ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ದೇವ್ ದೀಪಾವಳಿಗೆ ಪ್ರಧಾನಮಂತ್ರಿ ಅವರಿಂದ ಶುಭಾಶಯ

Posted On: 05 NOV 2025 10:16PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ದೇವ್ ದೀಪಾವಳಿಯ ಸಂದರ್ಭದಲ್ಲಿ ದೇಶದ ಜನತೆಗೆ ಶುಭಾಶಯ ಕೋರಿದ್ದಾರೆ. 

ಬಾಬಾ ವಿಶ್ವನಾಥನ ಪವಿತ್ರ ನಗರವು ಇಂದು ದೇವ್ ದೀಪಾವಳಿಯ ಅಪ್ರತಿಮ ಪ್ರಕಾಶದಿಂದ ಬೆಳಗುತ್ತಿದೆ. ಗಂಗಾ ಮಾತೆಯ ದಡದಲ್ಲಿ, ಕಾಶಿ ವಿಶ್ವನಾಥನ ಸನ್ನಿಧಿಯ ಸುತ್ತಮುತ್ತಲ ಘಾಟ್‌ ಗಳಲ್ಲಿ ಬೆಳಗಿದ ಲಕ್ಷಾಂತರ ದೀಪಗಳು ಎಲ್ಲರಿಗೂ ಸಂತೋಷ ಮತ್ತು ಸಮೃದ್ಧಿಯ ಶುಭಾಶಯಗಳನ್ನು ಹೊತ್ತಿವೆ ಎಂದು ಪ್ರಧಾನಿಗಳು ಸಂತಸ ಹಂಚಿಕೊಂಡಿದ್ದಾರೆ.

ಪ್ರಧಾನಮಂತ್ರಿಗಳು ಎಕ್ಸ್ ನಲ್ಲಿ ಪೋಸ್ಟ್ ಮಾಡಿ:

"ಬಾಬಾ ವಿಶ್ವನಾಥರ ಪವಿತ್ರ ನಗರಿ ಇಂದು ದೇವ್ ದೀಪಾವಳಿಯ ಅನುಪಮ ಬೆಳಕಿನಿಂದ ಬೆಳಗುತ್ತಿದೆ. ಕಾಶಿಯ ದಡದಲ್ಲಿರುವ ಗಂಗಾ ಮಾತೆಯ ದಡದಲ್ಲಿ ಬೆಳಗುತ್ತಿರುವ ಲಕ್ಷಾಂತರ ದೀಪಗಳು ಎಲ್ಲರಿಗೂ ಸಂತೋಷ ಮತ್ತು ಸಮೃದ್ಧಿಯನ್ನು ಹಾರೈಸುತ್ತವೆ. ಈ ದೈವತ್ವ ಮತ್ತು ಭವ್ಯತೆ ಖಂಡಿತವಾಗಿಯೂ ಪ್ರತಿಯೊಬ್ಬರ ಹೃದಯ ಮತ್ತು ಆತ್ಮವನ್ನು ಆಕರ್ಷಿಸುತ್ತದೆ.

ದೇವ್ ದೀಪಾವಳಿಯಂದು ನಿಮ್ಮೆಲ್ಲರಿಗೂ ಹೃತ್ಪೂರ್ವಕ ಶುಭಾಶಯಗಳು. ಹರ ಹರ ಮಹಾದೇವ!" 

"ಕಾಶಿಯಲ್ಲಿ ಅದ್ಭುತ ದೇವ್ ದೀಪಾವಳಿ!"

 

*****


(Release ID: 2186990) Visitor Counter : 5