ಪ್ರಧಾನ ಮಂತ್ರಿಯವರ ಕಛೇರಿ

ಪ್ರಧಾನಿಯವರಿಗೆ ಹಣಕಾಸು ಆಯೋಗ ವರದಿ ಸಲ್ಲಿಕೆ

Posted On: 16 NOV 2020 7:10PM by PIB Bengaluru

15 ನೇ ಹಣಕಾಸು ಆಯೋಗದ ಅಧ್ಯಕ್ಷರು ಮತ್ತು ಸದಸ್ಯರು 2021-22 ರಿಂದ 2025-26ರ ಅವಧಿಯ ವರದಿಯ ಪ್ರತಿಯನ್ನು ಇಂದು ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರಿಗೆ ಸಲ್ಲಿಸಿದರು. ಆಯೋಗವು ತನ್ನ ವರದಿಯನ್ನು 4 ನವೆಂಬರ್ 2020 ರಂದು ರಾಷ್ಟ್ರಪತಿಯವರಿಗೆ ಸಲ್ಲಿಸಿತ್ತು.

ಆಯೋಗದ ಅಧ್ಯಕ್ಷ ಶ್ರೀ ಎನ್ ಕೆ ಸಿಂಗ್ ಮತ್ತು ಸದಸ್ಯರಾದ ಶ್ರೀ ಅಜಯ್ ನಾರಾಯಣ್ ಝಾ, ಪ್ರೊ.ಅನೂಪ್ ಸಿಂಗ್, ಡಾ.ಅಶೋಕ್ ಲಹಿರಿ ಮತ್ತು ಡಾ.ರಮೇಶ್ ಚಂದ್ ಮತ್ತು ಆಯೋಗದ ಕಾರ್ಯದರ್ಶಿ ಶ್ರೀ ಅರವಿಂದ್ ಮೆಹ್ತಾ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಆಯೋಗವು ತನ್ನ ವರದಿಯನ್ನು ನಾಳೆ ಕೇಂದ್ರ ಹಣಕಾಸು ಸಚಿವರಿಗೆ ಸಲ್ಲಿಸಲಿದೆ.

ಸಂವಿಧಾನದಡಿ ನಿಗದಿಪಡಿಸಿದಂತೆ ಈ ವರದಿಯನ್ನು ಕ್ರಮ ಕೈಗೊಂಡ ವರದಿ (ಎಟಿಆರ್) ಯ ರೂಪದ ವಿವರಣಾತ್ಮಕ ಜ್ಞಾಪಕ ಪತ್ರದೊಂದಿಗೆ ಸದನದಲ್ಲಿ ಮಂಡಿಸಲಾಗುವುದು.

https://static.pib.gov.in/WriteReadData/userfiles/image/image001WQEO.jpg

https://static.pib.gov.in/WriteReadData/userfiles/image/image0023RO7.jpg

https://static.pib.gov.in/WriteReadData/userfiles/image/image003SSLO.jpg

***



(Release ID: 1673285) Visitor Counter : 174