ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯ
azadi ka amrit mahotsav

ಗ್ರಾಹಕ ವ್ಯವಹಾರಗಳ ಇಲಾಖೆಯು 156 ಸಾರ್ವಜನಿಕ ಕುಂದುಕೊರತೆ ಮೇಲ್ಮನವಿಗಳನ್ನು ವಿಲೇವಾರಿ ಮಾಡಿದೆ ಮತ್ತು ವಿಶೇಷ ಅಭಿಯಾನ 2.0 ಅಡಿಯಲ್ಲಿ 70% ಸಾರ್ವಜನಿಕ ಕುಂದುಕೊರತೆಗಳ ಮನವಿಗೆ ಸ್ಪಂದಿಸಲಾಗಿದೆ  


​​​​​​​ಅಭಿಯಾನದ ಅಡಿಯಲ್ಲಿ ಸಂಪೂರ್ಣ ಡಿಜಿಟಲೀಕರಣದ ನಂತರ 7061 ಭೌತಿಕ ಕಡತಗಳನ್ನು ತೆಗೆದುಹಾಕಲಾಯಿತು

ಪ್ರಧಾನ ಕಛೇರಿ ಮತ್ತು ಇತರ ಕಛೇರಿಗಳಲ್ಲಿ ಗಿಡ ನೆಡುವಿಕೆಯ ಕಾರ್ಯಕ್ರಮವನ್ನು ಕೈಗೊಳ್ಳಲಾಯಿತು

Posted On: 28 OCT 2022 12:28PM by PIB Bengaluru

ಗ್ರಾಹಕರ ವ್ಯವಹಾರಗಳ ಇಲಾಖೆಯು ದೇಶಾದ್ಯಂತ ಕಚೇರಿಗಳು, ಕಚೇರಿ ಆವರಣಗಳು ಮತ್ತು ಸಂಸ್ಥೆಗಳಲ್ಲಿ ಸ್ವಚ್ಛತೆಗೆ ಸಂಬಂಧಿಸಿದ ವಿಶೇಷ ಅಭಿಯಾನ 2.0 ನಲ್ಲಿ ಭಾಗವಹಿಸುತ್ತಿದೆ.  ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್, ನ್ಯಾಷನಲ್ ಟೆಸ್ಟ್ ಹೌಸ್, ನ್ಯಾಷನಲ್ ಕನ್ಸ್ಯೂಮರ್ ಕೋಆಪರೇಟಿವ್ ಫೆಡರೇಶನ್ ಮತ್ತು ನ್ಯಾಷನಲ್ ಕನ್ಸ್ಯೂಮರ್ ಕಮಿಷನ್ಗಳ ಒಟ್ಟು 73 ಕಛೇರಿಗಳನ್ನು ಗುರುತಿಸಲಾಗಿದ್ದು, ಅಲ್ಲಿ ಅಭಿಯಾನಕ್ಕೆ ಸಂಬಂಧಿಸಿದ ಚಟುವಟಿಕೆಗಳು ಅಕ್ಟೋಬರ್ 2 ರಂದು ಪ್ರಾರಂಭವಾಗಿದ್ದು ಅಕ್ಟೋಬರ್ 31, 2022 ರಂದು ಮುಕ್ತಾಯಗೊಳ್ಳಲಿದೆ.

ಇಲಾಖೆಯು ಈ ವಿಶೇಷ ಅಭಿಯಾನ 2.0 ಗಾಗಿ ಪೂರ್ವಸಿದ್ಧತಾ ಹಂತವನ್ನು ಗಮನಿಸಿದೆ, ಇದರಲ್ಲಿ ಸ್ವಚ್ಛತಾ ಅಭಿಯಾನದ ಸಮಯದಲ್ಲಿ ಗಮನಹರಿಸಬೇಕಾದ ವಸ್ತುಗಳು ಮತ್ತು ತೆಗೆದು ಹಾಕಬೇಕಾದ ದಾಖಲೆಗಳನ್ನು ನಿರ್ಧರಿಸಲಾಯಿತು ಮತ್ತು ಎಲ್ಲಾ 73 ಸ್ಥಳಗಳಲ್ಲಿ ಕೇಂದ್ರ ಲೋಕೋಪಯೋಗಿ ಇಲಾಖೆ (ಸಿಪಿಡಬ್ಲ್ಯೂಡಿ) ಮತ್ತು ಇತರ ನಿರ್ವಹಣಾ ಗುತ್ತಿಗೆದಾರರೊಂದಿಗೆ ಚರ್ಚಿಸಲಾಯಿತು.

