ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಉತ್ತರಾಖಂಡ ಸರ್ಕಾರದ ಸಚಿವರಾದ ಶ್ರೀ ಚಂದನ್ ರಾಮ್ ದಾಸ್ ಅವರ ನಿಧನಕ್ಕೆ ಪ್ರಧಾನಮಂತ್ರಿ ಸಂತಾಪ

ಪ್ರಕಟಣಾ ದಿನಾಂಕ: 26 APR 2023 6:37PM by PIB Bengaluru

ಉತ್ತರಾಖಂಡ ಸರ್ಕಾರದ ಸಚಿವರಾದ  ಶ್ರೀ ಚಂದನ್ ರಾಮ್ ದಾಸ್ ಅವರ ನಿಧನಕ್ಕೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ  ಪ್ರಧಾನ ಮಂತ್ರಿ ಅವರು ಟ್ವೀಟ್  ಮಾಡಿದ್ದಾರೆ.ಅದರಲ್ಲಿ;

"ಉತ್ತರಾಖಂಡ ಸರ್ಕಾರದ ಸಚಿವ ಶ್ರೀ ಚಂದನ್ ರಾಮ್ ದಾಸ್ ಜಿ ಅವರ ನಿಧನದಿಂದ ದುಃಖಿತನಾಗಿದ್ದೇನೆ. ಅವರು ಉತ್ತರಾಖಂಡದ ಅಭಿವೃದ್ಧಿಗೆ ಗಮನಾರ್ಹ ಕೊಡುಗೆ ನೀಡಿದ್ದರು ಮತ್ತು ಜನರಿಗೆ ಬಹಳ ಶ್ರದ್ಧೆಯಿಂದ ಸೇವೆ ಸಲ್ಲಿಸಿದ್ದರು. ಅವರ ಕುಟುಂಬ ಮತ್ತು ಬೆಂಬಲಿಗರಿಗೆ ನನ್ನ ಸಂತಾಪಗಳು. ಓಂ ಶಾಂತಿ." ಎಂದು ಹೇಳಿದ್ದಾರೆ.

****


(ಪ್ರಕಟಣೆ ಐ.ಡಿ.: 1921375) ವಿಸಿಟರ್ ಕೌಂಟರ್ : 144