ಉಪರಾಷ್ಟ್ರಪತಿಗಳ ಕಾರ್ಯಾಲಯ
ಜ್ಞಾನ ಮತ್ತು ಶಿಕ್ಷಣದ ಕೇಂದ್ರಬಿಂದುವಾಗಿ ಭಾರತದ ಐತಿಹಾಸಿಕ ಶ್ರೇಷ್ಠತೆಯನ್ನು ಎತ್ತಿ ತೋರಿಸಿದ ಉಪ ರಾಷ್ಟ್ರಪತಿಗಳು
ಶಿಕ್ಷಣವು ಬದಲಾವಣೆಗೆ ಅತ್ಯಂತ ಪ್ರಭಾವಶಾಲಿ ಪರಿವರ್ತನೆಯ ಕಾರ್ಯವಿಧಾನ-ಉಪ ರಾಷ್ಟ್ರಪತಿಗಳು
ಶಿಕ್ಷಣವು ಕೇವಲ ಜ್ಞಾನವನ್ನು ಪಡೆಯುವ ಸಾಧನ ಮಾತ್ರವಲ್ಲ; ಬದಲಿಗೆ ಇದು ಪ್ರಗತಿ, ಸಬಲೀಕರಣ ಮತ್ತು ಸಾಮಾಜಿಕ ಪರಿವರ್ತನೆಯ ಮೂಲಾಧಾರವಾಗಿದೆ- ಉಪ ರಾಷ್ಟ್ರಪತಿಗಳು
ರಾಷ್ಟ್ರೀಯ ಶಿಕ್ಷಣ ನೀತಿ(NEP) ಪರಿವರ್ತಕ ಬದಲಾವಣೆಯನ್ನು ಸೂಚಿಸುತ್ತದೆ, ಸಮಗ್ರ ಅಭಿವೃದ್ಧಿಗೆ ಮಾರ್ಗಸೂಚಿಯನ್ನು ಪಟ್ಟಿ ಮಾಡುತ್ತದೆ-ಉಪ ರಾಷ್ಟ್ರಪತಿಗಳು
ಸ್ಕೂಲ್ ಆಫ್ ಓಪನ್ ಲರ್ನಿಂಗ್ (SOL) ವೃತ್ತಿಪರರು, ಗೃಹಿಣಿಯರು ಮತ್ತು ವಿದ್ಯಾರ್ಥಿಗಳು ಹೀಗೆ ವೈವಿಧ್ಯಮಯ ಶ್ರೇಣಿಯ ಕಲಿಕೆಯಲ್ಲಿ ಆಸಕ್ತಿ ಇರುವವರಿಗೆ ಪರಿವರ್ತಕ ವೇದಿಕೆಯನ್ನು ಒದಗಿಸುತ್ತದೆ; ಉಪ ರಾಷ್ಟ್ರಪತಿಗಳು
ಈ ಹಿಂದೆ ಔಪಚಾರಿಕ ಶಿಕ್ಷಣದಿಂದ ವಂಚಿತರಾದವರಿಗೆ ಎಸ್ ಒಎಲ್ ಎರಡನೇ ಅವಕಾಶವನ್ನು ನೀಡುತ್ತದೆ-ಉಪ ರಾಷ್ಟ್ರಪತಿಗಳು
ದೆಹಲಿ ವಿಶ್ವವಿದ್ಯಾಲಯದ ಸ್ಕೂಲ್ ಆಫ್ ಓಪನ್ ಲರ್ನಿಂಗ್ ನ 62 ನೇ ಸಂಸ್ಥಾಪನಾ ದಿನಾಚರಣೆಯಲ್ಲಿ ಉಪ ರಾಷ್ಟ್ರಪತಿಗಳ ಭಾಷಣ
Posted On:
06 MAY 2024 1:41PM by PIB Bengaluru
ಜ್ಞಾನ ಮತ್ತು ಶಿಕ್ಷಣದ ಕೇಂದ್ರಬಿಂದುವಾಗಿ ಭಾರತದ ಐತಿಹಾಸಿಕ ಶ್ರೇಷ್ಠತೆಯನ್ನು ಉಪ ರಾಷ್ಟ್ರಪತಿಗಳಾದ ಶ್ರೀ ಜಗದೀಪ್ ಧನಕರ್ ಅವರು ಒತ್ತಿ ಹೇಳಿದರು. ದೇಶವು ತನ್ನ ಹಿಂದಿನ ವೈಭವವನ್ನು ಮರಳಿ ಪಡೆಯುವ ಹಾದಿಯಲ್ಲಿ ದೃಢವಾಗಿ ಸಾಗುತ್ತಿದೆ ಎಂದು ಪ್ರತಿಪಾದಿಸಿದರು. ನಳಂದಾ ಮತ್ತು ತಕ್ಷಶಿಲೆಯಂತಹ ಸಂಸ್ಥೆಗಳ ಸುಪ್ರಸಿದ್ಧ ಪರಂಪರೆಯನ್ನು ಪ್ರಸ್ತಾಪಿಸಿದ ಉಪ ರಾಷ್ಟ್ರಪತಿಗಳು, ಸಮಕಾಲೀನ ಭಾರತದ ಶೈಕ್ಷಣಿಕ ಭೂ ದೃಶ್ಯದಲ್ಲಿನ ಮಾದರಿ ಬದಲಾವಣೆ ಮತ್ತು ಪುನರುತ್ಥಾನವನ್ನು ಎತ್ತಿ ತೋರಿಸಿದರು.