ಈ ಅಭಿಯಾನದ ಸಮಯದಲ್ಲಿ, ಗೌರವಾನ್ವಿತ ಸಂಸತ್ತಿನ ಸದಸ್ಯರಿಂದ ಪಡೆದ ಎಲ್ಲಾ ಐದು ಪ್ರಶ್ನೆಗಳಿಗೆ ಉತ್ತರಿಸಲಾಗಿದೆ, ಎರಡು ಅಂತರ-ಸಚಿವಾಲಯದ ಪ್ರಶ್ನೆಗಳ ಕುರಿತು ಟಿಪ್ಪಣಿಗಳನ್ನು ನೀಡಲಾಗಿದೆ. 26.10.2022 ರವರೆಗೆ ಇದ್ದ 1516 ಸಾರ್ವಜನಿಕ ಕುಂದುಕೊರತೆಗಳಿಗೆ, 1074 (70%) ಕ್ಕೆ  ತೃಪ್ತಿಕರವಾಗಿ ಉತ್ತರಿಸಲಾಗಿದೆ ಮತ್ತು 156 ಸಾರ್ವಜನಿಕ ಕುಂದುಕೊರತೆಗಳ ಮೇಲ್ಮನವಿಗಳನ್ನು ವಿಲೇವಾರಿ ಮಾಡಲಾಗಿದೆ.

ದಾಖಲೆಗಳ ನಿರ್ವಹಣೆಗೆ ಸಂಬಂಧಿಸಿದಂತೆ, 15,285 ಭೌತಿಕ ಕಡತ (ಫೈಲ್) ಗಳನ್ನು ಗುರುತಿಸಲಾದ್ದು, 13,131 ಕಡತಗಳನ್ನು ಪರಿಶೀಲಿಸಿದ ನಂತರ 7,061 ಭೌತಿಕ ಕಡತಗಳನ್ನು  ಅವುಗಳ ಡಿಜಿಟಲೀಕರಣದ ನಂತರ ಸಂಪೂರ್ಣವಾಗಿ ತೆಗೆದುಹಾಕಲಾಗಿದೆ. ಇ-ಆಫೀಸ್ ವಿಭಾಗದ ಅಡಿಯಲ್ಲಿ 602 ಇ-ಫೈಲ್ಗಳನ್ನು ಪರಿಶೀಲಿಸಲಾಗಿದೆ ಮತ್ತು 473 ಇ-ಫೈಲ್ಗಳನ್ನು ಮುಚ್ಚಲಾಗಿದೆ. ಹೀಗಾಗಿ, 86% ಗುರುತಿಸಲಾದ ದಾಖಲೆಗಳನ್ನು ಇಲ್ಲಿಯವರೆಗೆ ಮುಚ್ಚಲಾಗಿದೆ. ಅಭಿಯಾನದ ಸಮಯದಲ್ಲಿ, ಸ್ಕ್ರ್ಯಾಪ್ ಮಾರಾಟದ ಮೂಲಕ  ರೂ. 2,38,268/-  ದೊರೆಕಿದೆ.  ಸ್ಕ್ರ್ಯಾಪ್ ತೆರವಿನಿಂದಾಗಿ 5121 ಚದರ ಅಡಿ ಜಾಗವನ್ನು ಮುಕ್ತಗೊಳಿಸಲು ಸಾಧ್ಯವಾಗಿದೆ.

