ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

ಕೋವಿಡ್-19: ಸುಳ್ಳು ಮತ್ತು ಸತ್ಯ


ಎಲ್ಐಸಿ ಐಪಿಒ ಅಂಕಿಅಂಶಗಳು 2021 ರಲ್ಲಿನ ಬೃಹತ್ ಸಾವಿನ ಸಂಖ್ಯೆಗಳನ್ನು ದೃಢೀಕರಿಸುತ್ತದೆ ಎಂಬ ಮಾಧ್ಯಮ ವರದಿಗಳು ಊಹಾಪೋಹ ಮತ್ತು ಆಧಾರಹಿತವಾದುವು

Posted On: 19 FEB 2022 12:47PM by PIB Bengaluru

ಎಲ್‌ಐಸಿಯ ಐಪಿಒಗೆ ಸಂಬಂಧಿಸಿದಂತೆ ಮಾಧ್ಯಮ ವರದಿಯೊಂದು ಪ್ರಕಟವಾಗಿದೆ, ಅದರಲ್ಲಿ ಎಲ್‌ಐಸಿ ಇತ್ಯರ್ಥಪಡಿಸಿದ ಪಾಲಿಸಿಗಳು ಮತ್ತು ಕ್ಲೈಮ್‌ಗಳ ವಿವರಗಳನ್ನು ನೀಡುವಾಗ, ಕೋವಿಡ್ -19 ಸಂಬಂಧಿತ ಮರಣಗಳು ಅಧಿಕೃತ ದಾಖಲೆಗಳಿಗಿಂತ ಹೆಚ್ಚಿರಬಹುದು ಎಂದು ಊಹಾಪೋಹ ಮತ್ತು ಪಕ್ಷಪಾತದ ವ್ಯಾಖ್ಯಾನವನ್ನು ಮಾಡಲಾಗಿದೆ. ಈ ವರದಿಗಳು ಊಹಾಪೋಹದಿಂದ ಕೂಡಿವೆ ಮತ್ತು ಆಧಾರರಹಿತವಾಗಿವೆ ಎಂದು ಸ್ಪಷ್ಟಪಡಿಸಲಾಗಿದೆ.

ಎಲ್‌ಐಸಿ ಇತ್ಯರ್ಥಪಡಿಸಿದ ಕ್ಲೈಮ್‌ಗಳು ಪಾಲಿಸಿದಾರರು ಇತರ ಎಲ್ಲಾ ಕಾರಣಗಳಿಂದ ಸಾವನ್ನಪ್ಪಿದ ಜೀವ ವಿಮಾ ಪಾಲಿಸಿಗಳಿಗೆ ಸಂಬಂಧಿಸಿವೆ, ಆದರೆ ಇದು ಕೋವಿಡ್ ಸಾವುಗಳು ಕಡಿಮೆ ವರದಿಯಾಗಿರುವುದನ್ನು ಸೂಚಿಸುತ್ತದೆ ಎಂದು ಮಾಧ್ಯಮ ವರದಿಗಳು ತೀರ್ಮಾನಿಸುತ್ತವೆ. ಈ ರೀತಿಯ ದೋಷಪೂರಿತ ವ್ಯಾಖ್ಯಾನವು ಸತ್ಯಗಳನ್ನು ಆಧರಿಸಿಲ್ಲ ಮತ್ತು ಲೇಖಕರ ಪಕ್ಷಪಾತವನ್ನು ಎತ್ತಿ ತೋರಿಸುತ್ತದೆ. ಭಾರತದಲ್ಲಿ ಕೋವಿಡ್-19 ಸಾವುಗಳು ಸಾಂಕ್ರಾಮಿಕ ರೋಗದ ಆರಂಭದಿಂದಲೂ ಸಾರ್ವಜನಿಕ ಡೊಮೇನ್‌ನಲ್ಲಿ ಪ್ರತಿದಿನ ಹೇಗೆ ಸಂಕಲಿಸಲಾಗಿದೆ ಮತ್ತು ಪ್ರಕಟಿಸಲಾಗಿದೆ ಎಂಬ ಬಗೆಗಿರುವ ತಿಳುವಳಿಕೆಯ ಕೊರತೆಯನ್ನು ಇದು ತಿಳಿಸುತ್ತದೆ.

