ಕೃಷಿ ಸಚಿವಾಲಯ
azadi ka amrit mahotsav

ಸ್ಥಳೀಯ ಜೈವಿಕ-ಬಿಟುಮೆನ್ ತಂತ್ರಜ್ಞಾನವನ್ನು ಸಿ.ಎಸ್.ಐ.ಆರ್. ವರ್ಗಾಯಿಸುತ್ತದೆ: ಕೃಷಿ ತ್ಯಾಜ್ಯ ಅವಶೇಷಗಳನ್ನು ಸುಸ್ಥಿರ ರಸ್ತೆಗಳಾಗಿ ಪರಿವರ್ತಿಸುತ್ತದೆ


ಸಿ.ಎಸ್.ಐ.ಆರ್. -ಕೇಂದ್ರ ರಸ್ತೆ ಸಂಶೋಧನಾ ಸಂಸ್ಥೆ ಮತ್ತು ಸಿ.ಎಸ್.ಐ.ಆರ್. -ಭಾರತೀಯ ಪೆಟ್ರೋಲಿಯಂ ಸಂಸ್ಥೆ ಜಂಟಿಯಾಗಿ ಇದನ್ನು ಅಭಿವೃದ್ಧಿಪಡಿಸಿದೆ

ಹೆಚ್ಚಿನ ಮೌಲ್ಯದ ಮೂಲಸೌಕರ್ಯ ಅನ್ವಯಿಕೆಗಳಿಗಾಗಿ ಕೃಷಿ ಅವಶೇಷಗಳ ಬಳಕೆಯು ರೈತರಿಗೆ ಹೆಚ್ಚುವರಿ ಆದಾಯದ ಅವಕಾಶಗಳನ್ನು ನೀಡುತ್ತದೆ ಮತ್ತು ಕೂಳೆ ಸುಡುವಿಕೆಯನ್ನು ಕಡಿಮೆ ಮಾಡುತ್ತದೆ: ಶ್ರೀ ಶಿವರಾಜ್ ಸಿಂಗ್ ಚೌಹಾಣ್

ಪ್ರಕಟಣಾ ದಿನಾಂಕ: 30 MAR 2026 3:54PM by PIB Bengaluru

ಸುಸ್ಥಿರ ಮತ್ತು ವೃತ್ತಾಕಾರದ ಮೂಲಸೌಕರ್ಯ ಅಭಿವೃದ್ಧಿಯತ್ತ ಮಹತ್ವದ ಹೆಜ್ಜೆಯಾಗಿ, ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಮಂಡಳಿ (ಸಿ.ಎಸ್.ಐ.ಆರ್.) ಇಂದು ನವದೆಹಲಿಯಲ್ಲಿ ದೊಡ್ಡ ಪ್ರಮಾಣದ ಕೈಗಾರಿಕಾ ಅಳವಡಿಕೆಗಾಗಿ "ಲಿಗ್ನೋಸೆಲ್ಯುಲೋಸಿಕ್ ಜೀವರಾಶಿಯಿಂದ ಜೈವಿಕ-ಬಿಟುಮೆನ್ - ಕೃಷಿ ಅವಶೇಷದಿಂದ ರಸ್ತೆಗಳಿಗೆ" ಎಂಬ ಶೀರ್ಷಿಕೆಯಲ್ಲಿ ತನ್ನ ನವೀನ ತಂತ್ರಜ್ಞಾನಕ್ಕಾಗಿ ತಂತ್ರಜ್ಞಾನ ವರ್ಗಾವಣೆಯ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಿದೆ.

