ಪ್ರಧಾನ ಮಂತ್ರಿಯವರ ಕಛೇರಿ

ಪ್ರಧಾನಿ ಅವರಿಂದ ಕರ್ನಾಟಕದ ಬೆಂಗಳೂರಿನಲ್ಲಿ ಅತ್ಯಾಧುನಿಕ ಬೋಯಿಂಗ್ ಇಂಡಿಯಾ ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಕೇಂದ್ರದ ಕ್ಯಾಂಪಸ್ ಉದ್ಘಾಟನೆ


ದೇಶದಲ್ಲಿ ವೈಮಾನಿಕ ವಲಯದೊಳಗೆ ಹೆಣ್ಣು ಮಕ್ಕಳ ಪ್ರವೇಶವನ್ನು ಬೆಂಬಲಿಸುವ ಗುರಿಯ ಬೋಯಿಂಗ್ ಸುಕನ್ಯಾ ಕಾರ್ಯಕ್ರಮಕ್ಕೆ ಚಾಲನೆ 

“ಬಿಐಇಟಿಸಿ  ವೈಮಾನಿಕ ವಲಯದಲ್ಲಿ ಅತ್ಯಾಧುನಿಕ ಮತ್ತು ನಾವೀನ್ಯತೆಗಳ ತಾಣವಾಗಲಿದೆ’’

“ಬೆಂಗಳೂರು ಆಶೋತ್ತರಗಳಿಂದ ನಾವೀನ್ಯತೆಗಳಿಗೆ ಮತ್ತು ಸಾಧನೆಗಳಿಗೆ ಬೆಸೆಯುತ್ತದೆ’’

“ಬೋಯಿಂಗ್ ಹೊಸ ಸೌಕರ್ಯ ಕರ್ನಾಟಕ ಹೊಸ ವೈಮಾನಿಕ ತಾಣವಾಗಿ ಉದಯವಾಗುತ್ತಿರುವ ಸ್ಪಷ್ಟ ಸಂಕೇತ’’

“ಭಾರತದಲ್ಲಿ ಶೇ. 15ರಷ್ಟು ಪೈಲಟ್ ಗಳು ಮಹಿಳೆಯರು, ಇದು ಜಾಗತಿಕ ಸರಾಸರಿಗಿಂತ ಮೂರು ಪಟ್ಟು ಹೆಚ್ಚು’’

“ಚಂದ್ರಯಾನದ ಯಶಸ್ಸು ಭಾರತದ ಯುವಕರಲ್ಲಿ ವೈಜ್ಞಾನಿಕ ಮನೋಭಾವವನ್ನು ತುಂಬಿದೆ’’  

“ಕ್ಷಿಪ್ರವಾಗಿ ಬೆಳೆಯುತ್ತಿರುವ ವೈಮಾನಿಕ ವಲಯ ಭಾರತದ ಒಟ್ಟಾರೆ ಪ್ರಗತಿ ಮತ್ತು ಉದ್ಯೋಗ ಸೃಷ್ಟಿಗೆ ಇಂಬು ನೀಡುತ್ತಿದೆ’’

“ಮುಂದಿನ 25 ವರ್ಷಗಳಲ್ಲಿ ಅಭಿವೃದ್ಧಿ ಹೊಂದಿದ ಭಾರತವನ್ನು ನಿರ್ಮಿಸುವುದು ಇದೀಗ 140 ಕೋಟಿ ಭಾರತೀಯರ ಸಂಕಲ್ಪವಾಗಿದೆ’’

Posted On: 19 JAN 2024 4:30PM by PIB Bengaluru

ಪ್ರಧಾನಮಂತ್ರಿ  ಶ್ರೀ ನರೇಂದ್ರ ಮೋದಿ ಅವರು ಕರ್ನಾಟಕದ ಬೆಂಗಳೂರಿನಲ್ಲಿಂದು ಅತ್ಯಾಧುನಿಕ ಬೋಯಿಂಗ್ ಇಂಡಿಯಾ ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಸಂಸ್ಥೆ (ಬಿಐಇಟಿಸಿ)ಯ ಹೊಸ ಕ್ಯಾಂಪಸ್ ಅನ್ನು ಉದ್ಘಾಟಿಸಿದರು. ಇದನ್ನು 1,600 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದ್ದು, 43 ಎಕರೆ ಪ್ರದೇಶದಲ್ಲಿ ನಿರ್ಮಿಸಲಾಗಿರುವ ಇದು ಅಮೆರಿಕಾದ ಹೊರಗೆ ಸ್ಥಾಪನೆಯಾಗಿರುವ ಬೃಹತ್ ಬೋಯಿಂಗ್ ಆಗಿದೆ. ಪ್ರಧಾನಮಂತ್ರಿ ಅವರು ದೇಶದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ವೈಮಾನಿಕ ವಲಯದಲ್ಲಿ ಹೆಚ್ಚಿನ ಹೆಣ್ಣು ಮಕ್ಕಳ ಪ್ರವೇಶವನ್ನು ಬೆಂಬಲಿಸುವ ಗುರಿ ಇರುವ ಬೋಯಿಂಗ್  ಸುಕನ್ಯಾ ಕಾರ್ಯಕ್ರಮಕ್ಕೂ ಚಾಲನೆ ನೀಡಿದರು.

ಪ್ರಧಾನಮಂತ್ರಿ ಅವರು ಕೇಂದ್ರಕ್ಕೆ ಭೇಟಿ ನೀಡಿ ಖುದ್ದು ಅನುಭವ ಪಡೆದರು ಮತ್ತು ಸುಕನ್ಯಾ ಫಲಾನುಭವಿಗಳೊಂದಿಗೆ ಸಂವಾದ ನಡೆಸಿದರು.

