ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

ಕೋವಿಡ್-19 ನಿರ್ವಹಣೆಯ ಸ್ಥಿತಿಯನ್ನು ಪರಿಶೀಲಿಸಲು ಡಾ. ಹರ್ಷವರ್ಧನ್ ರವರು ಲೇಡಿ ಹಾರ್ಡಿಂಗ್ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಭೇಟಿ

Posted On: 03 MAY 2020 5:08PM by PIB Bengaluru

ಕೋವಿಡ್-19 ನಿರ್ವಹಣೆಯ ಸ್ಥಿತಿಯನ್ನು ಪರಿಶೀಲಿಸಲು ಡಾ. ಹರ್ಷವರ್ಧನ್ ರವರು ಲೇಡಿ ಹಾರ್ಡಿಂಗ್ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಭೇಟಿ

ಲಾಕ್ಡೌನ್ 3.0 ಸಮಯದಲ್ಲಿ ಜೀವನದಲ್ಲಿ ಶಿಸ್ತನ್ನು ನಿರಂತರವಾಗಿ ಪಾಲಿಸುವುದರಿಂದ ಕೋವಿಡ್-19 ವಿರುದ್ಧದ ನಮ್ಮ ಅಂತಿಮ ಹೋರಾಟದಲ್ಲಿ ಉತ್ತಮ ಫಲಿತಾಂಶ

"ನಮ್ಮ ಕೊರೊನಾ ವಾರಿಯರ್ಸ್ ನಡೆಸುತ್ತಿರುವ ವೀರೋಚಿತ ಹೋರಾಟಕ್ಕಾಗಿ ಭಾರತವು ಋಣಿಯಾಗಿದೆ - ಅವರ ಸೇವೆಗಳಿಗೆ ದೇಶ ನಿಜವಾಗಿಯೂ ಕೃತಜ್ಞವಾಗಿದೆ"

"ಭಾರತದಲ್ಲಿ ಚೇತರಿಕೆಯ ಪ್ರಮಾಣವು ಹೆಚ್ಚಾಗಿರುವುದು ನಮ್ಮ ಮುಂಚೂಣಿ ಆರೋಗ್ಯ ಕಾರ್ಯಕರ್ತರು ಒದಗಿಸಿದ ಆರೈಕೆಯ ಗುಣಮಟ್ಟವನ್ನು ಪ್ರತಿಬಿಂಬಿಸುತ್ತದೆ": ಡಾ. ಹರ್ಷವರ್ಧನ್

 

ಕೋವಿಡ್-19 ನಿರ್ವಹಣೆಯ ಸ್ಥಿತಿಯನ್ನು ಪರಿಶೀಲಿಸಲು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ. ಹರ್ಷವರ್ಧನ್ ಅವರು ಭಾರತದ ಅತ್ಯಂತ ಹಳೆಯ ಮತ್ತು ಹೆಸರಾಂತ ವೈದ್ಯಕೀಯ ಕಾಲೇಜಿನಲ್ಲಿ ಒಂದಾದ ಲೇಡಿ ಹಾರ್ಡಿಂಗ್ ವೈದ್ಯಕೀಯ ಕಾಲೇಜಿಗೆ (ಎಲ್ ಹೆಚ್ ಎಮ್ ಸಿ) ಭೇಟಿ ನೀಡಿದರು. ಆಸ್ಪತ್ರೆಯ ಸನ್ನದ್ಧತೆಗಾಗಿ ಬೇಕಾಗಿರುವ ಅವಶ್ಯಕತೆಗಳನ್ನು ಗಮನದಲ್ಲಿಟ್ಟುಕೊಂಡು, ಎಲ್ ಹೆಚ್ ಎಮ್ ಸಿ ಮತ್ತು ಜೊತೆಯಾದ ಆಸ್ಪತ್ರೆಗಳಲ್ಲಿ - ಶ್ರೀಮತಿ. ಸುಚೇತಾ ಕೃಪ್ಲಾನಿ ಆಸ್ಪತ್ರೆ (ಎಸ್ಎಸ್ಕೆಹೆಚ್) ಮತ್ತು ಕಲಾವತಿ ಸರನ್ ಮಕ್ಕಳ ಆಸ್ಪತ್ರೆ (ಕೆಎಸ್ಸಿಎಚ್), ಸಾಕಷ್ಟು ಪ್ರತ್ಯೇಕವಾದ ವಾರ್ಡ್ಗಳು ಮತ್ತು ಹಾಸಿಗೆಗಳನ್ನು ಒಳಗೊಂಡಿರುವ 30 ಹಾಸಿಗೆಯ ಮೀಸಲಾದ ಕೋವಿಡ್-19 ಆಸ್ಪತ್ರೆಯಾಗಿ ಕಾರ್ಯನಿರ್ವಹಿಸುತ್ತಿದೆ.

