ಹಣಕಾಸು ಸಚಿವಾಲಯ

ಮೂಲಸೌಕರ್ಯ ಮುಂದಿನ ಮಾರ್ಗಸೂಚಿ ಕುರಿತು ಚರ್ಚಿಸಲು ಸಭೆಯ ಅಧ್ಯಕ್ಷತೆ ವಹಿಸಿದ್ದ ಹಣಕಾಸು ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್


ತಮ್ಮ ಬಂಡವಾಳ ವೆಚ್ಚವನ್ನು ಸಂಪೂರ್ಣ ವಿನಿಯೋಗಿಸಲು ಸಚಿವಾಲಯಗಳಿಗೆ ತಿಳಿಸಿದ ಹಣಕಾಸು ಸಚಿವರು

ಎಂ.ಎಸ್.ಎಂ.ಇ.ಗಳ ಬಾಕಿಯನ್ನು ಶೀಘ್ರ ಇತ್ಯರ್ಥದ ಖಾತ್ರಿಪಡಿಸಿಕೊಳ್ಳಲು ಸಚಿವಾಲಯಗಳಿಗೆ ಮತ್ತು ಅವುಗಳ ಸಿ.ಪಿ.ಎಸ್.ಇ.ಗಳಿಗೆ ತಿಳಿಸಿದ ಹಣಕಾಸು ಸಚಿವರು

Posted On: 04 JUN 2021 6:21PM by PIB Bengaluru

ಕೇಂದ್ರ ಹಣಕಾಸು ಮತ್ತು ಸಾಂಸ್ಥಿಕ ವ್ಯವಹಾರಗಳ ಖಾತೆ ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರಿಂದು, ಸರ್ಕಾರದ ಹಿರಿಯ ಅಧಿಕಾರಿಗಳೊಂದಿಗೆ ವರ್ಚುವಲ್ ಸಭೆ ನಡೆಸಿ, ಮೂಲಸೌಕರ್ಯದ ಮಾರ್ಗಸೂಚಿಗಳ ಬಗ್ಗೆ ಚರ್ಚಿಸಿದರು. ಇದು ಹಣಕಾಸು ಸಚಿವರು ಸಚಿವಾಲಯಗಳ ಇಲಾಖೆಗಳೊಂದಿಗೆ ನಾಲ್ಕನೇ ಪರಿಶೀಲನಾ ಸಭೆಯಾಗಿತ್ತು ಮತ್ತು  2021-22ನೇ ಸಾಲಿನ ಬಜೆಟ್ ಮಂಡನೆಯ ಬಳಿಕ ಮೂಲಸೌಕರ್ಯ ಮುಂದಿನ ಮಾರ್ಗಸೂಚಿ ಸರಣಿಯಲ್ಲಿ ಆಯೋಜಿಸಲಾಗಿದ್ದ ಎರಡನೇ ಸಭೆಯಾಗಿತ್ತು. ಸಭೆಯ ವೇಳೆ, ಸಚಿವಾಲಯಗಳು ಮತ್ತು ಅವುಗಳ ಸಿಪಿಎಸ್..ಗಳ ಬಂಡವಾಳ ವೆಚ್ಚದ ಯೋಜನೆಗಳು, ಬಜೆಟ್ ಪ್ರಕಟಣೆಗಳ ಅನುಷ್ಠಾನದ ಸ್ಥಿತಿಗತಿ ಮತ್ತು ಮೂಲಸೌಕರ್ಯ ಹೂಡಿಕೆಯನ್ನು ತ್ವರಿತಗೊಳಿಸುವ ಕ್ರಮಗಳ ಕುರಿತು ಚರ್ಚಿಸಲಾಯಿತು. ಸಭೆಯಲ್ಲಿ ಹಣಕಾಸು ಕಾರ್ಯದರ್ಶಿ, ಆರ್ಥಿಕ ವ್ಯವಹಾರಗಳ ಇಲಾಖೆಯ ಕಾರ್ಯದರ್ಶಿ, ಸಾರ್ವಜನಿಕ ಉದ್ದಮೆಗಳ ಇಲಾಖೆಯ ಕಾರ್ಯದರ್ಶಿ, ಇಂಧನ ಸಚಿವಾಲಯದ ಕಾರ್ಯದರ್ಶಿ ಮತ್ತು ರೈಲ್ವೆ ಮಂಡಳಿಯ ಅಧ್ಯಕ್ಷರು, ಸಿಇಓ ಮತ್ತು ಎರಡು ಸಚಿವಾಲಯಗಳ ಸಿಪಿಎಸ್..ಗಳ ಸಿಇಓಗಳು ಮತ್ತು ಸಿಎಂಡಿ/ಸಿಇಓಗಳು  ಪಾಲ್ಗೊಂಡಿದ್ದರು.

