ಹಣಕಾಸು ಸಚಿವಾಲಯ
azadi ka amrit mahotsav

ಕಾರ್ಯತಂತ್ರದಲ್ಲಿ ಸದೃಢತೆಗಾಗಿ ಶಿಸ್ತುಬದ್ಧ ʻಸ್ವದೇಶಿʼ ಮಾರ್ಗ: ವ್ಯೂಹಾತ್ಮಕ ದೇಶೀಕರಣಕ್ಕಾಗಿ ಮೂರು ಹಂತದ ನೀತಿಯನ್ನು ಪ್ರಸ್ತಾಪಿಸಿದ ಆರ್ಥಿಕ ಸಮೀಕ್ಷೆ


ರಾಷ್ಟ್ರೀಯ ಇನ್‌ಪುಟ್‌ ವೆಚ್ಚ ಕಡಿತ ಕಾರ್ಯತಂತ್ರ: ಸ್ಪರ್ಧಾತ್ಮಕತೆಯನ್ನು ಮೂಲಸೌಕರ್ಯವೆಂದು ಪರಿಗಣಿಸುವ ಅತ್ಯಗತ್ಯವಾದ ಅಡಿಪಾಯ

ದೇಶವನ್ನು ಜಾಗತಿಕ ಮೌಲ್ಯ ಸರಪಳಿಗಳಲ್ಲಿ ಸೇರಿಸುವುದು ಕಾರ್ಯತಂತ್ರದ ಅನಿವಾರ್ಯತೆಯಾಗಿದೆ.ಇದು ಜಗತ್ತು "ಭಾರತೀಯರ ಸರಕುಗಳನ್ನು ಖರೀದಿಸುವ ಬಗ್ಗೆ ಯೋಚಿಸುವ" ಹಂತದಿಂದ "ಯೋಚಿಸದೆ ಭಾರತೀಯ ವಸ್ತುಗಳನ್ನು ಖರೀದಿಸುವ" ಕಡೆಗೆ ಸಾಗುವಂತೆ  ಮಾಡುತ್ತದೆ: ಆರ್ಥಿಕ ಸಮೀಕ್ಷೆ

ಪ್ರಕಟಣಾ ದಿನಾಂಕ: 29 JAN 2026 1:38PM by PIB Bengaluru

 

 

 

ಇತ್ತೀಚಿನ ವರ್ಷಗಳಲ್ಲಿ ಭಾರತವು ಉತ್ತಮ ಕಾರ್ಯಕ್ಷಮತೆ ಪ್ರದರ್ಶಿಸಿದೆಯಾದರೂ ಇಂದು ಅದು ಎದುರಿಸುತ್ತಿರುವ ಜಾಗತಿಕ ಪರಿಸರವು ಭೌತಿಕವಾಗಿ ವಿಭಿನ್ನವಾಗಿದೆ ಮತ್ತು ಅಸ್ಥಿರವಾಗಿದೆ. ಭೌಗೋಳಿಕ ರಾಜಕೀಯ ಗೋಡೆಗಳು, ಕಾರ್ಯತಂತ್ರದ ವ್ಯಾಪಾರ, ಬಂಡವಾಳದ ಹರಿವಿನಲ್ಲಿ ಏರಿಳಿತ ಮತ್ತು ತ್ವರಿತ ತಾಂತ್ರಿಕ ಅಡಚಣೆಗಳಿಂದ ಕೂಡಿದ ಜಗತ್ತಿನಲ್ಲಿ, ಇನ್ನು ಮುಂದೆ ಸ್ಥೂಲ ಆರ್ಥಿಕ ನಿರ್ವಹಣೆಯೊಂದೆ ಮುಖ್ಯವಾಗುವುದಿಲ್ಲ.  ದೇಶದ ಸಾಮರ್ಥ್ಯದ ಆಳ ಮತ್ತು ಗುಣಮಟ್ಟವೂ ಮುಖ್ಯವಾಗುತ್ತದೆ.