ಭೇಟಿ ನೀಡುವ ಮೊದಲು, ಎಲ್ಎಚ್ಎಂಸಿ ನಿರ್ದೇಶಕ ಡಾ. (ಪ್ರೊ.)ಎನ್ ಎನ್ ಮಾಥುರ್ ರವರು ಕೋವಿಡ್ -19 ರೋಗಿಗಳಿಗೆ ಎಲ್ಎಚ್ಎಂಸಿ ಮತ್ತು ಜೊತೆಯಾದ ಆಸ್ಪತ್ರೆಗಳಲ್ಲಿ ಲಭ್ಯವಿರುವ ಸೌಲಭ್ಯಗಳು ಮತ್ತು ಆಸ್ಪತ್ರೆಯಲ್ಲಿ ದಾಖಲಾಗಿರುವ ರೋಗಿಗಳ ಸ್ಥಿತಿಗತಿಗಳ ಬಗ್ಗೆ ಕೇಂದ್ರ ಸಚಿವರಿಗೆ ವಿವರವಾದ ಪ್ರಸ್ತುತಿಯನ್ನು ನೀಡಿದರು.. ಮೀಸಲಾದ ಕೋವಿಡ್ ಸೌಲಭ್ಯದಲ್ಲಿ 24 ಪ್ರತ್ಯೇಕ ಹಾಸಿಗೆಗಳು ಮತ್ತು 5 ಐಸಿಯು ಹಾಸಿಗೆಗಳಿವೆ ಎಂದು ತಿಳಿಸಲಾಯಿತು. ಪ್ರತಿ ಆಸ್ಪತ್ರೆಯಲ್ಲಿ ಕ್ರಮವಾಗಿ 40 ಮತ್ತು 41 ಹಾಸಿಗೆಗಳನ್ನು ಹೊಂದಿರುವ ಎಸ್ಎಸ್ಕೆಹೆಚ್ ಮತ್ತು ಕೆಎಸ್ಸಿಎಚ್ನಲ್ಲಿ ಶಂಕಿತ ರೋಗಿಗಳಿಗೆ ಒದಗಿಸಬೇಕಾದ ಸೌಲಭ್ಯಗಳನ್ನು ಗುರುತಿಸಲಾಗಿದೆ.