ಸಚಿವಾಲಯಗಳ ಮತ್ತು ಅವುಗಳ ಸಿಪಿಎಸ್..ಗಳ ಬಂಡವಾಳ ವೆಚ್ಚದ ದಕ್ಷತೆಯನ್ನು ಪರಿಶೀಲಿಸಿದ ವೇಳೆ, ಹಣಕಾಸು ಸಚಿವರು ಸಾಂಕ್ರಾಮಿಕ ನಂತರದ ಆರ್ಥಿಕತೆಯನ್ನು ಪುನಶ್ಚೇತನಗೊಳಿಸುವಲ್ಲಿ ವರ್ಧಿತ ಬಂಡವಾಳ ವೆಚ್ಚ ನಿರ್ಣಾಯಕ ಪಾತ್ರ ವಹಿಸುತ್ತದೆ ಎಂದು ಪ್ರತಿಪಾದಿಸಿದರು ಮತ್ತು ಸಚಿವಾಲಯಗಳು ತಮ್ಮ ಬಂಡವಾಳ ವೆಚ್ಚವನ್ನು ವಿನಿಯೋಗಿಸಲು ಪ್ರೋತ್ಸಾಹಿಸಿದರು.

ಸಚಿವಾಲಯಗಳು ತಮ್ಮ ಬಂಡವಾಳ ವೆಚ್ಚದ ಗುರಿಗಳಿಗಿಂತ ಹೆಚ್ಚಿನದನ್ನು ಸಾಧಿಸುವ ಗುರಿಯನ್ನು ಸಹ ಕೋರಲಾಯಿತು. 2021-22 ಹಣಕಾಸು ವರ್ಷದ ಬಜೆಟ್ .5.54 ಲಕ್ಷ ಕೋಟಿ ರೂ ಗಳ ಬಂಡವಾಳ ಹಂಚಿಕೆಯನ್ನು ಒದಗಿಸಿದೆ ಎಂದು ಹಣಕಾಸು ಸಚಿವರು ಹೇಳಿದರು, ಇದು 2020-21 ಬಜೆಟ್ ಅಂದಾಜಿಗಿಂತ ಶೇ.34.5ರಷ್ಟು ಹೆಚ್ಚಾಗಿದೆ. ಆದಾಗ್ಯೂ, ಬಂಡವಾಳ ವೆಚ್ಚವನ್ನು ಹೆಚ್ಚಿಸಲು ಬಜೆಟ್ ಕಡೆಯಿಂದ ಬರುವ ಪ್ರಯತ್ನಗಳಿಗೆ ಸಾರ್ವಜನಿಕ ವಲಯದ ಉದ್ಯಮಗಳು ಪೂರಕವಾಗಬೇಕಿದೆ ಎಂದು ಅವರು ಹೇಳಿದರು.