ಕೋವಿಡ್-19 ಸಾವುಗಳನ್ನು ವರದಿ ಮಾಡುವ ಅತ್ಯಂತ ಪಾರದರ್ಶಕ ಮತ್ತು ಪರಿಣಾಮಕಾರಿ ವ್ಯವಸ್ಥೆಯನ್ನು ಭಾರತ ಹೊಂದಿದೆ. ಗ್ರಾಮ ಪಂಚಾಯತ್ ಮಟ್ಟದಿಂದ ಜಿಲ್ಲಾ ಮತ್ತು ರಾಜ್ಯ ಮಟ್ಟದವರೆಗೆ ಸಾವುಗಳ ವರದಿಯ ಪ್ರಕ್ರಿಯೆಯನ್ನು ಮೇಲ್ವಿಚಾರಣೆ ಮಾಡಲಾಗುತ್ತದೆ ಮತ್ತು ಪಾರದರ್ಶಕವಾಗಿ ಕೈಗೊಳ್ಳಲಾಗುತ್ತದೆ. ಇದಲ್ಲದೆ, ಸಾವುಗಳನ್ನು ಪಾರದರ್ಶಕ ರೀತಿಯಲ್ಲಿ ವರದಿ ಮಾಡುವ ಏಕೈಕ ಉದ್ದೇಶದಿಂದ, ಭಾರತ ಸರ್ಕಾರವು ಕೋವಿಡ್ ಸಾವುಗಳನ್ನು ವರ್ಗೀಕರಿಸಲು ಜಾಗತಿಕವಾಗಿ ಗುರುತಿಸಲ್ಪಟ್ಟ ವರ್ಗೀಕರಣ ವಿಧಾನವನ್ನು ಅಳವಡಿಸಿಕೊಂಡಿದೆ. ಹಾಗೆ ಅಳವಡಿಸಿಕೊಂಡ ಮಾದರಿಯಲ್ಲಿ, ರಾಜ್ಯಗಳ ಸ್ವತಂತ್ರ ವರದಿಯ ಆಧಾರದ ಮೇಲೆ ಭಾರತದಲ್ಲಿನ ಒಟ್ಟು ಸಾವುಗಳ ಸಂಕಲನವನ್ನು ಕೇಂದ್ರವು ಕೈಗೊಳ್ಳುತ್ತದೆ.

ಇದಲ್ಲದೆ, ಭಾರತ ಸರ್ಕಾರವು ರಾಜ್ಯಗಳಿಗೆ ಮರಣದ ಅಂಕಿಅಂಶಗಳನ್ನು ಕಾಲಕಾಲಕ್ಕೆನವೀಕರಿಸಲು ಪದೇ ಪದೇ ಉತ್ತೇಜಿಸುತ್ತದೆ. ಏಕೆಂದರೆ ಈ ಕ್ರಮವು ಸಾಂಕ್ರಾಮಿಕ ರೋಗದ ನಿಜವಾದ ಚಿತ್ರಣವನ್ನು ನೀಡುವ ಮೂಲಕ ಕೋವಿಡ್-19 ಕ್ಕೆ ಸಾರ್ವಜನಿಕ ಆರೋಗ್ಯ ಪ್ರತಿಕ್ರಿಯೆಯ ಪ್ರಯತ್ನಗಳನ್ನು ಹೆಚ್ಚಿಸುತ್ತದೆ. ಇದರ ಜೊತೆಗೆ, ಭಾರತದಲ್ಲಿ ಕೋವಿಡ್ ಸಾವುಗಳನ್ನು ವರದಿ ಮಾಡಲು ಹೆಚ್ಚುವರಿ ಪ್ರೋತ್ಸಾಹವಿದೆ ಎಂಬುದನ್ನು ಗಮನಿಸಬೇಕು. ಏಕೆಂದರೆ ಇದು ಹಣಕಾಸು  ಪರಿಹಾರಕ್ಕೆ ಅರ್ಹವಾಗಿದೆ, ಇದು ಸಾವುಗಳು ಕಡಿಮೆ ವರದಿಯಾಗುವ ಸಾಧ್ಯತೆಯನ್ನು ಇನ್ನಷ್ಟು ಕಡಿಮೆ ಮಾಡುತ್ತದೆ. ಆದ್ದರಿಂದ, ಸಾವುಗಳ ಕಡಿಮೆ ವರದಿಗೆ ಸಂಬಂಧಿಸಿದಂತೆ ಯಾವುದೇ ತೀರ್ಮಾನಕ್ಕೆ ಬರುವುದು ಕೇವಲ ಊಹಾಪೋಹ ಮತ್ತು ಕಲ್ಪನೆಯಾಗುತ್ತದೆ.