ಅನಿಶ್ಚಿತ ಜಾಗತಿಕ ಪರಿಸರದಲ್ಲಿ, ಸಂಪೂರ್ಣ ಆಮದು ಪರ್ಯಾಯವನ್ನು ಮೀರಿ ಭಾರತ ಮುಂದೆ ಚಲಿಸಬೇಕಿದೆ.  ಪ್ರಮುಖ ಸಾಮರ್ಥ್ಯಗಳನ್ನು ಹೆಚ್ಚಿಸುವ, ಇನ್ಪುಟ್ ವೆಚ್ಚವನ್ನು ಕಡಿಮೆ ಮಾಡುವ, ಸುಧಾರಿತ ಉತ್ಪಾದನೆಯನ್ನು ಬಲಪಡಿಸುವ ಮೂರು ಹಂತಗಳ ಬಹಳ ಲೆಕ್ಕಾಚಾರದ ಕಾರ್ಯತಂತ್ರವನ್ನು ಭಾರತ ಅನುಸರಿಸಬೇಕಿದೆ. ಸ್ವಾವಲಂಬನೆ ಹಂತದಿಂದ ಭಾರತದ ಅನಿವಾರ್ಯ ಎಂಬ ಹಂತಕ್ಕೆ ಸಾಗಬೇಕಿದೆ.

"ಈ ಸನ್ನಿವೇಶದಲ್ಲಿ, ಸ್ವದೇಶಿ ಅನಿವಾರ್ಯ ಮತ್ತು ಅಗತ್ಯವಾಗುತ್ತದೆ. ಬಾಹ್ಯ ಆಘಾತಗಳ ನಡುವೆಯೂ ಉತ್ಪಾದನೆಯ ನಿರಂತರತೆಯನ್ನು ಖಚಿತಪಡಿಸಿಕೊಳ್ಳಲು ಮತ್ತು ಆರ್ಥಿಕ ಸಾರ್ವಭೌಮತ್ವವನ್ನು ಬಲಪಡಿಸುವ ಶಾಶ್ವತ ರಾಷ್ಟ್ರೀಯ ಸಾಮರ್ಥ್ಯಗಳನ್ನು ನಿರ್ಮಿಸಲು ಇದು ರಕ್ಷಣಾತ್ಮಕ ನೀತಿಯಾಗಿದೆ" ಎಂದು ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು ಇಂದು ಸಂಸತ್ತಿನಲ್ಲಿ ಮಂಡಿಸಿದ ʼಆರ್ಥಿಕ ಸಮೀಕ್ಷೆ 2025-26ʼ ಹೇಳಿದೆ.

ಆರ್ಥಿಕ ಸಮೀಕ್ಷೆಯು ಪರಿವರ್ತನೆಯನ್ನು ಕಾರ್ಯತಂತ್ರದ ಸದೃಢತೆಯ ಹಂತದಿಂದ ಕಾರ್ಯತಂತ್ರದ ಅನಿವಾರ್ಯತೆಯ ಚಲನೆಯನ್ನಾಗಿ ಗುರುತಿಸುತ್ತದೆ. ಕಾರ್ಯತಂತ್ರದ ಸದೃಢತೆಯು ಆಘಾತಗಳನ್ನು ಹೀರಿಕೊಳ್ಳುವ ಮತ್ತು ಕಾರ್ಯತಂತ್ರದ ಅನಿವಾರ್ಯತೆಯ ಕಡೆಗೆ ಸ್ಥಿರತೆಯನ್ನು ಕಾಪಾಡುವ ಸಾಮರ್ಥ್ಯವನ್ನು ಸೂಚಿಸಿದರೆ. ಕಾರ್ಯತಂತ್ರದ ಅನಿವಾರ್ಯತೆಯು ಇತರರಿಗೆ ವಿಶ್ವಾಸಾರ್ಹತೆ, ಸಾಮರ್ಥ್ಯ ಮತ್ತು ಮೌಲ್ಯದ ಮೂಲವಾಗುವ ಸಾಮರ್ಥ್ಯವನ್ನು ಸೂಚಿಸುತ್ತದೆ.