ಮೂಲಸೌಕರ್ಯ ವೆಚ್ಚವು ಕೇವಲ ಮೂಲಸೌಕರ್ಯಕ್ಕಾಗಿ ಕೇಂದ್ರ ಸರ್ಕಾರದ ಬಜೆಟ್ ವೆಚ್ಚವಷ್ಟೇ ಅಲ್ಲ ಅದು, ರಾಜ್ಯ ಸರ್ಕಾರಗಳು ಮತ್ತು ಖಾಸಗಿ ವಲಯದ ಬಾಕಿ ಇರುವ ಮೂಲಸೌಕರ್ಯಗಳನ್ನೂ ಒಳಗೊಂಡಿದೆ ಎಂದು ಹಣಕಾಸು ಸಚಿವರು ಒತ್ತಿ ಹೇಳಿದರು. ಇದು ಹೆಚ್ಚುವರಿ ಬಜೆಟ್ ಸಂಪನ್ಮೂಲಗಳ ಮೂಲಕ ಸರ್ಕಾರದ ವೆಚ್ಚವನ್ನೂ ಒಳಗೊಂಡಿದೆ ಎಂದರು. ಆದ್ದರಿಂದ, ನಾವೀನ್ಯಪೂರ್ಣ ವಿನ್ಯಾಸ ಮತ್ತು ಹಣಕಾಸಿನ ಮೂಲಕ ಯೋಜನೆಗಳನ್ನು ಪಡೆಯಲು ಸಚಿವಾಲಯಗಳು ಸಕ್ರಿಯವಾಗಿ ಕೆಲಸ ಮಾಡಬೇಕು ಮತ್ತು  ಮೂಲಸೌಕರ್ಯ ವೆಚ್ಚ ಹೆಚ್ಚಳಕ್ಕಾಗಿ ಖಾಸಗಿ ವಲಯಕ್ಕೆ ಎಲ್ಲ ಬೆಂಬಲ ನೀಡಬೇಕು ಎಂದು ಎಂದು ಹಣಕಾಸು ಸಚಿವರು ಹೇಳಿದರು, ಕಾರ್ಯಸಾಧ್ಯವಾದ ಯೋಜನೆಗಳಿಗಾಗಿ ಸಚಿವಾಲಯಗಳು ಪಿಪಿಪಿ ಮಾದರಿಯನ್ನು  ಅನ್ವೇಷಿಸುವ ಅಗತ್ಯವಿದೆ ಎಂದೂ ಅವರು ಹೇಳಿದರು. ಎಂ.ಎಸ್‌.ಎಂ.. ಬಾಕಿ ಮೊತ್ತವನ್ನು ಶೀಘ್ರವಾಗಿ ತೆರವು ಗೊಳಿಸುವಂತೆ ಹಣಕಾಸು ಸಚಿವರು ಸಚಿವಾಲಯಗಳು ಮತ್ತು ಅವರ ಸಿ.ಪಿ.ಎಸ್‌..ಗಳಿಗೆ ಸೂಚಿಸಿದರು..

ತಮ್ಮ ಭಾಷಣ ಮುಗಿಸುವ ಮುನ್ನ ಹಣಕಾಸು ಸಚಿವರು, ಸಾಧನೆಯು ಕಾಲಮಿತಿಗೆ ಅನುಗುಣವಾಗಿರುವುದನ್ನು ಖಚಿತಪಡಿಸಿಕೊಳ್ಳಲು ದೊಡ್ಡ ಪ್ರಮುಖ ಯೋಜನೆಗಳಿಗೆ ವೆಚ್ಚವನ್ನು ಹೆಚ್ಚಿಸಲು ಸಚಿವಾಲಯಗಳ ಕಾರ್ಯದರ್ಶಿಗಳಿಗೆ ಮನವಿ ಮಾಡಿದರು. ವಲಯದ ನಿರ್ದಿಷ್ಟ ಯೋಜನೆಗಳ ನಿಯಮಿತ ಪರಿಶೀಲನೆಗಳನ್ನು ಸಂಬಂಧಪಟ್ಟ ರಾಜ್ಯ ಸರ್ಕಾರಗಳೊಂದಿಗೆ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಅವರು ಸಚಿವಾಲಯಗಳಿಗೆ ಸೂಚಿಸಿದರುಎಲ್ಲಾ ಸಚಿವಾಲಯಗಳು/ಇಲಾಖೆಗಳೊಂದಿಗೆ ನಿಯಮಿತ ಪರಿಶೀಲನಾ ಸಭೆಗಳನ್ನು ಮುಂದುವರಿಸುವುದಾಗಿ ಹಣಕಾಸು ಸಚಿವರು ತಿಳಿಸಿದರು.

***



(Release ID: 1724563) Visitor Counter : 182