ಭೇಟಿಯ ಸಮಯದಲ್ಲಿ, ಕೇಂದ್ರ ಸಚಿವರು ಆಸ್ಪತ್ರೆಯ ತುರ್ತು ಚಿಕಿತ್ಸಾ ಘಟಕ, ಹೊರ ರೋಗಿಗಳ ವಿಭಾಗ, ಮಾದರಿ ಕೇಂದ್ರ, ಕೋವಿಡ್ ಬ್ಲಾಕ್ ನಿರ್ಣಾಯಕ ಪ್ರದೇಶಗಳು ಮತ್ತು ವೈದ್ಯರು ಮತ್ತು ಆರೋಗ್ಯ ಕಾರ್ಯಕರ್ತರಿಗೆ ಮೀಸಲಾದ ವಸ್ತ್ರ ಬದಲಾವಣೆಯ ಸ್ಥಳಕ್ಕೆ ಭೇಟಿ ನೀಡಿದರು. ಮಾದರಿ ಸಂಗ್ರಹಣಾ ಸೌಲಭ್ಯವನ್ನು ನಿರ್ವಹಿಸುವ ವೈದ್ಯರು ಮತ್ತು ಆರೋಗ್ಯ ಸಿಬ್ಬಂದಿಗೆ ವಿಶೇಷ ಕೋವಿಡ್-19 ಸೌಲಭ್ಯವಿರುವ ಆಂಕೊಲಾಜಿ ಕಟ್ಟಡದಲ್ಲಿ ಸೋಂಕುನಿವಾರಕಗೊಳಿಸಿಕೊಳ್ಳಲು ವಿಶೇಷ ಸ್ನಾನ, ಬದಲಾವಣೆ ಮತ್ತು ತುಂತುರು ಸೌಲಭ್ಯವನ್ನು ಒದಗಿಸಲಾಗಿದೆ ಎನ್ನುವುದನ್ನು ಕಂಡು ಅವರು ತೃಪ್ತಿ ವ್ಯಕ್ತಪಡಿಸಿದರು. ಸಾರಿಗೆ ಸಮಸ್ಯೆಗಳನ್ನು ತಪ್ಪಿಸಲು ಮತ್ತು ಅವರ ಕುಟುಂಬಗಳಿಗೆ ಪ್ರಸಾರವಾಗುವುದನ್ನು ತಡೆಯಲು ಹತ್ತಿರದ ಕೆಲವು ಹೋಟೆಲ್ಗಳಲ್ಲಿ ಆರೋಗ್ಯ ಕಾರ್ಯಕರ್ತರಿಗೆ ನಡೆಯಬಹುದಾದ ದೂರದಲ್ಲಿ ಬೋರ್ಡಿಂಗ್ ಮತ್ತು ವಸತಿ ಸೌಲಭ್ಯವನ್ನು ಒದಗಿಸಲಾಗಿದೆ ಎಂದು ಕೇಂದ್ರ ಸಚಿವರಿಗೆ ತಿಳಿಸಲಾಯಿತು. ಹತ್ತಿರದ ಯಂಗ್ ಮೆನ್ಸ್ ಕ್ರಿಶ್ಚಿಯನ್ ಅಸೋಸಿಯೇಷನ್ (ವೈಎಂಸಿಎ) ಕಟ್ಟಡವನ್ನು ಎಲ್ಹೆಚ್ಎಂಸಿಯ ವೈದ್ಯರು ಮತ್ತು ದಾದಿಯರು ನಿರ್ವಹಿಸುತ್ತಿರುವ ಕೋವಿಡ್ ಕೇರ್ ಸೆಂಟರ್ ಆಗಿ ಪರಿವರ್ತಿಸಲಾಗಿದೆ ಮತ್ತು ಸಮಯದಲ್ಲಿ ರೋಗಲಕ್ಷಣ ತೋರದ ಕೋವಿಡ್-ಪಾಸಿಟಿವ್ ಮತ್ತು ತಮ್ಮ ಕರ್ತವ್ಯವನ್ನು ನಿರ್ವಹಿಸುವ ಸಮಯದಲ್ಲಿ ಅಥವಾ ಬೇರೆಯ ಸಮಯದಲ್ಲಿ ಸೋಂಕಿಗೊಳಗಾದ ಎಲ್ ಹೆಚ್ಎಂಸಿಯ ಆರೋಗ್ಯ ಕಾರ್ಯಕರ್ತರನ್ನು ಒಳಗೊಂಡ 70 ರೋಗಿಗಳು ಇದ್ದಾರೆ.

ಕೋವಿಡ್ ಬ್ಲಾಕ್ನಲ್ಲಿ, ಎಲ್ಎಚ್ಎಂಸಿಯಲ್ಲಿ ರೋಗಿಗಳಿಗೆ ಚಿಕಿತ್ಸೆ ನೀಡುವಾಗ ಸಿಒವಿಐಡಿ -19 ಸೋಂಕಿಗೆ ಒಳಗಾದ ಇಬ್ಬರು ಇಂಟರ್ನ್ ವೈದ್ಯರೊಂದಿಗೆ ಸಚಿವರು ವಿಡಿಯೋ ಕರೆ ಮೂಲಕ ಮಾತನಾಡಿದರು ಮತ್ತು ಅವರನ್ನು ವಾರ್ಡಿನಲ್ಲಿ ದಾಖಲಿಸಲಾಯಿತು. ಕೋವಿಡ್ ವಾರ್ಡ್ನಲ್ಲಿ ದಾಖಲಾದ ಇಬ್ಬರು ರೋಗಿಗಳೊಂದಿಗೆ ಕೇಂದ್ರ ಸಚಿವರು ವಿಡಿಯೋ ಮೂಲಕ ಮಾತನಾಡಿದರು, ಅವರು ಕೋವಿಡ್ ವಾರ್ಡ್ನಲ್ಲಿನ ಸೌಲಭ್ಯಗಳ ಬಗ್ಗೆ ಸಚಿವರಿಗೆ ಮಾಹಿತಿ ನೀಡಿದರು. ಸಚಿವರು, “ಅವರೆಲ್ಲರೂ ಸದೃಡ ಮತ್ತು ಆರೋಗ್ಯಕರವಾಗಿ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆಂದು ತಿಳಿದು ನನಗೆ ಸಂತೋಷವಾಗಿದೆ. ವಿಶೇಷವಾಗಿ ದಾಖಲಾದ ಇಂಟರ್ನ್ ವೈದ್ಯರು, ಕೋವಿಡ್ ನಿಂದ ಬಳಲುತ್ತಿದ್ದರೂ ಅವರ ಹೆಚ್ಚಿನ ಸ್ಥೈರ್ಯವನ್ನು ನೋಡುವುದು ನನ್ನಲ್ಲಿ ಹೆಚ್ಚಿನ ಭರವಸೆ ತುಂಬಿದೆ