ಈ ಕಾರ್ಯಕ್ರಮದಲ್ಲಿ ಕೇಂದ್ರ ಕೃಷಿ ಸಚಿವರಾದ ಶ್ರೀ ಶಿವರಾಜ್ ಸಿಂಗ್ ಚೌಹಾಣ್ ; ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಮತ್ತು ಭೂ ವಿಜ್ಞಾನಗಳ ರಾಜ್ಯ ಸಚಿವರಾದ (ಸ್ವತಂತ್ರ ನಿರ್ವಹಣೆ) ಡಾ. ಜಿತೇಂದ್ರ ಸಿಂಗ್; ಸಿ.ಎಸ್.ಐ.ಆರ್.  ಮಹಾನಿರ್ದೇಶಕರು ಮತ್ತು ಡಿ.ಎಸ್.ಐ.ಆರ್. ಕಾರ್ಯದರ್ಶಿ ಡಾ. ಎನ್. ಕಲೈಸೆಲ್ವಿ, ಸಚಿವಾಲಯಗಳು, ಸಿ.ಎಸ್.ಐ.ಆರ್.  ಸಂಸ್ಥೆಗಳು, ಕೈಗಾರಿಕಾ ಪಾಲುದಾರ ಸಂಸ್ಥೆಗಳು ಮತ್ತು ನೀತಿ ನಿರೂಪಕರು,  ಹಿರಿಯ ಅಧಿಕಾರಿಗಳ ಜೊತೆಗೆ ಭಾಗವಹಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಮತ್ತು ಗ್ರಾಮೀಣಾಭಿವೃದ್ಧಿ ಸಚಿವರಾದ ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಅವರು, ಜೈವಿಕ-ಬಿಟುಮೆನ್ ತಂತ್ರಜ್ಞಾನದ ಅಭಿವೃದ್ಧಿಯನ್ನು ಕೃಷಿಯನ್ನು ಮೂಲಸೌಕರ್ಯ ಮತ್ತು ನಾವೀನ್ಯತೆಯೊಂದಿಗೆ ಸಂಪರ್ಕಿಸುವ "ಐತಿಹಾಸಿಕ ಮತ್ತು ಪರಿವರ್ತನಾಶೀಲ ಹೆಜ್ಜೆ" ಎಂದು ಬಣ್ಣಿಸಿದರು. “ಜೈವಿಕ-ಬಿಟುಮೆನ್ ಅಳವಡಿಕೆಯು ಭಾರತದ ಹವಾಮಾನ ಬದ್ಧತೆಗಳು, ನಿವ್ವಳ ಶೂನ್ಯ ಗುರಿಗಳು ಮತ್ತು ಆತ್ಮನಿರ್ಭರ  ಭಾರತ, ರಾಷ್ಟ್ರೀಯ ಜೈವಿಕ ಇಂಧನ ಮಿಷನ್ ಮತ್ತು ವೃತ್ತಾಕಾರದ ಆರ್ಥಿಕ ಚೌಕಟ್ಟುಗಳಂತಹ ಪ್ರಮುಖ ಉಪಕ್ರಮಗಳೊಂದಿಗೆ ಬಲವಾಗಿ ಹೊಂದಿಕೆಯಾಗುತ್ತದೆ. ಹೆಚ್ಚಿನ ಮೌಲ್ಯದ ಮೂಲಸೌಕರ್ಯ ಅನ್ವಯಿಕೆಗಳಿಗಾಗಿ ಕೃಷಿ ಅವಶೇಷಗಳ ಬಳಕೆಯು ರೈತರಿಗೆ ಹೆಚ್ಚುವರಿ ಆದಾಯದ ಅವಕಾಶಗಳನ್ನು ನೀಡುತ್ತದೆ ಮತ್ತು ಕೂಳೆ ಸುಡುವಿಕೆ ಮತ್ತು ಪರಿಸರ ಮಾಲಿನ್ಯವನ್ನು ಕಡಿಮೆ ಮಾಡುತ್ತದೆ” ಎಂದು ಕೇಂದ್ರ ಸಚಿವರಾದ ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಅವರು ಹೇಳಿದರು..

