ಪ್ರಧಾನ ಮಂತ್ರಿಯವರ ಕಛೇರಿ

ಉತ್ತರ ಪ್ರದೇಶದ ಝಾನ್ಸಿಯಲ್ಲಿ ನೀರಿನ ಸಂರಕ್ಷಣೆ ಮತ್ತು ಅಂತರ್ಜಲ ಮಟ್ಟವನ್ನು ಹೆಚ್ಚಿಸುವ ಪ್ರಯತ್ನಕ್ಕೆ ಪ್ರಧಾನಿ ಶ್ಲಾಘನೆ

Posted On: 05 SEP 2023 8:18PM by PIB Bengaluru

ಉತ್ತರ ಪ್ರದೇಶದ ಝಾನ್ಸಿಯಲ್ಲಿ ಜಲ ಸಂರಕ್ಷಣೆ ಮತ್ತು ಅಂತರ್ಜಲ ಮಟ್ಟವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಸಾರ್ವಜನಿಕ ಸಹಭಾಗಿತ್ವದ ಮೂಲಕ ಮಾಡುತ್ತಿರುವ ಪ್ರಯತ್ನಗಳಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಶ್ಲಾಘಿಸಿದ್ದಾರೆ. ಈ ಉದಾತ್ತ ಕಾರ್ಯದಲ್ಲಿ ಭಾಗಿಯಾದ ಪ್ರತಿಯೊಬ್ಬರನ್ನು ಅವರು ಅಭಿನಂದಿಸಿದ್ದಾರೆ. 

ಅಳಿವಿನಂಚಿನಲ್ಲಿರುವ ನದಿಗಳ ಪುನರುಜ್ಜೀವನ ಮತ್ತು ಕ್ಷೇತ್ರದಲ್ಲಿ ವಿವಿಧ ಅಮೃತ್ ಸರೋವರಗಳ ನಿರ್ಮಾಣದ ಕುರಿತು ಝಾನ್ಸಿ ಸಂಸದರ ಟ್ವೀಟ್ ಗೆ ಪ್ರತಿಕ್ರಿಯಿಸಿದ ಪ್ರಧಾನ ಮಂತ್ರಿಗಳು,

"ಉತ್ತರ ಪ್ರದೇಶದ ಝಾನ್ಸಿ ಕ್ಷೇತ್ರದಲ್ಲಿ ನೀರಿನ ಸಂರಕ್ಷಣೆ ಮತ್ತು ಅಂತರ್ಜಲ ಮಟ್ಟವನ್ನು ಹೆಚ್ಚಿಸುವ ಈ ಸಾರ್ವಜನಿಕ ಸಹಭಾಗಿತ್ವದ ಪ್ರಯತ್ನಗಳಿಂದ ಸಿಕ್ಕಿರುವ ಫಲಿತಾಂಶಗಳನ್ನು ನೋಡಿದರೆ ಬಹಳ ಉತ್ತೇಜನಕಾರಿಯಾಗಿದೆ ಮತ್ತು ಇಡೀ ದೇಶಕ್ಕೆ ಉದಾಹರಣೆಯಾಗಿದೆ. ಈ ಉದಾತ್ತ ಉದ್ದೇಶದಲ್ಲಿ ಕೈಜೋಡಿಸಿರುವ ಎಲ್ಲರಿಗೂ ನನ್ನ ಅಭಿನಂದನೆಗಳು! ” ಎಂದು ಬರೆದುಕೊಂಡಿದ್ದಾರೆ

 

***



(Release ID: 1955058) Visitor Counter : 99