ಪ್ರಧಾನ ಮಂತ್ರಿಯವರ ಕಛೇರಿ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಪ್ರೊ. ಭೀಮ್ ಸಿಂಗ್ ಅವರ ನಿಧನಕ್ಕೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

Posted On: 31 MAY 2022 12:06PM by PIB Bengaluru

ಜಮ್ಮು ಮತ್ತು ಕಾಶ್ಮೀರದ ಕಲ್ಯಾಣಕ್ಕಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟ ಒಬ್ಬ ತಳಮಟ್ಟದ ನಾಯಕರಾಗಿ ಪ್ರೊ.ಭೀಮ್ ಸಿಂಗ್ ಜಿ  ನೆನಪಾಗುತ್ತಾರೆ ಎಂದು ಶ್ರೀ ನರೇಂದ್ರ ಮೋದಿ ಹೇಳಿದ್ದಾರೆ‌ 
ಪ್ರಧಾನಮಂತ್ರಿ ತಮ್ಮ‌ ಟ್ವೀಟ್ ಸಂದೇಶದಲ್ಲಿ " ಪ್ರೊ.ಭೀಮ್ ಸಿಂಗ್ ಜಿ ಅವರು ಜಮ್ಮು ಮತ್ತು ಕಾಶ್ಮೀರದ ಕಲ್ಯಾಣಕ್ಕಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟ ತಳಮಟ್ಟದ ನಾಯಕರಾಗಿ ನೆನಪಾಗುತ್ತಾರೆ‌.  ಅವರು ಅಧ್ಯನಶೀಲರು ಮತ್ತು ವಿದ್ವತ್ ಪೂರ್ಣರಾಗಿದ್ದರು.  ನಾನು ಅವರೊಂದಿಗೆ ನಡೆಸಿದ ಸಂವಾದವನ್ನು ಸದಾ ನೆನಪಿಸಿಕೊಳ್ಳುತ್ತೇನೆ. ಅವರ ನಿಧನದಿಂದ ದುಃಖವಾಗಿದೆ. ಅವರ ಕುಟುಂಬಕ್ಕೆ ಮತ್ತು ಅನುಯಾಯಿಗಳಿಗೆ  ಸಂತಾಪಗಳು. ಓಂ ಶಾಂತಿ" ಎಂದು ಹೇಳಿದ್ದಾರೆ.

 

***



(Release ID: 1830059) Visitor Counter : 145