ಕೇಂದ್ರ ಸಚಿವರಾದ ಡಾ. ಜಿತೇಂದ್ರ ಸಿಂಗ್ ಅವರು ತಮ್ಮ ಭಾಷಣದಲ್ಲಿ ಈ ಉಪಕ್ರಮವು ಸ್ವಾವಲಂಬನೆ, ಶುದ್ಧ ಇಂಧನ ಪರಿವರ್ತನೆ ಮತ್ತು "ತ್ಯಾಜ್ಯದಿಂದ ಸಂಪತ್ತಿಗೆ" ಎಂಬ ತತ್ವಕ್ಕೆ ಭಾರತದ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ ಎಂದು ವಿವರಿಸಿದರು. ಈ ತಂತ್ರಜ್ಞಾನವು ಕೃಷಿ, ವಿಜ್ಞಾನ ಮತ್ತು ತಂತ್ರಜ್ಞಾನ ಮತ್ತು ಮೂಲಸೌಕರ್ಯ ಅಭಿವೃದ್ಧಿ ಸೇರಿದಂತೆ ಬಹು ವಲಯಗಳ ಪರಿಣಾಮಕಾರಿ ಒಮ್ಮುಖವನ್ನು ಪ್ರದರ್ಶಿಸುತ್ತದೆ, ಇದಕ್ಕೆ ಬಲವಾದ ಸಾರ್ವಜನಿಕ-ಖಾಸಗಿ ಪಾಲುದಾರಿಕೆಗಳು ಬೆಂಬಲ ನೀಡುತ್ತವೆ ಎಂದು ಅವರು ಹೇಳಿದರು. ಜೈವಿಕ-ಬಿಟುಮೆನ್  ತಂತ್ರಜ್ಞಾನವು ಬಾಳಿಕೆ, ಸಾಂಪ್ರದಾಯಿಕ ಬಿಟುಮೆನ್ನೊಂದಿಗೆ ಹೊಂದಾಣಿಕೆ ಮತ್ತು ಕಡಿಮೆ ಇಂಗಾಲದ ಹೆಜ್ಜೆಗುರುತುಗಳ ವಿಷಯದಲ್ಲಿ ಭರವಸೆಯ ಕಾರ್ಯಕ್ಷಮತೆಯನ್ನು ಪ್ರದರ್ಶಿಸಿದೆ, ಇದು ರಾಷ್ಟ್ರೀಯ ಹೆದ್ದಾರಿ ಯೋಜನೆಗಳಲ್ಲಿ ದೊಡ್ಡ ಪ್ರಮಾಣದ ಅನುಷ್ಠಾನಕ್ಕೆ ಸೂಕ್ತವಾಗಿದೆ ಎಂದು ಅವರು ಹೇಳಿದರು.

ಈ ಅಭಿವೃದ್ಧಿಯು ಪೆಟ್ರೋ-ಆಧಾರಿತ ವಸ್ತುಗಳಿಂದ ಜೈವಿಕ-ಆಧಾರಿತ ವಸ್ತುಗಳಿಗೆ ಒಂದು ಮಾದರಿ ಬದಲಾವಣೆಯನ್ನು ಗುರುತಿಸುತ್ತದೆ ಮತ್ತು ರಾಷ್ಟ್ರೀಯ ಅಭಿವೃದ್ಧಿಗಾಗಿ ನಿಯಮಿತ ತಂತ್ರಜ್ಞಾನವನ್ನು ಹೊರತರುವ ಸಿ.ಎಸ್.ಐ.ಆರ್.  ನ ಬದ್ಧತೆಯನ್ನು ಡಾ. ಎನ್. ಕಲೈಸೆಲ್ವಿ ಅವರು ಪುನರುಚ್ಚರಿಸಿದರು.

ಈ ಕಾರ್ಯಕ್ರಮವು ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಸಚಿವಾಲಯ, ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ (ಎಂ.ಒ.ಆರ್.ಟಿ.ಎಚ್.) ಹಿರಿಯ ಅಧಿಕಾರಿಗಳು, ಸಿ.ಎಸ್.ಐ.ಆರ್.  ನಾಯಕತ್ವ, ವಿಜ್ಞಾನಿಗಳು, ಉದ್ಯಮ ಪಾಲುದಾರರು, ರೈತರು ಮತ್ತು ನೀತಿ ನಿರೂಪಕರ ಭಾಗವಹಿಸುವಿಕೆಯ ಮೂಲಕ ಯಶಸ್ಸನ್ನು ಕಂಡಿತು. ಇದು ಪ್ರಯೋಗಾಲಯ-ಪ್ರಮಾಣದ ನಾವೀನ್ಯತೆಯನ್ನು ಭಾರತದ ರಸ್ತೆ ವಲಯಕ್ಕೆ ನೈಜ-ಜಗತ್ತಿನ, ಕ್ಷೇತ್ರ-ಸಿದ್ಧ ಪರಿಹಾರಗಳಾಗಿ ಭಾಷಾಂತರಿಸುವಲ್ಲಿ ಪ್ರಮುಖ ಮೈಲಿಗಲ್ಲನ್ನು ಕೂಡಾ ಗುರುತಿಸಿತು.

