ಪ್ರಧಾನ ಮಂತ್ರಿಯವರ ಕಛೇರಿ

​​​​​​​‘ವಿಕಸಿತ ಭಾರತ - ವಿಕಸಿತ ಗುಜರಾತ್’ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

Posted On: 10 FEB 2024 5:25PM by PIB Bengaluru

ನಮಸ್ತೆ!

ಗುಜರಾತ್ ನ ನನ್ನ ಆತ್ಮೀಯ ಸಹೋದರ ಮತ್ತು ಸಹೋದರಿಯರೇ..! ನೀವೆಲ್ಲಾ ಹೇಗಿದ್ದೀರಿ? ಎಲ್ಲರೂ ಚೆನ್ನಾಗಿದ್ದೀರೆಂದು ಭಾವಿಸಿದ್ದೇನೆ. ಇಂದು ದೊಡ್ಡ ಅಭಿಯಾನ ‘ವಿಕಸಿತ ಭಾರತ-ವಿಕಸಿತ ಗುಜರಾತ್ (ಅಭಿವೃದ್ಧಿ ಹೊಂದಿದ ಭಾರತ- ಅಭಿವೃದ್ಧಿ ಹೊಂದಿದ ಗುಜರಾತ್ ) ಆರಂಭವಾಗುತ್ತಿದೆ. ನನಗೆ ತಿಳಿದಿರುವಂತೆ ಗುಜರಾತ್ ರಾಜ್ತದ ಮೂಲೆ ಮೂಲೆಗಳಿಂದ ಎಲ್ಲಾ 182 ವಿಧಾನಸಭಾ ಕ್ಷೇತ್ರಗಳ ಲಕ್ಷಾಂತರ ಜನರು ತಂತ್ರಜ್ಞಾನದ ಸಹಾಯದಿಂದ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ. “ವಿಕಸಿತ ಗುಜರಾತ್‘ ಪಯಣದಲ್ಲಿ ಸೇರ್ಪಡೆಯಾಗಿರುವ ಪ್ರತಿಯೊಬ್ಬರ ಉತ್ಸಾಹ ನಿಜಕ್ಕೂ ಶ್ಲಾಘನೀಯ. ಹಾಗಾಗಿ ನಾನು ನಿಮ್ಮೆಲ್ಲರಿಗೂ ಹೃದಯ ಪೂರ್ವಕ ಅಭಿನಂದನೆಗಳನ್ನು ತಿಳಿಸಲು ಬಯಸುತ್ತೇನೆ.

ಕಳೆದ ತಿಂಗಳು ನನಗೆ ವೈಬ್ರೆಂಟ್‌ ಗುಜರಾತ್ ಶೃಂಗಸಭೆಯಲ್ಲಿ ಭಾಗವಹಿಸುವ ಅವಕಾಶ ದೊರಕಿತ್ತು. ವೈಬ್ರೆಂಟ್ ಗುಜರಾತ್ ನ 20 ವರ್ಷಗಳು ಪೂರ್ಣಗೊಂಡಿದೆ. ಈ ವರ್ಷದ ಕಾರ್ಯಕ್ರಮ ಅತ್ಯದ್ಭುತ ರೀತಿಯಲ್ಲಿ ಆಯೋಜಿಸಲಾಗಿದೆ. ಹೂಡಿಕೆಯ ನಿಟ್ಟಿನಲ್ಲಿ ಈ ಕಾರ್ಯಕ್ರಮ ಗುಜರಾತ್ ಗೆ ಮಾತ್ರವಲ್ಲದೆ, ಇಡೀ ದೇಶದ ದೃಷ್ಟಿಯಿಂದ ಅತ್ಯಂತ ಪ್ರಮುಖವಾದ ಕಾರ್ಯಕ್ರಮವಾಗಿದೆ. ನಾನು ಮುಖ್ಯಮಂತ್ರಿಯಾಗಿದ್ದಾಗ ಇಂತಹ ಕಾರ್ಯಕ್ರಮವನ್ನು ಆಲೋಚನೆ ಮಾಡಿರಲಿಲ್ಲ, ಆದ್ದರಿಂದ ನೀವು ಮಾಡಿರುವ ಈ ಅದ್ಭುತ ಕಾರ್ಯ ಕಂಡು, ನನ್ನ ಸಂತೋಷ ಇನ್ನೂ ಹೆಚ್ಚಾಗಿದೆ. ಹಾಗಾಗಿ ಗುಜಾರತ್ ನ ಎಲ್ಲ ಜನತೆಗೆ ಹಾಗೂ ಗುಜರಾತ್ ಸರ್ಕಾರದ ಇಡೀ ತಂಡಕ್ಕೆ ನಾನು ಹೃದಯಪೂರ್ವಕ ಅಭಿನಂದನೆಗಳನ್ನು ಸಲ್ಲಿಸಲು ಬಯಸುತ್ತೇನೆ ಮತ್ತು ಈ ಯಶಸ್ವಿ ಕಾರ್ಯಕ್ರಮಕ್ಕಾಗಿ ಮುಖ್ಯಮಂತ್ರಿಗಳ ತಂಡವನ್ನೂ ಅಭಿನಂದಿಸುತ್ತೇನೆ. 

ಮಿತ್ರರೇ,

ಯಾವುದೇ ಬಡ ವ್ಯಕ್ತಿಗೆ ತನ್ನದೇ ತವರು ನೆಲದಲ್ಲಿ ಉಜ್ವಲ ಭವಿಷ್ಯಕ್ಕೆ ಗ್ಯಾರಂಟಿ ಇದೆ. ಆದರೆ ಕಾಲ ಕ್ರಮೇಣ ಕುಟುಂಬಗಳು ಬೆಳೆದಂತೆಲ್ಲಾ ಹೊಸ ಮನೆಗಳ ಅಗತ್ಯತೆಗಳು ಸಹ ಹೆಚ್ಚಾಗುತ್ತವೆ. ನಮ್ಮ ಸರ್ಕಾರದ ಪ್ರಯತ್ನ ಪ್ರತಿಯೊಬ್ಬರಿಗೂ ಅವರ ನೆತ್ತಿಯ ಮೇಲೆ ಖಚಿತ ಸೂರು ಖಾತ್ರಿಪಡಿಸುವುದು, ಅವರಿಗೆ ತಮ್ಮದೇ ಆದ ಮನೆ ನಿರ್ಮಿಸಿ ಕೊಡುವುದು, ಆ ಮೂಲಕ ಅವರ ಕನಸು ಸಾಕಾರಗೊಳಿಸುವುದು. ಈ ದೂರದೃಷ್ಟಿಯೊಂದಿಗೆ 1.25 ಲಕ್ಷಕ್ಕೂ ಅಧಿಕ ಕುಟುಂಬಗಳಿಗೆ ಗುಜರಾತ್ ನಲ್ಲಿ ಇಂದು ತಮ್ಮದೇ ಮನೆಗಳನ್ನು ನೀಡಲಾಗುತ್ತಿದೆ. ಇದು ಊಹಿಸಲಾಗದ ಅಂಕಿ-ಸಂಖ್ಯೆ. ಈ ಮೊದಲು ಇಡೀ ದೇಶದಲ್ಲಿ ಎಲ್ಲೂ ಇಂತಹ ಸಾಧನೆ ಮಾಡಿಲ್ಲ, ಈ 1.25 ಲಕ್ಷ ಮನೆಗಳಲ್ಲಿ ನಿಜವಾಗಲೂ ಇದೀಗ ದೀಪಾವಳಿ ಬಂದಿದೆ ಎನಿಸುತ್ತದೆ. ಭಗವಾನ್ ಶ್ರೀರಾಮ ಅಯೋಧ್ಯೆಯಲ್ಲಿ ಮನೆ ಕಂಡುಕೊಂಡಂತೆಯೇ, ಪ್ರತಿ ವರ್ಷ ಈ ಗ್ರಾಮಗಳ ಜನರು ತಮ್ಮದೇ ಮನೆಗಳನ್ನು ಹೊಂದುತ್ತಿದ್ದಾರೆ. ಇಂದು ಮನೆಗಳನ್ನು ಪಡೆದುಕೊಳ್ಳುತ್ತಿರುವ ಎಲ್ಲ ಕುಟುಂಬಗಳಿಗೆ ನನ್ನ ಶುಭಾಶಯಗಳು ಮತ್ತು ಹೃದಯಪೂರ್ವಕ ಅಭಿನಂದನೆಗಳು. ಈ ರೀತಿ ನಿಮ್ಮ ಕನಸುಗಳು ಸಾಕಾರವಾದಾಗ ದೇಶ, ಹೇಳುವುದು ಮೋದಿ ಅವರ ಗ್ಯಾರಂಟಿ ಅಂದರೆ ಖಂಡಿತಾ ಈಡೇರುತ್ತದೆ ಎಂದು.