ದೇಶಿಯತೆಗಾಗಿ ಒಂದು ಶಿಸ್ತುಬದ್ಧ ವಿಧಾನವಾಗಿ ಸ್ವದೇಶಿ ಮಾರ್ಗ:

ಸ್ವದೇಶಿ ಒಂದು ಶಿಸ್ತುಬದ್ಧ ಕಾರ್ಯತಂತ್ರವಾಗಿರಬೇಕು, ಏಕೆಂದರೆ ಎಲ್ಲಾ ಆಮದುಗಳ ಪರ್ಯಾಯ ಕಾರ್ಯಸಾಧ್ಯವಲ್ಲ ಅಥವಾ ಅಪೇಕ್ಷಣೀಯವಲ್ಲ. "ಉತ್ಪಾದಕತೆಯನ್ನು ಹೆಚ್ಚಿಸುವ ಹೂಡಿಕೆ, ಸಾಮರ್ಥ್ಯ ಉನ್ನತೀಕರಣ ಮತ್ತು ರಫ್ತು ದೃಷ್ಟಿಕೋನವಿಲ್ಲದ ರಕ್ಷಣಾತ್ಮಕತೆಯು ಶಕ್ತಿಗಿಂತ ದುರ್ಬಲತೆಯನ್ನು ಸೃಷ್ಟಿಸುತ್ತದೆ" ಎಂದು ಆರ್ಥಿಕ ಸಮೀಕ್ಷೆ ಹೇಳಿದೆ.

ಸಮೀಕ್ಷೆಯು ಸ್ವದೇಶೀಕರಣಕ್ಕಾಗಿ ಮೂರು ಹಂತದ ನೀತಿಯನ್ನು ಪ್ರಸ್ತಾಪಿಸಿದೆ. ಇದರಿಂದ ಸರ್ಕಾರದ ಮಧ್ಯಸ್ಥಿಕೆಯು ಅದಕ್ಷತೆಯನ್ನು ಕಾಯ್ದುಕೊಳ್ಳುವ ಬದಲು ದೀರ್ಘಕಾಲೀನ ಸಾಮರ್ಥ್ಯವನ್ನು ನಿರ್ಮಿಸುತ್ತದೆ. ಮೂರು ಹಂತಗಳು ಕೆಳಗಿನಂತಿವೆ:

  • ಹೆಚ್ಚಿನ ಕಾರ್ಯತಂತ್ರದ ತುರ್ತುಸ್ಥಿತಿಯೊಂದಿಗೆ ನಿರ್ಣಾಯಕ ದೌರ್ಬಲ್ಯಗಳು

  • ಕಾರ್ಯತಂತ್ರದ ಪಾವತಿಗಳೊಂದಿಗೆ ಆರ್ಥಿಕವಾಗಿ ಕಾರ್ಯಸಾಧ್ಯವಾದ ಸಾಮರ್ಥ್ಯಗಳು

  • ಕಡಿಮೆ ಕಾರ್ಯತಂತ್ರದ ತುರ್ತುಸ್ಥಿತಿ ಅಥವಾ ಅಧಿಕ-ವೆಚ್ಚದ ಪರ್ಯಾಯ

ಮೂರು ಹಂತಗಳು ಸದಾ ಸ್ಥಿರವಾಗಿರುವುದಿಲ್ಲ; ಬದಲಿಗೆ ತಂತ್ರಜ್ಞಾನಗಳು ಪ್ರಬುದ್ಧವಾಗುತ್ತಿದ್ದಂತೆ, ವೆಚ್ಚಗಳು ಕಡಿಮೆಯಾಗುತ್ತಿದ್ದಂತೆ ಅಥವಾ ಭೌಗೋಳಿಕ ರಾಜಕೀಯ ಪರಿಸ್ಥಿತಿಗಳು ಬದಲಾದಂತೆ ಅವು ವಿಕಸನಗೊಳ್ಳುತ್ತವೆ. ಇದು ರಫ್ತು ಸಾಮರ್ಥ್ಯದ ಕಡೆಗೆ ಸ್ವದೇಶೀಕರಣವನ್ನು ಸೃಷ್ಟಿಸುತ್ತದೆ. ಇದು ವಿವೇಚನಾಯುತ ಆಮದು ಪರ್ಯಾಯದ ವಿಶಿಷ್ಟ ಲಕ್ಷಣವಾಗಿದೆ.