ಆಸ್ಪತ್ರೆಯ ವಿವಿಧ ವಾರ್ಡ್ಗಳು ಮತ್ತು ಆವರಣಗಳ ವಿವರವಾದ ಪರಿಶೀಲನೆ ಮತ್ತು ಪರಿ ಶೀಲನೆಯ ನಂತರ, ವಿವಿಧ ಘಟಕಗಳ ಕಾರ್ಯವೈಖರಿಯ ಬಗ್ಗೆ ಅವರು ತೃಪ್ತಿ ವ್ಯಕ್ತಪಡಿಸಿದರು. ಅವರು ಹೇಳಿದರು: ಕಳೆದ ಕೆಲವು ದಿನಗಳಲ್ಲಿ, ನಾನು ವಿವಿಧ ಆಸ್ಪತ್ರೆಗಳಿಗೆ ಏಮ್ಸ್ (ದೆಹಲಿ), ಎಲ್ಎನ್ಜೆಪಿ, ಆರ್ಎಂಎಲ್, ಸಫ್ದರ್ಜಂಗ್, ಏಮ್ಸ್ ಜಜ್ಜರ್, ರಾಜೀವ್ ಗಾಂಧಿ ಸೂಪರ್ ಸ್ಪೆಷಾಲಿಟಿ ಮತ್ತು ಈಗ ಎಲ್ಎಚ್ಎಂಸಿಗೆ ಭೇಟಿ ನೀಡುತ್ತಿದ್ದೇನೆ ಮತ್ತು ಕೋವಿಡ್ -19 ಸಿದ್ಧತೆಯನ್ನು ಪರಿಶೀಲಿಸಲು ಸಾಂಕ್ರಾಮಿಕವನ್ನು ಪರಿಣಾಮಕಾರಿಯಾಗಿ ಎದುರಿಸಲು ಆಸ್ಪತ್ರೆಗಳು ಮಾಡಿದ ವ್ಯವಸ್ಥೆಗಳ ಬಗ್ಗೆ ನಾನು ತೃಪ್ತಿ ಹೊಂದಿದ್ದೇನೆ”.