ಸಹೋದರ ಮತ್ತು ಸಹೋದರಿಯರೇ,

ಇಂದು ಬನಸ್ಕಾಂತದ ಅತ್ಯಧಿಕ ಸಂಖ್ಯೆಯ ಜನ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೀರಿ. ಎಲ್ಲಾ 182 ವಿಧಾನಸಭಾ ಕ್ಷೇತ್ರಗಳ ಪೈಕಿ ಪ್ರತಿಯೊಂದು ವಿಧಾನಸಭಾ ಕ್ಷೇತ್ರಗಳಲ್ಲಿ ಸಾವಿರಾರು ಸಂಖ್ಯೆಯಲ್ಲಿ ಇಲ್ಲಿ ಸೇರಿದ್ದೀರಿ ಎಂದು ನಾನು ಕೇಳಿದ್ದೀನಿ. ಅದಕ್ಕಾಗಿ ನಾನು ಗುಜರಾತ್ ಬಿಜೆಪಿ ಜನರ, ಗುಜರಾತ್ ಜನರು ಮತ್ತು ಗುಜರಾತ್ ಸರ್ಕಾರವನ್ನು ಇಂತಹ ಭವ್ಯ ಕಾರ್ಯಕ್ರಮ ಆಯೋಜಿಸಿದ್ದಕ್ಕಾಗಿ ಅಭಿನಂದಿಸುತ್ತೇನೆ. ನಾನು ಟಿವಿಯಲ್ಲಿ ನಾನಾ ಪ್ರದೇಶಗಳಿಂದ ಬಂದ ಜನರನ್ನು ನೋಡುತ್ತಿದ್ದೆ. ಬೇರೆ ಬೇರೆ ಪ್ರದೇಶಗಳಿಂದ ಪರಿಚಿತ ಮುಖಗಳು ಕಂಡವು ಮತ್ತು ದೂರದ ಪ್ರದೇಶಗಳಿಂದ ಬಂದವರನ್ನು ಸಹ ನೋಡುವ ಅವಕಾಶ ದೊರಕಿದೆ. ದೂರದ ಮತ್ತು ಗುಡ್ಡಗಾಡು ಪ್ರದೇಶಗಳಿಂದಲೂ ಜನ ಬಂದಿದ್ದಾರೆ, ಇದೊಂದು ಅದ್ಧೂರಿ ಕಾರ್ಯಕ್ರಮ. ನಾನು ಸಂಘಟನೆಗಳಲ್ಲಿ ಹಲವು ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಬೇರೆ ಬೇರೆ ಪ್ರದೇಶಗಳಿಂದ ಏಕಕಾಲದಲ್ಲಿ ಲಕ್ಷಾಂತರ ಜನರನ್ನು ಒಗ್ಗೂಡಿಸುವುದು ಒಂದು ಸಣ್ಣ ಕೆಲಸವಲ್ಲ, ನೀವು ಇಷ್ಟು ದೊಡ್ಡ ಸಂಖ್ಯೆಯಲ್ಲಿ ಇಲ್ಲಿ ಸೇರಿರುವುದು ನಮ್ಮ ಸಂಕಲ್ಪವನ್ನು ಮತ್ತಷ್ಟು ಬಲವರ್ಧನೆಗೊಳಿಸಿದೆ. ನಮ್ಮ ಬದ್ಧತೆಯ ಅನುಭವ ನಿಮಗಾಗುತ್ತದೆ. ನಮ್ಮ ಬನಸ್ಕಾಂತ ಜಿಲ್ಲೆ, ನಮ್ಮ ಇಡೀ ಉತ್ತರ ಗುಜರಾತ್ ಇಲ್ಲಿ ಸೇರಿದೆ. ನೀರಿಗಾಗಿ ಜನರು ಹಿಂದೆ 2 ಕಿ.ಮೀ. ಗಟ್ಟಲೆ ನೆಡಯುತ್ತಿದ್ದರು, ಆದರೆ ನಮ್ಮ ಉತ್ತರ ಗುಜರಾತ್ ನ ರೈತರು, ಪ್ರತಿ ಹನಿಗೆ ಅಧಿಕ ಬೆಳೆ, ಹನಿ ನೀರಾವರಿ, ಆಧುನಿಕ ನೀರಾವರಿ ಮತ್ತಿತರ ಉಪಕ್ರಮಗಳನ್ನು ಕೈಗೊಂಡಿದ್ದಾರೆ. ಈ ಎಲ್ಲ ಉಪಕ್ರಮಗಳಿಂದಾಗಿ ಇಂದು ನಮ್ಮ ಕೃಷಿ ವಲಯ ಬೆಳೆಯುತ್ತಿದೆ.