ಇಲಾಖೆಯಿಂದ ದೇಶಾದ್ಯಂತ ತಮ್ಮ ಕಚೇರಿ ಆವರಣದಲ್ಲಿ ಗಿಡ ನೆಡಲು ವಿಶೇಷ ಅಭಿಯಾನ ನಡೆಸಲಾಗಿದೆ. ಇದರ ಪರಿಣಾಮವಾಗಿ, ಐಐಎಲ್ಎಮ್, ಎನ್ಟಿಎಚ್ ಮತ್ತು ಬಿಐಎಸ್  ಕ್ಯಾಂಪಸ್ಗಳಲ್ಲಿ 500 ಗಿಡ ನೆಡುವಿಕೆಯ ಕಾರ್ಯಕ್ರಮವನ್ನು ಕೈಗೊಳ್ಳಲಾಗಿದೆ ಮತ್ತು ಎಲ್ಲಾ ಕ್ಯಾಂಪಸ್ಗಳಲ್ಲಿ ಇಂಧನ ದಕ್ಷತೆಯ ಬೆಳಕಿನ ಬಳಕೆ ಮತ್ತು ಬೆಳಕಿನ ಫಿಟ್ಟಿಂಗ್ಗಳನ್ನು ಎಲ್ಇಡಿ ಲೈಟ್ ಫಿಟ್ಟಿಂಗ್ಗಳೊಂದಿಗೆ ಬದಲಾಯಿಸಲು ವಿಶೇಷ ಚಾಲನೆಯನ್ನು ಮಾಡಲಾಗಿದೆ.

ಉತ್ತಮ ಅಭ್ಯಾಸಗಳಲ್ಲಿ, ಅಧೀನ ಸಂಸ್ಥೆಗಳು ನಿಯಮಿತವಾಗಿ ಸ್ಕ್ರ್ಯಾಪ್ ವಿಲೇವಾರಿಗಾಗಿ ಎಂಎಸ್ಟಿಸಿ (ಭಾರತದ ಸರ್ಕಾರ ಎಂಟರ್ಪ್ರೈಸಸ್) ಯೊಂದಿಗೆ ತಿಳುವಳಿಕೆ ಒಪ್ಪಂದಕ್ಕೆ ಸಹಿ ಹಾಕಿವೆ ಮತ್ತು ಇ-ದಾಖಿಲ್ ಪೋರ್ಟಲ್ ಮೂಲಕ ವಿದ್ಯುನ್ಮಾನವಾಗಿ ಗ್ರಾಹಕ ಆಯೋಗದೊಂದಿಗೆ ದೂರುಗಳನ್ನು ನೋಂದಾಯಿಸುವ ಬಗ್ಗೆ ಜಾಗೃತಿ ಚಿಹ್ನೆಯ ಬ್ಯಾನರ್ ನೊಂದಿಗೆ ಮಾರುಕಟ್ಟೆ ಸ್ಥಳದಲ್ಲಿ ಗ್ರಾಹಕರಿಗೆ ಜಾಗೃತಿ ಅಭಿಯಾನವನ್ನು ಸಹ ನಡೆಸಿದೆ.

ಅಭಿಯಾನದ ಸಮಯದಲ್ಲಿ ಮತ್ತು ಪೂರ್ವಸಿದ್ಧತಾ ಹಂತದಲ್ಲಿ 5 ನೇ ಅಂತಸ್ತಿನಲ್ಲಿ ಮರುರೂಪಿಸಲಾದ ವಿಭಾಗವನ್ನು ರಚಿಸಲಾಗಿದೆ, ಅಲ್ಲಿ ಹಿಂದಿನ ಅಭಿಯಾನದಲ್ಲಿ ಧಾನ್ಯ ಪರೀಕ್ಷಾ ಪ್ರಯೋಗಾಲಯವಿತ್ತು ಮತ್ತು ಮಾನ್ಯ ಸಚಿವರ ನಿರ್ದೇಶನದ ಮೇರೆಗೆ ಧಾನ್ಯ ಪರೀಕ್ಷಾ ಪ್ರಯೋಗಾಲಯವನ್ನು ಕೊಠಡಿ ಸಂಖ್ಯೆ 545 ರಿಂದ  ಘಾಜಿಯಾಬಾದ್ನಲ್ಲಿರುವ  ಎನ್ಟಿಎಚ್ ಗೆ ವರ್ಗಾಯಿಸಲಾಯಿತು ಮತ್ತು ಇಡೀ ಕೊಠಡಿಯನ್ನು ಯುವ ವೃತ್ತಿಪರರು ಮತ್ತು ಇಲಾಖೆಯ ಇತರ ಅಧಿಕಾರಿಗಳು ಬಳಸಲು ನವೀಕರಿಸಲಾಗಿದೆ.

*****


(Release ID: 1871682)