ಪ್ರಧಾನ ಮಂತ್ರಿಯವರ ಕಛೇರಿ
ನಿಸ್ವಾರ್ಥ ಸೇವೆ ಮತ್ತು ಕರುಣೆಯ ಮನೋಭಾವವನ್ನು ಸಾರುವ ಸಂಸ್ಕೃತ ಸುಭಾಷಿತವನ್ನು ಹಂಚಿಕೊಂಡಿರುವ ಪ್ರಧಾನಮಂತ್ರಿ
ಪ್ರಕಟಣಾ ದಿನಾಂಕ:
06 MAY 2026 9:12AM by PIB Bengaluru
ನಿಸ್ವಾರ್ಥ ಮನೋಭಾವದಿಂದ ಮಾಡಿದ ಕೆಲಸವೇ ಮಾನವೀಯತೆಯ ಅತ್ಯುತ್ತಮ ರೂಪವಾಗಿದೆ ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಹೇಳಿದ್ದಾರೆ. ಇಂತಹ ಕಾರ್ಯಗಳು ಮನುಷ್ಯನಿಗೆ ಆಂತರಿಕ ಸಂತೋಷವನ್ನು ನೀಡುವುದಷ್ಟೇ ಅಲ್ಲ, ಸಮಾಜದ ಕಲ್ಯಾಣಕ್ಕೂ ಸಹಕಾರಿಯಾಗುತ್ತವೆ ಎಂದು ಹೇಳಿದ್ದಾರೆ.
ಪ್ರಧಾನಮಂತ್ರಿಗಳು ಈ ಸಂಸ್ಕೃತ ಸುಭಾಷಿತವನ್ನು ಹಂಚಿಕೊಂಡಿದ್ದಾರೆ;
“अद्रोहः सर्वभूतेषु कर्मणा मनसा गिरा।
अनुग्रहश्च दानं च शीलमेतत्प्रशस्यते॥”
ಈ ಸುಭಾಷಿತದ ಅರ್ಥವೆಂದರೆ—ಯಾವುದೇ ಜೀವಿಯ ಮೇಲೂ ನಮ್ಮ ಮನಸ್ಸಿನಲ್ಲಿ, ಮಾತಿನಲ್ಲಿ ಅಥವಾ ಕ್ರಿಯೆಯಲ್ಲಿ ದ್ವೇಷವಿರಬಾರದು; ಎಲ್ಲರೊಂದಿಗೆ ಕರುಣೆಯಿಂದ ವರ್ತಿಸಬೇಕು; ಉದಾರವಾಗಿ ದಾನ ಮಾಡಬೇಕು—ಇವುಗಳನ್ನು ಅತ್ಯುತ್ತಮ ಆಚಾರ-ವ್ಯವಹಾರವೆಂದು ಪರಿಗಣಿಸಲಾಗುತ್ತದೆ.
ಪ್ರಧಾನಮಂತ್ರಿಗಳು ಎಕ್ಸ್ ಖಾತೆಯಲ್ಲಿ ಹೀಗೆ ಬರೆದುಕೊಂಡಿದ್ದಾರೆ;
“निस्वार्थ भाव से किया गया कर्म ही सच्ची मानवता है। इससे आत्मिक खुशी तो मिलती ही है, समाज का भी कल्याण होता है।
अद्रोहः सर्वभूतेषु कर्मणा मनसा गिरा।
अनुग्रहश्च दानं च शीलमेतत्प्रशस्यते॥”
*****
(ಪ್ರಕಟಣೆ ಐ.ಡಿ.: 2258352)
ವಿಸಿಟರ್ ಕೌಂಟರ್ : 3