ಮೆಹ್ಸಾನ, ಅಂಬಾಜಿ, ಪಟಾಣ್ ಮತ್ತಿತರ ಪ್ರದೇಶಗಳು ಕೃಷಿಯಲ್ಲಿ ಹೊಸ ಎತ್ತರಕ್ಕೆ ಏರಿವೆ. ಅಂಬಾಜಿ ಧಾಮದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಯೋಜನೆಗಳ ಕಂಡು ನನಗೆ ಸಂತೋಷವಾಗಿದೆ. ಮುಂದಿನ ದಿನಗಳಲ್ಲಿ ಇಲ್ಲಿಗೆ ಆಗಮಿಸುವ ಭಕ್ತಾದಿಗಳು ಮತ್ತು ಪ್ರವಾಸಿಗರ ಸಂಖ್ಯೆ ಗಣನೀಯವಾಗಿ ಹೆಚ್ಚಳವಾಗಲಿದೆ. ಇದೀಗ ತರಂಗ ಬೆಟ್ಟ ಮತ್ತು ಅಂಬಾಜಿ ಅಭಿವೃದ್ಧಿಯನ್ನು ನೀವು ನೋಡುತ್ತಿದ್ದೀರೀ. ಅದಕ್ಕೂ ಮುಖ್ಯವಾಗಿ ಅಹಮದಾಬಾದ್ ನಿಂದ ಅಬು ರಸ್ತೆಯವರೆಗೆ ಹೊಸ ರೈಲು ಮಾರ್ಗ ಬರಲಿದೆ. ಹೊಸ ಬ್ರಾಡ್ ಗೇಜ್ ಮಾರ್ಗ ಅಳವಡಿಸಲಾಗುತ್ತಿದ್ದು, ಈ ಯೋಜನೆಯ ಬಗ್ಗೆ ನಿಮಗೆ ನೆನಪಿದೆ ಅಲ್ಲವೆ, ಈ ಯೋಜನೆಯನ್ನು ಬ್ರಿಟೀಷರ ಕಾಲದಲ್ಲಿ 100 ವರ್ಷಗಳ ಹಿಂದೆ ಮಾಡಲಾಗಿದೆ. ಆದರೆ 100 ವರ್ಷಗಳ ಕಾಲ ಅದನ್ನು ಮೂಲೆಗೆ ತಳ್ಳಲಾಗಿತ್ತು ಮತ್ತು ಯೋಜನೆ ಕೈಗೆತ್ತಿ ಕೊಂಡಿರಲಿಲ್ಲ. ಮತ್ತೆ ಈಗ 100 ವರ್ಷಗಳ ಬಳಿಕ ಕಾಮಗಾರಿ ಆರಂಭವಾಗಿದೆ. ಈ ಯೋಜನೆ ದೊಡ್ಡ ಸಂಖ್ಯೆಯಲ್ಲಿ ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತದೆ. ಈ ಯೋಜನೆಯ ನಿರ್ಮಾಣದೊಂದಿಗೆ ಅಜಿತನಾಥ ಜೈನ್ ದೇವಾಲಯ ತಲುಪುವುದು ಸುಲಭವಾಗಲಿದೆ. ಅಂಬಾಜಿ ದೇವಾಲಯಕ್ಕೆ ಸುಗಮ ರೈಲು ಸಂಪರ್ಕ ದೊರಕಲಿದೆ ಮತ್ತು ಇತ್ತೀಚೆಗೆ ನಾನು ದಿನಪತ್ರಿಕೆಯಲ್ಲಿ ಓದಿದೆ. ನಾನು ಇಲ್ಲಿದ್ದಾಗ ಆ ಬಗ್ಗೆ ನನಗೂ ಹೆಚ್ಚಿನ ವಿಷಯ ತಿಳಿದಿರಲಿಲ್ಲ. ಪುರಾತತ್ವ ಶಾಸ್ತ್ರಜ್ಞರು, ನನ್ನ ಗ್ರಾಮ ವಡಾನಗರದಲ್ಲಿ ವಿಶ್ವದ ಅತ್ಯಂತ ಪುರಾತನ ಜನವಸತಿಗಳನ್ನು ಕಂಡುಹಿಡಿದ್ದಾರೆ. 3,000 ವರ್ಷಗಳ ಹಿಂದಿನ ಜೀವಂತ ಗ್ರಾಮವನ್ನು ಪತ್ತೆಹಚ್ಚಿದ್ದು, ಇದು ವಿಶ್ವದಾದ್ಯಂತ ಜನರನ್ನು ಬೆರಗುಗೊಳಿಸುವಂತಹದು. ದೊಡ್ಡ ಸಂಖ್ಯೆಯ ಪ್ರವಾಸಿಗರು ಇಲ್ಲಿಗೆ ಬರುತ್ತಾರೆ. ಅವರು ಇದೀಗ ಪ್ರಾಚೀನ ವಸ್ತುಗಳನ್ನು ನೋಡಲು ಇಲ್ಲಿಗೆ ಆಗಮಿಸುತ್ತಾರೆ. ಏಕತಾ ಪ್ರತಿಮೆ, ಅಂಬಾಜಿ, ಪಟಾಣ್ ಮತ್ತು ತರಂಗದಂತೆ ಈ ಪ್ರದೇಶಕ್ಕೆ ಇದು ಪ್ರವಾಸಿಗರ ಅತ್ಯಂತ ಪ್ರಮುಖ ಆರ್ಷಣೆಯ ಕೇಂದ್ರವಾಗಲಿದೆ. ಇತ್ತೀಚಿನ ದಿನಗಳಲ್ಲಿ ಉತ್ತರ ಗುಜರಾತ್ ನ ಜನರೂ ಸಹ ನಡಾಬೆಟ್ (ಭಾರತ-ಪಾಕಿಸ್ತಾನ ಗಡಿ)ಗೂ ಅಧಿಕ ಸಂಖ್ಯೆಯ ಜನರು ಭೇಟಿ ನೀಡುತ್ತಿದ್ದಾರೆ. ಅಭಿವೃದ್ಧಿ ಎಲ್ಲೆಡೆ ಸ್ಪಷ್ಟವಾಗಿ ಗೋಚರಿಸುತ್ತಿದೆ. ಉತ್ತರ ಗುಜರಾತ್ ಗೆ ಹೆಚ್ಚಿನ ಪ್ರಯೋಜನವಾಗಲಿದೆ ಮತ್ತು ಅಭಿವೃದ್ಧಿಯಲ್ಲಿ ಅದು ಹೊಸ ಎತ್ತರವನ್ನು ಏರಲಿದೆ.

ಮಿತ್ರರೇ,

ದೇಶಾದ್ಯಂತ ನವೆಂಬರ್, ಡಿಸೆಂಬರ್ ಮತ್ತು ಜನವರಿ ತಿಂಗಳಾದ್ಯಂತ “ವಿಕಸಿತ ಭಾರತ ಸಂಕಲ್ಪ ಯಾತ್ರೆ”ಯನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಿರುವುದನ್ನು ನಾವು ಕಂಡಿದ್ದೇವೆ. ಮೋದಿ ಗ್ಯಾರಂಟಿ ವಾಹನ ಪ್ರತಿಯೊಂದು ಗ್ರಾಮಕ್ಕೂ ಪ್ರಯಾಣ ಬೆಳೆಸಿ, ಫಲಾನುಭವಿಗಳೊಂದಿಗೆ ಸಂವಾದ ನಡೆಸಿದೆ. ಸ್ವಾತಂತ್ರ್ಯ ಬಂದು 75 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಇಂತಹ ಕಾರ್ಯಕ್ರಮ ನಡೆದಿದ್ದು, ಭಾರತ ಸರ್ಕಾರವೇ ನೇರವಾಗಿ ದೇಶದ ಲಕ್ಷಾಂತರ ಗ್ರಾಮಗಳನ್ನು ತಲುಪಿದೆ ಮತ್ತು ನಮ್ಮ ಗುಜರಾತ್ ನಲ್ಲೂ ಕೂಡ ಕೋಟ್ಯಾಂತರ ಜನರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ ಮತ್ತು ಸರ್ಕಾರದ ಇಂತಹ ಕಾರ್ಯಕ್ರಮಗಳು ಕಳೆದ 10 ವರ್ಷಗಳಿಂದೀಚೆಗೆ ದೇಶದಲ್ಲಿ ನಡೆದಿರುವ ಅತಿದೊಡ್ಡ ಕಾರ್ಯ ಇದಾಗಿದೆ ಮತ್ತು ನಿಮಗೂ ಕೂಡ ಇದರಿಂದ ತೃಪ್ತಿಯಾಗಿದೆ. ಕಳೆದ 10 ವರ್ಷಗಳಲ್ಲಿ 25 ಕೋಟಿ ಜನರು ಬಡತನದಿಂದ ಹೊರಬಂದಿದ್ದಾರೆ. ಸರ್ಕಾರ ಈ 25 ಕೋಟಿ ಜನರ ಜತೆ ಪ್ರತಿ ಹಂತದಲ್ಲೂ ನಿಂತಿದೆ ಮತ್ತು ಈ 25 ಕೋಟಿ ಚಾಂಪಿಯನ್ ಗಳಿಗೆ ಸರ್ಕಾರದ ಯೋಜನೆಗಳಿಂದ ಪ್ರಯೋಜನ ಪಡೆದಿದ್ದಾರೆ, ಹಣವನ್ನು ಸರಿಯಾಗಿ ಬಳಕೆ ಮಾಡಿಕೊಂಡಿದ್ದಾರೆ. ಯೋಜನೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಬಡತನವನ್ನು ಯಶಸ್ವಿಯಾಗಿ ಸೋಲಿಸಿದ್ದಾರೆ. ಹಾಗಾಗಿಯೇ ನಾನು ಹೇಳಿದ್ದು, 25 ಕೋಟಿ ಹೊಸ ಜನರು ಬಡತನವನ್ನು ಸೋಲಿಸಿದ್ದಾರೆ ಎಂದು. ಇದರಿಂದ ನನಗೆ ಎಷ್ಟು ಸಂತೋಷವಾಗಿದೆ. ನೀವೆ ಊಹಿಸಿಕೊಳ್ಳಿ. ಇಂತಹ ಯೋಜನೆಗಳು ಬಡವರು, ಬಡತನದಿಂದ ಹೊರಬರಲು ಹೇಗೆ ಸಹಾಯ ಮಾಡುತ್ತದೆ ಎಂಬ ನಂಬಿಕೆ ಹೆಚ್ಚಾಗಿದೆ. ಆದ್ದರಿಂದ ಭಾರತದಲ್ಲಿ ಮುಂಬರುವ ದಿನಗಳಲ್ಲಿ ಬಡತನವನ್ನು ನಿರ್ಮೂಲನೆ ಮಾಡಲು ನನಗೆ ನಿಮ್ಮ ಸಹಾಯ ಅಗತ್ಯವಿದೆ. 

