ರೈಲ್ವೇ ಸಚಿವಾಲಯ

969 ಮೆಟ್ರಿಕ್ ಟನ್ ದ್ರವರೂಪದ ವೈದ್ಯಕೀಯ ಆಮ್ಲಜನಕ (ಎಲ್‌ಎಂಒ) ಹೊತ್ತ 12 ಆಕ್ಸಿಜನ್ ಎಕ್ಸ್‌ಪ್ರೆಸ್ ರೈಲುಗಳು ಹವಾಮಾನ ವೈಪರಿತ್ಯ ಮತ್ತು ಚಂಡಮಾರುತ ಪರಿಸ್ಥಿತಿಗಳನ್ನೂ ಲೆಕ್ಕಿಸದೆ ಪೂರ್ವ ರಾಜ್ಯಗಳಿಂದ ರಾಷ್ಟ್ರಕ್ಕೆ ಪರಿಹಾರವನ್ನು ಸಾಗಿಸಿವೆ


12 ಆಕ್ಸಿಜನ್ ಎಕ್ಸ್‌ಪ್ರೆಸ್‌ ರೈಲುಗಳಲ್ಲಿ ತಮಿಳುನಾಡಿಗೆ 3 ರೈಲುಗಳು, ಆಂಧ್ರಪ್ರದೇಶಕ್ಕೆ 4 ರೈಲುಗಳು ಮತ್ತು ದೆಹಲಿ, ಮಧ್ಯಪ್ರದೇಶ, ಉತ್ತರ ಪ್ರದೇಶ, ಅಸ್ಸಾಂ ಮತ್ತು ಕೇರಳಕ್ಕೆ ತಲಾ ಒಂದು ಆಕ್ಸಿಜನ್ ಎಕ್ಸ್‌ಪ್ರೆಸ್ ಸೇರಿವೆ.

ಆಕ್ಸಿಜನ್‌ ಎಕ್ಸ್‌ಪ್ರೆಸ್‌ ರೈಲುಗಳು 17945 ಮೆಟ್ರಿಕ್ ಟನ್‌ಗಿಂತಲೂ ಹೆಚ್ಚು ಎಲ್‌ಎಂಒ ಅನ್ನು ರಾಷ್ಟ್ರಕ್ಕೆ ತಲುಪಿಸಿವೆ

ಜಾರ್ಖಂಡ್ಗೆ ಮೊದಲ ಆಕ್ಸಿಜನ್‌ ಎಕ್ಸ್‌ಪ್ರೆಸ್‌ ರೈಲು ತಲುಪಿದ್ದು ಇದರೊಂದಿಗೆ ರೈಲ್ವೆಯಿಂದ ಆಮ್ಲಜನಕವನ್ನು ಪಡೆದ 15ನೇ ರಾಜ್ಯವೆನಿಸಿದೆ

1080 ಟ್ಯಾಂಕರುಗಳೊಂದಿಗೆ 272 ಆಕ್ಸಿಜನ್‌ ಎಕ್ಸ್‌ಪ್ರೆಸ್‌ ರೈಲುಗಳು ಇಲ್ಲಿಯವರೆಗೆ ತಮ್ಮ ಪ್ರಯಾಣವನ್ನು ಪೂರ್ಣಗೊಳಿಸಿದ್ದು, 15 ರಾಜ್ಯಗಳಿಗೆ ಪರಿಹಾರವನ್ನು ಪೂರೈಸಿವೆ

 ಉತ್ತರಾಖಂಡ, ಕರ್ನಾಟಕ, ಮಹಾರಾಷ್ಟ್ರ, ಮಧ್ಯಪ್ರದೇಶ, ಆಂಧ್ರಪ್ರದೇಶ, ರಾಜಸ್ಥಾನ, ತಮಿಳುನಾಡು, ಹರಿಯಾಣ, ತೆಲಂಗಾಣ, ಪಂಜಾಬ್, ಕೇರಳ, ದೆಹಲಿ, ಉತ್ತರ ಪ್ರದೇಶ, ಜಾರ್ಖಂಡ್ ಮತ್ತು ಅಸ್ಸಾಂ ಹೀಗೆ 15 ರಾಜ್ಯಗಳಿಗೆ ಆಕ್ಸಿಜನ್‌ ಎಕ್ಸ್‌ಪ್ರೆಸ್‌ ತಲುಪಿದೆ