ಬೋಯಿಂಗ್ ಕಂಪನಿಯ ಸಿಒಒ, ಶ್ರೀಮತಿ ಸ್ಟೆಫನಿ ಪೋಪ್ ಅವರು ಭಾರತದಲ್ಲಿ ವಿಮಾನಯಾನ ಕ್ಷೇತ್ರದ ಬೆಳವಣಿಗೆಯ ಮೇಲೆ ಪ್ರಧಾನಮಂತ್ರಿ ಅವರು ಹೆಚ್ಚಿನ  ಗಮನ ಹರಿಸುತ್ತಿರುವುದನ್ನು ಮತ್ತು ಬೋಯಿಂಗ್ ಸುಕನ್ಯಾ ಕಾರ್ಯಕ್ರಮವನ್ನು ಇಂದು ಜಾರಿಗೊಳಿಸುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿರುವುದನ್ನು ಶ್ಲಾಘಿಸಿದರು. ಪ್ರಧಾನಿ ಅವರ ನಿರಂತರ ಬೆಂಬಲಕ್ಕಾಗಿ ಕೃತಜ್ಞತೆ ಸಲ್ಲಿಸಿದ ಅವರು ಏರೋಸ್ಪೇಸ್ ಭವಿಷ್ಯವನ್ನು ರೂಪಿಸಲು ಒಟ್ಟಾಗಿ ಕೆಲಸ ಮಾಡಲು ಎದುರು ನೋಡುತ್ತಿದ್ದೇವೆ ಎಂದರು. ಈ ಹೊಸ ಕ್ಯಾಂಪಸ್ ಬೋಯಿಂಗ್‌ನ ಎಂಜಿನಿಯರಿಂಗ್ ಪರಂಪರೆಯ ವೈಭವಕ್ಕೆ ಸಾಕ್ಷಿಯಾಗಿದೆ ಮತ್ತು ಇದು ಭಾರತದಲ್ಲಿನ ಪ್ರತಿಭೆಯ ಆಳ ಮತ್ತು ಸಾಮರ್ಥ್ಯದ ಮೇಲಿನ ನಂಬಿಕೆಯನ್ನು ಒತ್ತಿಹೇಳುತ್ತದೆ ಎಂದು ಶ್ರೀಮತಿ ಸ್ಟೆಫನಿ ಹೇಳಿದರು. ಅವರು ಹೊಸ ಕ್ಯಾಂಪಸ್‌ನ ವ್ಯಾಪ್ತಿ ಮತ್ತು ಭಾರತವನ್ನು ಏರೋಸ್ಪೇಸ್ ಉದ್ಯಮದ ಮುಂಚೂಣಿಗೆ ತರುವ ಪೂರಕ ವ್ಯವಸ್ಥೆಯನ್ನು ಸೃಷ್ಟಿಸುವ ಬೋಯಿಂಗ್‌ನ ಯೋಜನೆಯನ್ನು ವಿವರಿಸಿದರು. ಕೊನೆಯದಾಗಿ, ಹೊಸ ಬೋಯಿಂಗ್ ಕ್ಯಾಂಪಸ್ ಪ್ರಧಾನಮಂತ್ರಿ ಅವರ ಸ್ವಾವಲಂಬಿ ಭಾರತ ಉಪಕ್ರಮ ಅಥವಾ 'ಆತ್ಮನಿರ್ಭರ ಭಾರತ’ದ ಅತ್ಯಂತ ಅತ್ಯಾಧುನಿಕ ಉದಾಹರಣೆಗಳಲ್ಲಿ ಒಂದಾಗಿದೆ ಎಂದು ಶ್ರೀಮತಿ ಸ್ಟೆಫನಿ ಹೇಳಿದರು. ಸುಕನ್ಯಾ ಕಾರ್ಯಕ್ರಮದ ಪರಿಕಲ್ಪನೆಗಾಗಿ ಅವರು ಪ್ರಧಾನಿ ಅವರನ್ನು ಪ್ರಸಂಶಿದರು ಮತ್ತು ಭಾರತೀಯ ಮಹಿಳೆಯರಿಗೆ ವೈಮಾನಿಕ ವಲಯದಲ್ಲಿ ಹೆಚ್ಚಿನ ಅವಕಾಶಗಳನ್ನು ಸೃಷ್ಟಿಸಲು ಮತ್ತು ಆ ಕಾರ್ಯಕ್ಕೆ ವೇಗ ನೀಡುವ ಬೋಯಿಂಗ್‌ನ ಪ್ರಯತ್ನಗಳನ್ನು ಶ್ಲಾಘಿಸಿದರು. “ಈ ಕಾರ್ಯಕ್ರಮವು ಅಡೆತಡೆಗಳನ್ನು ಮುರಿಯುತ್ತದೆ ಮತ್ತು ವೈಮಾನಿಕ ವಲಯದಲ್ಲಿ ವೃತ್ತಿಜೀವನವನ್ನು ಮುಂದುವರಿಸಲು ಹೆಚ್ಚಿನ ಮಹಿಳೆಯರಿಗೆ ಸ್ಫೂರ್ತಿ ನೀಡುತ್ತದೆ" ಎಂದು ಅವರು ಹೇಳಿದರು. ಮಾಧ್ಯಮಿಕ ಶಾಲೆಗಳಲ್ಲಿ ಸ್ಟೆಮ್ ಪ್ರಯೋಗಾಲಯಗಳನ್ನು ಒದಗಿಸುವ ಯೋಜನೆಗಳ ಬಗ್ಗೆ ಅವರು ವಿವರಿಸಿದರು. ಬೋಯಿಂಗ್ ಮತ್ತು ಭಾರತದ ಸಹಭಾಗಿತ್ವವು ವಾಯುಯಾನದ ಭವಿಷ್ಯವನ್ನು ರೂಪಿಸುತ್ತದೆ ಮತ್ತು ಭಾರತ ಮತ್ತು ವಿಶ್ವದಾದ್ಯಂತ ಇರುವ ಜನರಲ್ಲಿ ಸಕಾರಾತ್ಮಕ ಬದಲಾವಣೆಯನ್ನು ತರಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ, ಬೆಂಗಳೂರು ನಗರವು ಆಕಾಂಕ್ಷೆಗಳನ್ನು, ನಾವೀನ್ಯತೆಗಳು ಮತ್ತು ಸಾಧನೆಗಳಿಗೆ ಮತ್ತು ಭಾರತದ ತಾಂತ್ರಿಕ ಸಾಮರ್ಥ್ಯವನ್ನು ಜಾಗತಿಕ ಬೇಡಿಕೆಗಳಿಗೆ ಜೋಡಿಸುವ ನಗರವಾಗಿದೆ ಎಂದು ಹೇಳಿದರು. "ಬೋಯಿಂಗ್‌ನ ಹೊಸ ತಂತ್ರಜ್ಞಾನ ಕ್ಯಾಂಪಸ್ ಈ ನಂಬಿಕೆಯನ್ನು ಬಲಪಡಿಸಲಿದೆ’’ ಎಂದ ಅವರು,  ಹೊಸದಾಗಿ ಉದ್ಘಾಟನೆಗೊಂಡ ಕ್ಯಾಂಪಸ್ ಅಮೆರಿಕಾದ ಹೊರಗಡೆ ಇರುವ ಬೋಯಿಂಗ್‌ನ ಅತಿದೊಡ್ಡ ಸೌಕರ್ಯವಾಗಿದೆ ಎಂದು ಪ್ರಧಾನಿ ತಿಳಿಸಿದರು. ಅದರ ವಿಸ್ತಾರ ಮತ್ತು ಪ್ರಮಾಣವು ಭಾರತಕ್ಕೆ ಮಾತ್ರವಲ್ಲದೆ ಪ್ರಪಂಚದ ವೈಮಾನಿಕ ಮಾರುಕಟ್ಟೆಯನ್ನು ಬಲವರ್ಧನೆಗೊಳಿಸುತ್ತದೆ ಎಂದು ಅವರು ಒತ್ತಿ ಹೇಳಿದರು.

