ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಮಾಜಿ ಸಂಸದ, ತಿರು ಮಾಸ್ಟರ್ ಮಥನ್ ಅವರ ನಿಧನಕ್ಕೆ ಪ್ರಧಾನಮಂತ್ರಿ ಸಂತಾಪ

प्रविष्टि तिथि: 27 JUL 2024 10:51AM by PIB Bengaluru

ಮಾಜಿ ಸಂಸದ ತಿರು ಮಾಸ್ಟರ್ ಮಥನ್ ಅವರ ನಿಧನಕ್ಕೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ತಿರು ಮಾಸ್ಟರ್ ಮಥನ್ ಅವರು ಸಮಾಜಕ್ಕೆ ಮತ್ತು ದೀನದಲಿತರ ಪರ ಕೆಲಸ ಮಾಡಲು ಸದಾ ಪ್ರಯತ್ನಿಸುತ್ತಿದ್ದರು ಎಂದು ಸ್ಮರಿಸಿಕೊಂಡಿದ್ದಾರೆ. 

ಈ ಕುರಿತು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅವರು;

“ಮಾಜಿ ಸಂಸದ ತಿರು ಮಾಸ್ಟರ್ ಮಥನ್ ಅವರ ನಿಧನದಿಂದ ನೋವಾಗಿದೆ. ಸಮಾಜಕ್ಕೆ ಸೇವೆ ಸಲ್ಲಿಸಲು ಮತ್ತು ದೀನದಲಿತರಿಗಾಗಿ ಕೆಲಸ ಮಾಡಲು ಅವರು ಮಾಡಿದ ಪ್ರಯತ್ನಗಳಿಂದ ಅವರು ಸ್ಮರಣೀಯರಾಗುತ್ತಾರೆ. ತಮಿಳುನಾಡಿನಲ್ಲಿ ನಮ್ಮ ಪಕ್ಷವನ್ನು ಬಲಪಡಿಸುವಲ್ಲಿ ಅವರು ಶ್ಲಾಘನೀಯ ಪಾತ್ರವನ್ನು ವಹಿಸಿದ್ದಾರೆ. ಈ ದುಃಖದ ಸಮಯದಲ್ಲಿ ಅವರ ಕುಟುಂಬ ಮತ್ತು ಬೆಂಬಲಿಗರಿಗೆ ಸಂತಾಪಗಳು, ಓಂ ಶಾಂತಿ.” ಎಂದು ಬರೆದುಕೊಂಡಿದ್ದಾರೆ.

 

 

*****


(रिलीज़ आईडी: 2038183) आगंतुक पटल : 69
इस विज्ञप्ति को इन भाषाओं में पढ़ें: Odia , English , Urdu , Marathi , हिन्दी , Hindi_MP , Manipuri , Bengali , Assamese , Punjabi , Gujarati , Tamil , Telugu , Malayalam