ಪ್ರಧಾನ ಮಂತ್ರಿಯವರ ಕಛೇರಿ

ಶ್ರೀ ಅಯ್ಯ ವೈಕುಂಡ ಸ್ವಾಮಿಕಲ್ ಅವರ ಜನ್ಮದಿನದಂದು ಅವರಿಗೆ ಗೌರವ ಸಲ್ಲಿಸಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ 

Posted On: 12 MAR 2023 2:31PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಶ್ರೀ ಅಯ್ಯ ವೈಕುಂಡ ಸ್ವಾಮಿಕಲ್ ಜಯಂತಿಯಂದು ಅವರಿಗೆ ನಮನ ಸಲ್ಲಿಸಿದ್ದಾರೆ. 

ಈ ಕುರಿತು ಟ್ವೀಟ್ ಮಾಡಿದ ಪ್ರಧಾನ ಮಂತ್ರಿಗಳು:

"ಶ್ರೀ ಅಯ್ಯ ವೈಕುಂಡ ಸ್ವಾಮಿಕಲ್ ಜನ್ಮಜಯಂತಿಯಂದು ಅವರಿಗೆ ನಮನಗಳು. ಅವರು ಇತರರ ಸೇವೆಗೆ ಮತ್ತು ಎಲ್ಲರನ್ನೂ ಒಳಗೊಳ್ಳುವ ಮತ್ತು ನ್ಯಾಯಯುತವಾದ ಸಮಾಜವನ್ನು ಪೋಷಿಸಲು ತಮ್ಮನ್ನು ಅರ್ಪಿಸಿಕೊಂಡಿದ್ದರು. ದೀನದಲಿತರನ್ನು ಸಬಲೀಕರಣಗೊಳಿಸಲು ಹಲವಾರು ಪ್ರಯತ್ನಗಳನ್ನು ಕೈಗೊಂಡರು. ಅವರ ಆಲೋಚನೆಗಳು ಇಂದಿನ ಮತ್ತು ಮುಂದಿನ ಪೀಳಿಗೆಯ ಜನರನ್ನು ಪ್ರೇರೇಪಿಸುತ್ತವೆ." ಎಂದು ಬರೆದಿದ್ದಾರೆ.

***



(Release ID: 1906157) Visitor Counter : 109