ಜಾಗತಿಕ ತಂತ್ರಜ್ಞಾನ, ಸಂಶೋಧನೆ ಮತ್ತು ನಾವೀನ್ಯತೆ, ವಿನ್ಯಾಸ ಹಾಗೂ ಬೇಡಿಕೆಯನ್ನು ಹೆಚ್ಚಿಸಲು ಭಾರತದ ಬದ್ಧತೆ ಹೊಂದಿರುವುದನ್ನು ಈ ಸೌಲಭ್ಯವು ಪ್ರದರ್ಶಿಸುತ್ತದೆ ಎಂದು ಪ್ರಧಾನಮಂತ್ರಿ ಹೇಳಿದರು.  ಇದು 'ಮೇಕ್ ಇನ್ ಇಂಡಿಯಾ-ಮೇಕ್ ಫಾರ್ ದಿ ವರ್ಲ್ಡ್' ನಿರ್ಣಯವನ್ನು ಬಲಪಡಿಸುತ್ತದೆ ಎಂದು ಪ್ರಧಾನಿ ಹೇಳಿದರು. “ಈ ಕ್ಯಾಂಪಸ್ ಭಾರತದ ಪ್ರತಿಭೆಯಲ್ಲಿ ವಿಶ್ವದ ನಂಬಿಕೆಯನ್ನು ಬಲವರ್ಧನೆಗೊಳಿಸುತ್ತದೆ" ಎಂದು ಅವರು ಹೇಳಿದರು. ಭಾರತ ಮುಂದೊಂದು ದಿನ ಈ ಸೌಲಭ್ಯದಲ್ಲಿ ಭವಿಷ್ಯದ ವಿಮಾನಗಳನ್ನು ವಿನ್ಯಾಸಗೊಳಿಸಲಿದೆ ಎಂದು ಪ್ರಧಾನಮಂತ್ರಿ ಅವರು ವಿಶ್ವಾಸ ವ್ಯಕ್ತಪಡಿಸಿದರು.

ಕಳೆದ ವರ್ಷ ಕರ್ನಾಟಕದಲ್ಲಿ ಏಷ್ಯಾದ ಅತಿದೊಡ್ಡ ಹೆಲಿಕಾಪ್ಟರ್ ತಯಾರಿಕಾ ಕಾರ್ಖಾನೆಯ ಉದ್ಘಾಟನೆ ನೆರವೇರಿಸಿದ್ದನ್ನು ಸ್ಮರಿಸಿಕೊಂಡ ಪ್ರಧಾನಿ, ಬೋಯಿಂಗ್‌ನ ಹೊಸ ಸೌಲಭ್ಯವು ಕರ್ನಾಟಕವು ಹೊಸ ವೈಮಾನಿಕ ತಾಣದ ಕೇಂದ್ರವಾಗಿ ಉದಯಿಸುವುದರ ಸ್ಪಷ್ಟ ಸಂಕೇತವಾಗಿದೆ ಎಂದು ಹೇಳಿದರು. ವೈಮಾನಿಕ ಉದ್ಯಮದಲ್ಲಿ ಹೊಸ ಕೌಶಲ್ಯಗಳನ್ನು ಪಡೆಯಲು ಈಗ ಅನೇಕ ಅವಕಾಶಗಳನ್ನು ಹೊಂದಿರುವ ಭಾರತದ ಯುವಕರನ್ನು ಪ್ರಧಾನಿ ಅವರು ವಿಶೇಷವಾಗಿ ಅಭಿನಂದಿಸಿದರು.