ದೆಹಲಿ ವಿಶ್ವವಿದ್ಯಾಲಯದ ಸ್ಕೂಲ್ ಆಫ್ ಓಪನ್ ಲರ್ನಿಂಗ್ (SOL) ನ 62 ನೇ ಸಂಸ್ಥಾಪನಾ ದಿನಾಚರಣೆಯಲ್ಲಿ ಸಭೆಯನ್ನುದ್ದೇಶಿಸಿ ಮಾತನಾಡಿದ ಉಪ ರಾಷ್ಟ್ರಪತಿಗಳು, ವೃತ್ತಿಪರರು, ಗೃಹಿಣಿಯರು, ವಿದ್ಯಾರ್ಥಿಗಳು ಸೇರಿದಂತೆ ಜೀವನದ ವಿವಿಧ ಹಂತಗಳ ವಿವಿಧ ಶ್ರೇಣಿಯ ಕಲಿಕೆಯವರಿಗೆ ಪರಿವರ್ತಕ ವೇದಿಕೆಯನ್ನು ಒದಗಿಸುವ ಸ್ಕೂಲ್ ಆಫ್ ಓಪನ್ ಲರ್ನಿಂಗ್ ನ್ನು ಶ್ಲಾಘಿಸಿದರು.
ಪರಿಸ್ಥಿತಿಗಳಿಂದ ವಂಚಿತರಾಗಿ ಈ ಮೊದಲು ಔಪಚಾರಿಕ ಶಿಕ್ಷಣ ಪಡೆಯದಿದ್ದವರಿಗೆ ಎಸ್ ಒಎಲ್ ಎರಡನೇ ಅವಕಾಶ ನೀಡಿದೆ ಎಂದರು, ಜ್ಞಾನ ಮತ್ತು ಕೌಶಲ್ಯಗಳ ಮೂಲಕ ನಿರ್ಗತಿಕ ಸಮುದಾಯಗಳನ್ನು ಸಬಲೀಕರಣಗೊಳಿಸಿ ಇದರಿಂದ ಸಮಾಜದ ಎಲ್ಲಾ ವರ್ಗದವರ ನಿಜವಾದ ಒಳಗೊಳ್ಳುವಿಕೆಯ ವಾತಾವರಣವನ್ನು ಎಸ್ ಒಎಲ್ ಬೆಳೆಸಿದೆ ಎಂದರು. ಶಿಕ್ಷಣ ಸಂಸ್ಥೆಗಳ ಸಾರ ಮತ್ತು ಗುಣಮಟ್ಟವನ್ನು ರೂಪಿಸುವಲ್ಲಿ ಮೂಲಸೌಕರ್ಯಗಳ ಮೇಲೆ ಶಾಲೆಯ ಬೋಧಕ ಸಿಬ್ಬಂದಿಯ ಪ್ರಮುಖ ಪಾತ್ರವನ್ನು ಶ್ರೀ ಜಗದೀಪ್ ಧಂಖರ್ ಮತ್ತಷ್ಟು ಒತ್ತಿ ಹೇಳಿದರು.
ಬದಲಾವಣೆಗೆ ಶಿಕ್ಷಣವು ಅತ್ಯಂತ ಪ್ರಭಾವಶಾಲಿ ಪರಿವರ್ತನೆಯ ಕಾರ್ಯವಿಧಾನವಾಗಿದೆ ಎಂದು ಉಲ್ಲೇಖಿಸಿದ ಉಪ ರಾಷ್ಟ್ರಪತಿಗಳು, ಶಿಕ್ಷಣವು ಕೇವಲ ಜ್ಞಾನವನ್ನು ಪಡೆಯುವ ಸಾಧನ ಮಾತ್ರವಲ್ಲ ಎಂದು ಪ್ರತಿಪಾದಿಸಿದರು; ಬದಲಿಗೆ, ಇದು ಪ್ರಗತಿ, ಸಬಲೀಕರಣ ಮತ್ತು ಸಾಮಾಜಿಕ ಪರಿವರ್ತನೆಯ ಮೂಲಾಧಾರವಾಗಿದೆ. ಇದು ಪ್ರಗತಿ, ಸಮೃದ್ಧಿ ಮತ್ತು ಸಬಲೀಕರಣದ ಬಾಗಿಲನ್ನು ತೆರೆಯುವ ಕೀಲಿಯಾಗಿದೆ. “ಶಿಕ್ಷಣವು ಅತ್ಯಂತ ದೊಡ್ಡ ಹಕ್ಕು ಮತ್ತು ದಾನ. ಶಿಕ್ಷಣಕ್ಕಿಂತ ದೊಡ್ಡ ಮೂಲಭೂತ ಹಕ್ಕು ಇರಲು ಸಾಧ್ಯವಿಲ್ಲ ಮತ್ತು ಶಿಕ್ಷಣಕ್ಕಿಂತ ದೊಡ್ಡ ದಾನ ಮತ್ತೊಂದಿಲ್ಲ" ಎಂದು ಹೇಳಿದರು.