ನೀವು ಬಡತನವನ್ನು ಸೋಲಿಸಿದ್ದೀರಿ, ಇದೀಗ ನೀವು ಚಾಂಪಿಯನ್ ಗಳಾಗಿದ್ದೀರಿ ಮತ್ತು ಇತರೆ ಬಡ ಜನರಿಗೆ ನೀವು ಬಡತನವನ್ನು ಸೋಲಿಸುವ ಶಕ್ತಿಯನ್ನು ನೀಡಿ ಮತ್ತು ನನಗೆ ಖಂಡಿತ ವಿಶ್ವಾಸವಿದೆ. ನಮ್ಮ ಚಾಂಪಿಯನ್ ಗಳು, ನಮ್ಮ ಯೋಧರು ಬಡತನವನ್ನು ನಿರ್ಮೂಲನೆ ಮಾಡುವ ಹೋರಾಟದಲ್ಲಿ ನನಗೆ ಖಂಡಿತ ಬೆಂಬಲ ನೀಡುತ್ತಾರೆ. ನಿಮಗೆ ನೀಡಿರುವ ಶಕ್ತಿಯಿಂದಾಗಿ ನೀವು ಖಂಡಿತಾ ಕಾರ್ಯ ನಿರ್ವಹಿಸುತ್ತೀರಿ ಮತ್ತು ಇತರೆ ಬಡ ಜನರು ಸಬಲಗೊಳ್ಳಲಿದ್ದಾರೆ. ಈಗಷ್ಟೇ ನನಗೆ ಸಹೋದರಿಯರ ಜತೆ ಮಾತನಾಡುವ ಅವಕಾಶ ದೊರೆತ್ತಿತ್ತು. ಅವರಲ್ಲಿ ನಾನು ಕಂಡ ಆತ್ಮವಿಶ್ವಾಸ ಹೊಸ ಮನೆ ಪಡೆದಿರುವ ಅವರ ಜೀವನದ ನಂಬಿಕೆಯನ್ನು ಕಂಡೆ, ಅವರ ಮನೆಗಳನ್ನು ನಾನು ನೋಡಿದೆ, ಅವು ಸುಂದರ ಮನೆಗಳು, ನನಗೆ ಎಷ್ಟು ಅದ್ಭುತವಾಗಿದೆ ಎನಿಸಿತು. ದೇಶದ ಇತರೆ ಭಾಗದ ಜನರಂತೆ ನನ್ನ ಗುಜರಾತ್ ನ ಜನರೂ ಸಹ ಸಮೃದ್ಧ ಜೀವನದತ್ತ ಸಾಗುತ್ತಿದ್ದಾರೆ.

ಮಿತ್ರರೇ,

ಇದೇ ಮೊದಲ ಬಾರಿಗೆ ಇತಿಹಾಸವನ್ನು ಬರೆಯಲಾಗುತ್ತಿದೆ ಮತ್ತು ಇತಿಹಾಸ ಸೃಷ್ಟಿಸಲಾಗುತ್ತಿದೆ. ಸ್ವಾತಂತ್ರ್ಯ ಹೋರಾಟವೂ ಸಹ ಇಂತಹುದೇ ಸಮಯದಲ್ಲಿ ನಡೆದಿತ್ತು. ಅದು ಸ್ವದೇಶಿ ಚಳವಳಿ ಆಗಿರಬಹುದು. ಕ್ವಿಟ್ ಇಂಡಿಯಾ ಚಳವಳಿ ಆಗಿರಬಹುದು ಅಥವಾ ದಂಡಿ ಸತ್ಯಾಗ್ರಹ ಆಗಿರಬಹುದು, ಸ್ವಾತಂತ್ರ್ಯ ಸಂಗ್ರಾಮದ ವೇಳೆ ನಡೆದ ಇವೆಲ್ಲವೂ ಪ್ರತಿಯೊಬ್ಬ ವ್ಯಕ್ತಿಯ ಸಂಕಲ್ಪದ ಕಾರಣದಿಂದಾಗಿ ನಡೆದಿದ್ದವು. ಅಂತೆಯೇ ‘ವಿಕಸಿತ ಭಾರತ’ (ಅಭಿವೃದ್ಧಿ ಹೊಂದಿದ ಭಾರತ) ಸಾಧಿಸುವುದು ದೇಶಕ್ಕೆ ಇಂದಿನ ಅತ್ಯಗತ್ಯ ಬದ್ಧತೆಯಾಗಿದೆ. ದೇಶದ ಪ್ರತಿಯೊಂದು ಮಗುವೂ ಮುಂದಿನ 25 ವರ್ಷಗಳಲ್ಲಿ ಭಾರತ ಅಭಿವೃದ್ಧಿ ಹೊಂದಿರಬೇಕು ಎಂದು ಬಯಸುತ್ತದೆ. ಈ ಸಂಕಲ್ಪವನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಪ್ರತಿಯೊಬ್ಬರೂ ತಮಗೆ ಸಾಧ್ಯವಾದ ರೀತಿಯಲ್ಲಿ ಕೊಡುಗೆಯನ್ನು ನೀಡುತ್ತಿದ್ದಾರೆ ಮತ್ತು ಗುಜರಾತ್ ಗೆ ಸದಾ ಅಂತಹ ಒಂದು ಮನೋಭಾವವಿದೆ. ನಾನು ಇಲ್ಲಿದ್ದಾಗಲೂ (ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ) ಗುಜಾರ್ ನ ಮನೋಭಾವ ರಾಜ್ಯದ ಅಭಿವೃದ್ಧಿಯಿಂದ ದೇಶ ಅಭಿವೃದ್ಧಿಯಾಗುತ್ತದೆ ಎಂಬುದಾಗಿತ್ತು. ಈ ಕಾರ್ಯಕ್ರಮ ‘ವಿಕಸಿತ ಭಾರತ’ (ಅಭಿವೃದ್ಧಿ ಹೊಂದಿದ ಭಾರತ)ಕ್ಕಾಗಿ ‘ವಿಕಸಿತ ಗುಜರಾತ್’ (ಅಭಿವೃದ್ಧಿ ಹೊಂದಿದ ಗುಜರಾತ್) ಇದು ಸರಣಿ ಕಾರ್ಯಕ್ರಮದ ಭಾಗವಾಗಿದೆ.

ಸಹೋದರ ಮತ್ತು ಸಹೋದರಿಯರೇ,

ಪ್ರಧಾನಮಂತ್ರಿ ಆವಾಸ್ ಯೋಜನೆ ಅನುಷ್ಠಾನದಲ್ಲಿ ಗುಜರಾಗತ್ ಸದಾ ಮುಂಚೂಣಿಯಲ್ಲಿದೆ ಎಂಬುದನ್ನು ತಿಳಿಸಲು ನನಗೆ ಹರ್ಷವಾಗುತ್ತಿದೆ. ಈ ಯೋಜನೆಯಡಿ ನಗರ ಪ್ರದೇಶಗಳಲ್ಲಿ 8 ಲಕ್ಷಕ್ಕೂ ಅಧಿಕ ಮನೆಗಳನ್ನು ನಿರ್ಮಿಸಲಾಗಿದೆ. ಪ್ರಧಾನಮಂತ್ರಿ ಆವಾಸ್ ಗ್ರಾಮೀಣ ಯೋಜನೆಯಡಿ 5 ಲಕ್ಷಕ್ಕೂ ಅಧಿಕ ಮನೆಗಳನ್ನು ನಿರ್ಮಿಸಲಾಗಿದೆ. ನಮ್ಮ ಮನೆಗಳನ್ನು ತ್ವರಿತವಾಗಿ ಮತ್ತು ಪರಿಣಾಮಕಾರಿಯಾಗಿ ನಿರ್ಮಿಸಲು ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಳ್ಳಲಾಗುತ್ತಿದೆ. ಗುಜರಾತ್ ನ ರಾಜ್ ಕೋಟ್ ನಲ್ಲಿ 1100ಕ್ಕೂ ಅಧಿಕ ಮನೆಗಳನ್ನು ಲೈಟ್ ಹೌಸ್ ಯೋಜನೆಯಡಿ ನಿರ್ಮಿಸಲಾಗಿದೆ.

