ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ

ಕೋವಿಡ್-19 ವಿರುದ್ಧ ಚಿಕಿತ್ಸೆಯ ಪ್ರತಿಕಾಯಗಳ ಉತ್ಪಾದನೆಗೆ ಡಿಬಿಟಿ/ಕೋವಿಡ್ ವಿರೋಧಿ ಒಕ್ಕೂಟದಿಂದ ಪ್ರಯತ್ನಗಳು ಪ್ರಗತಿಯಲ್ಲಿ

Posted On: 12 APR 2020 11:43AM by PIB Bengaluru

ಕೋವಿಡ್-19 ವಿರುದ್ಧ ಚಿಕಿತ್ಸೆಯ ಪ್ರತಿಕಾಯಗಳ ಉತ್ಪಾದನೆಗೆ ಡಿಬಿಟಿ/ಕೋವಿಡ್ ವಿರೋಧಿ ಒಕ್ಕೂಟದಿಂದ ಪ್ರಯತ್ನಗಳು ಪ್ರಗತಿಯಲ್ಲಿ

ಕೋವಿಡ್ -19, ಸಾರ್ಸ್-ಸಿಒವಿ-2 ಅನ್ನು ತಟಸ್ಥಗಿಳಿಸಲು ಪ್ರತಿಕಾಯಗಳನ್ನು ಉತ್ಪತ್ತಿ ಮಾಡುವ ವಂಶವಾಹಿಗಳ ಅಭಿವೃದ್ಧಿ

 

ಕೋವಿಡ್-19ಗೆ ಕಾರಣವಾಗಿರುವ ನೊವೆಲ್ ಸಾರ್ಸ್ ಕೊರೊನಾ ವೈರಸ್-2 (ಸಾರ್ಸ್-ಸಿಒವಿ-2)ನಿಂದ ಹಲವರು ಸಾವನ್ನಪ್ಪುತ್ತಿದ್ದಾರೆ ಆದರೆ ಸೋಂಕಿತರಲ್ಲಿ ಬಹುಪಾಲು ಯಾವುದೇ ನಿರ್ದಿಷ್ಟ ಚಿಕಿತ್ಸೆ ಇಲ್ಲದಿದ್ದರೂ ಸಹ ಗುಣಮುಖರಾಗುತ್ತಿದ್ದಾರೆ. ಇದಕ್ಕೆ ಕಾರಣ ದೇಹದೊಳಗೆಯೇ ಸೋಂಕಿಗೆ ವಿರುದ್ಧವಾಗಿ ಪ್ರತಿಕಾಯಗಳು (ಆಂಟಿಬಾಡಿಸ್) ಉತ್ಪತ್ತಿಯಾಗುವುದು.

ಹಲವು ವರ್ಷಗಳಿಂದೀಚೆಗೆ ಸೋಂಕಿನಿಂದ ಗುಣಮುಖರಾದ ರೋಗಿಗಳಿಂದ ಪಡೆದ ಪ್ಲಾಸ್ಮ ಬಳಸಿ ಪ್ರತಿಕಾಯಗಳನ್ನು ವರ್ಗಾವಣೆ ಮಾಡಲಾಗುತ್ತಿದೆ ಮತ್ತು ಅದನ್ನು ಗಂಟಲು ಮಾರಿ (ಡಿಫ್ತೀರಿಯಾ), ಟೆಟನ್ಸ್, ರೇಬಿಸ್ ಮತ್ತು ಎಬೋಲಾ ಮತ್ತಿತರ ಹಲವು ಕಾಯಿಲೆಗಳಿಗೆ ಚಿಕಿತ್ಸೆಯಾಗಿ ಬಳಸಲಾಗುತ್ತಿದೆ. ಇಂದು ಅಂತಹ ಚಿಕಿತ್ಸಕ ಪ್ರತಿಕಾಯಗಳನ್ನು ಡಿಎನ್ಎ ಆಧಾರಿತ ಪುನಃ ಸಂಯೋಜಿತ (ರಿಕಾಂಬಿನೆಂಟ್) ತಂತ್ರಜ್ಞಾನ ಆಧರಿಸಿ ಪ್ರಯೋಗಾಲಯಗಳಲ್ಲೇ ಉತ್ಪಾದಿಸಬಹುದಾಗಿದೆ. ಜಾಗತಿಕವಾಗಿ ಸಾರ್ಸ್-ಸಿಒವಿ-2 ವಿರುದ್ಧ ಚಿಕಿತ್ಸಕ ಪ್ರತಿಕಾಯಗಳನ್ನು ಉತ್ಪತ್ತಿ ಮಾಡುವ ಕಾರ್ಯ ಪೂರ್ಣ ಪ್ರಮಾಣದಲ್ಲಿ ಪ್ರಗತಿಯಲ್ಲಿದೆ.

