆಲಸದ ಸಂಸ್ಕೃತಿಯಲ್ಲಿ ಸ್ಮಾರ್ಟ್ ಫೆನ್ಸಿಂಗ್ ಮತ್ತು ಚತುರ್ಮುಖ ಭದ್ರತಾ ಗ್ರಿಡ್‌ ನ ಪರಿಕಲ್ಪನೆಯನ್ನು ಸಂಯೋಜಿಸಲಾಗುತ್ತಿದೆ ಎಂದು ಗೃಹ ಸಚಿವರು ತಿಳಿಸಿದರು.

ಸಸಿ ನೆಡುವ ಅಭಿಯಾನದ ಅಡಿಯಲ್ಲಿ, ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳು (ಸಿಎಪಿಎಫ್‌ ಗಳು), ಅಸ್ಸಾಂ ರೈಫಲ್ಸ್, ರಾಷ್ಟ್ರೀಯ ಭದ್ರತಾ ಪಡೆ (ಎನ್‌ ಎಸ್‌ ಜಿ), ದೆಹಲಿ ಪೊಲೀಸ್, ಮಾದಕ ದ್ರವ್ಯ ನಿಯಂತ್ರಣ ಬ್ಯೂರೋ (ಎನ್‌ ಸಿ ಬಿ), ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (ಎನ್‌ ಸಿ ಆರ್‌ ಬಿ), ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ ಐ ಎ), ಪೊಲೀಸ್ ಸಂಶೋಧನೆ ಮತ್ತು ಅಭಿವೃದ್ಧಿ ಬ್ಯೂರೋ (ಬಿಪಿಆರ್&ಡಿ), ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌‌ ಡಿ ಆರ್‌ ಎಫ್), ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ (ಎನ್‌ ಡಿ ಎಂ ಎ), ಮತ್ತು ಅಂತರ-ರಾಜ್ಯ ಮಂಡಳಿ ಸಚಿವಾಲಯ (ಐ ಎಸ್‌ ಸಿ ಎಸ್) ಸೇರಿದಂತೆ ದೇಶಾದ್ಯಂತ ಇರುವ ಗೃಹ ವ್ಯವಹಾರಗಳ ಸಚಿವಾಲಯದ ಎಲ್ಲಾ ಕಚೇರಿಗಳು ಇಂದು ದೇಶದಾದ್ಯಂತ 5 ಲಕ್ಷಕ್ಕೂ ಹೆಚ್ಚು ಸಸಿಗಳನ್ನು ನೆಟ್ಟವು.

 

*****

 


(रिलीज़ आईडी: 2269559) आगंतुक पटल : 7
इस विज्ञप्ति को इन भाषाओं में पढ़ें: Khasi , English , Urdu , Marathi , हिन्दी , Assamese , Gujarati , Odia , Tamil