ಪ್ರತಿಯೊಂದು ವಲಯದಲ್ಲೂ ಮಹಿಳೆಯರ ಪಾಲ್ಗೊಳ್ಳುವಿಕೆಯನ್ನು ಹೆಚ್ಚಿಸುವ ಸರ್ಕಾರದ ಪ್ರಯತ್ನಗಳನ್ನು ಒತ್ತಿ ಹೇಳಿದ ಪ್ರಧಾನಿ ಅವರು, ಜಿ-20 ಅಧ್ಯಕ್ಷತೆಯ ಅವಧಿಯಲ್ಲಿ ಮಹಿಳಾ ನೇತೃತ್ವದ ಅಭಿವೃದ್ಧಿಯತ್ತ ಭಾರತದ ಒತ್ತು ನೀಡಿದ್ದನ್ನು ಪುನರುಚ್ಚರಿಸಿದರು. ವೈಮಾನಿಕ ಕ್ಷೇತ್ರದಲ್ಲಿ ಮಹಿಳೆಯರಿಗೆ ಹೊಸ ಅವಕಾಶಗಳನ್ನು ಕಲ್ಪಿಸಲು ಸರ್ಕಾರ ಬದ್ಧವಾಗಿದೆ ಎಂದು ಅವರು ಹೇಳಿದರು. “ಯುದ್ಧ ಪೈಲಟ್‌ಗಳಾಗಲಿ ಅಥವಾ ನಾಗರಿಕ ವಿಮಾನವಾಗಲಿ, ಮಹಿಳಾ ಪೈಲಟ್‌ಗಳ ಸಂಖ್ಯೆಯಲ್ಲಿ ಭಾರತವು ವಿಶ್ವವನ್ನು ಮುನ್ನಡೆಸುತ್ತಿದೆ’’ ಎಂದು ಹೆಮ್ಮೆಯಿಂದ ಹೇಳಿದ ಪ್ರಧಾನಿ, ಭಾರತದ ಪೈಲಟ್‌ಗಳಲ್ಲಿ ಶೇ.15ರಷ್ಟು ಮಹಿಳೆಯರಿದ್ದಾರೆ, ಇದು ಜಾಗತಿಕ ಸರಾಸರಿಗಿಂತ ಮೂರು ಪಟ್ಟು ಹೆಚ್ಚು ಎಂದು ತಿಳಿಸಿದರು.

ಬೋಯಿಂಗ್ ಸುಕನ್ಯಾ ಕಾರ್ಯಕ್ರಮದ ಕುರಿತು ಮಾತನಾಡಿದ ಪ್ರಧಾನಮಂತ್ರಿ,  ದೂರದ ಪ್ರದೇಶಗಳಲ್ಲಿ ವಾಸಿಸುವ ಬಡವರಿಗೆ ಪೈಲಟ್ ಆಗುವ ಕನಸುಗಳನ್ನು ನನಸಾಗಿಸಲು ಸಹಾಯ ಮಾಡಲು ಮತ್ತು ವೈಮಾನಿಕ ಕ್ಷೇತ್ರದಲ್ಲಿ ಮಹಿಳೆಯರ ಭಾಗವಹಿಸುವಿಕೆಗೆ ಇದು ಉತ್ತೇಜನ ನೀಡುತ್ತದೆ ಎಂದು ಹೇಳಿದರು. ಕಾರ್ಯಕ್ರಮದಡಿಯಲ್ಲಿ, ಪೈಲಟ್ ವೃತ್ತಿಯನ್ನು ಮುಂದುವರಿಸಲು ಸರ್ಕಾರಿ ಶಾಲೆಗಳಲ್ಲಿ ವೃತ್ತಿ ತರಬೇತಿ ಮತ್ತು ಅಭಿವೃದ್ಧಿ ಸೌಲಭ್ಯಗಳನ್ನು ಒದಗಿಸಲಾಗುವುದು ಎಂದು ಪ್ರಧಾನಮಂತ್ರಿ ತಿಳಿಸಿದರು.

