ವಾರ್ತಾ ಮತ್ತು ಪ್ರಸಾರ ಸಚಿವಾಲಯ
azadi ka amrit mahotsav

ನಾಲ್ಕು ವಾರಗಳ ಕಾಲ ಟಿವಿ ಸುದ್ದಿ ಟಿಆರ್‌ಪಿಗಳನ್ನು ತಡೆಹಿಡಿಯುವಂತೆ ಸರ್ಕಾರದ ನಿರ್ದೇಶನ; ಬಿಕ್ಕಟ್ಟಿನ ಸಂದರ್ಭಗಳಲ್ಲಿ ಊಹಾಪೋಹಾತ್ಮಕ ಹೇಳಿಕೆ ಮತ್ತು ಸಂವೇದನಾಶೀಲ ವರದಿಗಾರಿಕೆ ತಡೆಗಟ್ಟುವ ಗುರಿ ಹೊಂದಿರುವ ಕ್ರಮ

ಪ್ರಕಟಣಾ ದಿನಾಂಕ: 02 APR 2026 4:10PM by PIB Bengaluru

ಆಪರೇಷನ್ ಸಿಂಧೂರ್ ಸಮಯದಲ್ಲಿ, ಕೆಲವು ಟಿವಿ ಸುದ್ದಿ ವಾಹಿನಿಗಳು ಅನಗತ್ಯ ಸಂವೇದನಾಶೀಲ ಮತ್ತು ಊಹಾತ್ಮಕ ವಿಷಯವನ್ನು ಪ್ರಸಾರ ಮಾಡಿದ್ದು ಕಂಡುಬಂದಿದೆ. ಸಂಘರ್ಷ ಅಥವಾ ಬಿಕ್ಕಟ್ಟಿನ ಸಮಯದಲ್ಲಿ ಟಿವಿ ವಾಹಿನಿಗಳಿಂದ ಇಂತಹ ಪ್ರಸಾರ ಗಮನಿಸಲಾಗಿದೆ. ಇದು ಸಾರ್ವಜನಿಕರಲ್ಲಿ, ವಿಶೇಷವಾಗಿ ಬಾಧಿತ ಪ್ರದೇಶಗಳಲ್ಲಿ ಸ್ನೇಹಿತರು ಮತ್ತು ಕುಟುಂಬವನ್ನು ಹೊಂದಿರುವವರಲ್ಲಿ ಭೀತಿಯನ್ನು ಉಂಟುಮಾಡುವ ಸಂಭಾವ್ಯತೆ ಇದೆ.
 
ಹೀಗಾಗಿ, ಮುನ್ನೆಚ್ಚರಿಕಾ ಕ್ರಮವಾಗಿ, ಸರ್ಕಾರವು ಟಿವಿ ಸುದ್ದಿ ವಾಹಿನಿಗಳ ಟೆಲಿವಿಷನ್ ರೇಟಿಂಗ್ ಪಾಯಿಂಟ್‌ (ಟಿಆರ್‌ಪಿ) ವರದಿಯನ್ನು ನಾಲ್ಕು ವಾರಗಳ ಕಾಲ ತಡೆಹಿಡಿಯುವಂತೆ ನಿರ್ದೇಶನ ನೀಡಿದೆ. ಈ ಸೂಚನೆಗಳಿಗೆ ಎಲ್ಲಾ ಸಂಬಂಧಿತರು ಸಮ್ಮತಿಸಿದ್ದು, ಇಲ್ಲಿಯವರೆಗೆ ಯಾವುದೇ ಆಕ್ಷೇಪಣೆಗಳು ಸ್ವೀಕೃತವಾಗಿಲ್ಲ.

ಕೇಂದ್ರ ವಾರ್ತಾ ಮತ್ತು ಪ್ರಸಾರ ರಾಜ್ಯ ಖಾತೆ ಸಚಿವರಾದ ಡಾ. ಎಲ್. ಮುರುಗನ್ ಅವರು ಶ್ರೀ ಈಟಲ ರಾಜೇಂದರ್ ಅವರ ಪ್ರಶ್ನೆಗೆ ಲೋಕಸಭೆಯಲ್ಲಿ ಸಲ್ಲಿಸಿರುವ ಲಿಖಿತ ಉತ್ತರದಲ್ಲಿ ಈ ವಿಷಯ ತಿಳಿಸಿದ್ದಾರೆ.

 

*****


(ಪ್ರಕಟಣೆ ಐ.ಡಿ.: 2248448) ವಿಸಿಟರ್ ಕೌಂಟರ್ : 14
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , Marathi , हिन्दी , Bengali , Bengali-TR , Assamese , Punjabi , Gujarati , Telugu , Malayalam