ಕೋವಿಡ್ -19ನ್ನು ನಿರ್ವಹಿಸುವಾಗ ಮುಂಚೂಣಿಯ ಆರೈಕೆದಾರರಾದ ದಾದಿಯರು, ವೈದ್ಯರು ಮತ್ತು ಇತರ ಆರೋಗ್ಯ ಸಿಬ್ಬಂದಿಯು ತೋರಿಸಿದ ನಿಭಾಯಿಸುವಿಕೆ, ಕಠಿಣ ಪರಿಶ್ರಮ, ಸಮರ್ಪಣೆ ಮತ್ತು ಬದ್ಧತೆಯನ್ನುಶ್ಲಾಘಿಸುತ್ತಾ, ಡಾ. ಹರ್ಷವರ್ಧನ್ ರವರು ಕೋವಿಡ್-19 ರೋಗಿಗಳ ಚೇತರಿಕೆಯ ಪ್ರಮಾಣ ಸ್ಥಿರವಾಗಿ ಹೆಚ್ಚಾಗಿದ್ದು, ರೋಗಿಗಳಲ್ಲಿ ಹೆಚ್ಚಿನವರು ಗುಣಮುಖರಾಗುತ್ತಿದ್ದಾರೆ ಮತ್ತು ಅವರ ಮನೆಗಳಿಗೆ ಹಿಂತಿರುಗುತ್ತಿದ್ದಾರೆ ಎನ್ನುವುದನ್ನು ತೋರಿಸುತ್ತದೆ. ಇಲ್ಲಿಯವರೆಗೆ ಸುಮಾರು 10,000 ಕೋವಿಡ್ ರೋಗಿಗಳು ಚೇತರಿಸಿಕೊಂಡಿದ್ದಾರೆ ಮತ್ತು ಅವರ ಸಾಮಾನ್ಯ ಜೀವನಕ್ಕೆ ಮರಳಿದ್ದಾರೆ. ಇತರ ಆಸ್ಪತ್ರೆಗಳಲ್ಲಿನ ಬಹುಪಾಲು ರೋಗಿಗಳು ಸಹ ಚೇತರಿಕೆಯ ಹಾದಿಯಲ್ಲಿದ್ದಾರೆ. ಇದು ಭಾರತದ ನಮ್ಮ ಮುಂಚೂಣಿ ಆರೋಗ್ಯ ಕಾರ್ಯಕರ್ತರು ಒದಗಿಸುವ ಆರೈಕೆಯ ಗುಣಮಟ್ಟವನ್ನು ಪ್ರತಿಬಿಂಬಿಸುತ್ತದೆ. ಅವರ ಯಶಸ್ಸಿಗೆ ನಾನು ಅವರನ್ನು ಅಭಿನಂದಿಸುತ್ತೇನೆ. ಇಂತಹ ಸಂಕಷ್ಟದ ಸಮಯದಲ್ಲಿ ನಿಮ್ಮ ಸೇವೆಗಳಿಗಾಗಿ ದೇಶವು ನಿಮಗೆ ಕೃತಜ್ಞವಾಗಿದೆ. ಪರೀಕ್ಷಾ ಕಾಲದಲ್ಲಿ ನಮ್ಮ ಆರೋಗ್ಯ ಯೋಧರ ಮನೋಸ್ಥೈರ್ಯವನ್ನು ನೋಡುವುದು ಹೃದಯಸ್ಪರ್ಶಿಯಾಗಿದೆ.ಎಂದು ಹೇಳಿದರು.

ದೇಶದಲ್ಲಿ ಕೋವಿಡ್-19 ತಡೆಗಟ್ಟುವಿಕೆ, ನಿಯಂತ್ರಣ ಮತ್ತು ನಿರ್ವಹಣೆಯನ್ನು ರಾಜ್ಯಗಳ ಸಹಯೋಗದೊಂದಿಗೆ ಉನ್ನತ ಮಟ್ಟದಲ್ಲಿ ನಿಯಮಿತವಾಗಿ ಮೇಲ್ವಿಚಾರಣೆ ಮಾಡಲಾಗುತ್ತಿದೆ ಎಂದು ಡಾ. ಹರ್ಷವರ್ಧನ್ ಹೇಳಿದ್ದಾರೆ. ಅವರು ಹೇಳಿದರು, “ಹೊಸ ಪ್ರಕರಣಗಳ ಬೆಳವಣಿಗೆಯ ಪ್ರಮಾಣವು ಸ್ವಲ್ಪ ಸಮಯದಿಂದ ಸ್ಥಿರವಾಗಿದೆ. ಇಂದು ಪಡೆದ ಮಾಹಿತಿಯ ಪ್ರಕಾರ, ಕಳೆದ ಮೂರು ದಿನಗಳಿಂದ ದ್ವಿಗುಣಗೊಳಿಸುವಿಕೆಯ ಪ್ರಮಾಣವು 12.0, ಏಳು ದಿನಗಳವರೆಗೆ 11.7 ಮತ್ತು 14 ದಿನಗಳವರೆಗೆ ಅದು 10.4 ಆಗಿದೆ. ಅವರು ಮುಂದುವರೆದು ಲಾಕ್ ಡೌನ್ 3.0 ಅನ್ನು ತಾರ್ಕಿಕವಾಗಿ ಅಂತ್ಯಗೊಳಿಸಲು ನಾವು ಕಟ್ಟುನಿಟ್ಟಾದ ಸಾಮಾಜಿಕ ಅಂತರ ಮತ್ತು ಮೂಲ ಕೈ ನೈರ್ಮಲ್ಯದ ಶಿಷ್ಟಾಚಾರಗಳನ್ನು ಸರಿಯಾಗಿ ಪಾಲಿಸಬೇಕು" ಎಂದು ಹೇಳಿದರು