ಚಂದ್ರಯಾನದ ಐತಿಹಾಸಿಕ ಯಶಸ್ಸು ಭಾರತದ ಯುವಕರಲ್ಲಿ ವೈಜ್ಞಾನಿಕ ಮನೋಭಾವವನ್ನು ಹೆಚ್ಚಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ಸ್ಟೆಮ್ ಶಿಕ್ಷಣದ ಕೇಂದ್ರವಾಗಿ ಭಾರತದ ಸ್ಥಾನಮಾನವನ್ನು ಒತ್ತಿಹೇಳುತ್ತಾ,  ಹೆಣ್ಣುಮಕ್ಕಳು ಸ್ಟೆಮ್ ವಿಷಯಗಳನ್ನು ದೊಡ್ಡ ಮಟ್ಟದಲ್ಲಿ ತೆಗೆದುಕೊಂಡಿದ್ದಾರೆ ಎಂದು ಪ್ರಧಾನಿ ಉಲ್ಲೇಖಿಸಿದರು. ಭಾರತವು ವಿಶ್ವದ ಮೂರನೇ ಅತಿದೊಡ್ಡ ವೈಮಾನಿಕ ದೇಶೀಯ ಮಾರುಕಟ್ಟೆಯಾಗಿದೆ ಎಂದು ಅವರು ಹೇಳಿದರು. ಕಳೆದೊಂದು ದಶಕದಲ್ಲಿ ದೇಶೀಯ ಪ್ರಯಾಣಿಕರ ಸಂಖ್ಯೆ ದುಪ್ಪಾಟಗಿದೆ. ಉಡಾನ್‌ನಂತಹ ಯೋಜನೆಗಳು ಇದರಲ್ಲಿ ದೊಡ್ಡ ಪಾತ್ರವನ್ನು ವಹಿಸಿವೆ ಎಂದು ಅವರು ಹೇಳಿದರು. ಈ ಸಂಖ್ಯೆ ಮತ್ತಷ್ಟು ಹೆಚ್ಚಾಗಲಿದ್ದು, ಬೇಡಿಕೆ ಹೆಚ್ಚುತ್ತಿದೆ. ಇದು ಜಾಗತಿಕ ವೈಮಾನಿಕ ವಲಯಕ್ಕೆ ಹೊಸ ರಭಸ  ನೀಡುವ ಭಾರತದ ಏರ್‌ಲೈನ್ಸ್‌ನಿಂದ ಫ್ಲೀಟ್‌ಗಳ ಹೊಸ ಆದೇಶಗಳಿಗೆ ಕಾರಣವಾಗಿದೆ. “ಭಾರತವು ತನ್ನ ಪ್ರಜೆಗಳ ಆಕಾಂಕ್ಷೆ ಮತ್ತು ಅಗತ್ಯತೆಗಳನ್ನು ಪ್ರಧಾನವಾಗಿಟ್ಟುಕೊಂಡು ಕೆಲಸ ಮಾಡುತ್ತಿರುವುದರಿಂದ ಇದು ಘಟಿಸುತ್ತಿದೆ’’ ಎಂದು ಅವರು ಹೇಳಿದರು.

ಪ್ರಗತಿಯಲ್ಲಿ ಭಾರತದ ಸಾಮರ್ಥ್ಯವನ್ನು ತಡೆಯುವ ಕಳಪೆ ಸಂಪರ್ಕದ ಹಿಂದಿನ ನ್ಯೂನತೆಯನ್ನು ನಿವಾರಿಸಲು ಸಂಪರ್ಕ ಮೂಲಸೌಕರ್ಯದಲ್ಲಿ ಹೂಡಿಕೆಯ ಮೇಲೆ ಸರ್ಕಾರದ ಹೆಚ್ಚಿನ ಗಮನ ಹರಿಸಿದ ಕುರಿತು ಪ್ರಧಾನಿ ನರೇಂದ್ರ ಮೋದಿ ಮಾತನಾಡಿದರು. ಭಾರತವು ಹೆಚ್ಚಿನ ಸಂಪರ್ಕ ಹೊಂದಿದ ಮಾರುಕಟ್ಟೆಗಳಲ್ಲಿ ಒಂದಾಗುತ್ತಿದೆ ಎಂದು ಅವರು ಹೇಳಿದರು. ಇಂದು ಭಾರತವು ಸುಮಾರು 150 ವಿಮಾನ ನಿಲ್ದಾಣಗಳು ಕಾರ್ಯಾಚರಣೆ ನಡೆಸುತ್ತಿವೆ, 2014 ರಲ್ಲಿ ಸುಮಾರು 70 ವಿಮಾನ ನಿಲ್ದಾಣಗಳನ್ನು ಮಾತ್ರ ಇದ್ದವು ಎಂದು ಅವರು ಹೇಳಿದರು. ವಿಮಾನ ನಿಲ್ದಾಣಗಳ ಸಾಮರ್ಥ್ಯಯನ್ನು ಗಣನೀಯವಾಗಿ ಹೆಚ್ಚಿಸಲಾಗಿದೆ ಎಂದು ಅವರು ಹೇಳಿದರು. ಆರ್ಥಿಕತೆಯ ಒಟ್ಟಾರೆ ಬೆಳವಣಿಗೆ ಮತ್ತು ಉದ್ಯೋಗ ಸೃಷ್ಟಿಗೆ ಕಾರಣವಾಗುವ ಸರಕು ಸಾಗಾಣೆ ವಿಮಾನಗಳ ಸಾಮರ್ಥ್ಯದ ಕುರಿತಂತೆ ಅವರು ಪ್ರಸ್ತಾಪಿಸಿದರು.

ಭಾರತದ ಹೆಚ್ಚಿದ ವಿಮಾನ ನಿಲ್ದಾಣ ಸಾಮರ್ಥ್ಯದಿಂದಾಗಿ ಏರ್ ಕಾರ್ಗೋ ವಲಯದ ತ್ವರಿತ ಬೆಳವಣಿಗೆಯನ್ನು ಪ್ರಧಾನಮಂತ್ರಿ ಪ್ರಮುಖವಾಗಿ ಪ್ರಸ್ತಾಪಿಸಿದರು. ಇದು ಭಾರತದ ದೂರದ ಪ್ರದೇಶಗಳಿಂದ ಅಂತಾರಾಷ್ಟ್ರೀಯ ಮಾರುಕಟ್ಟೆಗಳಿಗೆ ಉತ್ಪನ್ನಗಳನ್ನು ಸಾಗಿಸುವುದನ್ನು ಸುಲಭಗೊಳಿಸಿದೆ ಎಂದು ಅವರು ಹೇಳಿದರು. “ಶೀಘ್ರವಾಗಿ ಬೆಳೆಯುತ್ತಿರುವ ವೈಮಾನಿಕ ವಲಯವು ಭಾರತದ ಒಟ್ಟಾರೆ ಬೆಳವಣಿಗೆ ಮತ್ತು ಉದ್ಯೋಗ ಸೃಷ್ಟಿಗೆ ವೇಗವನ್ನು ನೀಡುತ್ತಿದೆ" ಎಂದು ಶ್ರೀ ನರೇಂದ್ರ ಮೋದಿ ಹೇಳಿದರು.