ಮಿತ್ರರೇ,

ಮೋದಿ ಅವರು, ಸರ್ಕಾರದ ಖಜಾನೆಯನ್ನು ಬಡವರ ಮನೆಗಳಿಗಾಗಿ ತೆರೆದಿದ್ದಾರೆ. ಈ ಹಿಂದಿನ ಸ್ಥಿತಿಯನ್ನು ನಾನು ನೆನಪಿಸಿಕೊಳ್ಳುತ್ತೇನೆ. ವಲ್ಸದ್ ನಲ್ಲಿ ಹಲ್ಪತಿ ಸಮಾಜಕ್ಕೆ ಮನೆಗಳನ್ನು ನಿರ್ಮಿಸುವಾಗ ನಾವು ಎಷ್ಟು ಕಷ್ಟಪಟ್ಟೆವು ಎಂಬುದನ್ನು ನಾನು ನೆನಪಿಸಿಕೊಳ್ಳುತ್ತೇನೆ. ಅಲ್ಲಿ ವಾಸಿಸಲು ಯಾರೊಬ್ಬರೂ ಒಂದು ದಿನವೂ ಮುಂದೆ ಬರಲಿಲ್ಲ. ಹಲ್ಪತಿ ಜನರು ಆ ಮನೆಗಳಿಗೆ ಹೋಗುವಂತಹ ಸ್ಥಿತಿ ಇರಲಿಲ್ಲ ಎಂಬುದನ್ನು ಊಹಿಸಿಕೊಳ್ಳಿ. ಕ್ರಮೇಣ ಆ ಮನೆಗಳು ಹಾಳಾದವು. ಅಂತೆಯೇ ಭವನಗರದ ಕಡೆ ನೋಡಿದಾಗ ದಾರಿಯಲ್ಲಿ ಹಲವು ಮನೆಗಳನ್ನು ಕಾಣಬಹುದು. ಆದರೆ ಅಲ್ಲಿ ಯಾವುದೇ ವ್ಯಕ್ತಿ ಕಾಣಿಸುತ್ತಿರಲಿಲ್ಲ, ಕ್ರಮೇಣ ಪ್ರತಿಯೊಬ್ಬರೂ ಆ ಮನೆಗಳ ಕಿಟಕಿ, ಬಾಗಿಲುಗಳನ್ನು ಕದ್ದೊಯ್ದರು. ನಾನು 40 ವರ್ಷಗಳ ಹಿಂದೆ ನಡೆದಿದ್ದನ್ನು ಹೇಳುತ್ತಿದ್ದೇನೆ. ಎಲ್ಲವೂ ಹಾಳಾಯಿತು. ಏಕೆಂದರೆ ಅಲ್ಲಿಗೆ ತೆರಳಿ ವಾಸಿಸಲು ಯಾರೊಬ್ಬರೂ ಸಿದ್ಧರಿರಲಿಲ್ಲ. ಆ ರೀತಿಯಲ್ಲಿ ಮನೆಗಳನ್ನು ನಿರ್ಮಿಸಲಾಗಿತ್ತು. ಆಗ ಅಂದರೆ 10 ವರ್ಷಗಳ ಹಿಂದೆ 2014ಕ್ಕೂ ಮುನ್ನ ಬಡವರಿಗಾಗಿ ನಿರ್ಮಿಸುತ್ತಿದ್ದ ಮನೆಗಳ ವೆಚ್ಚಕ್ಕೆ ಹೋಲಿಸಿದರೆ ಇಂದು 10 ಪಟ್ಟು ಅಧಿಕ ವೆಚ್ಚ ಮಾಡಲಾಗುತ್ತಿದೆ. ಕಳೆದ 10 ವರ್ಷಗಳಿಂದೀಚೆಗೆ ಅಧಿಕ ಹಣವನ್ನು ವ್ಯಯಿಸಲಾಗಿದೆ. ಈ ವರ್ಷದ ಬಜೆಟ್ ನಲ್ಲಿ ಪ್ರತಿಯೊಬ್ಬ ಬಡ ವ್ಯಕ್ತಿಗೂ ಪಕ್ಕಾ ಮನೆಗಳನ್ನು ಒದಗಿಸಲು 2 ಕೋಟಿ ಹೊಸ ಮನೆಗಳನ್ನು ನಿರ್ಮಿಸುವುದಾಗಿ ಘೋಷಿಸಲಾಗಿದೆ.

ಮಿತ್ರರೇ,

2014ಕ್ಕೂ ಮುನ್ನ ಬಡಜನರಿಗೆ ಮನೆಗಳನ್ನು ನಿರ್ಮಿಸುತ್ತಿದ್ದ ವೇಗಕ್ಕೆ ಹೋಲಿಸಿದರೆ, ಇಂದು ಬಡವರಿಗಾಗಿ ಅತ್ಯಂತ ವೇಗವಾಗಿ ಮನೆಗಳನ್ನು ನಿರ್ಮಿಸಲಾಗುತ್ತಿದೆ. ಮೊದಲು ಬಡವರ ಮನೆಗಳ ನಿರ್ಮಾಣಕ್ಕೆ ಹಣಕಾಸಿನ ಕೊರತೆಯಿತ್ತು, ಮತ್ತು ಅದೂ ಸಹ ಮಧ್ಯವರ್ತಿಗಳು, ಕಂಪನಿಗಳು ಹಾಗೂ ಬ್ರೋಕರ್ ಗಳಿಗೆ ಸೋರಿಕೆಯಾಗುತ್ತಿತ್ತು, ಕೆಲವರು 15,000 ರೂ. ಪಡೆಯುತ್ತಿದ್ದರು ಮತ್ತು ಕೆಲವು 20,000 ಪಡೆಯುತ್ತಿದ್ದರು. ಹೀಗೆ ಹಣ ಲೂಟಿಯಾಗುತ್ತಿತ್ತು, ಇದೀಗ ಬಿಡುಗಡೆಯಾಗುವ ಮೊತ್ತ 2.25 ಲಕ್ಷ ರೂ.ಗೂ ಅಧಿಕವಾಗಿದೆ ಮತ್ತು ಅದು ನೇರವಾಗಿ ಫಲಾನುಭವಿಯ ಬ್ಯಾಂಕ್ ಖಾತೆಗೆ ಜಮೆಯಾಗುತ್ತದೆ. ಇಂದು ಬಡವರಿಗೆ ತಮ್ಮ ಅಗತ್ಯತೆಗಳಿಗೆ ತಕ್ಕಂತೆ ಮನೆಗಳನ್ನು ನಿರ್ಮಿಸಿಕೊಳ್ಳುವ ಸ್ವಾತಂತ್ರ್ಯ ದೊರಕಿದೆ. ಹಾಗಾಗಿ ಮನೆಗಳನ್ನು ಕ್ಷಿಪ್ರಗತಿಯಲ್ಲಿ ಮೊದಲಿಗಿಂತ ಹೆಚ್ಚು ಉತ್ತಮ ರೀತಿಯಲ್ಲಿ ನಿರ್ಮಿಸಿಕೊಳ್ಳಲಾಗುತ್ತಿದೆ. ಮೊದಲು ಸಣ್ಣ ಮನೆಗಳನ್ನು ನಿರ್ಮಿಸಲಾಗುತ್ತಿತ್ತು, ಸರ್ಕಾರಿ ಅಧಿಕಾರಿಗಳು ಯಾವ ರೀತಿ ನಿರ್ಧರಿಸಿದ್ದರೂ ಎಂದರೆ ಮನೆಗಳನ್ನು ನಿರ್ಮಿಸಿದ್ದರೂ ಸಹ ಶೌಚಾಲಯ, ವಿದ್ಯುತ್, ನೀರು ಅನಿಲ ಸಂಪರ್ಕ, ಮತ್ತಿತರ ಸೌಲಭ್ಯಗಳು ಹಲವು ವರ್ಷಗಳ ಕಾಲ ಬಡ ಕುಟುಂಬಗಳಿಗೆ ದೊರಕುತ್ತಿರಲಿಲ್ಲ. ಈ ಮೂಲಸೌಕರ್ಯಗಳಿಗಾಗಿ ಬಡವರು ಸಾವಿರಾರು ರೂ.ಗಳನ್ನು ಖರ್ಚು ಮಾಡಬೇಕಾಗಿತ್ತು. ಆದ್ದರಿಂದ ಹಿಂದೆ ಮನೆಗಳನ್ನು ನಿರ್ಮಿಸಿದ್ದಾಗ ಜನರು ಅಲ್ಲಿ ವಾಸಿಸಲು ಹೋಗುತ್ತಿರಲಿಲ್ಲ. ಇಂದು ಮನೆಯ ಜತೆಗೆ ಈ ಎಲ್ಲ ಸೌಕರ್ಯಗಳು ಲಭ್ಯವಿದೆ. ಇಂದು ಪ್ರತಿಯೊಬ್ಬ ಫಲಾನುಭವಿಯು ಅತ್ಯಂತ ಖುಷಿಯಿಂದ ಮನೆಗಳನ್ನು ಪ್ರವೇಶಿಸುತ್ತಿದ್ದಾರೆ. ಇಂತಹ ಮನೆಗಳು ಇದೇ ಮೊದಲ ಬಾರಿಗೆ ನಮ್ಮ ಲಕ್ಷಾಂತರ ಸಹೋದರಿಯರ ಹೆಸರಿನಲ್ಲಿ ಸೂಕ್ತ ರೀತಿಯಲ್ಲಿ ನೋಂದಣಿಯಾಗಿವೆ. ಈ ಮೊದಲು ಈ ಮನೆಗಳನ್ನು ಮನೆಯ ಪುರುಷ ಸದಸ್ಯ ಪತಿ ಅಥವಾ ಮಗನ ಹೆಸರಿನಲ್ಲಿ ಮಾಡಲಾಗುತ್ತಿತ್ತು, ಒಂದು ಮಳಿಗೆ ಇದ್ದರೆ, ಅದು ಸಹ ಪುರುಷರ ಹೆಸರಿನಲ್ಲೇ ಇರುತ್ತಿತ್ತು. ಒಂದು ವಾಹನ ಮತ್ತು ಭೂಮಿ ಇದ್ದರೆ ಅದು ಸಹ ಪುರುಷರ ಹೆಸರಿನಲ್ಲೇ ಇರುತ್ತಿತ್ತು. ಹಾಗಾಗಿ ನಾವು ನೀಡುವ ಹೊಸ ಮನೆಯನ್ನು ಮನೆಯ ಹಿರಿಯ ಸಹೋದರಿಯರ ಹಸರಿಗೆ ನೀಡಲು ನಿರ್ಧರಿಸಿದೆವೆ. ನಮ್ಮ ತಾಯಂದಿರು ಮತ್ತು ಸಹೋದರಿಯರು ಇದೀಗ ಮನೆಯ ಮಾಲೀಕರಾಗಿದ್ದಾರೆ.