130 ಹಾಟ್ಸ್ಪಾಟ್ಗಳ ಜಿಲ್ಲೆಗಳು, 284 ಹಾಟ್ಸ್ಪಾಟ್ಗಳಲ್ಲದ ಜಿಲ್ಲೆಗಳು ಮತ್ತು 319 ಸೋಂಕಿತ ಜಿಲ್ಲೆಗಳಿವೆ ಎಂದು ಅವರು ಹೇಳಿದರು. ನಮಗೆ ನಮ್ಮ ವೈರಿಯ ಸಂಖ್ಯೆಗಳ ಬಗ್ಗೆ ಮತ್ತು ಅದರ ಸ್ಥಳ ನಮಗೆ ತಿಳಿದಿದೆ ಮತ್ತು ಅದನ್ನು ವ್ಯವಸ್ಥಿತವಾಗಿ ಕಠಿಣ ನಿಯಂತ್ರಣಗಳಿಂದ ಎದುರಿಸಲಾಗುವುದು.ಜಿಲ್ಲೆಗಳನ್ನು ಮತ್ತಷ್ಟು ಹಸಿರು, ಕಿತ್ತಳೆ ಮತ್ತು ಕೆಂಪು ವಲಯಗಳಾಗಿ ವಿಂಗಡಿಸಲಾಗಿದೆ ಮತ್ತು ಭಾರತ ಸರ್ಕಾರದ ಮಾರ್ಗಸೂಚಿಗಳ ಪ್ರಕಾರ ತೆರೆಯಲಾಗುವುದು ಎಂದು ಅವರು ಮಾಹಿತಿ ನೀಡಿದರು.

"ನಾವು ಇಲ್ಲಿಯವರೆಗೆ 10 ಲಕ್ಷಕ್ಕಿಂತ ಹೆಚ್ಚು ಪರೀಕ್ಷೆಗಳನ್ನು ಮಾಡಿರುವೆವು ಮತ್ತು ಪ್ರಸ್ತುತ ಒಂದು ದಿನದಲ್ಲಿ 74,000 ಪರೀಕ್ಷೆಗಳನ್ನು ನಡೆಸುತ್ತಿದ್ದೇವೆ" ಎಂದು ಅವರು ಹೇಳಿದರು. ಸರ್ಕಾರವು ಭಾರತದಾದ್ಯಂತ ಸುಮಾರು 20 ಲಕ್ಷ ಪಿಪಿಇ ಕಿಟ್ಗಳನ್ನು ವಿತರಿಸಿದೆ ಮತ್ತು ವಿಶ್ವದಾದ್ಯಂತ 100 ಕ್ಕೂ ಹೆಚ್ಚು ದೇಶಗಳಿಗೆ ಔಷಧಿಗಳನ್ನು [ಹೈಡ್ರಾಕ್ಸಿಕ್ಲೋರೋಕ್ವಿನ್ (ಎಚ್ಸಿಕ್ಯು) ಮತ್ತು ಪ್ಯಾರೆಸಿಟಮಾಲ್ (ಪಿಸಿಎಂ) ಸರಬರಾಜು ಮಾಡಿದೆ ಎಂದು ಅವರು ಹೇಳಿದರು. ವಿಶ್ವದ ಇತರ ದೇಶಗಳಿಗೆ ಹೋಲಿಸಿದರೆ ಭಾರತವು ಉತ್ತಮ ಸ್ಥಿತಿಯಲ್ಲಿದೆ ಮತ್ತು ದೇಶಾದ್ಯಂತ ಮೀಸಲಾದ ಕೋವಿಡ್ ಆಸ್ಪತ್ರೆಗಳು ಮತ್ತು ಮೀಸಲಾದ ಕೋವಿಡ್ ಆರೋಗ್ಯ ಕೇಂದ್ರಗಳಲ್ಲಿ 2.5 ಲಕ್ಷಕ್ಕೂ ಹೆಚ್ಚು ಹಾಸಿಗೆಗಳನ್ನು ಹೊಂದಿದ್ದು ಯಾವುದೇ ಸಂಭವಿಸಬಹುದಾದ ತುರ್ತು ಪರಿಸ್ಥಿತಿಯನ್ನು ಎದುರಿಸುವ ಸಾಮರ್ಥ್ಯವನ್ನು ಹೊಂದಿದೆ ಎಂದು ಅವರು ಮಾಹಿತಿ ನೀಡಿದರು.