ವೈಮಾನಿಕ ವಲಯದ ಬೆಳವಣಿಗೆಯನ್ನು ಮುಂದುವರಿಸಲು ಮತ್ತು ವೇಗಗೊಳಿಸಲು ಸರ್ಕಾರವು ನೀತಿ ನಿರೂಪಣೆ ಹಂತದಲ್ಲಿ ನಿರಂತರವಾಗಿ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ ಎಂದು ಪ್ರಧಾನಮಂತ್ರಿ ಒತ್ತಿ ಹೇಳಿದರು. ವೈಮಾನಿಕ ಇಂಧನಕ್ಕೆ ಸಂಬಂಧಿಸಿದ ತೆರಿಗೆಗಳನ್ನು ತಗ್ಗಿಸಲು ಕೇಂದ್ರವು ರಾಜ್ಯ ಸರ್ಕಾರಗಳನ್ನು ಪ್ರೋತ್ಸಾಹಿಸುತ್ತಿದೆ ಮತ್ತು ವಿಮಾನವನ್ನು ಸುಲಭವಾಗಿ ಬಾಡಿಗೆಗೆ ನೀಡಲು ಕೆಲಸ ಮಾಡುತ್ತಿದೆ ಎಂದು ಅವರು ಹೇಳಿದರು. ವಿಮಾನ ಗುತ್ತಿಗೆ ಮತ್ತು ಹಣಕಾಸಿನ ಮೇಲೆ ಭಾರತದ ಕಡಲಾಚೆಯ ಅವಲಂಬನೆ ತಗ್ಗಿಸಲು ಗಿಫ್ಟ್ ಸಿಟಿಯಲ್ಲಿ ಸ್ಥಾಪಿಸಿರುವ ಅಂತಾರಾಷ್ಟ್ರೀಯ ಹಣಕಾಸು ಸೇವಾ ಕೇಂದ್ರಗಳ ಪ್ರಾಧಿಕಾರದ ಪಾತ್ರವನ್ನು ಅವರು ಉಲ್ಲೇಖಿಸಿದರು.. “ಇಡೀ ದೇಶದ ವೈಮಾನಿಕ ಕ್ಷೇತ್ರವೂ ಇದರಿಂದ ಪ್ರಯೋಜನ ಪಡೆಯುತ್ತದೆ" ಎಂದು ಅವರು ಹೇಳಿದರು.

ಕೆಂಪು ಕೋಟೆಯಿಂದ ತಾವು ಮಾಡಿದ್ದ, ‘ಯಹೀ ಸಮಯ ಹೈ, ಸಹಿ ಸಮಯ ಹೈ’ ಘೋಷಣೆಯನ್ನು ಸ್ಮರಿಸಿದ ಪ್ರಧಾನಿ ಅವರು, ಬೋಯಿಂಗ್ ಮತ್ತು ಇತರ ಅಂತಾರಾಷ್ಟ್ರೀಯ ಕಂಪನಿಗಳು ತಮ್ಮ ಬೆಳವಣಿಗೆಯನ್ನು ಭಾರತದ ಕ್ಷಿಪ್ರ ಪ್ರಗತಿಯೊಂದಿಗೆ ಸಂಯೋಜಿಸಲು ಇದು ಸರಿಯಾದ ಸಮಯ ಎಂದು ಹೇಳಿದರು. “ಮುಂದಿನ 25 ವರ್ಷಗಳಲ್ಲಿ ಅಭಿವೃದ್ಧಿ ಹೊಂದಿದ ಭಾರತವನ್ನು ನಿರ್ಮಿಸುವುದು ಇದೀಗ 140 ಕೋಟಿ ಭಾರತೀಯರ ಸಂಕಲ್ಪವಾಗಿದೆ" ಎಂದು ಅವರು ಬಲವಾಗಿ ಪ್ರತಿಪಾದಿಸಿದರು. ಕಳೆದ 9 ವರ್ಷಗಳಲ್ಲಿ, ನಾವು  ಸುಮಾರು 25 ಕೋಟಿ ಭಾರತೀಯರನ್ನು ಬಡತನ ರೇಖೆಯಿಂದ ಮೇಲೆತ್ತಿದ್ದೇವೆ ಮತ್ತು ಈ ಕೋಟಿಗಟ್ಟಲೆ ಭಾರತೀಯರು ಈಗ ನವ-ಮಧ್ಯಮ ವರ್ಗವನ್ನು ಸೃಷ್ಟಿಸುತ್ತಿದ್ದಾರೆ ಎಂದು ಪ್ರಧಾನಿ ಮಾಹಿತಿ ನೀಡಿದರು. ಭಾರತದಲ್ಲಿನ ಪ್ರತಿಯೊಂದು ಆದಾಯ ಗುಂಪಿನಲ್ಲಿ ಏರುಮುಖಿ ಚಲನಯ ಪ್ರವೃತ್ತಿಯಾಗಿ ಕಾಣಲಾಗುತ್ತಿದೆ ಎಂದು ಅವರು ಉಲ್ಲೇಖಿಸಿದರು. ಭಾರತದ ಪ್ರವಾಸೋದ್ಯಮ ಕ್ಷೇತ್ರದ ವಿಸ್ತರಣೆಯ ಕುರಿತು ಮಾತನಾಡಿದ ಪ್ರಧಾನಿ, ಸೃಷ್ಟಿಯಾಗುತ್ತಿರುವ ಎಲ್ಲಾ ಹೊಸ ಸಂಭವನೀಯತೆಯ ಗರಿಷ್ಠ ಲಾಭ ಪಡೆದುಕೊಳ್ಳುವಂತೆ ಪಾಲುದಾರರನ್ನು ಆಗ್ರಹಿಸಿದರು.