614 ಮೆಟ್ರಿಕ್ ಟನ್ ಆಮ್ಲಜನಕವನ್ನು ಮಹಾರಾಷ್ಟ್ರಕ್ಕೆ 614 ಮೆಟ್ರಿಕ್ ಟನ್‌, ಉತ್ತರ ಪ್ರದೇಶಕ್ಕೆ ಸುಮಾರು 3731 ಮೆಟ್ರಿಕ್ ಟನ್, ಮಧ್ಯಪ್ರದೇಶಕ್ಕೆ 633 ಮೆಟ್ರಿಕ್ ಟನ್, ದೆಹಲಿಗೆ 4910 ಮೆಟ್ರಿಕ್ ಟನ್, ಹರಿಯಾಣಕ್ಕೆ 1911 ಮೆಟ್ರಿಕ್ ಟನ್, ರಾಜಸ್ಥಾನಕ್ಕೆ 98 ಮೆಟ್ರಿಕ್ ಟನ್, ಕರ್ನಾಟಕಕ

Posted On: 26 MAY 2021 1:45PM by PIB Bengaluru

ಎಲ್ಲಾ ಅಡೆತಡೆಗಳನ್ನು ದಾಟಿ, ಹೊಸ ಪರಿಹಾರಗಳನ್ನು ಕಂಡುಕೊಂಡಿರುವ ಭಾರತೀಯ ರೈಲ್ವೆಯು ದ್ರವರೂಪದ ವೈದ್ಯಕೀಯ ಆಮ್ಲಜನಕವನ್ನು (ಎಲ್ಎಂಒ) ದೇಶಾದ್ಯಂತ ವಿವಿಧ ರಾಜ್ಯಗಳಿಗೆ ತಲುಪಿಸುವ ಮೂಲಕ ತನ್ನ ಪರಿಹಾರ ಸಾಗಣೆ ಪ್ರಯಾಣವನ್ನು ಮುಂದುವರಿಸಿದೆ. ಇಲ್ಲಿಯವರೆಗೆ, ಭಾರತೀಯ ರೈಲ್ವೆಯು 17945 ಮೆಟ್ರಿಕ್ಟನ್ಗಿಂತಲೂ ಹೆಚ್ಚು ದ್ರವರೂಪದ ವೈದ್ಯಕೀಯ ಆಮ್ಲಜನಕವನ್ನು 1080ಕ್ಕೂ ಹೆಚ್ಚು ಟ್ಯಾಂಕರ್ಗಳಲ್ಲಿ ದೇಶಾದ್ಯಂತ ವಿವಿಧ ರಾಜ್ಯಗಳಿಗೆ ತಲುಪಿಸಿದೆ.

272 ಆಕ್ಸಿಜನ್ ಎಕ್ಸ್ಪ್ರೆಸ್ಗಳು ಇಲ್ಲಿಯವರೆಗೆ ತಮ್ಮ ಪ್ರಯಾಣವನ್ನು ಪೂರ್ಣಗೊಳಿಸಿವೆ ಮತ್ತು ವಿವಿಧ ರಾಜ್ಯಗಳಿಗೆ ಪರಿಹಾರವನ್ನು ತಲುಪಿಸಿವೆ ಎಂಬುದು ಉಲ್ಲೇಖಾರ್ಹ.

ಮಂಗಳವಾರ(26.5.2021) ತಡರಾತ್ರಿಯವರೆಗೆ ಮುಂದುವರಿದ ಕಾರ್ಯಾಚರಣೆಗಳ ವರ್ಧನೆಯಲ್ಲಿ 12 ಆಕ್ಸಿಜನ್ ಎಕ್ಸ್ಪ್ರೆಸ್ಗಳು 969 ಮೆಟ್ರಿಕ್ ಟನ್ ಆಮ್ಲಜನಕದೊಂದಿಗೆ ಚಂಡಮಾರುತ ಪೀಡಿತ ಪೂರ್ವ ರಾಜ್ಯಗಳಿಂದ ತಮ್ಮ ಪ್ರಯಾಣವನ್ನು ಪ್ರಾರಂಭಿಸಿವೆ. ಹವಾಮಾನ ವೈಪರಿತ್ಯವನ್ನೂ ಲೆಕ್ಕಿಸದೆ ರಾಷ್ಟ್ರಕ್ಕೆ ಪರಿಹಾರ ಸಾಮಗ್ರಿಯನ್ನು ಕೊಂಡೊಯ್ಯುತ್ತಿವೆ.

