ಗೃಹ ವ್ಯವಹಾರಗಳ ಸಚಿವಾಲಯ

ಅಭಿಯಂತ್ರಕರ ದಿನದಂದು ತಂತ್ರಜ್ಞರಿಗೆ ಶುಭಾಶಯ ಕೋರಿದ ಕೇಂದ್ರ ಗೃಹ ಸಚಿವರು ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ 


ಖ್ಯಾತ ಅಭಿಯಂತ್ರಕ ಸರ್ ಎಂ ವಿಶ್ವೇಶ್ವರಯ್ಯ ಅವರ ಜಯಂತಿಯಂದು ಅವರಿಗೆ ನಮನ ಸಲ್ಲಿಸಿದ ಗೃಹ ಸಚಿವರು
ಆರ್ಥಿಕತೆಯ ಪ್ರತಿಯೊಂದು ಕ್ಷೇತ್ರಕ್ಕೂ ಕೊಡುಗೆ ನೀಡುವ ಮೂಲಕ ಅಭಿಯಂತ್ರಕರು ರಾಷ್ಟ್ರ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ

ಇತ್ತೀಚಿನ ದಿನಗಳಲ್ಲಿ ಸಾಧಿಸಲಾದ ತಾಂತ್ರಿಕ ಕ್ರಾಂತಿಯಲ್ಲಿನ ಅವರ ಪಾತ್ರ ಜಾಗತಿಕ ವೇದಿಕೆಯಲ್ಲಿ ಭಾರತದ ಪ್ರತಿಷ್ಠೆಯನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ದಿದೆ 

ವಿಶ್ವೇಶ್ವರಯ್ಯ ಅವರು ತಮ್ಮ ಅಪ್ರತಿಮ ತಾಂತ್ರಿಕ ಪ್ರತಿಭೆಯಿಂದ ವಿಶಾಲವಾದ ರಚನೆಗಳನ್ನು ವಿನ್ಯಾಸಗೊಳಿಸಿ, ರೂಪಿಸುವ ಮೂಲಕ ನಮ್ಮ ನಾಗರಿಕತೆಗೆ ಶಕ್ತಿ ತುಂಬಿದರು 

ಅವರ ಕೊಡುಗೆಗಳು ನಮ್ಮ ಹೊಸ ತಲೆಮಾರಿನ ಯುವಜನತೆಯ  ಮನಸ್ಸುಗಳಲ್ಲಿ ಹೊಸ ಕನಸುಗಳಿಗೆ ಪ್ರೇರೇಪಿಸುತ್ತಲೇ ಇರುತ್ತವೆ

Posted On: 15 SEP 2023 1:39PM by PIB Bengaluru

ಅಭಿಯಂತ್ರಕರ ದಿನದಂದು ಕೇಂದ್ರ ಗೃಹ ಸಚಿವರು ಮತ್ತು ಸಹಕಾರ ಸಚಿವರೂ ಆಗಿರುವ ಶ್ರೀ ಅಮಿತ್ ಶಾ ಅವರು ತಂತ್ರಜ್ಞರಿಗೆ ಶುಭಾಶಯ ಕೋರಿದ್ದಾರೆ.  ಖ್ಯಾತ ಅಭಿಯಂತ್ರಕರಾದ ಸರ್ ಎಂ ವಿಶ್ವೇಶ್ವರಯ್ಯ ಅವರ ಜಯಂತಿಯಂದು ಗೃಹ ಸಚಿವರು ನಮನ ಸಲ್ಲಿಸಿದರು. ಸರ್ ಎಂ ವಿಶ್ವೇಶ್ವರಯ್ಯನವರ ಜಯಂತಿಯನ್ನು ಅಭಿಯಂತ್ರಕರ ದಿನವನ್ನಾಗಿ ಆಚರಿಸಲಾಗುತ್ತದೆ.

 "ಅಭಿಯಂತ್ರಕರು ಆರ್ಥಿಕತೆಯ ಪ್ರತಿಯೊಂದು ಕ್ಷೇತ್ರಕ್ಕೂ ಕೊಡುಗೆ ನೀಡುವ ಮೂಲಕ ರಾಷ್ಟ್ರ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಸಾಧಿಸಲಾದ ತಾಂತ್ರಿಕ ಕ್ರಾಂತಿಯಲ್ಲಿನ ಅವರ ಪಾತ್ರ ಜಾಗತಿಕ ವೇದಿಕೆಯಲ್ಲಿ ಭಾರತದ ಪ್ರತಿಷ್ಠೆಯನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ದಿದೆ. ನಮ್ಮ ರಾಷ್ಟ್ರದ ಕನಸುಗಳ ಈಡೇರಿಕೆಗೆ ಕೊಡುಗೆ ನೀಡುವಂತೆ ಈ ದಿನ ಅವರನ್ನು ಮತ್ತಷ್ಟು ಪ್ರೇರೇಪಿಸಲಿ” ಎಂದು 'X' ನಲ್ಲಿನ ತಮ್ಮ ಪೋಸ್ಟ್ ‌ನಲ್ಲಿ, ಶ್ರೀ ಅಮಿತ್ ಶಾ ಅವರು ಬರೆದಿದ್ದಾರೆ. 
 “ವಿಶಾಲವಾದ ರಚನೆಗಳನ್ನು ವಿನ್ಯಾಸಗೊಳಿಸಿ, ರೂಪಿಸುವ ಮೂಲಕ ನಮ್ಮ ನಾಗರಿಕತೆಯನ್ನು ತಮ್ಮ ಅಪ್ರತಿಮ ಅಭಿಯಂತ್ರಕ ಪ್ರತಿಭೆಯಿಂದ ವಿಶ್ವೇಶ್ವರಯ್ಯ ಅವರು ಸಬಲಗೊಳಿಸಿದ್ದಾರೆ,  ಅವರ ಕೊಡುಗೆಗಳು ನಮ್ಮ ಹೊಸ ಪೀಳಿಗೆಯ ಯುವಜನರ ಮನಸ್ಸಿನಲ್ಲಿ ಹೊಸ  ಕನಸುಗಳಿಗೆ  ಪ್ರೇರೇಪಿಸುತ್ತಲೇ ಇರುತ್ತವೆ” ಎಂದು 'X' ನಲ್ಲಿನ ತಮ್ಮ ಮತ್ತೊಂದು ಪೋಸ್ಟ್ ‌ನಲ್ಲಿ, ಕೇಂದ್ರ ಗೃಹ ಸಚಿವರು ಮತ್ತು ಸಹಕಾರ ಸಚಿವರು ಹೇಳಿದ್ದಾರೆ. 

 

​​​​

*****



(Release ID: 1957765) Visitor Counter : 90