ಗೃಹ ವ್ಯವಹಾರಗಳ ಸಚಿವಾಲಯ
azadi ka amrit mahotsav

ಸನಾತನ ಸಂಸ್ಕೃತಿಯ ಜೀವ ಶಕ್ತಿಯಾದ ಜಗದ್ಗುರು ಆದಿ ಶಂಕರಾಚಾರ್ಯ ಅವರ ಜಯಂತಿಯ ಸಂದರ್ಭದಲ್ಲಿ ದೇಶದ ಎಲ್ಲಾ ಸಹ ನಾಗರಿಕರಿಗೆ ಹೃತ್ಪೂರ್ವಕ ಶುಭಾಶಯಗಳನ್ನು ಕೋರಿದ  ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ


ಭಾರತವು ಹಲವಾರು ಕಠಿಣತೆಗಳಿಂದ ಬಳಲುತ್ತಿದ್ದಾಗ ಮತ್ತು ನಮ್ಮ ಧರ್ಮ ಮತ್ತು ಸಂಸ್ಕೃತಿಯ ಮೇಲೆ ನಿರಂತರವಾಗಿ ದಾಳಿ ನಡೆಯುತ್ತಿದ್ದ ಸಮಯದಲ್ಲಿ, ಅವರು ಸಮಾಜವು ಸತ್ಯದ ದರ್ಶನವನ್ನು ನೋಡಲು ಅನುವು ಮಾಡಿಕೊಡಲು ಅದ್ವೈತ ವೇದಾಂತಕ್ಕೆ ದಾರಿ ಮಾಡಿಕೊಟ್ಟರು

ಇಡೀ ರಾಷ್ಟ್ರದಾದ್ಯಂತ ಮತ್ತೊಮ್ಮೆ ಸನಾತನ ಧರ್ಮದ ಧ್ವಜವನ್ನು ಎತ್ತರಕ್ಕೆ ಹಾರಿಸಲು, ಸಂಸ್ಕೃತಿಯನ್ನು ಸಂರಕ್ಷಿಸಲು ಮತ್ತು ರಾಷ್ಟ್ರವನ್ನು ಏಕತೆಯ ದಾರದಲ್ಲಿ ನೇಯಲು, ಅವರು ಭಾರತದಾದ್ಯಂತ ತೀರ್ಥಯಾತ್ರೆ ಕೈಗೊಂಡು ನಾಲ್ಕು ದಿಕ್ಕುಗಳಲ್ಲಿ ನಾಲ್ಕು ಮಠಗಳನ್ನು ಸ್ಥಾಪಿಸಿದರು

ತಮ್ಮ ಅಲ್ಪಾವಧಿಯ ಜೀವಿತಾವಧಿಯಲ್ಲಿಯೂ ಸಹ, ವೇದಗಳು ಮತ್ತು ಶಾಸ್ತ್ರಗಳ ಆಳವಾದ ಜ್ಞಾನವನ್ನು ಆಂತರಿಕಗೊಳಿಸಿಕೊಂಡು, ಅವರು ವೇದ ಜ್ಞಾನದ ಹಾದಿಯಲ್ಲಿ ಸಮಾಜವನ್ನು ಮತ್ತೊಮ್ಮೆ ಮುನ್ನಡೆಸುವ ಉಪನಿಷತ್ತುಗಳ ಕುರಿತು ಸರಳ ಮತ್ತು ಸ್ಪಷ್ಟವಾದ ವ್ಯಾಖ್ಯಾನಗಳನ್ನು ರಚಿಸಿದರು

ಆದಿ ಶಂಕರಾಚಾರ್ಯ ಅವರ ಜ್ಞಾನ ಮತ್ತು ಪಾಂಡಿತ್ಯದ ಮೂಲಕವೇ ನಮ್ಮ ಸಂಸ್ಕೃತಿ ಹೊಸದಾಗಿ ಅರಳಿತು ಮತ್ತು ಪ್ರವರ್ಧಮಾನಕ್ಕೆ ಬಂದಿತು

ಪ್ರಕಟಣಾ ದಿನಾಂಕ: 21 APR 2026 4:56PM by PIB Bengaluru

ಸನಾತನ ಸಂಸ್ಕೃತಿಯ ಜೀವ ಶಕ್ತಿ ಜಗದ್ಗುರು ಆದಿ ಶಂಕರಾಚಾರ್ಯರ ಜಯಂತಿಯಂದು ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ದೇಶದ ಎಲಾ ನಾಗರಿಕರಿಗೂ ಹೃತ್ಪೂರ್ವಕ ಶುಭಾಶಯಗಳನ್ನು ಸಲ್ಲಿಸಿದರು.