ಸಮೀಕ್ಷೆಯಲ್ಲಿ ʻರಾಷ್ಟ್ರೀಯ ಇನ್ಪುಟ್ ವೆಚ್ಚ ಕಡಿತʼ ಕಾರ್ಯತಂತ್ರವನ್ನು ಪರಿಶೀಲಿಸಲಾಗಿದೆ. ಈ ಕಾರ್ಯತಂತ್ರವು ಸ್ಪರ್ಧಾತ್ಮಕತೆಯನ್ನು ಮೂಲಸೌಕರ್ಯವಾಗಿ ಪರಿಗಣಿಸುತ್ತದೆ. ಕೈಗೆಟುಕುವ ಮತ್ತು ವಿಶ್ವಾಸಾರ್ಹ ಕಚ್ಚಾವಸ್ತುಗಳನ್ನು ಉತ್ಪಾದನೆ, ರಫ್ತು ಮತ್ತು ಉದ್ಯೋಗಕ್ಕೆ ಅಡಿಪಾಯವೆಂದು ಗುರುತಿಸುತ್ತದೆ. ಇನ್ಪುಟ್ ವೆಚ್ಚಗಳನ್ನು ಪ್ರಸರಣ ಮತ್ತು ನಿರಂತರ ಆರ್ಥಿಕತೆ-ವ್ಯಾಪಕ ದಂಡವಾಗಿ ಪರಿಗಣಿಸುತ್ತದೆ. "ಭಾರತಕ್ಕೆ, ದೇಶೀಯೀಕರಣವು ರಫ್ತುಗಳನ್ನು ಸವೆಸದೆ ಸ್ಥಿತಿಸ್ಥಾಪಕತ್ವವನ್ನು ಬಲಪಡಿಸಬೇಕಾದರೆ, ಅದನ್ನು ವ್ಯವಸ್ಥಿತ ಇನ್ಪುಟ್-ವೆಚ್ಚ ಕಡಿತದೊಂದಿಗೆ ಜೋಡಿಸಬೇಕು" ಎಂದು ಆರ್ಥಿಕ ಸಮೀಕ್ಷೆ ಹೇಳುತ್ತದೆ.

ಸಾಮರ್ಥ್ಯ ವರ್ಧನೆಯಲ್ಲಿ ಸುಧಾರಿತ ಉತ್ಪಾದನೆಯ ಪಾತ್ರ ನಿರ್ಣಾಯಕವಾಗಿದೆ. ಏಕೆಂದರೆ ಇದು ಆಶ್ರಯ ಚಟುವಟಿಕೆಗಳಿಂದ ದೀರ್ಘಕಾಲದವರೆಗೆ ಉಂಟಾಗುವ ದೌರ್ಬಲ್ಯಗಳನ್ನು ಇದು ಬಹಿರಂಗಪಡಿಸುತ್ತದೆ. ಇದು ರಾಜ್ಯ ಮತ್ತು ಸಂಸ್ಥೆಗಳೆರಡಕ್ಕೂ ಒತ್ತಡ ಪರೀಕ್ಷೆಯಾಗಿ ಕಾರ್ಯನಿರ್ವಹಿಸುತ್ತದೆ. ಅಲ್ಲಿ ಊಹಿಸಬಹುದಾದ ನಿಯಮಗಳು, ಕಾರ್ಯಾಚರಣೆಯ ವಿಶ್ವಾಸಾರ್ಹತೆ ಮತ್ತು ಸಾಂಸ್ಥಿಕ ಅನುಸರಣೆಗಳು ಬದುಕುಳಿಯಲು ಅತ್ಯಗತ್ಯವಾಗಿರುತ್ತವೆ.