ಭಾರತದಲ್ಲಿ ಎಂಎಸ್ ಎಂಇ ಗಳ ಪ್ರಬಲ ಜಾಲ, ಬೃಹತ್ ಪ್ರತಿಭಾ ಸಂಪನ್ಮೂಲ ಮತ್ತು ಭಾರತದಲ್ಲಿ ಸ್ಥಿರ ಸರ್ಕಾರದ ಸಾಮರ್ಥ್ಯವನ್ನು ಪ್ರಮುಖವಾಗಿ ಪ್ರಸ್ತಾಪ ಮಾಡಿದ ಪ್ರಧಾನಿ ಮೋದಿ ಅವರು, ಭಾರತದಲ್ಲಿ ವಿಮಾನ ತಯಾರಿಕಾ ಪೂರಕ ಪರಿಸರ ವ್ಯವಸ್ಥೆಯನ್ನು ನಿರ್ಮಿಸುವ ಅಗತ್ಯತೆಯನ್ನು ಒತ್ತಿ ಹೇಳಿದರು. "ಮೇಕ್ ಇನ್ ಇಂಡಿಯಾ" ಅನ್ನು ಪ್ರೋತ್ಸಾಹಿಸುವ ಭಾರತದ ಕಾರ್ಯನೀತಿಯು ಪ್ರತಿಯೊಬ್ಬ ಹೂಡಿಕೆದಾರರಿಗೆ ಗೆಲುವಿನ ಪರಿಸ್ಥಿತಿ ಸೃಷ್ಟಿಸಿದೆ’’ ಎಂದು ಪ್ರಧಾನಮಂತ್ರಿ ಹೇಳಿದರು. ಭಾರತದಲ್ಲಿ ಬೋಯಿಂಗ್‌ನ ಮೊದಲ ಸಂಪೂರ್ಣ ವಿನ್ಯಾಸ ಮತ್ತು ತಯಾರಿಸಿದ ವಿಮಾನಕ್ಕಾಗಿ ಭಾರತ ಅಧಿಕ ಸಮಯ ಕಾಯಬೇಕಿಲ್ಲ ಎಂದು ಶ್ರೀ ನರೇಂದ್ರ ಮೋದಿ ವಿಶ್ವಾಸ ವ್ಯಕ್ತಪಡಿಸಿದರು. "ಭಾರತದ ಆಕಾಂಕ್ಷೆಗಳು ಮತ್ತು ಬೋಯಿಂಗ್‌ನ ವಿಸ್ತರಣೆಯು ಬಲವಾದ ಪಾಲುದಾರಿಕೆಯಾಗಿ ಹೊರಹೊಮ್ಮುತ್ತದೆ ಎಂಬ ವಿಶ್ವಾಸ ನನಗಿದೆ’’ ಎಂದು ಪ್ರಧಾನಿ ನರೇಂದ್ರ ಮೋದಿ ತಮ್ಮಭಾಷಣ ಮುಗಿಸಿದರು.

ಕರ್ನಾಟಕ ರಾಜ್ಯಪಾಲರಾದ ಶ್ರೀ ಥಾವರ್ ಚಂದ್ ಗೆಹ್ಲೋಟ್, ಕರ್ನಾಟಕದ ಮುಖ್ಯಮಂತ್ರಿ, ಶ್ರೀ ಸಿದ್ದರಾಮಯ್ಯ, ಬೋಯಿಂಗ್ ಕಂಪನಿಯ ಸಿಒಒ, ಶ್ರೀಮತಿ ಸ್ಟೆಫನಿ ಪೋಪ್ ಮತ್ತು ಬೋಯಿಂಗ್ ಇಂಡಿಯಾ ಮತ್ತು ದಕ್ಷಿಣ ಏಷ್ಯಾದ ಅಧ್ಯಕ್ಷ ಶ್ರೀ ಸಲೀಲ್ ಗುಪ್ತೆ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಹಿನ್ನೆಲೆ:

ಪ್ರಧಾನಮಂತ್ರಿ ಅವರು ಬೆಂಗಳೂರಿನಲ್ಲಿ ಹೊಸ ಅತ್ಯಾಧುನಿಕ ಬೋಯಿಂಗ್ ಇಂಡಿಯಾ ಇಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಕೇಂದ್ರ (ಬಿಐಇಟಿಸಿ) ಕ್ಯಾಂಪಸ್ ಅನ್ನು ಉದ್ಘಾಟಿಸಿದರು. 1600 ಕೋಟಿ ರೂ. ಬಂಡವಾಳದಲ್ಲಿ ನಿರ್ಮಿಸಲಾಗಿಗರುವ ಇದು  43-ಎಕರೆ ಕ್ಯಾಂಪಸ್ ಹೊಂದಿದ್ದು, ಅಮೆರಿಕಾದ ಹೊರಗೆ ಸ್ಥಾಪನೆಯಾದ ಬೋಯಿಂಗ್‌ನ ಅತಿದೊಡ್ಡ ಹೂಡಿಕೆಯಾಗಿದೆ. ಭಾರತದಲ್ಲಿನ ಬೋಯಿಂಗ್‌ನ ಹೊಸ ಕ್ಯಾಂಪಸ್, ಭಾರತದಲ್ಲಿ ಕ್ರಿಯಾಶೀಲ ನವೋದ್ಯಮ, ಖಾಸಗಿ ಮತ್ತು ಸರ್ಕಾರಿ ಪೂರಕ ವ್ಯವಸ್ಥೆಯೊಂದಿಗೆ ಪಾಲುದಾರಿಕೆಗೆ ಮೂಲಾಧಾರವಾಗಲಿದೆ ಮತ್ತು ಜಾಗತಿಕ ವೈಮಾನಿಕ  ಮತ್ತು ರಕ್ಷಣಾ ಉದ್ಯಮಕ್ಕಾಗಿ ಮುಂದಿನ ಪೀಳಿಗೆಯ ಉತ್ಪನ್ನಗಳು ಮತ್ತು ಸೇವೆಗಳನ್ನು ಅಭಿವೃದ್ಧಿಪಡಿಸಲು ಸಹಾಯ ಮಾಡುತ್ತದೆ.

ಪ್ರಧಾನಮಂತ್ರಿ ಅವರು, ಬೋಯಿಂಗ್ ಸುಕನ್ಯಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಇದು ದೇಶದ ಬೆಳೆಯುತ್ತಿರುವ ವೈಮಾನಿಕ ವಲಯಕ್ಕೆ ದೇಶಾದ್ಯಂತ ಹೆಚ್ಚಿನ ಪ್ರಮಾಣದ ಹೆಣ್ಣು ಮಕ್ಕಳ ಪ್ರವೇಶವನ್ನು ಬೆಂಬಲಿಸುವ ಗುರಿಯನ್ನು ಹೊಂದಿದೆ. ಈ ಕಾರ್ಯಕ್ರಮವು ಭಾರತದಾದ್ಯಂತದ ಹೆಣ್ಣು ಮಕ್ಕಳು ಮತ್ತು ಮಹಿಳೆಯರಿಗೆ ವಿಜ್ಞಾನ, ತಂತ್ರಜ್ಞಾನ, ಎಂಜಿನಿಯರಿಂಗ್ ಮತ್ತು ಗಣಿತ (ಸ್ಟೆಮ್ ) ಕ್ಷೇತ್ರಗಳಲ್ಲಿ ನಿರ್ಣಾಯಕ ಕೌಶಲ್ಯಗಳನ್ನು ಕಲಿಯಲು ಮತ್ತು ವೈಮಾನಿಕ ವಲಯದಲ್ಲಿ ಉದ್ಯೋಗಗಳಿಗೆ ತರಬೇತಿ ನೀಡಲು ಅವಕಾಶಗಳನ್ನು ಒದಗಿಸುತ್ತದೆ. ಯುವತಿಯರಿಗಾಗಿ, ಪ್ರೋಗ್ರಾಂ 150 ಯೋಜಿತ ಸ್ಥಳಗಳಲ್ಲಿ ಸ್ಟೆಮ್  ಪ್ರಯೋಗಾಲಯಗಳನ್ನು ಸೃಷ್ಟಿಸಲಾಗುವುದು, ಈ ಸ್ಟೆಮ್ ವೃತ್ತಿಜೀವನದಲ್ಲಿ ಆಸಕ್ತಿ ಹುಟ್ಟುಹಾಕಲು ಸಹಾಯ ಮಾಡುತ್ತದೆ. ಈ ಕಾರ್ಯಕ್ರಮದಡಿ ಪೈಲಟ್ ಆಗಲು ತರಬೇತಿ ಪಡೆಯುತ್ತಿರುವ ಮಹಿಳೆಯರಿಗೆ ವಿದ್ಯಾರ್ಥಿವೇತನವನ್ನೂ ಸಹ ನೀಡುತ್ತದೆ.

Delighted to inaugurate @Boeing_In's Engineering & Technology Center in Bengaluru. This facility will serve as a hub for innovation and drive advancements in aviation. https://t.co/jqgAT78gwd

— Narendra Modi (@narendramodi) January 19, 2024

बेंगलुरू, भारत के Tech Potential को Global Demand से जोड़ता है।@Boeing_In का ये नया ग्लोबल टेक्नॉलॉजी कैंपस भी बेंगलुरु की इसी पहचान को सशक्त करने वाला है। pic.twitter.com/8b5eQ2lfQ6

— PMO India (@PMOIndia) January 19, 2024

'Make In India, Make For The World' pic.twitter.com/WE2D4RAhEx

— PMO India (@PMOIndia) January 19, 2024

Aviation और Aerospace Sector में हम महिलाओं के लिए नए अवसर बनाने में जुटे हैं। pic.twitter.com/YN5LcL2RTI

— PMO India (@PMOIndia) January 19, 2024

पिछले एक दशक में भारत का aviation market पूरी तरह से transform हो गया है। pic.twitter.com/F8mWkmLaZH

— PMO India (@PMOIndia) January 19, 2024

Boeing और दूसरी International कंपनियों के लिए भी ये सही समय है।

ये उनके लिए भारत की तेज़ growth के साथ अपनी growth को जोड़ने का समय है। pic.twitter.com/7AiYGAstFK

— PMO India (@PMOIndia) January 19, 2024

**



(Release ID: 1997994) Visitor Counter : 84