12 ಆಕ್ಸಿಜನ್ ಎಕ್ಸ್ಪ್ರೆಸ್ಗಳಲ್ಲಿ ತಮಿಳುನಾಡಿಗೆ 3 ರೈಲುಗಳು, ಆಂಧ್ರಪ್ರದೇಶಕ್ಕೆ 4 ರೈಲುಗಳು ಮತ್ತು ದೆಹಲಿ, ಮಧ್ಯಪ್ರದೇಶ, ಉತ್ತರ ಪ್ರದೇಶ, ಅಸ್ಸಾಂ ಮತ್ತು ಕೇರಳಕ್ಕೆ ತಲಾ 1 ರೈಲುಗಳು ಸೇರಿವೆ.

ದಕ್ಷಿಣ ರಾಜ್ಯಗಳ ಪೈಕಿ, ತಮಿಳುನಾಡು, ಕರ್ನಾಟಕ ಮತ್ತು ತೆಲಂಗಾಣಕ್ಕೆ ದ್ರವರೂಪದ ವೈದ್ಯಕೀಯ ಆಕ್ಸಿಜನ್ವಿತರಣೆ ತಲಾ 1000 ಮೆಟ್ರಿಕ್ ಟನ್ ದಾಟಿದೆ.

ಜಾರ್ಖಂಡ್ಗೂ ಆಕ್ಸಿಜನ್ಎಕ್ಸ್ಪ್ರೆಸ್ತಲುಪಿದ್ದು, ರೈಲ್ವೆಯಿಂದ ನೆರವನ್ನು ಪಡೆದ 15ನೇ ರಾಜ್ಯ ಅದೆನಿಸಿದೆ.

ಆಕ್ಸಿಜನ್ಪೂರೈಕೆ ಕೋರಿದ ರಾಜ್ಯಗಳಿಗೆ ಸಾಧ್ಯವಾದಷ್ಟು ಕಡಿಮೆ ಸಮಯದಲ್ಲಿ ಸಾಧ್ಯವಾದಷ್ಟು ಹೆಚ್ಚಿನ ಪ್ರಮಾಣದ ದ್ರವರೂಪದ ವೈದ್ಯಕೀಯ ಆಮ್ಲಜನಕವನ್ನು ತಲುಪಿಸುವ ಪ್ರಯತ್ನದಲ್ಲಿ ಭಾರತೀಯ ರೈಲ್ವೆ ನಿರತವಾಗಿದೆ.

ಆಕ್ಸಿಜನ್ ಎಕ್ಸ್ಪ್ರೆಸ್ಮೂಲಕ ಉತ್ತರಾಖಂಡ, ಕರ್ನಾಟಕ, ಮಹಾರಾಷ್ಟ್ರ, ಮಧ್ಯಪ್ರದೇಶ, ಆಂಧ್ರಪ್ರದೇಶ, ರಾಜಸ್ಥಾನ, ತಮಿಳುನಾಡು, ಹರಿಯಾಣ, ತೆಲಂಗಾಣ, ಪಂಜಾಬ್, ಕೇರಳ, ದೆಹಲಿ, ಉತ್ತರ ಪ್ರದೇಶ, ಜಾರ್ಖಂಡ್ ಮತ್ತು ಅಸ್ಸಾಂ 15 ರಾಜ್ಯಗಳಿಗೆ ಆಮ್ಲಜನಕ ಪರಿಹಾರವು ತಲುಪಿದೆ.

ಪತ್ರಿಕಾ ಪ್ರಕಟಣೆ ಬಿಡುಗಡೆಯ ಸಮಯದವರೆಗೆ, ಮಹಾರಾಷ್ಟ್ರಕ್ಕೆ 614 ಮೆಟ್ರಿಕ್ ಟನ್ ಆಮ್ಲಜನಕವನ್ನು ಪೂರೈಸಲಾಗಿದೆ. ಉತ್ತರ ಪ್ರದೇಶಕ್ಕೆ ಸುಮಾರು 3731 ಮೆಟ್ರಿಕ್ ಟನ್, ಮಧ್ಯಪ್ರದೇಶಕ್ಕೆ 633 ಮೆಟ್ರಿಕ್ ಟನ್, ದೆಹಲಿಗೆ 4910 ಮೆಟ್ರಿಕ್ ಟನ್, ಹರಿಯಾಣಕ್ಕೆ 1911 ಮೆಟ್ರಿಕ್ ಟನ್, ರಾಜಸ್ಥಾನಕ್ಕೆ 98 ಮೆಟ್ರಿಕ್ ಟನ್, ಕರ್ನಾಟಕಕ್ಕೆ 1653 ಮೆಟ್ರಿಕ್ ಟನ್, ಉತ್ತರಾಖಂಡಕ್ಕೆ 320 ಮೆಟ್ರಿಕ್ ಟನ್, ತಮಿಳುನಾಡಿಗೆ 1158 ಮೆಟ್ರಿಕ್ ಟನ್, ಆಂಧ್ರಪ್ರದೇಶಕ್ಕೆ 929 ಮೆಟ್ರಿಕ್ ಟನ್, ಪಂಜಾಬ್ಗೆ 225 ಮೆಟ್ರಿಕ್ ಟನ್, ಕೇರಳಕ್ಕೆ 246 ಮೆಟ್ರಿಕ್ ಟನ್, ತೆಲಂಗಾಣಕ್ಕೆ1312 ಮೆಟ್ರಿಕ್ ಟನ್, ಜಾರ್ಖಂಡ್ಗೆ 38 ಮೆಟ್ರಿಕ್ ಟನ್ ಮತ್ತು ಅಸ್ಸಾಂಗೆ 160 ಮೆಟ್ರಿಕ್ ಟನ್ ಆಮ್ಲಜನಕವನ್ನು ರೈಲ್ವೆ ಮೂಲಕ ತಲುಪಿಸಲಾಗಿದೆ.