ಸಾಂಕ್ರಾಮಿಕ ರೋಗವು ಪ್ರಾರಂಭವಾದಾಗಿನಿಂದ, ಇಡೀ ಸಮಾಜ ಮತ್ತು ಸಂಪೂರ್ಣ ಸರ್ಕಾರದ ವಿಧಾನದ ಅಡಿಯಲ್ಲಿ ಪಾರದರ್ಶಕ ಮತ್ತು ಜವಾಬ್ದಾರಿಯುತ ಸಾರ್ವಜನಿಕ ಆರೋಗ್ಯ ಪ್ರತಿಕ್ರಿಯೆಯನ್ನು ಒದಗಿಸಲು ಕೇಂದ್ರ ಸರ್ಕಾರವು ಬದ್ಧವಾಗಿದೆ. ಭಾರತದಲ್ಲಿ ಕೋವಿಡ್-19 ನಿರ್ವಹಣೆಯ ಶ್ರೇಣೀಕೃತ ವಿಧಾನದ ಪ್ರಮುಖ ಆಧಾರ ಸ್ತಂಭಗಳಲ್ಲಿ ಕೋವಿಡ್-19 ರ ಕಾರಣದಿಂದಾಗಿ ಸಾವುಗಳ ಪಾರದರ್ಶಕ ವರದಿಯಾಗಿದೆ ಮತ್ತು ಕೇಂದ್ರ ಆರೋಗ್ಯ ಸಚಿವಾಲಯವು ಜಿಲ್ಲಾವಾರು ಪ್ರಕರಣಗಳು ಮತ್ತು ಸಾವುಗಳನ್ನು ಮೇಲ್ವಿಚಾರಣೆ ಮಾಡಲು ದೃಢವಾದ ವರದಿ ಮಾಡುವ ಕಾರ್ಯವಿಧಾನದ ಅಗತ್ಯವನ್ನು ನಿಯಮಿತವಾಗಿ ಒತ್ತಿಹೇಳಿದೆ. ದೈನಂದಿನ ಆಧಾರದ ಮೇಲೆ. ಈ ಪ್ರಯತ್ನದಲ್ಲಿ, ಕೇಂದ್ರ ಸರ್ಕಾರವು ಕಾಲಕಾಲಕ್ಕೆ ಕೋವಿಡ್ ನಿರ್ವಹಣೆಯ ವಿವಿಧ ಅಂಶಗಳ ಕುರಿತು ಮಾರ್ಗಸೂಚಿಗಳನ್ನು ನೀಡುತ್ತಿದೆ. ಇದರ ಜೊತೆಗೆ, ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಬಹು ವೇದಿಕೆಗಳು, ಔಪಚಾರಿಕ ಸಂವಹನಗಳು, ವೀಡಿಯೊ ಕಾನ್ಫರೆನ್ಸ್‌ಗಳು ಮತ್ತು ನಿಗದಿತ ಮಾರ್ಗಸೂಚಿಗಳಿಗೆ ಅನುಗುಣವಾಗಿ ಸಾವಿನ ಸರಿಯಾದ ದಾಖಲಾತಿಗಾಗಿ ಕೇಂದ್ರ ತಂಡಗಳ ನಿಯೋಜನೆಯ ಮೂಲಕ ತೊಡಗಿಸಿಕೊಂಡಿವೆ. ವಿಶ್ವ ಆರೋಗ್ಯ ಸಂಸ್ಥೆ ಶಿಫಾರಸು ಮಾಡಿದ ಐಸಿಡಿ-10 ಕೋಡ್‌ಗಳ ಪ್ರಕಾರ ಎಲ್ಲಾ ಸಾವುಗಳ ಸರಿಯಾದ ದಾಖಲಾತಿಗಾಗಿ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಸಹ 'ಭಾರತದಲ್ಲಿ ಕೋವಿಡ್-19 ಸಂಬಂಧಿತ ಸಾವುಗಳ ಸೂಕ್ತ ದಾಖಲೀಕರಣಕ್ಕಾಗಿ ಮಾರ್ಗದರ್ಶನ' ನೀಡಿದೆ.