ಆರಂಭಿಕ ಹಿನ್ನಡೆಯ ನಂತರ ಚಂದ್ರನ ದಕ್ಷಿಣ ಧ್ರುವದ ಮೇಲೆ ಸರಾಗವಾಗಿ ಇಳಿಕೆ ಕಂಡ ಚಂದ್ರಯಾನ ಸ್ಪೂರ್ತಿ ಪಡೆದು, ವೈಫಲ್ಯವನ್ನು ಯಶಸ್ಸಿನ ಕೀಲಿಯಾಗಿ ಪರಿಗಣಿಸಬೇಕೆಂದು ವಿದ್ಯಾರ್ಥಿಗಳನ್ನು ಶ್ರೀ ಜಗದೀಪ್ ಧಂಖರ್ ಒತ್ತಾಯಿಸಿದರು. ಆಧುನಿಕ ಪ್ರಪಂಚದ ಸಂಕೀರ್ಣತೆಗಳನ್ನು ನಿಖರವಾಗಿ ನಿರ್ಣಯಿಸುವ ಮನಸ್ಥಿತಿಯ ಅಗತ್ಯವನ್ನು ಅವರು ಒತ್ತಿ ಹೇಳಿದರು.
ಭಾರತೀಯ ಶೈಕ್ಷಣಿಕ ಭೂದೃಶ್ಯದಲ್ಲಿ ಹೊಸ ಶಿಕ್ಷಣ ನೀತಿ (NEP) ಯ ಪ್ರಮುಖ ಪಾತ್ರವನ್ನು ಎತ್ತಿ ತೋರಿಸಿದ ಅವರು, ರಾಷ್ಟ್ರೀಯ ಶಿಕ್ಷಣ ನೀತಿ(National Education Policy) ಪರಿವರ್ತಕ ಬದಲಾವಣೆಗೆ ನಾಂದಿ ಹಾಡುತ್ತದೆ, ಸಮಗ್ರ ಕಲಿಕೆಯ ಅಭಿವೃದ್ಧಿಗೆ ಮಾರ್ಗಸೂಚಿಯನ್ನು ರೂಪಿಸುತ್ತದೆ ಮತ್ತು 21 ನೇ ಶತಮಾನದ ಸವಾಲುಗಳಿಗೆ ಸುಸಜ್ಜಿತವಾದ ಜ್ಞಾನದ ಸಮಾಜವನ್ನು ರಚಿಸುತ್ತದೆ ಎಂದು ಶ್ರೀ ಧಂಖರ್ ಹೇಳಿದರು. ಹೊಂದಿಕೊಳ್ಳುವ ಕಲಿಕೆಯ ಮಾರ್ಗಗಳು, ತಂತ್ರಜ್ಞಾನ ಏಕೀಕರಣ, ವೈವಿಧ್ಯಮಯ ಅಗತ್ಯಗಳು ಮತ್ತು ಆಕಾಂಕ್ಷೆಗಳನ್ನು ಗುರುತಿಸುವಲ್ಲಿ ಅವರು ಎನ್ ಇಪಿಯ ಮಹತ್ವವನ್ನು ಒತ್ತಿಹೇಳಿದರು.
ಎನ್ಇಪಿ ಕಲ್ಪಿಸಿದಂತೆ ಗುಣಮಟ್ಟದ ಶಿಕ್ಷಣವನ್ನು ವಿಸ್ತರಿಸುವಲ್ಲಿ ಮತ್ತು ದೀರ್ಘಕಾಲದ ಅಂತರವನ್ನು ಕಡಿಮೆ ಮಾಡುವಲ್ಲಿ ಸ್ಕೂಲ್ ಆಫ್ ಓಪನ್ ಲರ್ನಿಂಗ್ನಂತಹ ಸಂಸ್ಥೆಗಳು ಪ್ರಮುಖ ಪಾತ್ರ ವಹಿಸುತ್ತವೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ದೆಹಲಿ ವಿಶ್ವವಿದ್ಯಾಲಯದ ಉಪ ಕುಲಪತಿ ಪ್ರೊ.ಯೋಗೇಶ್ ಸಿಂಗ್, ದೆಹಲಿ ವಿಶ್ವವಿದ್ಯಾಲಯದ ಕ್ಯಾಂಪಸ್ ಆಫ್ ಓಪನ್ ಲರ್ನಿಂಗ್ ನಿರ್ದೇಶಕಿ ಪ್ರೊ.ಪಾಯಲ್ ಮಾಗೊ, ಬೋಧಕ ಸಿಬ್ಬಂದಿ, ವಿದ್ಯಾರ್ಥಿಗಳು ಮತ್ತು ಇತರ ಗಣ್ಯರು ಉಪಸ್ಥಿತರಿದ್ದರು.
*****
(Release ID: 2019833)