ಭಾರತದಲ್ಲಿ ಅಂತಹ ಒಂದು ಪ್ರಯತ್ನ ಸೋಂಕಿತ ರೋಗಗಳ ಸಂಶೋಧನೆ, ಶಿಕ್ಷಣ ಮತ್ತು ತರಬೇತಿಯಲ್ಲಿ ಆವಿಷ್ಕಾರ ಕೇಂದ್ರ(ಯುಡಿಎಸ್ ಸಿ-ಸಿಐಐಡಿಆರ್ ಇಟಿ)ದ ದಕ್ಷಿಣ ದೆಹಲಿಯ ವಿಶ್ವ ವಿದ್ಯಾಲಯದ ಪ್ರೊ|| ವಿಜಯ್ ಚೌಧರಿ ನೇತೃತ್ವದಲ್ಲಿ ನಡೆದಿದೆ. ಇದಕ್ಕೆ ಭಾರತ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯದಡಿ ಬರುವ ಜೈವಿಕ ತಂತ್ರಜ್ಞಾನ ಇಲಾಖೆ ನೆರವು ನೀಡಿದೆ.

ಪ್ರೊ|| ಚೌಧರಿ ಅವರ ಬಳಗ ವಂಶವಾಹಿಗಳನ್ನು ಬೇಧಿಸಿ ಪ್ರತಿಕಾಯಗಳನ್ನು ಪ್ರತ್ಯೇಕಗೊಳಿಸಿ ಅವುಗಳು ಸಾರ್ಸ್-ಸಿಒವಿ-2ಅನ್ನು ತಟಸ್ಥಗೊಳ್ಳುವಂತೆ ಮಾಡುವ ಪ್ರತಿಕಾಯಗಳ ಅಭಿವೃದ್ಧಿಯ ಪ್ರಯತ್ನದಲ್ಲಿದ್ದಾರೆ. ಪ್ರಯೋಗಾಲಯದಲ್ಲಿ ಲಭ್ಯವಿರುವ ಕೋವಿಡ್-19 ಸೋಂಕಿನಿಂದ ಗುಣಮುಖರಾಗಿರುವ ವ್ಯಕ್ತಿಯ ಜೀವಕಣಗಳನ್ನು ಬಳಸಿ, ಇವುಗಳನ್ನು ಉತ್ಪತ್ತಿ ಮಾಡುವ ಪ್ರಯತ್ನ ನಡೆದಿದೆ.

ಈ ಪ್ರತಿಕಾಯ ವಂಶವಾಹಿಗಳು ಪ್ರಯೋಗಾಲಯದಲ್ಲಿ ಪುನಃ ಸಂಯೋಜಿತ ಪ್ರತಿಕಾಯಗಳನ್ನು ಉತ್ಪತ್ತಿಸಲು ಬಳಕೆ ಮಾಡಲಾಗುವುದು. ಅವು ಸೋಂಕನ್ನು ತಟಸ್ಥಗೊಳಿಸುವಲ್ಲಿ ಯಶಸ್ವಿಯಾಗುತ್ತವೆ ಮತ್ತು ಅವು ಸೋಂಕಿನ ವಿರುದ್ಧ ರೋಗ ಪ್ರತಿಬಂಧಕ ಮತ್ತು ಚಿಕಿತ್ಸಕ ಉದ್ದೇಶಗಳಿಗೆ ಪ್ರತಿಕಾಯ ಮೂಲಗಳಾಗಿ ಕಾರ್ಯ ನಿರ್ವಹಿಸಲಿವೆ.

ಈ ಪ್ರಯತ್ನಗಳನ್ನು ಪ್ರೊ|| ಚೌಧರಿ ಅವರ ನೇತೃತ್ವದಲ್ಲಿ ಕೋವಿಡ್ ವಿರೋಧಿ ಒಕ್ಕೂಟ ಕೈಗೊಂಡಿದ್ದು, ಇದರಲ್ಲಿ ರಾಷ್ಟ್ರೀಯ ರೋಗ ನಿರೋಧಕ ಶಕ್ತಿ ಸಂಸ್ಥೆಯ ಡಾ|| ಅಮೂಲ್ಯ ಪಾಂಡ ಮತ್ತು ಪುಣೆಯ ಜೆನ್ನೋವಾ, ಬಯೋಫಾರ್ಮಸಿಟಿಕಲ್ ಲಿಮಿಟೆಡ್(ಜಿಬಿಎಲ್)ನ ಡಾ|| ಸಂಜಯ್ ಸಿಂಗ್ ಅವರು ಒಳಗೊಂಡಿದ್ದಾರೆ.

[ಸಂಪರ್ಕ ವ್ಯಕ್ತಿ ಪ್ರೊ|| ವಿಜಯ್ ಕೆ. ಚೌಧರಿ, ಇ-ಮೇಲ್: vkchaudhary@south.du.ac.in]

*****

 



(Release ID: 1613685) Visitor Counter : 206