ಹೀಗಾಗಿ, ಕೋವಿಡ್ -19 ನಂತಹ ಜಾಗತಿಕ ಸಾರ್ವಜನಿಕ ಆರೋಗ್ಯ ಬಿಕ್ಕಟ್ಟಿನ ಸಂದರ್ಭದಲ್ಲಿ ಸಾವಿನಂತೆ ಸೂಕ್ಷ್ಮವಾದ ಸಮಸ್ಯೆಗಳನ್ನು ಉಲ್ಲೇಖಿಸುವಾಗ ಅತ್ಯಂತ ಸೂಕ್ಷ್ಮತೆ ಮತ್ತು ಅಧಿಕೃತತೆಯಿಂದ ವ್ಯವಹರಿಸುವುದು ಪ್ರಮುಖವಾಗಿದೆ. ಭಾರತವು ದೃಢವಾದ ನಾಗರಿಕ ನೋಂದಣಿ ವ್ಯವಸ್ಥೆ (ಸಿ ಆರ್ ಎಸ್) ಮತ್ತು ಮಾದರಿ ನೋಂದಣಿ ವ್ಯವಸ್ಥೆ (ಎಸ್ ಆರ್ ಎಸ್) ಯನ್ನು ಹೊಂದಿದೆ, ಇದು ಕೋವಿಡ್-19 ಸಾಂಕ್ರಾಮಿಕ ರೋಗಕ್ಕೆ ಮುಂಚೆಯೇ ಎಲ್ಲಾ ರಾಜ್ಯಗಳು/ಕೇಂದ್ರಾಡಳಿತ ಪ್ರದೆಶಗಳಲ್ಲಿ ಜಾರಿಯಲ್ಲಿತ್ತು. ದೇಶದಲ್ಲಿ ಸಾವಿನ ನೋಂದಣಿಗೆ ಕಾನೂನು ಬೆಂಬಲವಿದೆ ಎಂಬುದು ಸಹ ಪ್ರಮುಖವಾಗಿದೆ. ನೋಂದಣಿಯನ್ನು ಜನನ ಮತ್ತು ಮರಣಗಳ ನೋಂದಣಿ ಕಾಯಿದೆ (ಆರ್ ಬಿ ಡಿ ಕಾಯಿದೆ, 1969) ಅಡಿಯಲ್ಲಿ ರಾಜ್ಯ ಸರ್ಕಾರಗಳು ಮಾಡುತ್ತವೆ. ಹೀಗಾಗಿ, ಸಿ ಆರ್ ಎಸ್ ಮೂಲಕ ರಚಿಸಲಾದ ಡೇಟಾವು ಅತ್ಯಂತ ವಿಶ್ವಾಸಾರ್ಹತೆಯನ್ನು ಹೊಂದಿದೆ. ದೃಢೀಕರಿಸದ ಡೇಟಾವನ್ನು ಅವಲಂಬಿಸಸುವ ಬದಲು ಈ ವಿಶ್ವಾಸಾರ್ಹ ಅಂಕಿಅಂಶಗಳನ್ನು ಬಳಸಬೇಕು

***



(Release ID: 1799653) Visitor Counter : 221