ಸಿಕ್ಕಿಹಾಕಿಕೊಂಡಿರುವ ವಲಸೆ ಕಾರ್ಮಿಕರ ಬಗ್ಗೆ ಮಾತನಾಡುವಾಗ, "ಸರ್ಕಾರದ ಮಾರ್ಗಸೂಚಿಗಳ ಪ್ರಕಾರ, ಪೂರ್ಣ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವಾಗ ಮತ್ತು ದೈಹಿಕ ದೂರವನ್ನು ಅನುಸರಿಸುವಾಗ ವಲಸೆಗಾರರಿಗೆ ಬಸ್ಸುಗಳು ಮತ್ತು ರೈಲುಗಳ ಮೂಲಕ ತಮ್ಮ ಮನೆಗಳಿಗೆ ಮರಳಲು ಸಹಾಯ ಮಾಡಲಾಗುತ್ತಿದೆ" ಎಂದು ಅವರು ಹೇಳಿದರು.

ವಿವಿಧ ವಾಣಿಜ್ಯ ಚಟುವಟಿಕೆಗಳನ್ನು ತೆರೆಯುವ ಬಗ್ಗೆ ಮಾತನಾಡಿದ ಸಚಿವರು, “ನಿಧಾನವಾಗಿ ಮತ್ತು ಕ್ರಮೇಣವಾಗಿ ಆರ್ಥಿಕ ಚಟುವಟಿಕೆಗಳು ಒಂದೊಂದಾಗಿ ತೆರೆದುಕೊಳ್ಳುತ್ತವೆ. ವಿವರವಾದ ಯೋಜನೆ ಇದೆ, ಅದರ ಪ್ರಕಾರ ವಿವಿಧ ಕೈಗಾರಿಕೆಗಳಾದ ಔಷಧ, ಔಷಧೀಯ ವಸ್ತುಗಳು ಉದ್ಯಮಗಳು ಆದಷ್ಟು ಬೇಗ ಸಹಜ ಸ್ಥಿತಿಗೆ ಮರಳಲು ಸಹಾಯ ಮಾಡಲಾಗುತ್ತಿದೆ.

ಡಾ.ಹರ್ಷವರ್ಧನ್ ಅವರು ಲಾಕ್ಡೌನ್ 3.0 (17 ಮೇ 2020ರವರೆಗೆ) ವಿಸ್ತೃತ ಅವಧಿಯ ಉದ್ಧೇಶವನ್ನು ಅರಿತು ಅನುಸರಿಸಬೇಕು ಮತ್ತು ಕೋವಿಡ್-19 ಪ್ರಸರಣ ಸರಪಳಿಯನ್ನು ತುಂಡರಿಸಲು ಇದು ಪರಿಣಾಮಕಾರಿಯಾದ ತಂತ್ರವೆಂದು ಪರಿಗಣಿಸಬೇಕು ಎಂದು ಕೋರಿದರು. ಸೋಪ್ ಮತ್ತು ನೀರಿನಿಂದ ಕೈ ತೊಳೆಯುವುದು ಅಥವಾ ಸ್ಯಾನಿಟೈಜರ್ ಬಳಸುವುದು ಮುಂತಾದ ಕೈ ನೈರ್ಮಲ್ಯವನ್ನು ಅನುಸರಿಸುವುದು ಮುಖ್ಯ; ಆಗಾಗ್ಗೆ ಸ್ಪರ್ಶಿಸಿದ ಎಲ್ಲಾ ಮೇಲ್ಮೈಗಳನ್ನು ನಿಯಮಿತವಾಗಿ ಸ್ವಚ್ಛಗೊಳಿಸುತ್ತಿರಬೇಕು ಮತ್ತು ಸೋಂಕುರಹಿತಮಾಡಬೇಕು. ಪ್ರತಿಯೊಬ್ಬರೂ ಮುಖಗವಸು ಅಥವಾ ಮುಖದ ಹೊದಿಕೆಯನ್ನು ಸೂಕ್ತವಾಗಿ ಧರಿಸಬೇಕು; ಅಪಾಯದ ಸ್ವಯಂ ಮೌಲ್ಯಮಾಪನಕ್ಕಾಗಿ ಕೊರೊನಾ ಟ್ರ್ಯಾಕರ್ ಆ್ಯಪ್ ಆರೋಗ್ಯಸೇತುಡೌನ್ಲೋಡ್ ಮಾಡಿ; ಮತ್ತು ದೈಹಿಕ ಅಂತರವನ್ನು ಕಾಪಾಡಿಕೊಳ್ಳಿ.ಎಂದು ಹೇಳಿದರು. ಲಾಕ್ಡೌನ್ 3.0 ಸಮಯದಲ್ಲಿ ಜೀವನದಲ್ಲಿ ಶಿಸ್ತನ್ನು ನಿರಂತರವಾಗಿ ಪಾಲಿಸುವುದರಿಂದ ಕೋವಿಡ್-19 ವಿರುದ್ಧದ ನಮ್ಮ ಅಂತಿಮ ಹೋರಾಟದಲ್ಲಿ ನಮಗೆ ಉತ್ತಮ ಫಲಿತಾಂಶ ಸಿಗುವುದು ಎಂದು ಅವರು ಹೇಳಿದರು. "ನಾವು ಯಶಸ್ಸಿನ ಹಾದಿಯಲ್ಲಿದ್ದೇವೆ ಮತ್ತು ಕೋವಿಡ್-19 ವಿರುದ್ಧದ ಯುದ್ಧವನ್ನು ನಾವು ಸಂಪೂರ್ಣವಾಗಿ ಗೆಲ್ಲುತ್ತೇವೆ".