ಪೂರ್ವ ಏಷ್ಯಾದ ಅನುಭವವನ್ನು ಆಧರಿಸಿ, ಪ್ರಗತಿಯನ್ನು ಬೆಂಬಲಿಸುವಲ್ಲಿ ಉದ್ಯಮಶೀಲ ರಾಷ್ಟ್ರದ ಪಾತ್ರವನ್ನು ಸಮೀಕ್ಷೆಯು ಎತ್ತಿ ತೋರಿದೆ. ಫಲಿತಾಂಶ-ಆಧಾರಿತ ಅಧಿಕಾರಶಾಹಿ, ಕಲಿಕೆಯೊಂದಿಗೆ ವೈಫಲ್ಯ ಸಹಿಷ್ಣುತೆ (ದೋಷಗಳು ಸ್ವೀಕಾರಾರ್ಹ; ಆದರೆ ನಿಶ್ಚಲತೆ ಅಲ್ಲ) ಮತ್ತು ಬೆಂಬಲದ ಹಿಂತೆಗೆದುಕೊಳ್ಳುವಿಕೆ (ಪ್ರವೇಶದಷ್ಟೇ ಮುಖ್ಯ) ಒಳಗೊಂಡಿರುವ ಸಾಂಸ್ಥಿಕ ಸುಧಾರಣೆಗಳೊಂದಿಗೆ ಕೈಗಾರಿಕಾ ನೀತಿಯು ಯಶಸ್ಸಿನ ಉತ್ತಮ ಅವಕಾಶವನ್ನು ಹೊಂದಿದೆ.

ಸದೃಢತೆಯು ಅಗತ್ಯವಾದ ಉದ್ದೇಶವಾಗಿದ್ದರೂ, ಅದೊಂದೇ ಸಾಕಾಗುವುದಿಲ್ಲ. ಕೇವಲ ಆಘಾತಗಳನ್ನು ಹೀರಿಕೊಳ್ಳುವ ರಾಷ್ಟ್ರವು ಪ್ರತಿಕ್ರಿಯಾತ್ಮಕವಾಗಿ ಉಳಿಯುತ್ತದೆ. ಫಲಿತಾಂಶಗಳನ್ನು ರೂಪಿಸುವ ರಾಷ್ಟ್ರವು ಪ್ರಭಾವಶಾಲಿಯಾಗುತ್ತದೆ. ಇದು ಸ್ವಾವಲಂಬನೆ ಮತ್ತು ಸದೃಢತೆಗಿಂತಲೂ ಮಿಗಿಲಾದದ್ದು. ಆರ್ಥಿಕ ಸಮೀಕ್ಷೆಯು ಸ್ವದೇಶಿಯಿಂದ ಕಾರ್ಯತಂತ್ರದ ಸದೃಢತೆಗೆ, ಕಾರ್ಯತಂತ್ರದ ಸದೃಢತೆಯಿಂದ ಕಾರ್ಯತಂತ್ರದ ಅನಿವಾರ್ಯತೆಯವರೆಗೆ ಪ್ರಗತಿಯನ್ನು ರೂಪಿಸುತ್ತದೆ. ಇದರಲ್ಲಿ ವಿವೇಚನಾಯುತ ಆಮದು ಪರ್ಯಾಯವು ರಾಷ್ಟ್ರವನ್ನು ಸಬಲೀಕರಣಗೊಳಿಸುತ್ತದೆ ಮತ್ತು ಅಂತಿಮವಾಗಿ ಭಾರತವನ್ನು ಜಾಗತಿಕ ವ್ಯವಸ್ಥೆಗಳಲ್ಲಿ ಒಂದಾಗಿಸುತ್ತದೆ. ಇದರಿಂದಾಗಿ ಜಗತ್ತು "ಭಾರತೀಯ ವಸ್ತುಗಳನ್ನು ಖರೀದಿಸುವ ಬಗ್ಗೆ ಯೋಚಿಸುವ" ಮಟ್ಟದಿಂದ "ಯೋಚಿಸದೆ ಭಾರತೀಯ ಸರಕುಗಳನ್ನು ಖರೀದಿಸುವ" ಕಡೆಗೆ ಚಲಿಸುತ್ತದೆ.

******


(ಪ್ರಕಟಣೆ ಐ.ಡಿ.: 2220607) ವಿಸಿಟರ್ ಕೌಂಟರ್ : 15
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , हिन्दी , Assamese , Bengali , Manipuri , Punjabi , Tamil , Malayalam