ಸಹೋದರ ಮತ್ತು ಸಹೋದರಿಯರೇ,

ನಮ್ಮ ಬಡಜನರು, ಯುವಜನತೆ, ನಮ್ಮ ರೈತರು, ನಮ್ಮ ತಾಯಂದಿರು, ನಮ್ಮ ಮಹಿಳೆಯರು, ನಮ್ಮ ಸಹೋದರಿಯರು ‘ವಿಕಸಿತ ಭಾರತ’ದ ಆಧಾರ ಸ್ತಂಭಗಳಾಗಿದ್ದಾರೆ. ಆದ್ದರಿಂದ ಅವರನ್ನು ಸಬಲೀಕರಣಗೊಳಿಸುವುದು ನಮ್ಮ ಬದ್ಧತೆಯಾಗಿದೆ ಮತ್ತು ನಾನು ಬಡಜನತೆಯ ಬಗ್ಗೆ ಮಾತನಾಡುವಾಗ ಸಮಾಜದ ಪ್ರತಿಯೊಂದು ವರ್ಗವೂ ನನ್ನ ಮುಂದೆ ಬರುತ್ತದೆ. ಮನೆಗಳನ್ನು ನಿರ್ಮಿಸಿದರೆ ಅದರಲ್ಲಿ ಪ್ರತಿಯೊಂದು ಜಾತಿಯ ಎಲ್ಲ ಬಡಕುಟುಂಬಗಳು ಇರುತ್ತವೆ. ಉಚಿತ ಪಡಿತರವನ್ನು ವಿತರಿಸಲಾಗುತ್ತಿದ್ದು, ಪ್ರತಿಯೊಂದು ಜಾತಿಯ ಪ್ರತಿಯೊಂದು ಫಲಾನುಭವಿಯು ಅದರ ಪ್ರಯೋಜನ ಪಡೆಯುತ್ತಿದ್ದಾರೆ. ಉಚಿತ ಆರೋಗ್ಯ ರಕ್ಷಣೆಯನ್ನು ಒದಗಿಸಲಾಗುತ್ತಿದ್ದು, ಅದರಲ್ಲೂ ಸಹ ಎಲ್ಲ ಜಾತಿಯ ಬಡಕುಟುಂಬಗಳನ್ನು ಪ್ರಯೋಜನವನ್ನು ಪಡೆಯುತ್ತಿವೆ. ಕಡಿಮೆ ಬೆಲೆಯಲ್ಲಿ ರಸಗೊಬ್ಬರವನ್ನು ನೀಡಲಾಗುತ್ತಿದ್ದು, ಪ್ರತಿಯೊಂದು ಜಾತಿಯ ಪ್ರತಿಯೊಬ್ಬ ರೈತರೂ ಅದರ ಪ್ರಯೋಜನೆ ಪಡೆಯುತ್ತಿದ್ದಾರೆ. ಪಿಎಂ ಕಿಸಾನ್ ಸಮ್ಮಾನ್ ನಿಧಿ ಎಲ್ಲ ಜಾತಿಯ ಎಲ್ಲ ರೈತರನ್ನು ತಲುಪುತ್ತಿದೆ. ಯಾವುದೇ ಸಮಾಜದ ಬಡಕುಟುಂಬವಾಗಿರಬಹುದು. ಅವರಿಗೆ ಬ್ಯಾಂಕಿನ ಬಾಗಿಲುಗಳು ತೆರೆದಿರುತ್ತವೆ. ಈ ಮೊದಲು ಅವರ ಮಕ್ಕಳಿಗೆ ಬ್ಯಾಂಕ್ ಗಳ ಬಾಗಿಲುಗಳು ತೆರೆದಿರಲಿಲ್ಲ. ಅವರು ಬ್ಯಾಂಕ್ ಗೆ ಯಾವುದೇ ಖಾತರಿಯನ್ನು ನೀಡಬೇಕಾಗಿಲ್ಲ, ಯಾರಿಗೆ ಯಾವುದೇ ಗ್ಯಾರಂಟಿ ಇರುವುದಿಲ್ಲವೋ ಅದಕ್ಕೆ ಮೋದಿ ಗ್ಯಾರಂಟಿ ಇದೆ. ಮುದ್ರಾ ಯೋಜನೆಯಲ್ಲೂ ಸಹ ಅಂತಹ ಗ್ಯಾರಂಟಿ ನಿಡಲಾಗಿದೆ. ಈ ಯೋಜನೆಯಡಿ ಪ್ರತಿಯೊಂದು ಸಮಾಜದ ಪ್ರತಿಯೊಂದು ಬಡ ಯುವಜನತೆಗೆ ಯಾವುದೇ ಗ್ಯಾರಂಟಿ ಇಲ್ಲದೆ ಸಾಲ ಪಡೆಯಬಹುದಾಗಿದೆ ಮತ್ತು ಸಣ್ಣ ವ್ಯಾಪಾರವನ್ನು ಮಾಡಬಹುದಾಗಿದೆ. ನಮ್ಮ ವಿಶ್ವಕರ್ಮ ಕೆಲಸಗಾರರು, ನಮ್ಮ ಬೀದಿ ಬದಿ ವ್ಯಾಪಾರಿಗಳಿಗೆ ಮೋದಿ ಅವರು ಗ್ಯಾರಂಟಿಯನ್ನು ಒದಗಿಸಿದ್ದಾರೆ. ಆದ್ದರಿಂದ ಅವರ ಜೀವನವೂ ಸಹ ಇಂದು ಬದಲಾಗುತ್ತಿದೆ. ಬಡವರ ಕಲ್ಯಾಣದ ಪ್ರತಿಯೊಂದು ಯೋಜನೆಗಳ ಅತಿದೊಡ್ಡ ಫಲಾನುಭವಿಗಳಿಗಳೆಂದರೆ ನಮ್ಮ ದಲಿತ ಸಹೋದರ ಸಹೋದರಿಯರು, ನಮ್ಮ ಇತರೆ ಹಿಂದುಳಿದ ವರ್ಗದ ಸಹೋದರ ಸಹೋದರಿಯರು, ಬಕ್ಷಿ ಪಂಚ ಜನರು ಮತ್ತು ನಮ್ಮ ಆದಿವಾಸಿ ಕುಟುಂಬಗಳು. ಮೋದಿ ಗ್ಯಾರಂಟಿ ಯೋಜನೆಗಳಿಂದ ಯಾರಾದರೂ ಹೆಚ್ಚಿನ ಪ್ರಯೋಜನ ಪಡೆದಿದ್ದಾರೆ ಎಂದರೆ ಅವೆಲ್ಲಾ ಈ ಕುಟುಂಬಗಳಾಗಿವೆ.