"ಎಕ್ಸ್" ತಾಣದಲ್ಲಿ ಮಾಡಿರುವ ಸಂದೇಶ ಪ್ರಕಟಣೆಯಲ್ಲಿ ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು, "ಸನಾತನ ಸಂಸ್ಕೃತಿಯ ಜೀವ ಶಕ್ತಿಯಾದ ಜಗದ್ಗುರು ಆದಿ ಶಂಕರಾಚಾರ್ಯ ಜಿ ಅವರ ಜಯಂತಿಯ ಸಂದರ್ಭದಲ್ಲಿ ಎಲ್ಲಾ ನಾಗರಿಕರಿಗೆ ಹೃತ್ಪೂರ್ವಕ ಶುಭಾಶಯಗಳು. ಭಾರತವು ಹಲವಾರು ಕಠಿಣತೆಗಳಿಂದ ಬಳಲುತ್ತಿದ್ದಾಗ ಮತ್ತು ನಮ್ಮ ಧರ್ಮ ಮತ್ತು ಸಂಸ್ಕೃತಿಯ ಮೇಲೆ ನಿರಂತರವಾಗಿ ದಾಳಿ ನಡೆಯುತ್ತಿದ್ದಾಗ, ಅವರು ಸಮಾಜವು ಸತ್ಯದ ದರ್ಶನವನ್ನು ನೋಡಲು ಅನುವು ಮಾಡಿಕೊಡಲು ಅದ್ವೈತ ವೇದಾಂತಕ್ಕೆ ದಾರಿ ಮಾಡಿಕೊಟ್ಟರು. ಸನಾತನ ಧರ್ಮದ ಧ್ವಜವನ್ನು ಮತ್ತೊಮ್ಮೆ ಇಡೀ ರಾಷ್ಟ್ರದಾದ್ಯಂತ ಎತ್ತರಕ್ಕೆ ಹಾರಿಸಲು, ಸಂಸ್ಕೃತಿಯನ್ನು ಸಂರಕ್ಷಿಸಲು ಮತ್ತು ರಾಷ್ಟ್ರವನ್ನು ಏಕತೆಯ ದಾರದಲ್ಲಿ ನೇಯಲು, ಅವರು ಭಾರತದಾದ್ಯಂತ ತೀರ್ಥಯಾತ್ರೆ ಕೈಗೊಂಡು ನಾಲ್ಕು ದಿಕ್ಕುಗಳಲ್ಲಿ ನಾಲ್ಕು ಮಠಗಳನ್ನು ಸ್ಥಾಪಿಸಿದರು. ತಮ್ಮ ಅಲ್ಪಾವಧಿಯ ಜೀವಿತಾವಧಿಯಲ್ಲಿಯೂ, ವೇದಗಳು ಮತ್ತು ಶಾಸ್ತ್ರಗಳ ಆಳವಾದ ಜ್ಞಾನವನ್ನು ಆಂತರಿಕಗೊಳಿಸಿಕೊಂಡ ಅವರು, ವೇದ ಜ್ಞಾನದ ಹಾದಿಯಲ್ಲಿ ಸಮಾಜವನ್ನು ಮತ್ತೊಮ್ಮೆ ಮುನ್ನಡೆಸುವ ಉಪನಿಷತ್ತುಗಳ ಕುರಿತು ಸರಳ ಮತ್ತು ಸ್ಪಷ್ಟವಾದ ವ್ಯಾಖ್ಯಾನಗಳನ್ನು ರಚಿಸಿದರು. ಆದಿ ಶಂಕರಾಚಾರ್ಯ ಅವರ ಜ್ಞಾನ ಮತ್ತು ಪಾಂಡಿತ್ಯದ ಮೂಲಕವೇ ನಮ್ಮ ಸಂಸ್ಕೃತಿ ಅರಳಿತು ಮತ್ತು ಹೊಸದಾಗಿ ಪ್ರವರ್ಧಮಾನಕ್ಕೆ ಬಂದಿತು. ನಾನು ಆದಿ ಶಂಕರ ಅವರಿಗೆ ನಮಸ್ಕರಿಸುತ್ತೇನೆ."

 

*****


(ಪ್ರಕಟಣೆ ಐ.ಡಿ.: 2254205) ವಿಸಿಟರ್ ಕೌಂಟರ್ : 11
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , Marathi , हिन्दी , Bengali , Assamese , Punjabi , Gujarati