ರೈಲ್ವೆಯು ವಿವಿಧ ಮಾರ್ಗಗಳ ಮೂಲಕ ಆಮ್ಲಜನಕ ಪೂರೈಕೆ ಸ್ಥಳಗಳನ್ನು ಗುರುತಿಸಿದೆ ಮತ್ತು ರಾಜ್ಯಗಳ ಯಾವುದೇ ತುರ್ತು ಅಗತ್ಯಕ್ಕಾಗಿ ತಾನು ಸದಾ ಸನ್ನದ್ಧವಾಗಿರುತ್ತದೆ. ದ್ರವರೂಪದ ವೈದ್ಯಕೀಯ ಆಮ್ಲಜನಕವನ್ನು ತರಲು ರಾಜ್ಯಗಳು ಭಾರತೀಯ ರೈಲ್ವೆಗೆ ಟ್ಯಾಂಕರ್ಗಳನ್ನು ಒದಗಿಸುತ್ತವೆ.

ಆಕ್ಸಿಜನ್ ಎಕ್ಸ್ಪ್ರೆಸ್ರೈಲುಗಳೂ 32 ದಿನಗಳ ಹಿಂದೆ ಏಪ್ರಿಲ್ 24 ರಂದು ಮಹಾರಾಷ್ಟ್ರದಲ್ಲಿ 126 ಮೆಟ್ರಿಕ್ ಟನ್ ಲೋಡ್ನೊಂದಿಗೆ ತಮ್ಮ ವಿತರಣೆ ಪ್ರಾರಂಭಿಸಿದ್ದನ್ನು ಗಮನಿಸಬಹುದು.

ದೇಶ ಉದ್ದಗಲಕ್ಕೂ ಸಂಚರಿಸುವ ಭಾರತೀಯ ರೈಲ್ವೆಯು ಪಶ್ಚಿಮದಲ್ಲಿ ಹಾಪಾ, ಬರೋಡಾ, ಮುಂದ್ರಾ ಮತ್ತು ಪೂರ್ವದಲ್ಲಿ ರೂರ್ಕೆಲಾ, ದುರ್ಗಾಪುರ, ಟಾಟಾನಗರ್, ಅಂಗುಲ್ ಮುಂತಾದ ಸ್ಥಳಗಳಿಂದ ಆಮ್ಲಜನಕವನ್ನು ತುಂಬಿಸಿಕೊಂಡು ನಂತರ ಅದನ್ನು ಸಂಕೀರ್ಣವಾದ ಕಾರ್ಯಾಚರಣೆ ಮಾರ್ಗ ಯೋಜನೆ ಮೂಲಕ ಉತ್ತರಾಖಂಡ, ಕರ್ನಾಟಕ, ಮಹಾರಾಷ್ಟ್ರ, ಮಧ್ಯಪ್ರದೇಶ, ಆಂಧ್ರಪ್ರದೇಶ, ರಾಜಸ್ಥಾನ, ತಮಿಳುನಾಡು, ಹರಿಯಾಣ, ತೆಲಂಗಾಣ, ಪಂಜಾಬ್, ಕೇರಳ, ದೆಹಲಿ, ಉತ್ತರ ಪ್ರದೇಶ ಮತ್ತು ಅಸ್ಸಾಂ ರಾಜ್ಯಗಳಿಗೆ ತಲುಪಿಸುತ್ತಿದೆ.