ಸಹೋದರ ಮತ್ತು ಸಹೋದರಿಯರೇ,

ಮೋದಿ ಅವರು, ತಮ್ಮ ಸಹೋದರಿಯರನ್ನು ‘ಲಕ್ಷಾಧಿಪತಿ ದೀದಿಗಳು’ ನ್ನಾಗಿ ಮಾಡಲು ಮೋದಿ ಅವರ ದೊಡ್ಡ ಗ್ಯಾರಂಟಿ ಇದೆ. ಮೋದಿ ಅವರು ಏನು ಮಾಡುತ್ತಿದ್ದೀರ ಎಂಬುದನ್ನು ನೀವು ಕೇಳಿದ್ದೀರಿ. ಪ್ರತಿಯೊಂದು ಗ್ರಾಮದಲ್ಲೂ ಸಹ ‘ಲಕ್ಷಾಧಿಪತಿ ದೀದಿಗಳು’ ಇರಬೇಕು ಎಂಬುದನ್ನು ಖಾತ್ರಿಪಡಿಸುತ್ತಿದ್ದೇವೆ. ದೇಶದಲ್ಲಿ ಒಂದು ಕೋಟಿ ಲಕ್ಷಾಧಿಪತಿ ದೀದಿಗಳಿದ್ದಾರೆ. ಅವರಲ್ಲಿ ಗುಜರಾತ್ ನ ನಮ್ಮ ಹಲವು ತಾಯಂದಿರುವ ಮತ್ತು ಸಹೋದರಿಯರು ಇದ್ದಾರೆ. ಇದೀಗ ನಮ್ಮ ಪ್ರಯತ್ನ ಮುಂಬರುವ ವರ್ಷಗಳಲ್ಲಿ ಮೂರು ಕೋಟಿ ಸಹೋದರಿಯರನ್ನು ‘ಲಕ್ಷಾಧಿಪತಿ ದೀದಿ’ಗಳನ್ನಾಗಿ ಮಾಡುವುದು. ಇದರಿಂದ ಗುಜರಾತ್ ನ ಲಕ್ಷಾಂತರ ಸಹೋದರಿಯರಿಗೆ ಪ್ರಯೋಜನವಾಗಲಿದೆ. ಈ ಹೊಸ ‘ಲಕ್ಷಾಧಿಪತಿ ದೀದಿ’ಗಳು ಬಡಕುಟುಂಬಗಳಿಗೆ ಹೊಸ ಶಕ್ತಿಯನ್ನು ತುಂಬಲಿವೆ. ಈ ವರ್ಷದ ಬಜೆಟ್ ನಲ್ಲಿ ನಮ್ಮ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರಿಗೆ ದೊಡ್ಡ ಘೋಷಣೆಯನ್ನು ಮಾಡಲಾಗಿದೆ. ಇನ್ನು ಸಹೋದರಿಯರು ತಮ್ಮ ಚಿಕಿತ್ಸೆಯ ಬಗ್ಗೆ ಚಿಂತಿಸಬೇಕಾಗಿಲ್ಲ. ಅವರು ಮತ್ತು ಅವರ ಕುಟುಂಬದ ಚಿಕಿತ್ಸೆಯನ್ನು ಮೋದಿ ಅವರು ನೋಡಿಕೊಳ್ಳುತ್ತಾರೆ. ಎಲ್ಲಾ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಆಯುಷ್ಮಾನ್ ಯೋಜನೆಯಡಿ ಉಚಿತ ಚಿಕಿತ್ಸೆ ಮತ್ತು ಸೌಕರ್ಯಗಳನ್ನು ಪಡೆದುಕೊಳ್ಳಲಿದ್ದಾರೆ.