ಕೋವಿಡ್-19 ರೋಗಿಗಳಿಗೆ ಚಿಕಿತ್ಸೆ ನೀಡುವ ವೈದ್ಯರನ್ನು ಬಹಿಷ್ಕರಿಸಬಾರದು ಮತ್ತು ಕೋವಿಡ್-19 ವಿರುದ್ಧದ ಹೋರಾಟದಲ್ಲಿ ಜಯಗಳಿಸಿದ ರೋಗಿಗಳನ್ನು ಕಳಂಕಿತರಂತೆ ನೋಡಬಾರದು ಎಂದು ಅವರು ಜನರನ್ನು ಕೋರಿದರು. "ಅವರು ನಮ್ಮ ಪರಾಕ್ರಮಿಗಳು ಮತ್ತು ಅವರಿಗೆ ಯೋಗ್ಯವಾದ ಚಿಕಿತ್ಸೆಯ ಅಗತ್ಯವಿದೆ" ಎಂದು ಅವರು ಹೇಳಿದರು. "ಇಂದು ಭಾರತೀಯ ವಾಯುಪಡೆಯು ಯೋಧರಿಗೆ ದೇಶಾದ್ಯಂತ ಹೆಲಿಕಾಪ್ಟರ್ಗಳಿಂದ ಪುಷ್ಪವೃಷ್ಠಿಯ ಮೂಲಕ ನಮನಗಳನ್ನು ಸಲ್ಲಿಸುತ್ತಿದೆ" ಎಂದು ಅವರು ಹೇಳಿದರು. "ಕೋವಿಡ್ ವಿರುದ್ಧದ ಭಾರತದ ಹೋರಾಟವನ್ನು ವಿಶ್ವ ಆರೋಗ್ಯ ಸಂಸ್ಥೆ ಮಾತ್ರವಲ್ಲದೆ ಇಡೀ ಪ್ರಪಂಚವು ಒಟ್ಟಾಗಿ ಶ್ಲಾಘಿಸುತ್ತದೆ" ಎಂದು ಅವರು ಹೇಳಿದರು.

ಭಾರತ ಸರ್ಕಾರದ ಆರೋಗ್ಯ ಸೇವೆಗಳ ಮಹಾನಿರ್ದೇಶಕ ಡಾ.ರಾಜೀವ್ ಗರ್ಗ್, ಎಲ್ಎಚ್ಎಂಸಿ ನಿರ್ದೇಶಕ ಡಾ.ಎನ್.ಎನ್. ಮಾಥುರ್ ಮತ್ತು ಇತರ ಹಿರಿಯ ವೈದ್ಯರು ಸಹ ಕೇಂದ್ರ ಸಚಿವರೊಂದಿಗೆ ಎಲ್ಎಚ್ಎಂಸಿಗೆ ಭೇಟಿ ನೀಡಿದ್ದರು.

***



(Release ID: 1620852) Visitor Counter : 173