ಆಮ್ಲಜನಕ ಪರಿಹಾರವು ಸಾಧ್ಯವಾದಷ್ಟು ವೇಗವಾಗಿ ತಲುಪುವುದನ್ನು ಖಚಿತಪಡಿಸಿಕೊಳ್ಳಲು, ರೈಲ್ವೆಯು ಆಕ್ಸಿಜನ್ ಎಕ್ಸ್ಪ್ರೆಸ್ ಸರಕು-ಸಾಗಣೆ ರೈಲುಗಳ ಸಂಚಾರದಲ್ಲಿ ಹೊಸ ಪ್ರಮಾಣೀಕರಣಗಳು ಮತ್ತು ವಿನೂತನ ಮಾನದಂಡಗಳನ್ನು ಸೃಷ್ಟಿಸುತ್ತಿದೆ. ನಿರ್ಣಾಯಕ ಸರಕು ಸಾಗಣೆ ರೈಲುಗಳ ಸರಾಸರಿ ವೇಗವು ಹೆಚ್ಚಿನ ಸಂದರ್ಭಗಳಲ್ಲಿ ಗಂಟೆಗೆ 55 ಕಿ.ಮೀ.ಗಿಂತಲೂ ಹೆಚ್ಚಾಗಿದೆ. ಹೆಚ್ಚಿನ ಆದ್ಯತೆಯ ʻಗ್ರೀನ್ ಕಾರಿಡಾರ್ʼನಲ್ಲಿ ಅತ್ಯಂತ ತುರ್ತಾಗಿ ಸಂಚರಿಸುತ್ತಿದೆ. ಸಾಧ್ಯವಾದಷ್ಟು

ವೇಗವಾಗಿ ಆಮ್ಲಜನಕವು ತಲುಪುವಂತೆ ಕಾಯ್ದುಕೊಳ್ಳಲು ವಿವಿಧ ವಲಯಗಳ ಕಾರ್ಯಾಚರಣೆ ತಂಡಗಳು ಅತ್ಯಂತ ಸವಾಲಿನ ಸಂದರ್ಭಗಳಲ್ಲಿ ದಿನದ 24 ಗಂಟೆಯೂ ಕೆಲಸ ಮಾಡುತ್ತಿವೆ. ವಿವಿಧ ವಿಭಾಗಗಳಲ್ಲಿ ಸಿಬ್ಬಂದಿ ಬದಲಾವಣೆಗಾಗಿ ತಾಂತ್ರಿಕ ನಿಲುಗಡೆಗಳನ್ನು 1 ನಿಮಿಷಕ್ಕೆ ಇಳಿಸಲಾಗಿದೆ.

ಆಕ್ಸಿಜನ್ ಎಕ್ಸ್ಪ್ರೆಸ್ ಶರವೇಗದಲ್ಲಿ ಸಾಗುವಂತೆ ಕಾಯ್ದುಕೊಳ್ಳಲು ಟ್ರ್ಯಾಕ್ಗಳನ್ನು ಅವುಗಳಿಗಾಗಿ ಸದಾ ತೆರೆದಿಡಲಾಗುತ್ತದೆ ಮತ್ತು ಹೆಚ್ಚಿನ ಜಾಗರೂಕತೆಯನ್ನು ವಹಿಸಾಗುತ್ತಿದೆ.

ಇತರ ಸರಕು ಸಾಗಣೆ ಕಾರ್ಯಾಚರಣೆಯ ವೇಗದ ಮೇಲೆ ಯಾವುದೇ ಪರಿಣಾಮ ಬೀರದ ರೀತಿಯಲ್ಲಿ ಇದೆಲ್ಲವನ್ನೂ ಮಾಡಲಾಗುತ್ತಿದೆ.

ಹೊಸ ಆಮ್ಲಜನಕ ಎಕ್ಸ್ಪ್ರೆಸ್ಗಳ ಓಡಾಟವು ಅತ್ಯಂತ ಕ್ರಿಯಾತ್ಮಕ ಚಟುವಟಿಕೆಯಾಗಿದ್ದು, ಅಂಕಿ-ಅಂಶಗಳ ನವೀಕರಣ ಸದಾ ಮುಂದುವರಿದಿದೆ. ಭರ್ತಿ ಮಾಡಲಾದ ಮತ್ತಷ್ಟು ಆಕ್ಸಿಜನ್ ಎಕ್ಸ್ಪ್ರೆಸ್ಗಳು ರಾತ್ರಿಯ ಬಳಿಕ ತಮ್ಮ ಪ್ರಯಾಣವನ್ನು ಪ್ರಾರಂಭಿಸುವ ನಿರೀಕ್ಷೆಯಿದೆ.

***



(Release ID: 1721957) Visitor Counter : 267