ಮಿತ್ರರೇ,

ಇತ್ತೀಚಿನ ವರ್ಷಗಳಲ್ಲಿ ಬಡವರು ಮತ್ತು ಮಧ್ಯಮ ವರ್ಗದವರ ವೆಚ್ಚಗಳನ್ನು ತಗ್ಗಿಸುವ ನಿಟ್ಟಿನಲ್ಲಿ ನಮ್ಮ ನಿರಂತರ ಪ್ರಯತ್ನಗಳು ನಡೆದಿವೆ. ಉಚಿತ ಪಡಿತರ, ಕಡಿಮೆ ವೆಚ್ಚದಲ್ಲಿ ಆರೋಗ್ಯ ರಕ್ಷಣೆ, ಕೈಗೆಟಕಬಹುದಾದ ದರದಲ್ಲಿ ಔಷಧಗಳು, ಕಡಿಮೆ ಮೊತ್ತದ ಮೊಬೈಲ್ ಬಿಲ್ ಗಳಿಂದಾಗಿ ಗಣನೀಯ ಪ್ರಮಾಣದಲ್ಲಿ ಹಣ ಉಳಿತಾಯವಾಗುತ್ತಿದೆ. ಉಜ್ವಲ ಯೋಜನೆಯ ಫಲಾನುಭವಿಗಳು ಅತಿ ಕಡಿಮೆ ಬೆಲೆಯಲ್ಲಿ ಅಡುಗೆ ಅನಿಲ ಸಿಲಿಂಡರ್ ಗಳನ್ನು ಪಡೆದುಕೊಳ್ಳುತ್ತಿದ್ದಾರೆ. ಎಲ್ ಇಡಿ ಬಲ್ಬ್ ಗಳು ಮಾಡಿರುವ ಕ್ರಾಂತಿಯಿಂದಾಗಿ ಪ್ರತಿಯೊಂದು ಮನೆಯಲ್ಲೂ ವಿದ್ಯುತ್ ಬಿಲ್ ಗಣನೀಯವಾಗಿ ತಗ್ಗಿದೆ. ಇದೀಗ ನಮ್ಮ ಪ್ರಯತ್ನ ಸಾಮಾನ್ಯ ಕುಟುಂಬಗಳ ವಿದ್ಯುತ್ ಬಿಲ್ ಶೂನ್ಯಕ್ಕೆ ಇಳಿಸುವುದು ಮತ್ತು ವಿದ್ಯುತ್ ನಿಂದ ಅವರು ಆದಾಯ ಗಳಿಸುವಂತೆ ಮಾಡುವುದು. ಆದ್ದರಿಂದ ಕೇಂದ್ರ ಸರ್ಕಾರ ಒಂದು ಮಹತ್ವಾಕಾಂಕ್ಷಿ ಯೋಜನೆಯನ್ನು ರೂಪಿಸಿದೆ. ಇದರಲ್ಲಿ ಆರಂಭಿಕವಾಗಿ ಒಂದು ಕೋಟಿ ಕುಟುಂಬಗಳ ಮನೆಗಳ ಮೇಲೆ ಸೌರ ಮೇಲ್ಛಾವಣಿಗಳನ್ನು ಅಳವಡಿಸಲಾಗುವುದು. ರಾಧಾನ್ಪುರ್ ಸಮೀಪದಲ್ಲಿ ಅತಿದೊಡ್ಡ ಸೌರ ಫಾರಂ ನಿರ್ಮಿಸಿದಂತೆ ಕಚ್ ನಲ್ಲೂ ಸಹ ಪ್ರತಿಯೊಂದು ಮನೆಗಳ ಮೇಲೆ ಸೌರ ಮೇಲ್ಛಾವಣಿಗಳನ್ನು ಅಳವಡಿಸಲಾಗುವುದು. ಅದರ ಪರಿಣಾಮ ವಿದ್ಯುತ್ ಉಚಿತವಾಗಿ ಲಭ್ಯವಾಗಲಿದೆ. ಈ ವ್ಯವಸ್ಥೆಯಿಂದ 300 ಯುನಿಟ್ ವರೆಗೆ ಉಚಿತ ವಿದ್ಯುತ್ ಖಾತ್ರಿಯಾಗಲಿದೆ. ಇದರಿಂದ ಸಾವಿರಾರು ರೂಪಾಯಿಗಳ ಹಣ ಉಳಿತಾಯವಾಗಲಿದೆ ಮತ್ತು ನೀವು ಹೆಚ್ಚಿನ ವಿದ್ಯುತ್ ಉತ್ಪಾದಿಸಿದರೆ, ಸರ್ಕಾರ ಅದನ್ನು ಖರೀದಿಸಲಿದೆ ಮತ್ತು ವಿದ್ಯುತ್ ಮಾರಾಟದಿಂದ ನೀವು ಆದಾಯ ಗಳಿಸಬಹುದು. ಗುಜರಾತ್ ನ ಮೊಧೇರಾದಲ್ಲಿ ಸೌರ ಗ್ರಾಮ ಸ್ಥಾಪಿಸಿರುವುದುನ್ನು ನೀವು ನೋಡಿದ್ದೀರಿ. ಇದೀಗ ಅಂತಹ ಕ್ರಾಂತಿ ದೇಶದಲ್ಲಿ ಆಗಲಿದೆ. ನಮ್ಮ ಸರ್ಕಾರ ರೈತರನ್ನೂ ಕೂಡ ಇಂಧನ ಉತ್ಪಾದಕರನ್ನಾಗಿ ಮಾಡುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿದೆ. ಸರ್ಕಾರ ರೈತರಿಗೂ ಸಹ ಸೌರ ಪಂಪ್ ಸೆಟ್ ಗಳನ್ನು ಅಳವಡಿಸಿಕೊಳ್ಳಲು ಮತ್ತು ತಮ್ಮ ಪಾಳು ಭೂಮಿಯುಲ್ಲಿ ಸಣ್ಣ ಸೌರ ಫಲಕಗಳನ್ನು ಅಳವಡಿಸಿಕೊಳ್ಳಲು ಸಹಾಯ ಮಾಡುತ್ತಿದೆ. ಸೌರ ಇಂಧನಕ್ಕಾಗಿ ರೈತರಿಗೆ ಪ್ರತ್ಯೇಕ ಫೀಡರ್ ಗಳನ್ನು ಒದಗಿಸುವ ಕಾರ್ಯ ಗುಜರಾತ್ ನಲ್ಲಿ ಪ್ರಗತಿಯಲ್ಲಿದೆ. ಇದರಿಂದ ರೈತರಿಗೆ ಹಗಲು ವೇಳೆ ತಮ್ಮ ನಿರವರಿಗೆ ವಿದ್ಯುತ್ ಲಭ್ಯವಾಗಲಿದೆ.

ಮಿತ್ರರೇ,

ಗುಜರಾತ್ ಅನ್ನು ವ್ಯಾಪಾರಿ ರಾಜ್ಯ ಎಂದು ಗುರುತಿಸಲಾಗುತ್ತಿದೆ. ಅದರ ಅಭಿವೃದ್ಧಿಯ ಪಯಣದಲ್ಲಿ ಕೈಗಾರಿಕೆ ಅಭಿವೃದ್ಧಿಗೆ ಗುಜರಾತ್ ಹೊಸ ಆಯಾಮ ನೀಡಿದೆ. ಕೈಗಾರಿಕಾ ಶಕ್ತಿ ಕೇಂದ್ರಗಳ ಉಪಸ್ಥಿತಿಯೊಂದಿಗೆ ಗುಜರಾತ್ ನ ಯುವಜನತೆಗೆ ಅಭೂತಪೂರ್ವ ಅವಕಾಶಗಳು ದೊರೆಯುತ್ತಿವೆ. ಇಂದು ಗುಜರಾತ್ ನ ಯುಜನತೆ ಪ್ರತಿಯೊಂದು ವಲಯದಲ್ಲೂ ರಾಜ್ಯವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುತ್ತಿದ್ದಾರೆ. ಈ ಎಲ್ಲ ಉಪಕ್ರಮಗಳು ಗುಜರಾತ್ ನ ಯುವಜನತೆಗೆ ಹೊಸ ಅವಕಾಶಗಳನ್ನು ನೀಡುತ್ತಿವೆ. ಅವರ ಆದಾಯವನ್ನು ವೃದ್ಧಿಸುತ್ತಿವೆ ಮತ್ತು ‘ವಿಕಸಿತ ಗುಜರಾತ್’ ಅನ್ನು ಅಭಿವೃದ್ಧಿಯಲ್ಲಿ ಹೊಸ ಎತ್ತರಕ್ಕೆ ಕೊಂಡೊಯ್ಯುತ್ತಿವೆ. ಡಬಲ್ ಇಂಜಿನ್ ಸರ್ಕಾರ, ಪ್ರತಿಯೊಂದು ಹಂತದಲ್ಲೂ, ಪ್ರತಿಯೊಂದು ಸಮಯಲದ್ಲೂ ನಿಮ್ಮ ಜೊತೆಗಿರುತ್ತದೆ. ಇಂದು ನಿಮ್ಮನ್ನೆಲ್ಲಾ ಭೇಟಿ ಮಾಡುತ್ತಿರುವುದು ಹೆಚ್ಚಿನ ಸಂತೋಷ ತಂದಿದೆ. ಮತ್ತೊಮ್ಮೆ ನಾನು ಇಂದು ಮನೆಗಳನ್ನು ಪಡೆದುಕೊಂಡಿರುವ ಪ್ರತಿಯೊಬ್ಬರ ಭವಿಷ್ಯ ಉಜ್ವಲವಾಗಲಿ ಎಂದು ನಾನು ಶುಭ ಕೋರುತ್ತೇನೆ ಮತ್ತು ನನ್ನ ಮೇಲೆ ವಿಶ್ವಾಸವಿಡಿ, ನಿಮ್ಮ ಮಕ್ಕಳಿಗೆ ಹೇಳಿ, ಮೋದಿ ಅವರು ನಿಮ್ಮನ್ನು ಜೀವನದಲ್ಲಿ ಸಮಸ್ಯೆಗಳನ್ನು ಎದುರಿಸಲು ಬಿಡುವುದಿಲ್ಲ ಎಂದು. ನಾವು ಗುಜರಾತ್ ಅನ್ನು ಈ ರೀತಿ ಮಾಡಬೇಕಿದೆ. ದೇಶವನ್ನೂ ಸಹ ಅದೇ ರೀತಿ ಮಾಡಬೇಕಿದೆ. 

ನಿಮಗೆಲ್ಲರಿಗೂ ನನ್ನ ಶುಭಾಶಯಗಳು

ಧನ್ಯವಾದಗಳು.

ಘೋಷಣೆ: ಇದು ಪ್ರಧಾನಮಂತ್ರಿಗಳ ಭಾಷಣದ ಯಥಾವತ್ ಅನುವಾದವಲ್ಲ, ಅವರು ಮೂಲತಃ ಹಿಂದಿಯಲ್ಲಿ ಭಾಷಣ ಮಾಡಿದರು.

 

***



(Release ID: 2006264) Visitor Counter : 64