ತಂತ್ರಜ್ಞಾನ ವರ್ಗಾವಣೆಯು ಸಿ.ಎಸ್.ಐ.ಆರ್. –ಕೇಂದ್ರ ರಸ್ತೆ ಸಂಶೋಧನಾ ಸಂಸ್ಥೆ (ಸಿ.ಎಸ್.ಐ.ಆರ್. –ಸಿ.ಆರ್.ಆರ್.ಐ.) ಮತ್ತು ಸಿ.ಎಸ್.ಐ.ಆರ್. –ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಪೆಟ್ರೋಲಿಯಂ (ಸಿ.ಎಸ್.ಐ.ಆರ್. -ಐಐಎಫ್) ಅಭಿವೃದ್ಧಿಪಡಿಸಿದ ಜೈವಿಕ-ಬಿಟುಮೆನ್  ಉತ್ಪಾದನಾ ಪ್ರಕ್ರಿಯೆಗೆ ಸಂಪೂರ್ಣವಾಗಿ ಸಂಬಂಧಿಸಿದೆ.

ವರ್ಷಗಳ ಸಂಶೋಧನೆಯ ಮೂಲಕ ಅಭಿವೃದ್ಧಿಪಡಿಸಲಾದ ಬಯೋ-ಬಿಟುಮೆನ್ ತಂತ್ರಜ್ಞಾನವು ಕೃಷಿ ಜೀವರಾಶಿ ಮತ್ತು ಬೆಳೆ ಉಳಿಕೆಗಳನ್ನು ಥರ್ಮೋಕೆಮಿಕಲ್ ಪರಿವರ್ತನೆ ಪ್ರಕ್ರಿಯೆಯ ಮೂಲಕ ಫೀಡ್ಸ್ಟಾಕ್ ಆಗಿ ಬಳಸಿಕೊಳ್ಳುತ್ತದೆ, ಇದು ಪೆಟ್ರೋಲಿಯಂ ಆಧಾರಿತ ಬಿಟುಮೆನ್ಗೆ ನವೀಕರಿಸಬಹುದಾದ ಮತ್ತು ಪರಿಸರ ಸ್ನೇಹಿ ಪರ್ಯಾಯವನ್ನು ಉತ್ಪಾದಿಸುತ್ತದೆ. ಈ ತಂತ್ರಜ್ಞಾನವು ಗಣನೀಯ ಪರಿಸರ ಮತ್ತು ಆರ್ಥಿಕ ಪ್ರಯೋಜನಗಳನ್ನು ನೀಡುವುದರ ಜೊತೆಗೆ ಸಾಂಪ್ರದಾಯಿಕ ಬಿಟುಮೆನ್ಗೆ ಸಮಾನವಾದ ಕಾರ್ಯಕ್ಷಮತೆಯನ್ನು ಪ್ರದರ್ಶಿಸಿದೆ ಮತ್ತು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು (ಎಂ.ಒ.ಆರ್.ಟಿ.ಎಚ್.)) ರಸ್ತೆ ನಿರ್ಮಾಣದಲ್ಲಿ ಅಳವಡಿಸಿಕೊಳ್ಳಲು ಇದನ್ನು ಅಭಿವೃದ್ಧಿಪಡಿಸಲಾಗಿದೆ.

ಈ ಪ್ರಗತಿಯು ಕೃಷಿ ಉಳಿಕೆಗಳಿಂದ ಜೈವಿಕ-ಬಿಟುಮೆನ್ ಉತ್ಪಾದನೆಯನ್ನು ಸಕ್ರಿಯಗೊಳಿಸುತ್ತದೆ, ಸಾಂಪ್ರದಾಯಿಕ ಬಿಟುಮೆನ್ ಗೆ ನವೀಕರಿಸಬಹುದಾದ, ಕಡಿಮೆ-ಇಂಗಾಲದ ಪರ್ಯಾಯವನ್ನು ನೀಡುತ್ತದೆ ಮತ್ತು ಕೃಷಿ ತ್ಯಾಜ್ಯದಿಂದ ಉಂಟಾಗುವ ಮಾಲಿನ್ಯ ಮತ್ತು ಆಮದು ಮಾಡಿಕೊಂಡ ಬಿಟುಮೆನ್ ಮೇಲಿನ ಹೆಚ್ಚುತ್ತಿರುವ ಅವಲಂಬನೆಯ ಅವಳಿ ರಾಷ್ಟ್ರೀಯ ಸವಾಲುಗಳನ್ನು ನೇರವಾಗಿ ಪರಿಹರಿಸುತ್ತದೆ.


*****


(ಪ್ರಕಟಣೆ ಐ.ಡಿ.: 2246929) ವಿಸಿಟರ್ ಕೌಂಟರ್ : 9
ಪ್ರಕಟಣೆಯನ್ನು ಇದರಲ್ಲಿ ಓದಿ: English , Gujarati , Urdu , हिन्दी , Marathi