ಪ್ರಧಾನ ಮಂತ್ರಿಯವರ ಕಛೇರಿ

ಬಾಪು ಅವರ ನೇತೃತ್ವದಲ್ಲಿ ಭಾರತ ಬಿಟ್ಟು ತೊಲಗಿ ಚಳವಳಿಯಲ್ಲಿ ಭಾಗವಹಿಸಿದ ಎಲ್ಲರನ್ನು ಸ್ಮರಿಸಿದ ಪ್ರಧಾನಿ

Posted On: 09 AUG 2022 9:35AM by PIB Bengaluru

ಬಾಪು ಅವರ ನೇತೃತ್ವದಲ್ಲಿ ಭಾರತ ಬಿಟ್ಟು ತೊಲಗಿ ಚಳವಳಿಯಲ್ಲಿ ಭಾಗವಹಿಸಿ ನಮ್ಮ ಸ್ವಾತಂತ್ರ್ಯ ಹೋರಾಟವನ್ನು ಬಲಪಡಿಸಿದ ಎಲ್ಲರನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಸ್ಮರಿಸಿದ್ದಾರೆ.

ಈ ಕುರಿತು ಅವರು ಸರಣಿ ಟ್ವೀಟ್‌ ಮಾಡಿದ್ದಾರೆ.

"ಬಾಪು ಅವರ ನೇತೃತ್ವದಲ್ಲಿ ಭಾರತ ಬಿಟ್ಟು ತೊಲಗಿ ಚಳುವಳಿಯಲ್ಲಿ ಭಾಗವಹಿಸಿ ನಮ್ಮ ಸ್ವಾತಂತ್ರ್ಯ ಹೋರಾಟವನ್ನು ಬಲಪಡಿಸಿದ ಎಲ್ಲರನ್ನು ಸ್ಮರಿಸುತ್ತಿದ್ದೇವೆ."

"ಬಾಂಬೆಯಲ್ಲಿ ಭಾರತ ಬಿಟ್ಟು ತೊಲಗಿ ಚಳವಳಿಯ ಪ್ರಾರಂಭದ ಸಮಯದಲ್ಲಿ ಮಹಾತ್ಮ ಗಾಂಧಿಯವರ ಚಿತ್ರ ಇಲ್ಲಿದೆ. (ನೆಹರೂ ಸ್ಮಾರಕ ಸಂಗ್ರಹದಿಂದ)"

"ಆಗಸ್ಟ್ 9 ನಮ್ಮ ರಾಷ್ಟ್ರೀಯ ಕ್ರಾಂತಿಯ ಜ್ವಲಂತ ಸಂಕೇತವಾಗಿದೆ" ಎಂದು ಲೋಕನಾಯಕ ಜಯಪ್ರಕಾಶ್‌ ನಾರಾಯಣ್ ಹೇಳಿದರು.

ಬಾಪು ಅವರಿಂದ ಪ್ರೇರಿತವಾದ ಭಾರತ ಬಿಟ್ಟು ತೊಲಗಿ ಚಳವಳಿಯು ಜೆಪಿ ಮತ್ತು ಡಾ. ಲೋಹಿಯಾ ಅವರಂತಹ ಶ್ರೇಷ್ಠ ನಾಯಕರು ಸೇರಿದಂತೆ ಸಮಾಜದ ಎಲ್ಲಾ ವರ್ಗಗಳ ಜನರ ಗಮನಾರ್ಹ ಭಾಗವಹಿಸುವಿಕೆಗೆ ಸಾಕ್ಷಿಯಾಯಿತು ಎಂದು ಪ್ರಧಾನಿಯವರು ಹೇಳಿದ್ದಾರೆ.

 

ಬಾಪು ಅವರ ನೇತೃತ್ವದಲ್ಲಿ ಭಾರತ ಬಿಟ್ಟು ತೊಲಗಿ ಚಳವಳಿಯಲ್ಲಿ ಭಾಗವಹಿಸಿ ನಮ್ಮ ಸ್ವಾತಂತ್ರ್ಯ ಹೋರಾಟವನ್ನು ಬಲಪಡಿಸಿದ ಎಲ್ಲರನ್ನು ಸ್ಮರಿಸುತ್ತಿದ್ದೇವೆ. pic.twitter.com/cWWB7KX57G

— ನರೇಂದ್ರ ಮೋದಿ (@narendramodi) ಆಗಸ್ಟ್ 9, 2022

 

ಬಾಂಬೆಯಲ್ಲಿ ಭಾರತ ಬಿಟ್ಟು ತೊಲಗಿ ಚಳವಳಿಯ ಪ್ರಾರಂಭದ ಸಮಯದಲ್ಲಿ ಮಹಾತ್ಮ ಗಾಂಧಿಯವರ ಚಿತ್ರ ಇಲ್ಲಿದೆ. (ನೆಹರೂ ಸ್ಮಾರಕ ಸಂಗ್ರಹದಿಂದ) pic.twitter.com/SRaar2c5iO

— ನರೇಂದ್ರ ಮೋದಿ (@narendramodi) ಆಗಸ್ಟ್ 9, 2022

 

"ಆಗಸ್ಟ್ 9 ನಮ್ಮ ರಾಷ್ಟ್ರೀಯ ಕ್ರಾಂತಿಯ ಜ್ವಲಂತ ಸಂಕೇತವಾಗಿದೆ" ಎಂದು ಲೋಕನಾಯಕ ಜೆಪಿ ಹೇಳಿದರು.

ಬಾಪು ಅವರಿಂದ ಪ್ರೇರಿತವಾದ ಭಾರತ ಬಿಟ್ಟು ತೊಲಗಿ ಚಳವಳಿಯು ಜೆಪಿ ಮತ್ತು ಡಾ. ಲೋಹಿಯಾ ಅವರಂತಹ ಶ್ರೇಷ್ಠ ನಾಯಕರು ಸೇರಿದಂತೆ ಸಮಾಜದ ಎಲ್ಲಾ ವರ್ಗಗಳ ಜನರ ಗಮನಾರ್ಹ ಭಾಗವಹಿಸುವಿಕೆಗೆ ಸಾಕ್ಷಿಯಾಯಿತು. pic.twitter.com/zEldZhkRHp

— ನರೇಂದ್ರ ಮೋದಿ (@narendramodi) ಆಗಸ್ಟ್ 9, 2022

 

*********

 



(Release ID: 1850413) Visitor Counter : 134